ಕಮಲ್ ಹಾಸನ್ ಥಗ್ ಲೈಫ್ ತೋಪಾಗಿ ಬಹಳ ದಿನಗಳೇ ಆಯ್ತು. ಇದೀಗ ಸುಪ್ರೀಂ ಕೋರ್ಟ್ನಿಂದ ಕಮಲ್ ಪರ ತೀರ್ಪು ಬಂದಿದೆ. ಈ ಕಮಲ್ ಕಿರಿಕ್ ನಡುವೆ ಕಮಲ್ ಶ್ರೀದೇವಿ ಸಿನಿಮಾ ಅನೌನ್ಸ್ ಆಗಿದೆ. ಕಾನ್ಸೆಪ್ಟ್ ಟೀಸರ್ ಸಮೇತ ಸಂಗೀತಾ ಭಟ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಕಮಲ್ ಕಿರಿಕ್ ನಡುವೆ ಅನೌನ್ಸ್ ಆಯ್ತು ‘ಕಮಲ್ ಶ್ರೀದೇವಿ’
- ಸತ್ತೋಗಿರೋ ಥಗ್ ಲೈಫ್ಗೆ ಕೋರ್ಟ್ನಿಂದ ಬಿಗ್ ರಿಲೀಫ್
ಸಣ್ಣದೊಂದು ಕ್ಷಮೆ ಕೇಳಿ ದೊಡ್ಡವರಾಗಬೇಕಿದ್ದ ಕಮಲ್ ಹಾಸನ್, ಕ್ಷಮೆ ಕೇಳದೆ ಕೋರ್ಟ್ ಮೇಲೆ ಕೋರ್ಟ್ಗೆ ಹೋಗುವ ಮೂಲಕ ತುಂಬಾ ಸಣ್ಣವರಅಗಿಬಿಟ್ಟರು. ಅಷ್ಟೇ ಯಾಕೆ ಇಡೀ ಕರ್ನಾಟಕ ಅವರಿಗೆ ಛೀಮಾರಿ ಹಾಕಿದೆ. ಹೈ ಕೋರ್ಟ್ ಕೂಡ ಅದೇ ಹೇಳಿತ್ತು. ಆದ್ರೆ ತನ್ನ ಥಗ್ ಲೈಫ್ ಸಿನಿಮಾ ರಿಲೀಸ್ಗೆ ಕರ್ನಾಟಕದಲ್ಲಿ ಬೆದರಿಕೆ ಬರ್ತಿದೆ ಅಂತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ರು. ಕೊನೆಗೂ ಅಲ್ಲಿ ಒಂದು ಮಟ್ಟಕ್ಕೆ ಆತನಿಗೆ ಜಯ ಸಿಕ್ಕಿದೆ.
ಆದ್ರೆ ಚೆನ್ನಾಗಿಲ್ಲ ಅಂತ ಜನ ತಿರಸ್ಕರಿಸಿರೋ ಆ ಫ್ಲಾಪ್ ಚಿತ್ರ ಥಗ್ ಲೈಫ್ ಈಗ ಕರ್ನಾಟಕದಲ್ಲಿ ರಿಲೀಸ್ ಆಗಿ ಏನು ಪ್ರಯೋಜನ ನೀವೇ ಹೇಳಿ..? ಅಂದಹಾಗೆ ಸತ್ತವರ ಕಥೆ ನಮಗ್ಯಾಕೆ ಅಲ್ಲವೇ..? ಹೀಗೆ ಕಮಲ್ ಕಿರಿಕ್ ನಡುವೆ ಕಮಲ್ ಶ್ರೀದೇವಿ ಸಿನಿಮಾ ಮುನ್ನೆಲೆಗೆ ಬಂದಿದೆ. ಸಚಿನ್ ಚಲುವರಾಯಸ್ವಾಮಿ ಹಾಗೂ ಸಂಗೀತಾ ಭಟ್ ಜೋಡಿ ಮೋಡಿ ಮಾಡೋಕೆ ಬರ್ತಿದೆ. ಅದ್ರ ಕಾನ್ಸೆಪ್ಟ್ ಟೀಸರ್ ಹಾಗೂ ಫಸ್ಟ್ ಲುಕ್ ಇಂಪ್ರೆಸ್ಸೀವ್ ಆಗಿದ್ದು, ಕಮಲ್ ಹಾಸನ್ಗೂ ಇದಕ್ಕೂ ಸಂಬಂಧವಿಲ್ಲ ಎಂದಿದೆ.
ಎನ್ ಚಲುವರಾಯಸ್ವಾಮಿ ಅರ್ಪಿಸುವ, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿ ಬಿ.ಕೆ ಧನಲಕ್ಷ್ಮೀ ನಿರ್ಮಾಣದ ಬರ್ನ್ ಸ್ವ್ಯಾಲೋ ಕಂಪೆನಿಯ ರಾಜವರ್ಧನ್ ಸಹ ನಿರ್ಮಾಣದ, ಸಚಿನ್ ಚಲುವರಾಯ ಸ್ವಾಮಿ ಅಭಿನಯದ ಚಿತ್ರ ಕಮಲ್ ಶ್ರೀದೇವಿ. ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.
ಕಮಲ್ ಶ್ರೀದೇವಿ ಅನ್ನೋ ಲೆಂಜಡರಿ ಜೋಡಿಯ ಹೆಸರಿಟ್ಟು, ಸಾಂಕೇತಿಕವಾಗಿ ಹಲವು ಆಯಾಮಗನ್ನ ಸೂಚಿಸೋ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ ಜೊತೆಗೆ ಕಾತುಕ ಹುಟ್ಟಿಸಿದೆ. ಮಮ್ಮಿ ಖ್ಯಾತಿಯ ಲೋಹಿತ್ ಕಥೆಯ ಎಳೆಯನ್ನ ಕೊಟ್ರೆ, ಗೊಂಬೆಗಳ ಲವ್ ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ. ಸದ್ದಿಲ್ಲದೇ ಸೆಟ್ಟೇರಿ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗ್ತಿರೋ ಕಮಲ್ ಶ್ರೀದೇವಿ ಪೋಸ್ಟರ್ ಕಾನ್ಸೆಪ್ಟ್ ಮತ್ತು ಕ್ವಾಲಿಟಿ ನೋಡಿ ಕನ್ನಡ ಉದ್ಯಮದ ಹಲವರು ಹುಬ್ಬೇರಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್