• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಂತಾರ-1 ನಾಲ್ಕೇ ದಿನಕ್ಕೆ 335 ಕೋಟಿ..50 ಲಕ್ಷ ಟಿಕೆಟ್ಸ್ ಸೋಲ್ಡ್ಔಟ್‌..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2025 - 5:50 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 06t174755.668

ದಂತಕಥೆಗಳ ಮಹಾದೃಶ್ಯಕಾವ್ಯ ಕಾಂತಾರ. ನಾಲ್ಕೇ ದಿನಕ್ಕೆ 335 ಕೋಟಿ ಪೈಸಾ ವಸೂಲ್ ಮಾಡಿರೋ ಕಾಂತಾರ, ಕೆಜಿಎಫ್ ಬಳಿಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಿಷಬ್ ಶೆಟ್ಟಿಗೆ ಅನುಪಮ್ ಖೇರ್ ವಿಡಿಯೋ ಕಾಲ್ ಮಾಡಿ ಹೇಳಿದ್ದೇನು ಅನ್ನೋದ್ರ ಜೊತೆಗೆ ರಾಷ್ಟ್ರಪತಿ ಭವನದಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಆದ ಕಾಂತಾರ ಕರಾಮತ್ತು ಕಹಾನಿ ಹೇಳ್ತೀವಿ ಈ ಸ್ಟೋರಿ ನೋಡಿ

ಕಾಂತಾರ.. ಕಾಂತಾರ.. ಕಾಂತಾರ.. ರಿಷಬ್ ಶೆಟ್ಟಿ ಕರಿಯರ್‌‌ನ ಬಹುದೊಡ್ಡ ಪ್ಯಾನ್ ಇಂಡಿಯಾ ಮೂವಿ. ಒಂದೇ ಬಾರಿ 7 ಭಾಷೆಗಳಲ್ಲಿ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ ತೆರೆಕಂಡ ಮಾಸ್ಟರ್‌ಪೀಸ್ ಸಿನಿಮಾ. ಕಾಂತಾರ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಜನಕ್ಕೆ ಅತೀವ ನಿರೀಕ್ಷೆಯಿತ್ತು. ಅದ್ರಂತೆ ಅವ್ರ ಅಭಿರುಚಿಗೆ ತಕ್ಕನಾದ ಸಿನಿಮಾ ನೀಡುವಲ್ಲಿ ಶೆಟ್ರು ಸಕ್ಸಸ್ ಆಗಿದ್ದಾರೆ. ಎಲ್ಲೆಡೆಯಿಂದ ಚಿತ್ರಕ್ಕೆ ಅಭೂತಪೂರ್ವ ಪ್ರಶಂಸೆ ಮತ್ತು ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ.

RelatedPosts

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ

ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್

ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ

ADVERTISEMENT
ADVERTISEMENT

KGF ನಂತ್ರ ಕಾಂತಾರ ಮತ್ತೊಂದು ಸಾರ್ವಕಾಲಿಕ ದಾಖಲೆ

ನಾಲ್ಕೇ ದಿನಕ್ಕೆ 335 ಕೋಟಿ.. 50 ಲಕ್ಷ ಟಿಕೆಟ್ಸ್ ಸೋಲ್ಡ್‌..!!

90 ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಚಿತ್ರರಂಗದಲ್ಲಿ 90 ರಿಂದ 100 ಕೋಟಿ ಗಳಿಸೋ ಸಿನಿಮಾಗಳು ಬರ್ತಿರೋದೇ ಇತ್ತೀಚೆಗೆ. ಅಂಥದ್ರಲ್ಲಿ ರಿಲೀಸ್ ಆದ ಮೊದಲ ದಿನವೇ 100 ಕೋಟಿ ಗಡಿ ಮುಟ್ಟುವ ಚಿತ್ರಗಳು ಬರ್ತಿರೋದು ಖುಷಿಯ ವಿಚಾರ. ಯೆಸ್.. ಕೆಜಿಎಫ್ ಚಾಪ್ಟರ್-2 ಬಳಿಕ ಕಾಂತಾರ-1 ಅಂಥದ್ದೊಂದು ಸಾರ್ವಕಾಲಿಕ ದಾಖಲೆಗೆ ಮುನ್ನುಡಿ ಬರೆದಿದೆ. ಯಶ್ ನಟನೆಯ ಕೆಜಿಎಫ್ ಸೀಕ್ವೆಲ್ ತೆರೆಕಂಡ ಮೊದಲ ದಿನವೇ ವರ್ಲ್ಡ್‌ವೈಡ್ ಬರೋಬ್ಬರಿ 165 ಕೋಟಿ ಗಳಿಸಿತ್ತು. ಇದೀಗ ಕಾಂತಾರ ಪ್ರೀಕ್ವೆಲ್ 89 ಕೋಟಿ ಕಲೆಕ್ಷನ್‌ನಿಂದ 2ನೇ ಸ್ಥಾನ ಅಲಂಕರಿಸಿದೆ.

