ರನ್ಯಾ ರಾವ್ರನ್ನು ವ್ಯಂಗ್ಯ ಮಾಡುತ್ತಿದ್ದ ಸಹ ಕೈದಿಗಳ ಬಗ್ಗೆ ತಿಳಿದ ಜೈಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಕೈದಿಗಳನ್ನು ಬೇರೆ ಬೇರೆ ಬ್ಯಾರಕ್ಗಳಿಗೆ ಶಿಫ್ಟ್ ಮಾಡಲಾಗಿದೆ, ಇದರಿಂದ ರನ್ಯಾ ರಾವ್ಗೆ ಕಿರಿಕಿರಿಯಿಂದ ಮುಕ್ತಿಯಾಗಿದೆ. ಆದರೆ, ಖಿನ್ನತೆಯಿಂದ ಹೊರಬರಲು ರನ್ಯಾ ಜೈಲಿನ ಲೈಬ್ರರಿಯಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪುಸ್ತಕಗಳ ಮೂಲಕ ಕಾಲ ಕಳೆಯುತ್ತಾ, ತಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.