ಡಿಬಾಸ್ ಭೇಟಿ ಬಳಿಕ ದೇವಸ್ಥಾನದಲ್ಲಿ ಜನಸಾಗರ

ಭಗವತಿ ಟೆಂಪಲ್‌ಗೆ ಚಂದನವನದ ಭಗವಾನ್..!

Untitled design 2025 04 10t174946.319

ಕೇರಳಾದ ಭಗವತಿ ಟೆಂಪಲ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಡಿಬಾಸ್ ದರ್ಶನ್. ಇಷ್ಟಕ್ಕೂ ಕರುನಾಡ ದಾಸನಿಗೂ ಕೇರಳ ದೇವಸ್ಥಾನಕ್ಕೂ ಏನು ಸಂಬಂಧ ಅಂತೀರಾ..? ಈ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ಒಮ್ಮೆ ನೋಡಿ.

ADVERTISEMENT
ADVERTISEMENT

ಮಾಡಾಯಿಕಾವು ಶ್ರೀ ತಿರುವರ್ ಕಾಟ್ ಕಾವು ಭಗವತಿ ದೇವಸ್ಥಾನ. ಇದು ಕೇರಳದ ಕಣ್ಣೂರು ಜಿಲ್ಲೆಯಲ್ಲಿರೋ ಶ್ರೀ ಕ್ಷೇತ್ರ. ಅದರಲ್ಲೂ ಶತ್ರು ಸಂಹಾರ ಪೂಜೆಗೆ ಪ್ರಸಿದ್ಧಿ ಪಡೆದಿರೋ ಪವಾಡ ಕ್ಷೇತ್ರ. ಭಗವತಿಯ ಶಕ್ತಿಯು ಕ್ಷಣಮಾತ್ರದಲ್ಲೇ ಗೋಚರವಾಗುವ ಪರಮ ಪುಣ್ಯ ಕ್ಷೇತ್ರಕ್ಕೆ ಇತ್ತೀಚೆಗೆ ನಟ ದರ್ಶನ್, ಕುಟುಂಬ ಸಮೇತ ಭೇಟಿ ನೀಡಿದ್ದರು.

ತನ್ನ ಕಷ್ಟಗಳೆನ್ನೆಲ್ಲಾ ದೂರ ಮಾಡು ಅಂತಾ ದೇವಿಗೆ ಮೊರೆ ಹೋಗಿದ್ದರು. ಅಲ್ಲದೇ ಭಗವತಿಗೆ ಶತ್ರು ಸಂಹಾರ ಪೂಜೆಯನ್ನೂ ಸಲ್ಲಿಸಿದ್ದರು. ಪುತ್ರ ವಿನೀಶ್, ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್ ಗೌಡ ಸೇರಿದಂತೆ ಆಪ್ತ ವಲಯ ಕೂಡ ಇದಕ್ಕೆ ಸಾಕ್ಷಿಯಾಗಿತ್ತು. ದರ್ಶನ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸುದ್ದಿ ಹಬ್ಬಿದ್ದೇ ತಡ, ಸಾಲು ಸಾಲು ಭಕ್ತರ ದಂಡು ಹರಿದು ಬರುತ್ತಿದೆ.

ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿದ್ದರಿಂದ ಹೆಚ್ಚಾಗಿರುವ ಭಕ್ತರಿಗೆ ಕುತೂಹಲ ಹೆಚ್ಚಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ‌ ಮಾಡಾಯಿಕಾವು ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈವರೆಗೆ ಕೇರಳದ ಹಲವು ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಮಾತ್ರ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದರಂತೆ. ಆದ್ರೀಗ ದಕ್ಷಿಣದ ಬೇರೆ ಬೇರೆ ಭಾಗಗಳಿಂದ ಜನ ಹರಿದು ಬರ್ತಿದ್ದಾರೆ.

