ಆರವತ್ತಕ್ಕೆ ಅರಳು ಮರಳು ಅಂತಾರಲ್ಲ ಹಂಗಾಗಿದೆ ತಮಿಳ ನಟ ಕಮಲ್ ಹಾಸನ್ ಪರಿಸ್ಥಿತಿ. ರಾಮ ಶಾಮ ಭಾಮ ಅಂತೆಲ್ಲ ಕನ್ನಡ ಚಿತ್ರಗಳನ್ನ ಮಾಡಿದ್ದ ಕಮಲ್ ಹಾಸನ್ ಇದೀಗ ಕನ್ನಡ ಬಗ್ಗೆ ವಿವಾದ ಸೃಷ್ಟಿಸಿದ್ದಾರೆ. ತಮಿಳ್ ನಿಂದಲೇ ಕನ್ನಡ ಹುಟ್ಟಿದ್ದು ಎನ್ನುವ ಹೇಳಿಕೆಗೆ ಇದೀಗ ರಾಜ್ಯ ರಾಜಕೀಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಅದರಲ್ಲೂ ಕಮಲ್ ಹಾಸನ್ ಕ್ಷಮೆ ಕೇಳಬೇಕು ಇಲ್ಲವಾದರೆ, ಬ್ಯಾನ್ ಮಾಡ್ತೀವಿ ಅಂತ ಸಚಿವ ತಂಗಡಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮಿಳಿನ ಪ್ರಸಿದ್ಧ ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಅನ್ನೋ ಮಾತು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕನ್ನಡದ ಮೇರುನಟ ಶಿವಣ್ಣ ಭಾಗವಹಿಸಿದ ಕಾರ್ಯಕ್ರಮದಲ್ಲೇ ನೀಡಿದ ಈ ಹೇಳಿಕೆ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ನಾಯಕರ ಕಮಲ್ ಹಾಸನ್ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ಹೊರಹಾಕಿದ್ದಾರೆ. ಇತ್ತು ಸಿಎಂ ಸಿದ್ದರಾಮಯ್ಯ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕವಿರಾಜಮಾರ್ಗದಲ್ಲೇ ಇದರ ಉಲ್ಲೇಖವಿದೆ. ಕನ್ನಡದ ಧೀರ್ಘ ಕಾಲದ ಇತಿಹಾಸ ಕಮಲ್ ಹಾಸನ್ಗೆ ಗೊತ್ತಿಲ್ಲವೆನಿಸುತ್ತಿದೆ ಅಂತ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿಯೇ ಗುಡುಗಿದ್ದಾರೆ.
ಕಮಲ್ ಹಾಸನ್ ಕನ್ನಡದ ಬಗ್ಗೆ ಹೇಳಿರುವ ಹೇಳಿಕೆಗೆ ರಾಜ್ಯಾದ್ಯಂತ ಹೋರಾಟ ಶುರುವಾಗಿದೆ. ಕನ್ನಡ ಪರ ಹೋರಾಟಗಾರರು ಕಮಲ್ ಹಾಸನ್ ವಿರುದ್ಧ ಬೀದಿಗೀಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತು ಕನ್ನಡದ ಅಸ್ಮಿತೆ ಬಗ್ಗೆ ಮಾತಾಡಿರೋ ಕಮಲ್ ಗೆ ಬಿಜೆಪಿ ನಾಯಕರು ಎರ್ರಾಬಿರ್ರಿ ಕ್ಲಾಸ್ ತೆಗೆದುಕೊಂಡರೆ, ಕಾಂಗ್ರೆಸ್ ನಾಯಕರ ಕನ್ನಡದ ಇತಿಹಾಸದ ಬಗ್ಗೆ ಗೊತ್ತಿಲ್ಲ. ಕನ್ನಡರಿಗರ ವಿಚಾರಕ್ಕೆ ಬಂದ್ರೆ ಸುಮ್ಮನೆ ಬಿಡಲ್ಲ. ಕಮಲ್ ಹಾಸನ್ ಕೂಡಲೇ ಕ್ಷಮೆಯಾಚಿಸಬೇಕು.. ಇಲ್ಲವಾದ್ರೆ ಕನ್ನಡ ನೆಲದಲ್ಲಿ ಅವರ ಚಿತ್ರ ಪ್ರದರ್ಶನಕ್ಕೆ ಬ್ಯಾನ್ ಹಾಕ್ತೇವೆ ಅಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಾಜ್ಯದಲ್ಲಿರೋ ಅನ್ಯಬಾಷಿಕರಿಂದ ಪದೇ ಪದೇ ಕನ್ನಡದ ಬಗ್ಗೆ ಉದ್ಧಟತನದ ಹೇಳಿಕೆಗಳು ಕೇಳಿ ಬರ್ತಿವೆ. ಇದಕ್ಕೆ ಸರ್ಕಾರ ಹೊಸ ಕಾಯಿದೆ ತರೋಕೆ ಸಿದ್ಧತೆ ನಡೆಸಿದೆ. ಇದರ ನಡುವೆ ಮೊನ್ನೆಯಷ್ಟೇ ಕನ್ನಡಿಗರ ಬಗ್ಗೆ ಕೊಂಕು ತೆಗೆದಿದ್ದ ಸೋನು ನಿಗಮಗೆ ಕನ್ನಡಿಗರು ಸರಿಯಾಗಿ ಮಂಗಳಾರತಿ ಎತ್ತಿದ್ರು. ಇದೀಗ 70 ವರ್ಷರ ಕಮಲ್ ಹಾಸನ್ ಸರದಿ. ಒಟ್ನಲ್ಲಿ ತಮಿಳು ಹೆಸರಾಂತ ಚಿತ್ರ ನಟ ಕಮಲ್ ಹಾಸನ್ ಏನೋ ಹೇಳೋಕೆ ಹೋಗಿ ಇನ್ನೇನು ಹೇಳಿ ಪೇಚಿಗೆ ಸಿಲುಕಿದ್ದು, ತಗ್ ಆಫ್ ಲೈಫ್ ಚಿತ್ರಕ್ಕೂ ವಿಘ್ನ ತರುವ ಸಾಧ್ಯತೆಗಳಿವೆ.
ದುರ್ಗೇಶ್ ನಾಯಿಕ ಪೊಲಿಟಿಕಲ್ ಬ್ಯೂರೋ ಗ್ಯಾರಂಟಿ ನ್ಯೂಸ್
| Reported by: ದುರ್ಗೇಶ್ ನಾಯಿಕ ಪೊಲಿಟಿಕಲ್ ಬ್ಯೂರೋ ಗ್ಯಾರಂಟಿ ನ್ಯೂಸ್