ಚಿತ್ರರಂಗದ ಜೊತೆ ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಕ್ತಾ ಹೋಗ್ತಿದೆ. ಡಿಬಾಸ್ ದರ್ಶನ್ ಅತ್ಯಾಪ್ತ ಹಾಗೂ 10ನೇ ಆರೋಪಿ, ಸ್ಟೋನಿ ಬ್ರೂಕ್ ವಿನಯ್ ಇದೀಗ ಹೊಸ ಡ್ರಾಮಾ ಶುರುಮಾಡಿಬಿಟ್ಟಿದ್ದಾರೆ. ಕೋರ್ಟ್ ಆವರಣದಲ್ಲಿ ನಡೆದ ಆ ಹೈಡ್ರಾಮಾ ಆದ್ರೂ ಏನು..? ಕಪಾಳಮೋಕ್ಷ ಆಗೋ ರೇಂಜ್ಗೆ ಅಲ್ಲಿ ಏನು ನಡೀತು ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- D ಗ್ಯಾಂಗ್ ವಿನಯ್ಗೆ ಕೋರ್ಟ್ ಆವರಣದಲ್ಲೇ ಕಪಾಳಮೋಕ್ಷ
- ಹೈ ಪ್ರೊಫೈಲ್ ಕೇಸ್ನ ಹೈಡ್ರಾಮಾ.. ವಕೀಲ v/s ಆರೋಪಿ ಫೈಟ್
- ಮಾತಿನ ಚಕಮಕಿ.. ವಿನಯ್ ಕೆನ್ನೆಗೆ 6 ಬಾರಿ ಬಾರಿಸಿದ ವಕೀಲ..!
ಸ್ಯಾಂಡಲ್ವುಡ್ನಲ್ಲಿ ಭಾರೀ ಸಂಚಲನ ಮೂಡಿಸಿರೋ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಡ್ರಮ್ಯಾಟಿಕ್ ಟ್ವಿಸ್ಟ್ ಸಿಕ್ಕಿದೆ. ನಟ ದರ್ಶನ್ ಆಪ್ತ ಸ್ನೇಹಿತ ಹಾಗೂ ಆರೋಪಿ ನಂಬರ್ 10, ವಿನಯ್ ಕೋರ್ಟ್ಗೆ ಬಂದಾಗ ಅಚ್ಚರಿಯ ಘಟನೆಯೊಂದು ನಡೆದು ಹೋಗಿದೆ. ತನ್ನ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರೇ ಕೋರ್ಟ್ ಕಾರಿಡಾರ್ನಲ್ಲಿ ವಿನಯ್ಗೆ ಕಪಾಳಮೋಕ್ಷ ಮಾಡಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ಸ್ಟೋನಿ ಬ್ರೂಕ್ ಮಾಲೀಕ, ಡಿಬಾಸ್ ದರ್ಶನ್ ಅತ್ಯಾಪ್ತ ವಿನಯ್ ಈಗಾಗ್ಲೇ ಹೈ-ಪ್ರೊಫೈಲ್ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡು ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಪ್ರಕರಣಕ್ಕಿಂತಲೂ ಹೆಚ್ಚು ಚರ್ಚೆಗೆ ಕಾರಣವಾಗಿದ್ದು ಮಾತ್ರ ಕೋರ್ಟ್ ಆವರಣದಲ್ಲಿ ನಡೆದ ಆ ಗಲಾಟೆ. ಹೌದು.. ತನ್ನದೇ ಕ್ಲೈಂಟ್ಗೆ ವಕೀಲರು ಕಪಾಳ ಮೋಕ್ಷ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ವಿನಯ್ ತನ್ನ ವಕೀಲರನ್ನು ಬದಲಾಯಿಸೋಕೆ ಮುಂದಾಗಿದ್ರು. ನಿನ್ನೆ ಹೊಸ ವಕೀಲರು ಕೋರ್ಟ್ಗೆ ಬಂದು ವಿನಯ್ ಪರ ವಕಾಲತ್ತು ಸಲ್ಲಿಸಲು ಮುಂದಾಗಿದ್ದಾರೆ. ಇದು ಹಳೆಯ ವಕೀಲ ನಟರಾಜ್ ಅವ್ರ ಕಿವಿಗೆ ಬೀಳುತ್ತಿದ್ದಂತೆ ಕೋರ್ಟ್ ಕಾರಿಡಾರ್ನಲ್ಲೇ ಆರೋಪಿ ವಿನಯ್ ಹಾಗೂ ವಕೀಲ ನಟರಾಜ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ವಿನಯ್ ಏರು ಧ್ವನಿಯಲ್ಲಿ ಕಿರುಚಾಡಿದ ಹಿನ್ನೆಲೆ ಕೋಪಗೊಂಡ ವಕೀಲ ನಟರಾಜ್, ಎಲ್ಲರ ಎದುರಲ್ಲೇ ವಿನಯ್ ಕೆನ್ನೆಗೆ ಒಂದಲ್ಲ ಎರಡಲ್ಲ 5-6 ಬಾರಿ ಕಪಾಳಮೋಕ್ಷ ಮಾಡಿದ್ರಂತೆ. ಪೊಲೀಸರು, ವಕೀಲರು, ಸಾರ್ವಜನಿಕರು ನೋಡುತ್ತಲೇ ನಡೆದ ಈ ಘಟನೆ ಕೆಲಕಾಲ ಕೋರ್ಟ್ ಆವರಣವನ್ನೇ ಗೊಂದಲದ ಮೈದಾನವನ್ನಾಗಿ ಮಾಡಿದ್ದು ಸುಳ್ಳಲ್ಲ. ಸದ್ಯ ವಿನಯ್ ಬೇಲ್ ಕ್ಯಾನ್ಸಲ್ ಆಗುವ ಸಾಧ್ಯತೆಯಿದ್ದು, ಎಲ್ಲರ ಚಿತ್ತ ಹೈ ಕೋರ್ಟ್ ಆರ್ಡರ್ನತ್ತ ನೆಟ್ಟಿದೆ.