https://www.guaranteenews.com/wp-content/uploads/2025/10/Anupam-Kher-Video-Call.mp4

ಮೂರೇ ದಿನದಲ್ಲಿ 235 ಕೋಟಿ ಗಳಿಸಿದ ಶೆಟ್ರ ಕಾಂತಾರ ಚಿತ್ರ, ನಾಲ್ಕು ದಿನಗಳಿಗೆ 335 ಕೋಟಿ ಗಳಿಸಿ 300 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ. ಅಲ್ಲದೆ, ಬುಕ್ ಮೈ ಶೋನಲ್ಲಿ 5 ದಿನದಲ್ಲಿ ಬರೋಬ್ಬರಿ 50 ಲಕ್ಷ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ. ಕನ್ನಡ ಸಿನಿಮಾವೊಂದಕ್ಕೆ ಈ ರೀತಿ ಎಲ್ಲೆಡೆ ಡಿಮ್ಯಾಂಡ್ ಹೆಚ್ಚಾಗಿ, ಲಕ್ಷಾಂತರ ಟಿಕೆಟ್ಸ್ ಆನ್‌ಲೈನ್ ಬುಕಿಂಗ್ ಆಗಿರೋದು ಹೆಮ್ಮೆಯ ವಿಷಯ.

ಬಾಕ್ಸ್ ಆಫೀಸ್‌‌ ನಾಗಾಲೋಟ.. ಎಲ್ಲೆಡೆ ಹೌಸ್‌‌ಫುಲ್ ಓಟ

ನೆಗೆಟೀವ್ ರಿವ್ಯೂಸ್ ಇಲ್ವೇ ಇಲ್ಲ.. ದೈವ ಶಕ್ತಿಗೆ ಪ್ರೇಕ್ಷಕರ ಭಕ್ತಿ

 

ಬಾಕ್ಸ್ ಆಫೀಸ್‌‌‌ನಲ್ಲಿ ನಾಗಾಲೋಟ ಮುಂದುವರೆಸಿರೋ ಕಾಂತಾರ-1 ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನಗಳನ್ನ ಕಾಣ್ತಿದೆ. ದೈವಿಕ ಅಂಶಗಳಿಂದ ಕೂಡಿರೋ ಕಾಂತಾರ ಚಿತ್ರವನ್ನು ಭಕ್ತಿ ಪ್ರಧಾನ ಸಿನಿಮಾಗಳ ಜಾನರ್‌‌‌ಗಹೆ ಸೇರಿಸಿ, ಅತೀವ ಭಕ್ತಿಯಿಂದ ಜನ ನೋಡ್ತಿದ್ದಾರೆ. ಅಲ್ಲದೆ, ಇಲ್ಲಿ ಸಂಘರ್ಷದ ಅಂಶಗಳು ನೋಡುಗರ ನಾಡಿಮಿಡಿತ ಹೆಚ್ಚಿಸುತ್ತಿವೆ. ನಮ್ಮ ಮಣ್ಣಿನ ಸೊಗಡು, ಸೊಬಗು, ನಂಬಿಕೆಗಳ ಪ್ರತಿರೂಪವಾಗಿ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ ಕಾಂತಾರ.

ಅನುಪಮ್ ಖೇರ್ ವಿಡಿಯೋ ಕಾಲ್.. ಶೆಟ್ರಿಗೆ ಹೇಳಿದ್ದೇನು?

‘ಮಾತೇ ಬರ್ತಿಲ್ಲ’ ಅಂದಿದ್ಯಾಕೆ ಬಾಲಿವುಡ್ ಹಿರಿಯ ನಟ..?!

