ಸೌತ್ ಸಿನಿದುನಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟ ದುನಿಯಾ ವಿಜಯ್, ಲ್ಯಾಂಡ್ಲಾರ್ಡ್ ನಂತ್ರ ಯಾವ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗ್ಲೇ ಕಥೆ ಲಾಕ್ ಆಗಿದ್ದು, ಡೈರೆಕ್ಟರ್ ಕೂಡ ಫೈನಲ್ ಆಗಿದ್ದಾರೆ.
ದುನಿಯಾ ವಿಜಯ್ ಕುಮಾರ್ ಸಿನಿದುನಿಯಾ ಕಂಪ್ಲೀಟ್ ಆಗಿ ಬದಲಾಗಿ ಹೋಗಿದೆ. ಸಲಗ, ಭೀಮ ಸಿನಿಮಾಗಳ ಮೂಲಕ ಅವ್ರಲ್ಲೊಬ್ಬ ನಿರ್ದೇಶಕ ಕೂಡ ಹೊರಹೊಮ್ಮಿದ್ದಾನೆ. ಈಗ ಅವ್ರು ಸ್ಯಾಂಡಲ್ವುಡ್ ಭೀಮ. ಆದ್ರೆ ಬಹುಭಾಷಾ, ಬಹುಬೇಡಿಕೆಯ ಸ್ಟಾರ್ ಕೂಡ ಹೌದು. ನಂದಮೂರಿ ಬಾಲಕೃಷ್ಣ ಜೊತೆ ವೀರಸಿಂಹಾರೆಡ್ಡಿ ಸಿನಿಮಾ ಮಾಡಿದ ವಿಜಯ್, ಅದಾದ ಬಳಿಕ ಸದ್ಯ ತಮಿಳಲ್ಲಿ ಲೇಡಿ ಸೂಪರ್ ಸ್ಟಾರ್ ಜೊತೆ ಒಂದು, ತೆಲುಗಿನಲ್ಲಿ ಪೂರಿ ಜಗನ್ನಾಥ್- ವಿಜಯ್ ಸೇತುಪತಿ ಕಾಂಬೋನಲ್ಲಿ ಒಂದು ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾರೆ.
ದುನಿಯಾ ವಿಜಯ್ಗೆ ತನ್ನ ಗರಡಿ ಹುಡ್ಗನೇ ಆ್ಯಕ್ಷನ್ ಕಟ್
ಗ್ಯಾರಂಟಿ ನ್ಯೂಸ್ನಲ್ಲಿ ನೆಕ್ಸ್ಟ್ ವೆಂಚರ್ ಕಂಪ್ಲೀಟ್ ಕಹಾನಿ..!
ಒಂದ್ಕಡೆ ಲ್ಯಾಂಡ್ಲಾರ್ಡ್ ಸಿನಿಮಾನ ಶೂಟಿಂಗ್ ಮಾಡುತ್ತಲೇ, ಬಿಡುವಿನ ವೇಳೆ ತಮ್ಮ ಎರಡನೇ ಮಗಳು ಮೋನಿಷಾಳನ್ನ ಲಾಂಚ್ ಮಾಡೋಕೆ ಸಿಟಿ ಲೈಟ್ಸ್ಗೂ ಆ್ಯಕ್ಷನ್ ಕಟ್ ಹೇಳ್ತಿದ್ರು. ದೊಡ್ಮನೆ ಹುಡುಗ ವಿನಯ್ ರಾಜ್ಕುಮಾರ್ ಹಾಗೂ ಮೋನಿಷಾ ಸಿಟಿ ಲೈಟ್ಸ್ ಕೂಡ ಶೂಟಿಂಗ್ ಮುಗಿದಿದೆ. ಈಗ ದುನಿಯಾ ವಿಜಯ್ ಬಹುತೇಕ ಫ್ರೀ ಆಗಿದ್ದಾರೆ. ಹೊಸ ಪ್ರಾಜೆಕ್ಟ್ ಕಡೆ ಗಮನ ಹರಿಸೋಕೆ ಇದು ಅವ್ರಿಗೆ ಸಕಾಲ.

