ಈ ವಾರ ರಿಲೀಸ್ ಆಗ್ತಿರೋ ಮಾರುತ ಸಿನಿಮಾ, ಬಿಡುಗಡೆಗೂ ಮೊದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೌದು.. ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಈ ಸಿನಿಮಾ ಸಮಾಜಕ್ಕೆ ಸ್ಟ್ರಾಂಗ್ ಮೆಸೇಜ್ ಕೊಡ್ತಿದ್ದು, ಪೊಲೀಸ್ ಇಲಾಖೆ, ಮಹಿಳಾ ಆಯೋಗ ಕೂಡ ಸ್ಪೆಷಲ್ ಪ್ರೀಮಿಯರ್ನಲ್ಲಿ ಸಿನಿಮಾನ ಕಣ್ತುಂಬಿಕೊಂಡಿದೆ. ಈ ಕುರಿತ ಒಂದು ಇಂಟರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ.
- ದುನಿಯಾ ವಿಜಯ್-ಶ್ರೇಯಸ್ ಕಾಂಬೋ ಕಮಾಲ್..!
- ರಿಲೀಸ್ಗೂ ಮೊದಲೇ ಸಂಚಲನ ಮೂಡಿಸ್ತಿದೆ ಮಾರುತ
- ಮಹಿಳಾ ಆಯೋಗ, ಪೊಲೀಸ್ ಇಲಾಖೆಗೆ ಸ್ಪೆಷಲ್ ಶೋ
- ಹೆಣ್ಣು ಹೆತ್ತವರು ನೋಡ್ಲೇಬೇಕು.. ಇದೊಂಥರಾ ದುನಿಯಾ
ಕಲಾಸಾಮ್ರಾಟ್ ಎಸ್ ನಾರಾಯಣ್ ಸಿನಿಮಾಗಳಲ್ಲಿ ಮನರಂಜನೆ ಜೊತೆ ಸಮಾಜಕ್ಕೆ ಸಂದೇಶ ನೀಡುವ, ನೋಡುಗರ ಮನೋವಿಕಾಸಕ್ಕೆ ಪೂರಕವಾದ ಅಂಶಗಳು ಇದ್ದೇ ಇರುತ್ತೆ. 50ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶಿಸಿರೋ ಅವರು, ಇದೀಗ ಮಾರುತ ಅನ್ನೋ ಮತ್ತೊಂದು ಸಮಾಜಮುಖಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಚಿತ್ರದ ಲೀಡ್ನಲ್ಲಿದ್ದು, ಅವರಿಗೆ ದುನಿಯಾ ವಿಜಯ್ ಕೂಡ ಸಾಥ್ ನೀಡಿರೋದು ಇಂಟರೆಸ್ಟಿಂಗ್.
ಒಂದೇ ತಿಂಗಳಲ್ಲಿ ಬರೋಬ್ಬರಿ 63 ಹೆಣ್ಣು ಮಕ್ಕಳು ಮಿಸ್ಸಿಂಗ್ ಆಗಿರೋ ಅಂತಹ ಇನ್ಸಿಡೆಂಟ್ ಮೇಲೆ ಈ ಸಿನಿಮಾ ತಯಾರಾಗಿದ್ದು, ಇಲ್ಲಿ ಪೊಲೀಸ್ ಇಲಾಖೆ, ಹೆಣ್ಣು ಹೆತ್ತವರ ನೋವು, ಮಹಿಳಾ ಆಯೋಗ, ಹೆಣ್ಣು ಮಕ್ಕಳ ಕಿಡ್ನ್ಯಾಪ್ ಮಾಡೋ ಜಾಲ ಹೀಗೆ ಸಾಕಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಶ್ರೇಯಸ್ ಮಂಜುಗೆ ಸ್ಯಾಂಡಲ್ವುಡ್ನ ಏಂಜಲ್ ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿದ್ದು, ನಿಶ್ವಿಕಾ ನಾಯ್ಡು, ಕ್ರೇಜಿಸ್ಟಾರ್ ರವಿಚಂದ್ರನ್, ತಾರಾ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.
ಕೆ ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ನಿರ್ಮಿಸಿರೋ ಈ ಮಾರುತ ಸಿನಿಮಾ, ಇದೇ ನವೆಂಬರ್ 21ರಿಂದ ಅಂದ್ರೆ ಶುಕ್ರವಾರದಿಂದ ಪ್ರೇಕ್ಷಕರ ಮುಂದೆ ಬರ್ತಿದೆ. ಅದಕ್ಕೂ ಮುನ್ನ ಪೊಲೀಸ್ ಇಲಾಖೆ ಹಾಗೂ ಮಹಿಳಾ ಆಯೋಗಕ್ಕೆ ಚಿತ್ರತಂಡ ಸ್ಪೆಷಲ್ ಶೋಗಳನ್ನ ಆಯೋಜಿಸಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಜೊತೆ ಎಸ್ ನಾರಾಯಣ್ ದಂಪತಿ ಹಾಗೂ ಕೆ ಮಂಜು ಸಿನಿಮಾ ವೀಕ್ಷಿಸಿದರು. ಬಳಿಕ ಮಾತನಾಡಿದ ಚೌಧರಿ, ಪುಸ್ತಕಗಳ ಮೂಲಕ ಎಷ್ಟು ಹೇಳಿದ್ರೂ ಸಹ, ಸಿನಿಮಾ ಮೂಲಕ ಈ ವಿಷಯ ಹೇಳ್ತಿರೋದು ದೊಡ್ಡ ಇಂಪ್ಯಾಕ್ಟ್ ಆಗಲಿದೆ ಎಂದರು.
ನಾಗಲಕ್ಷ್ಮೀ ಚೌಧರಿಯನ್ನ ಸನ್ಮಾನಿಸಿ, ಅವರ ಕೆಲಸ ಕಾರ್ಯಗಳನ್ನ ಅಭಿನಂದಿಸಿದ ಡೈರೆಕ್ಟರ್ ಎಸ್ ನಾರಾಯಣ್, ಮಕ್ಕಳು ಹೆತ್ತವರಿಗೆ ಹಾಗು ಮಕ್ಕಳಿಗೆ ಈ ಸಿನಿಮಾ ಅನುವಹಿಸುತ್ತೆ ಎಂದರು. ಇನ್ನೂ ರೀಲ್ಸ್ ರಾಣಿ ಅಂತ ಕಾಲೆಳೆಯುವವರ ಬಗ್ಗೆ ನಾಗಲಕ್ಷ್ಮೀ ಚೌಧರಿ ಖಡಕ್ ಆಗಿಯೇ ಮಾತನಾಡಿದ್ದಾರೆ.
ಒಟ್ಟಾರೆ ಟ್ರೈಲರ್ ಇಂಪ್ರೆಸ್ಸೀವ್ ಆಗಿದ್ದು, ದೊಡ್ಡ ತಾರಾಗಣದ ಜೊತೆ ಸಿನಿಮಾ ಗೆಲ್ಲುವ ಸೂಚನೆ ನೀಡಿದೆ. ಶ್ರೇಯಸ್ ಎಫರ್ಟ್ ಪ್ರತಿ ಫ್ರೇಮ್ನಲ್ಲೂ ಎದ್ದು ಕಾಣ್ತಿದ್ದು, ಸಣ್ಣ ವಯಸ್ಸಿನ ಅಪ್ಕಮಿಂಗ್ ಸ್ಟಾರ್ ಇಂತಹ ಸಮಾಜಮುಖಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಂಡಿರೋದನ್ನ ಮೆಚ್ಚಲೇಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