ಸಾಮಾನ್ಯವಾಗಿ ಎಂಥದ್ದೇ ಹಿಟ್ ಮೂವಿ ಬಂದರೂ ಸಹ ಒಂದಷ್ಟು ಕಲಾವಿದರು ಹಾಗೂ ನಿರ್ದೇಶಕರುಗಳು ಅವುಗಳನ್ನ ತೆಗಳುವುದು ಉಂಟು. ಆದ್ರೆ ಇದೇ ಫಸ್ಟ್ ಟೈಂ, ಕಾಂತಾರ ಚಿತ್ರಕ್ಕೆ ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್‌ಗಳು ಹಾಗೂ ಸ್ಟಾರ್ ಡೈರೆಕ್ಟರ್‌ಗಳು ಫುಲ್ ಮಾರ್ಕ್ಸ್ ನೀಡ್ತಿದ್ದಾರೆ. ಆರ್‌‌ಜಿವಿ, ಸಂದೀಪ್ ರೆಡ್ಡಿ ವಂಗಾ, ಪ್ರಭಾಸ್, ಹೃತಿಕ್ ರೋಷನ್, ಎನ್‌ಟಿಆರ್‌, ಉಪೇಂದ್ರರಿಂದ ಹಿಡಿದು ಎಲ್ಲರೂ ವ್ಹಾವ್ ಎಂದಿದ್ದಾರೆ. ಬಾಲಿವುಡ್‌‌ ನಟ ಅನುಪಮ್ ಖೇರ್ ಕೂಡ ಇದ್ರಿಂದ ಹೊರತಾಗಿಲ್ಲ.

ಹೌದು.. ನಿನ್ನೆ ಸಂಡೇ ಹಿನ್ನೆಲೆ ಕುಟುಂಬ ಸಮೇತ ಮುಂಬೈನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿರೋ ಅನುಪಮ್ ಖೇರ್, ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿಗೆ ವಿಡಿಯೋ ಕಾಲ್ ಮಾಡಿ, ಮಾತೇ ಬರ್ತಿಲ್ಲ.. ನಂಬಲಾಗದಂತಹ ದೃಶ್ಯಚಿತ್ತಾರವಿದು ಅಂತ ಹಾಡಿ ಹೊಗಳಿದ್ದಾರೆ. ಅನುಪಮ್ ಖೇರ್ ತಾಯಿ ಕೂಡ ರಿಷಬ್‌ಗೆ ದೇವರು ನಿಮಗೆ ಒಳ್ಳೆಯದು ಮಾಡಲಿ ಅಂತ ಆಶೀರ್ವದಿಸಿದ್ದು ಇಂಟರೆಸ್ಟಿಂಗ್. ಇದಲ್ಲವೇ ನಮ್ಮ ಕನ್ನಡಿಗರ ಗತ್ತು, ಗೈರತ್ತು..?

ಡೆಲ್ಲಿ ರಾಷ್ಟ್ರಪತಿ ಭವನದಲ್ಲಿ ಕಾಂತಾರ-1 ಸ್ಪೆಷಲ್ ಸ್ಕ್ರೀನಿಂಗ್

ಕಾಂತಾರ ವೀಕ್ಷಿಸಿದ ಸ್ಟ್ಯಾಫ್.. ಸದ್ಯದಲ್ಲೇ ರಾಷ್ಟ್ರಪತಿ ವೀಕ್ಷಣೆ

ಇತ್ತೀಚೆಗೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, 60 ಸಾವಿರಕ್ಕೂ ಅಧಿಕ ರೂಪಾಯಿಗೆ ಟಿಕೆಟ್ಸ್ ಖರೀದಿಸಿ, ತಮ್ಮ ಬಿಜೆಪಿ ಕಾರ್ತಕರ್ತರಿಗೆ ಮೈಸೂರಿನ ಡಿಆರ್‌‌ಸಿನಲ್ಲಿ ಕಾಂತಾರ ಸಿನಿಮಾ ತೋರಿಸಿದ್ರು. ಇದೀಗ ನವದೆಹಲಿಯಲ್ಲಿರೋ ರಾಷ್ಟ್ರಪತಿ ಭವನದಲ್ಲಿ ಕಾಂತಾರ-1 ಸ್ಪೆಷಲ್ ಸ್ಕ್ರೀನಿಂಗ್ ಆಗಿದೆ. ಹೌದು.. ಅಕ್ಟೋಬರ್ 5ರ ಭಾನುವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಶೇಷ ಪ್ರದರ್ಶನದ ಮೂಲಕ ಹೊಂಬಾಳೆ ಸಿನಿಮಾ ತೋರಿಸಿದೆ. ಸದ್ಯದಲ್ಲೇ ದೇಶದ ಮೊದಲ ಪ್ರಜೆಗಳಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಕಾಂತಾರ ಕಣ್ತುಂಬಿಕೊಳ್ಳಲಿದ್ದಾರಂತೆ.