ಹಾಗಾದ್ರೆ ಯಾವುದಾಗುತ್ತೆ ವಿಜಯ್ ನೆಕ್ಸ್ಟ್ ವೆಂಚರ್ ಅನ್ನೋದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಅದಕ್ಕೆ ಉತ್ತರ ಇಂದಿನ ನಮ್ಮ ಗ್ಯಾರಂಟಿ ಪಿಚ್ಚರ್ ಎಪಿಸೋಡ್ನಲ್ಲಿ ಎಕ್ಸ್ಕ್ಲೂಸಿವ್ ಆಗಿ ಕೊಡ್ತಿದ್ದೀವಿ ನೋಡಿ. ಈಗಾಗ್ಲೇ ವಿಜಯ್ ಅವರು ಹೊಸ ಸಿನಿಮಾದ ಕಥೆಯನ್ನ ಲಾಕ್ ಮಾಡಿ ಆಗಿದೆ. ಡೈರೆಕ್ಟರ್ ಕೂಡ ಫಿಕ್ಸ್ ಆಗಿದ್ದಾರೆ. ತನ್ನದೇ ಗರಡಿಯಲ್ಲಿ ಪಳಗಿರೋ ಅಂತಹ ವೀರ ಅನ್ನೋ ಬಹುಮುಖ ಪ್ರತಿಭೆಯನ್ನ ಡೈರೆಕ್ಟರ್ ಮಾಡ್ತಿದ್ದಾರೆ ದುನಿಯಾ ವಿಜಯ್. ತಮ್ಮ ಸಿಂಡಿಕೇಟ್ ಹುಡ್ಗ ವೀರನೇ ವಿಜಯ್ ನೆಕ್ಸ್ಟ್ ವೆಂಚರ್ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ವಿಜಯ್ ಸಿಂಡಿಕೇಟ್ ಹುಡುಗ ‘ವೀರ’ಗೆ ಡೈರೆಕ್ಟರ್ ಪಟ್ಟ
ಮೇನಲ್ಲಿ ಮುಹೂರ್ತ.. ಭೀಮ, ಸಲಗ ಶೈಲಿ ಮಾಸ್ ಚಿತ್ರ
ಅಂದಹಾಗೆ ವೀರ ಡೈರೆಕ್ಷನ್ ಡಿಪಾರ್ಟ್ಮೆಂಟ್ ಸೇರಿದಂತೆ ನಟನೆ ಕೂಡ ಮಾಡಿಕೊಳ್ತಾ ದುನಿಯಾ ವಿಜಯ್ ಅವರ ಜೊತೆ ಬಹು ದಿನಗಳಿಂದ ಸಿನಿ ಕರಿಯರ್ ಕಟ್ಟಿಕೊಳ್ತಿದ್ದಾರೆ. ಸಖತ್ ಟ್ಯಾಲೆಂಟ್ ಆಗಿರೋ ವೀರಗೆ ಭೀಮ ಸಿನಿಮಾದಲ್ಲಿ ಅದ್ಭುತ ಕ್ಯಾರೆಕ್ಟರ್ ಕೊಟ್ಟು ಮಾಡಿಸಿದ್ರು ವಿಜಯ್. ಇನ್ನೇನು ಡ್ರಗ್ಸ್ಗೆ ಕಡಿವಾಣ ಬಿತ್ತು ಅನ್ನೋ ವೇಳೆ, ಈ ವೀರ ಮತ್ತೆ ಡ್ರಗ್ಸ್ನ ಮುನ್ನೆಲೆಗೆ ತರೋ ಮೂಲಕ ವಿಲನ್ ಆಗಿ ಕಾಡಿದ್ರು. ಮನೋಜ್ಞ ಅಭಿನಯ ಮಾಡುವ ವೀರ, ಅಷ್ಟೇ ಒಳ್ಳೆಯ ಬರಹಗಾರ ಹಾಗೂ ತಂತ್ರಜ್ಞ. ಹಾಗಾಗಿಯೇ ಆತನ ಟ್ಯಾಲೆಂಟ್ಗೆ ಗುರು ಸಮಾನ ವಿಜಯ್ ಒಂದೊಳ್ಳೆ ವೇದಿಕೆ ಮಾಡಿಕೊಡ್ತಿದ್ದಾರೆ. ಸ್ವತಃ ತಾವೇ ನಟಿಸೋದಾಗಿ ಹೇಳಿ, ನೀನೇ ಡೈರೆಕ್ಷನ್ ಮಾಡು ಅಂತ ವೀರನಿಗೆ ಬೆನ್ನು ತಟ್ಟುತ್ತಿದ್ದಾರೆ.
ಇತ್ತೀಚೆಗೆ ಊರು ಬಿಟ್ಟು ಕಾಡು ಸೇರಿರುವ ದುನಿಯಾ ವಿಜಯ್ ಅಂಡ್ ವೀರ ಟೀಂ, ಅಲ್ಲೇ ಡೈಲಾಗ್ಸ್, ಸ್ಕ್ರೀನ್ ಪ್ಲೇ ಸಿದ್ದಗೊಳಿಸುತ್ತಿದೆಯಂತೆ. ಭೀಮ, ಸಲಗ ಶೈಲಿಯ ಕಂಟೆಂಟ್ ಬೇಸ್ಡ್ ಕ್ರೈಂ ಥ್ರಿಲ್ಲರ್ ಕಥಾನಕವನ್ನು ಇಟ್ಟುಕೊಂಡು ಮಾಸ್ ವೆಂಚರ್ ಕಟ್ಟಲಿದ್ದಾರಂತೆ. ಮೂಲಗಳ ಪ್ರಕಾರ ಮೇನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜೂನ್ನಿಂದ ಅಧಿಕೃತ ಶೂಟಿಂಗ್ ಶುರು ಆರಂಭಿಸಲಿದೆ. ಈ ಬಗ್ಗೆ ದುನಿಯಾ ವಿಜಯ್ ಅವರೇ ಸದ್ಯದಲ್ಲಿ ಅಧಿಕೃತ ಮಾಹಿತಿಯನ್ನ ಹೊರಹಾಕುವ ಸೂಚನೆ ಕೂಡ ಇದೆ. ಒಟ್ಟಾರೆ ತಾನು ಬೆಳೆಯುವುದರ ಜೊತೆ ಜೊತೆಗೆ ತನ್ನೊಟ್ಟಿಗೆ ಇರೋರು ಕೂಡ ಬೆಳೆಯಬೇಕು ಅನ್ನೋ ವಿಜಯ್ ಮನಸ್ಥಿತಿ ನಿಜಕ್ಕೂ ಮೆಚ್ಚುವಂಥದ್ದು. ಅದೇ ಅವ್ರ ವಿಜಯದ ಸೀಕ್ರೆಟ್ ಕೂಡ ಹೌದು.





