ಒಂದಾಗ್ತಾರಾ ಕಿಚ್ಚ ಸುದೀಪ್-ದರ್ಶನ್? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್?

‘ಪುಡಾಂಗ್’ ಅಂದ್ರೂ ಪ್ರೇಮ್‌ಗೆ ದಚ್ಚು ಮೇಲೆ ಪ್ರೀತಿ, ಅಭಿಮಾನ

Untitled design 2026 04 27T145001.547

ಪುಡಾಂಗ್ ಅಂದ್ರೂ ಬೇಜಾರ್ ಮಾಡ್ಕೊಂಡಿಲ್ಲ ಸ್ಯಾಂಡಲ್‌‌ವುಡ್‌ನ ಶೋ ಮ್ಯಾನ್ ಪ್ರೇಮ್. ಡಿಬಾಸ್ ದರ್ಶನ್ ಅಂದ್ರೆ ಅದೇ ಪ್ರೀತಿ, ಪ್ರೇಮ, ವಿಶ್ವಾಸ ಹಾಗೂ ಅಭಿಮಾನ. ಈ ಬಗ್ಗೆ ಪ್ರೇಮ್ಸ್ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಏನು ಹೇಳಿದ್ರು..? ಚಿತ್ರರಂಗದ ಎರಡು ಕಣ್ಣುಗಳಂತಿರೋ ಕಿಚ್ಚ-ದಚ್ಚುನ ಒಂದು ಮಾಡ್ತಾರಾ ಸ್ಟಾರ್ ಡೈರೆಕ್ಟರ್ ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ..

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.. ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್.. ಇಬ್ಬರೂ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌‌ಗಳೇ. ಬಹುತೇಕ ಇಬ್ಬರೂ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದವರು. ಅಷ್ಟೇ ಅಲ್ಲ ಬಹುದೊಡ್ಡ ಅಭಿಮಾನಿ ಬಳಗಗಳ ಮೂಲಕ ಪ್ರೇಕ್ಷಕರ ದಿಲ್ ಗೆದ್ದಿರೋ ಸ್ಟಾರ್‌‌ಗಳೂ ಹೌದು. ಚಂದನವನದ ಎರಡು ಕಣ್ಣುಗಳಂತಿದ್ದ ಈ ಇಬ್ಬರೂ ಸ್ಟಾರ್ಸ್‌‌‌ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಏನೋ.. 2017ರಲ್ಲಿ ನಾವು ಇನ್ಮೇಲೆ ಗೆಳೆಯರಲ್ಲ. ಒಂದೇ ಚಿತ್ರರಂಗದ ಇಬ್ಬರು ಕಲಾವಿದರಷ್ಟೇ ಅಂತ ದರ್ಶನ್ ಟ್ವೀಟ್ ಮಾಡೋ ಮೂಲಕ ಸಂಬಂಧ ಕಡಿದುಕೊಂಡರು.

ಅದು ಸ್ಟಾರ್‌ಗಳ ಫ್ಯಾನ್ಸ್ ವಾರ್, ಟ್ವೀಟ್ ವಾರ್, ಮಾಧ್ಯಮ, ಸೋಶಿಯಲ್ ಮೀಡಿಯಾ, ಟ್ರೋಲ್ ಪೇಜ್‌‌‌ಗಳಿಂದಾಗಿ ಬಹುದೊಡ್ಡ ಕಿಚ್ಚು ಹೊತ್ತಿಕೊಂಡು ಪರಸ್ಪರ ಕಿಚ್ಚ-ದ್ಚಚು ನಾನೊಂದು ತೀರಾ.. ನೀನೊಂದು ತೀರಾ ಅನ್ನುವಂತಾಗಿದೆ. ಆಲ್ಮೋಸ್ಟ್ ಆಲ್ 10 ವರ್ಷಗಳಾಗ್ತಿದೆ ಅವರಿಬ್ರೂ ದೂರವಾಗಿ. ಇಂದಿಗೂ ಆವರುಗಳನ್ನ ಒಂದು ಮಾಡೋ ಮನಸ್ಸು ಮಾತ್ರ ಯಾರೂ ಮಾಡ್ತಿಲ್ಲ. ಸೆನ್ಸೇಷನಲ್ ಡೈರೆಕ್ಟರ್ ಜೋಗಿ ಪ್ರೇಮ್ ಪ್ರಯತ್ನಿಸಿದ್ರೆ ಅವರಿಬ್ಬರನ್ನ ಒಟ್ಟು ಮಾಡಬಹುದು. ಈ ಬಗ್ಗೆ ಪ್ರೇಮ್ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಅಂದಹಾಗೆ ಸದ್ಯದ ಪರಿಸ್ಥಿತಿಗಳು ಅಂದುಕೊಂಡಂತಿಲ್ಲ. ಮರ್ಡರ್ ಕೇಸ್‌ವೊಂದರಲ್ಲಿ ಜೈಲು ಪಾಲಾಗಿದ್ದಾರೆ ನಟ ದರ್ಶನ್. ಅವ್ರನ್ನ ನೋಡಲು ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪರಪ್ಪನ ಅಗ್ರಹಾರಕ್ಕೇನೇ ಹೋಗಿ ಭೇಟಿ ಮಾಡಿ ಬಂದಿದ್ದರಂತೆ. ಇಂದಿಗೂ ದಚ್ಚುಗೆ ಅತ್ಯಾಪ್ತ ಗೆಳತಿ ಆಗಿರೋ ರಕ್ಷಿತಾ ನಾ ದರ್ಶನ್‌‌ನ ನೋಡ್ಬೇಕು ಅಂತ ಕನವರಿಸುತ್ತಲೇ ಇರ್ತಾರಂತೆ.