ನ್ಯಾಷನಲ್ ಅವಾರ್ಡ್‌ ಪಡೆದ ಕಾಂತಾರ ಸಿನಿಮಾ, ಈ ಹಿಂದೆ ವಿಶ್ವಸಂಸ್ಥೆಯಲ್ಲಿ ವಿಶೇಷ ಪ್ರದರ್ಶನ ಕಂಡಿತ್ತು. ಇದೀಗ ಕಾಂತಾರ-1 ಕೂಡ ಅದೇ ಶೈಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಸ್ಕ್ರೀನಿಂಗ್ ಆಗಿರೋದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡುವ ವಿಷಯವಾಗಿದೆ. ಇನ್ನು ಚಿತ್ರದ ವೀಕ್ಷಣೆ ವೇಳೆ ಒಂದಷ್ಟು ಮೈ ಮೇಲೆ ದೈವ ಆವಾಹನೆ ಆಗ್ತಿರೋದು ಒಂದಷ್ಟು ಚರ್ಚೆಗಳಿಗೆ ಗ್ರಾಸವಾಗ್ತಿದೆ. ಅದೇನೇ ಇರಲಿ, ಕಾಂತಾರ ಈ ರೇಂಜ್‌ಗೆ ಹೊಸ ಅಲೆಯನ್ನ ಎಬ್ಬಿಸಿ, ಇತಿಹಾಸದ ಪುಟಗಳನ್ನ ಸೇರಿರುವುದು ಚರಿತ್ರೆಯೇ ಸರಿ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 12T232136.240

ಬಿಸಿಲಿಗೆ ಈ 5 ಪಾನೀಯಗಳೇ ಬೆಸ್ಟ್‌: ಕಡಿಮೆ ಖರ್ಚಿನಲ್ಲಿ ದೇಹವನ್ನು ತಂಪಾಗಿರಿಸಲು ಇಲ್ಲಿವೆ ಟಿಪ್ಸ್

by ಯಶಸ್ವಿನಿ ಎಂ
March 12, 2026 - 11:23 pm
0

Untitled design 2026 03 12T224714.036

ದೇಗುಲಗಳಲ್ಲಿ ಪ್ರಾಣಿ ಬಲಿ ನಿಷೇಧವಾಗುತ್ತಾ? ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

by ಯಶಸ್ವಿನಿ ಎಂ
March 12, 2026 - 10:47 pm
0

Untitled design 2026 03 12T222213.022

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕ ವಿರುದ್ದ ಮೊಜ್ತಾಬಾ ಖಮೇನಿ ಆಕ್ರೊಶ

by ಯಶಸ್ವಿನಿ ಎಂ
March 12, 2026 - 10:29 pm
0

Untitled design 2026 03 12T210718.062

ನಾಳೆ ರಾಜ್ಯದ 31 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯ..!

by ಯಶಸ್ವಿನಿ ಎಂ
March 12, 2026 - 9:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 12T193441.959
    ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್
    March 12, 2026 | 0
  • Untitled design 2026 03 12T174637.676
    ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ
    March 12, 2026 | 0
  • Untitled design 2026 03 12T155908.984
    ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್
    March 12, 2026 | 0
  • Untitled design 2026 03 12T154517.391
    ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ
    March 12, 2026 | 0
  • Untitled design 2026 03 12T145017.516
    ಕನ್ನಡಕ್ಕೆ ಬಿಟೌನ್ ಬಾಂಬ್ ಶೆಲ್ ನೋರಾ ಫತೇಹಿ..KD ಜೊತೆ ಕಿಲ್ಲೇಡಿ
    March 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version