ಶತ್ರು ಸಂಹಾರ ಪೂಜೆಯ ವೇಳೆಗೆ ಭಕ್ತರಿಗೆ ದೇಗುಲದ ಒಳಭಾಗಕ್ಕೆ ಪ್ರವೇಶ ಇರುವುದಿಲ್ಲ. ದೇವಿಯ ಎದುರು ಜನ್ಮ ನಕ್ಷತ್ರ, ಹೆಸರು ಹೇಳಿ ವಿಶೇಷವಾದ ಅರ್ಚನೆ ಮಾಡಲಾಗುತ್ತದೆ. ಶತ್ರು ಸಂಹಾರದ ಪೂಜಾ ಪ್ರಸಾದವಾಗಿ ಕೋಳಿ ಖಾದ್ಯ ನೀಡಲಾಗುತ್ತದೆ. ಭಗವತಿಯ ಭಸ್ಮ ಪ್ರಸಾದ ಅತೀ ಶ್ರೇಷ್ಠವಾಗಿದ್ದು, ಭಕ್ತರು ನಂಬಿಕೆಯಿಂದ ಸ್ವೀಕಾರ ಮಾಡ್ತಾರೆ. ಅದನ್ನ ದರ್ಶನ್, ಕುಟುಂಬಸ್ಥರು ಹಾಗೂ ಆಪ್ತ ವಲಯ ಕೂಡ ಸ್ವೀಕರಿಸಿದೆ.

ರಾತ್ರಿ ಎಂಟು ಗಂಟೆ ಬಳಿಕ ಆಲಯಕ್ಕೆ ಪ್ರವೇಶ ನಿಶಿದ್ಧ. ಕೇರಳದ ಪ್ರಸಿದ್ದ ೧೩ ಭಗವತಿ ಕ್ಷೇತ್ರ ಗಳ ಪೈಕಿ ಮಾಡಾಯಿಕಾವು ಭದ್ರಕಾಳಿಯ ಶಕ್ತಿ ಬಹಳ ವಿಶೇಷವಾದದ್ದು. ನಟ ದರ್ಶನ್ ರೀತಿ ಸಾಕಷ್ಟು ಮಂದಿ ಭಕ್ತಾದಿಗಳು ಶತ್ರು ಸಂಹಾರ ಪೂಜೆ ಸಲ್ಲಿಸುತ್ತಿದ್ದಾರೆ. ದಿನೇ ದಿನೆ ಇದು ಕುತೂಹಲ ಹೆಚ್ಚಿಸುತ್ತಿರೋದು ಇಂಟರೆಸ್ಟಿಂಗ್.

ಒಟ್ಟಿನಲ್ಲಿ ಭದ್ರಕಾಳಿಯಾಗಿ ಅವತರಿಸಿ ಭಕ್ತರ ನಂಬಿಕೆಯ ಅಭಯದಾತೆಯಾಗಿ ಮಾಡಾಯಿಕಾವು ನಲ್ಲಿ ನೆಲೆ ನಿಂತಿರುವ ಭಗವತಿ, ರಾಜ್ಯದ ಮತ್ತಷ್ಟು ಭಕ್ತರನ್ನು ಸೆಳೆಯುತ್ತಿದ್ದಾಳೆ. ನಟ ದರ್ಶನ್ ಬಳಿಕ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದ ಶತ್ರು ಸಂಹಾರ ಪೂಜೆಗಳು ನಡೆಯುತ್ತಿದ್ದು, ಈ ಪವರ್‌ಫುಲ್ ದೇವಿಯ ಆಲಯದಲ್ಲಿ ನಡೆಸಿದ ಪೂಜೆಯಿಂದಾಗಿ ಬದಲಾಗಿದೆ ದಾಸನ ನಸೀಬು.

ಆದಿತ್ಯ ದೊಂಡೋಲೆ, ಗ್ಯಾರಂಟಿ ನ್ಯೂಸ್, ಮಂಗಳೂರು

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

 

Exit mobile version