ಡಿಬಾಸ್ ದರ್ಶನ್‌ಗಾಗಿ ಕಥೆ ಕೂಡ ಸಿದ್ಧಪಡಿಸಿಕೊಂಡಿರೋ ಶೋ ಮ್ಯಾನ್ ಪ್ರೇಮ್ಸ್, ಒಳ್ಳೆಯ ದಿನಗಳು ಬಂದೇ ಬರುತ್ತೆ. ದರ್ಶನ್ ಆ ಸಂಕೋಲೆಯಿಂದ ಹೊರಬಂದೇ ಬರ್ತಾರೆ ಅನ್ನೋ ಆತ್ಮ ವಿಶ್ವಾಸದಲ್ಲಿದ್ದಾರೆ. ಆ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ ಕೂಡ.

ಪ್ರೇಮ್ ಏನ್ ದೊಡ್ಡ ಪುಡಾಂಗಾ..? ಹೀಗಂತ ದರ್ಶನ್ ಒಮ್ಮೆ ಪ್ರೇಮ್ ಬಗ್ಗೆ ಕೇವಲವಾಗಿ ಮಾತನಾಡಿದ್ರು. ಆದ್ರೆ ಅದ್ಯಾವ ಕೆಟ್ಟ ಗಳಿಗೆಯಲ್ಲಿ ಹಾಗೆ ಮಾತಾಡಿದ್ರೋ ಗೊತ್ತಿಲ್ಲ. ಅದ್ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದ ಪ್ರೇಮ್, ದರ್ಶನ್ ಮೇಲೆ ಅದೇ ಪ್ರೀತಿ, ವಿಶ್ವಾಸ ಇಟ್ಟಿರೋದು ದೊಡ್ಡ ಗುಣ. ಇರೋದನ್ನ ಇದ್ದಂಗೆ ಮಾತನಾಡುವ ಪ್ರೇಮ್ ಅವರು ದರ್ಶನ್ ಮೇಲೆ ಬಹುದೊಡ್ಡ ಭರವಸೆಯೇ ಇಟ್ಟಿದ್ದಾರೆ.

ಕೆಡಿ ಸಿನಿಮಾದ ಶೂಟಿಂಗ್ ಬಗ್ಗೆಯೂ ವಿಚಾರಿಸಿಕೊಳ್ತಿದ್ದ ದರ್ಶನ್ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಪ್ರೇಮ್ ಸಾಕಷ್ಟು ವಿಷಯಗಳನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅಲ್ಲದೆ, ಸುದೀಪ್ ಅವರ ಕಾಲಭೈರವನ ಪಾತ್ರದ ಬಗ್ಗೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಕೆಡಿ ಸಿನಿಮಾ ಪ್ರೇಮ್ ಕರಿಯರ್‌‌ಗೆ ಮತ್ತೊಂದು ಟ್ರೇಡ್‌‌ಮಾರ್ಕ್ ಚಿತ್ರವಾಗುವ ಲಕ್ಷಣ ತೋರಿದ್ದು, ಇದೇ ಏಪ್ರಿಲ್ 30ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ. ಇದಲ್ಲದೆ ಪ್ರೇಮ್ ಆಶಯದಂತೆ ದಚ್ಚು ಬೇಗ ಹೊರಬರಲಿ. ಪ್ರೇಮ್ ಮೂಲಕ ಕಿಚ್ಚ-ದಚ್ಚು ಒಂದಾಗಲಿ.. ಸಾಧ್ಯವಾದ್ರೆ ಮಲ್ಟಿಸ್ಟಾರ್ ಸಿನಿಮಾ ಹೊರಬರಲಿ ಅನ್ನೋದಷ್ಟೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version