ಕಿಚ್ಚ-ದಚ್ಚು.. ಒಂದು ಕಾಲದ ಕುಚಿಕು ಗೆಳೆಯರು. ಅದ್ಯಾರ ಕಣ್ಣು ಬಿತ್ತೋ ನಾನು ಸೂರ್ಯ ನೀನು ಚಂದ್ರ ಇಬ್ಬರು ಒಂದಾಗೊ ಮಾತೆ ಇಲ್ಲ ಎಂಬಂತಾಗಿದೆ. ಒಂದು ಖುಷಿ ವಿಚಾರ ಏನಪ್ಪಾಂದ್ರೆ ಒಂದೇ ಕಡೆ ಸುದೀಪ್-ದರ್ಶನ್ ಬಿಲ್ಲ-ಡೆವಿಲ್ ಸಿನಿಮಾಗಳ ಚಿತ್ರೀಕರಣ ನಡೆದಿದ್ದು ಗೊತ್ತೇಯಿದೆ. ಆದ್ರೆ ಸೆಟ್ಗಳಲ್ಲಿ ಅಂಥದ್ದೇನಾದ್ರು ನಡೀತಾ ಕಿಚ್ಚ ದಚ್ಚು ಮುಖಮುಖಿ ಆದ್ರಾ..?ಅನ್ನೋ ಕ್ಯೂರಿಯಾಸಿಟಿಗೆ ಡೈರೆಕ್ಟರ್ ಅನೂಪ್ ಭಂಡಾರಿ ಮೌನ ಮುರಿದಿದ್ದಾರೆ.
- ಸ್ಯಾಂಡಲ್ವುಡ್ ಸೂರ್ಯ ಚಂದ್ರ ಕಿಚ್ಚ-ದಚ್ಚು
- ಮತ್ತೆ ಸುದ್ದಿಯಲ್ಲಿ KFI ಕುಚಿಕು ಗೆಳಯರು..!
- ದಚ್ಚು ಡೆವಿಲ್ ಸೆಟ್ನಲ್ಲಿ ಕಿಚ್ಚ..? ಏನಂದ್ರು ಡೈರೆಕ್ಟರ್..?!
ಸದ್ಯಕ್ಕೆ ಕನ್ನಡ ಚಿತ್ರರಂಗದ ಪರಿಸ್ಥಿತಿ ನೋಡ್ತಿದೀರಾ. ಒಳ್ಳೆ ಸಿನಿಮಾಗಳು ಬಂದ್ರು ಥಿಯೇಟರ್ ಗೆ ಬಂದು ನೋಡೋ ಪ್ರೇಕ್ಷಕರು ಕಡಿಮೆ ಆಗಿದ್ದಾರೆ. ಏನಿದ್ರು ಒಟಿಟಿ ಅಲ್ಲಿ ನೋಡ್ತಿವಿ ಅನ್ನೋ ಕಾಲ ಬಂದಾಗಿದೆ ಹೀಗಿರುವಾಗ ಸೂಪರ್ ಸ್ಟಾರ್ಸ್ ಅನ್ನಿಸಿಕೊಂಡಿರೋ ಆರು ಅಡಿ ಕಟೌಟ್ ಬಾದ್ ಶಾ ಕಿಚ್ಚ ಸುದೀಪ್ ಅಭಿನಯಿಸುತ್ತಿರೋ ಬಿಲ್ಲ ರಂಗ ಬಾಷಾ ಹಾಗೂ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯಿಸುತ್ತಿರೋ ಡೆವಿಲ್ ಈ ಜೋಡಿಯ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ..?
ಹೌದು, ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಸಿನಿಮಾ ಅಪ್ಡೇಟ್ ಅಂದರೆ ಸಾಕು ಜನ ಸಿಕ್ಕಾಪಟ್ಟೆ ಆಸಕ್ತಿ ವಹಿಸುತ್ತಾರೆ. ಇದೀಗ ಇವರಿಬ್ಬರ ಸಿನಿಮಾ ಅಪ್ಡೇಟ್ ನೋಡುವುದಾದರೆ ಸುದೀಪ್ ಅವರ ಬಿಲ್ಲ ರಂಗ ಬಾಷಾ ಹಾಗೂ ದರ್ಶನ್ ಅವರ ಡೆವಿಲ್ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಎರಡೂ ಸಿನಿಮಾ ಶೂಟಿಂಗ್ ಅನ್ನು ಒಂದೇ ಸ್ಥಳದಲ್ಲಿ ನಡೆದಿದೆ ಅನ್ನೋದು ಹಳೆಯ ಸುದ್ದಿ ಆದ್ರೂ ಅಲ್ಲೊಂದು ಇಂಟೆರೆಸ್ಟಿಂಗ್ ವಿಚಾರ ಇದೆ. ಎಸ್, ಬಿಲ್ಲ ಹಾಗು ಡೆವಿಲ್ ಎರಡೂ ಸಿನಿಮಾಗಳ ಚಿತ್ರೀಕರಣ ಅಕ್ಕ ಪಕ್ಕಾ ಕಾಂಪೌಂಡ್ ನಲ್ಲೇ ನಡೆದಿದೆ ಆದ್ರೂ ಸುದೀಪ್ ದರ್ಶನ್ ಮುಖಮುಖಿ ಆಗಿಲ್ವ..? ಸೆಟ್ ನಲ್ಲಿರೋ ಹಿರಿಯರು ಇಬ್ಬರನ್ನು ಭೇಟಿ ಮಾಡ್ಸೋಕೆ ಪ್ರಯತ್ನ ಪಟ್ಟಿಲ್ವಾ..?
ರಿಯಾಲಿಟಿ ಏನಂದ್ರೆ ಸುದೀಪ್ ಹಾಗು ದರ್ಶನ್ ಇಬ್ಬರು ಮುಖಮುಖಿ ಆಗಿಲ್ಲ. ಇನ್ನು ಎರಡೂ ಸೆಟ್ ಗಳಲ್ಲಿ ಸ್ಟ್ರಿಕ್ಟ್ ಆಗಿ ನಿಯಮಗಳನ್ನು ಪಾಲಿಸಬೇಕು ಅಂತ ಷರತ್ತು ಹಾಕಲಾಗಿತ್ತಂತೆ. ಅದ್ರಲ್ಲೂ ಒಂದೇ ಕಡೆ ಶೂಟಿಂಗ್ ನಡೀತಿದ್ರು ಸುದೀಪ್ ಯಾಕೆ ದರ್ಶನ್ ನ ಭೇಟಿ ಮಾಡಿಲ್ಲ ಅನ್ನೋದನ್ನ ಬಿಲ್ಲ ರಂಗ ಬಾಷಾ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಎಕ್ಸ್ಲೂಸಿವ್ ಆಗಿ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದಾರೆ.
- ದರ್ಶನ್ನ ಮೀಟ್ ಆಗಿಲ್ಲ ಕಿಚ್ಚ.. ಅನೂಪ್ ಭಂಡಾರಿ ರಿವೀಲ್ಸ್
- ಮೂರು ಗೆಟಪ್ನಲ್ಲಿ ಬಾದ್ ಶಾ, ಸಿಎಂ ಆಗಿ ಬಾಕ್ಸ್ ಆಫೀಸ್ ಸುಲ್ತಾನ್
ಸುದೀಪ್ ತಾವು ಆಯಿತು ತಮ್ಮ ಕೆಲಸ ಆಯಿತು ಅಂತ ಸುಮ್ಮನಾಗಿದ್ದಾರೆ. ಡೆವಿಲ್ ಹಾಗೂ ಬಿಲ್ಲ ಸಿನಿಮಾಗಳ ಜೊತೆ ಬೇರೆ ಚಿತ್ರಗಳ ಶೂಟಿಂಗ್ ಕೂಡ ನಡೀತಿತ್ತು. ಪಾತ್ರದ ಗೆಟಪ್ ನಲ್ಲಿನಿರೋ ಕಾರಣ ಒಂದು ಸಲ ಸುದೀಪ್ ಸೆಟ್ ಗೆ ಎಂಟ್ರಿ ಕೊಟ್ರೆ ಎಲ್ಲಾ ಕೆಲಸ ಮುಗಿಸಿ ಹೊರಗೆ ಹೋಗ್ತಾರೆ. ನಮ್ಮ ಪಾಡಿಗೆ ನಾವು ಶೂಟ್ ಮಾಡ್ತಿದ್ವಿ ಡೆವಿಲ್ ಟೀಂ ಅವರ ಪಾಡಿಗೆ ಅವರು ಶೂಟ್ ಮಾಡ್ತಿದ್ರು ಎಂದು ಅನೂಪ್ ಭಂಡಾರಿ ಹೇಳಿದ್ದಾರೆ. ಸದ್ಯ ಬಿಲ್ಲ ರಂಗ ಬಾಷಾ ಸುದೀಪ್ ಅವರ ಸಿನಿ ಜರ್ನಿಯಲ್ಲಿ ಬಿಗೆಸ್ಟ್ ಸಿನಿಮಾ ಆಗಿದೆ. ಇದರಲ್ಲಿ ಸುದೀಪ್ ಮೂರು ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಆರ್ಬಿ ಶೂಟಿಂಗ್ ಕೂಡ ಹೈ ಸೆಕ್ಯೂರ್ ಆಗಿ ನಡೆಯುತ್ತಿದೆ. ಮತ್ತೊಂದು ಕಡೆ ದರ್ಶನ್ ಅವರ ಡೆವಿಲ್ ಸಿನಿಮಾ ರಾಜಕೀಯ ಆಧಾರಿತ ಸಿನಿಮಾ ಆಗಿದೆ. ಡೆವಿಲ್ ಸಿನಿಮಾದಲ್ಲಿ ದರ್ಶನ್ ರಾಜ್ಯದ ಸಿಎಂ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾ ದರ್ಶನ್ ಅವರ ಸ್ಪೆಷಿಯಲ್ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ.
ಏನೇ ಹೇಳಿ ಈ ಜೋಡೆತ್ತು ಒಂದಾಗೋಕೆ ದೇವರೇ ಮತ್ತೆ ಮತ್ತೆ ಇಬ್ಬರನ್ನು ಹತ್ತಿರಕ್ಕೆ ತರುತಿದ್ದಾನೆ ಆದ್ರೂ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅವರಿಬ್ಬರ ಸ್ನೇಹದಲ್ಲಿ ಅದ್ಯಾರು ಹುಳಿ ಹಿಂಡಿದ್ರೋ ಗೊತ್ತಿಲ್ಲ ಇಬ್ಬರೂ ತಾನಾಯ್ತು ತನ್ನ ಪ್ರಪಂಚವಾಯ್ತು ಅಂತ ಒಬ್ಬರಿಗೊಬ್ಬರ ಸಹವಾಸವೇ ಬೇಡ ಅಂತ ಪರ್ಸನಲ್ ಹಾಗೂ ಪ್ರೊಫೆಷನಲ್ ಜೀವನ ನಡೆಸ್ತಿದ್ದಾರೆ. ಅಂದಹಾಗೆ ಇವರಿಬ್ಬರೂ ಒಟ್ಟಾಗಬೇಕು ಅನ್ನೋದು ಕಿಚ್ಚ-ದಚ್ಚು ಇಬ್ಬರೂ ಫ್ಯಾನ್ಸ್ಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್