ನೂರ ಹದಿಮೂರು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮಾಸ್ಟರ್ಪೀಸ್ ಹಾಗೂ ಮಾಸ್ಟರ್ಕ್ಲಾಸ್ ಮೂವಿಗಳ ಸಾಲಿಗೆ ಧುರಂಧರ್ ಕೂಡ ಸೇರಿಕೊಂಡಿದೆ. ಥಿಯೇಟರ್ಗಳಲ್ಲಿ ಭಾರತ್ ಮಾತಾ ಕೀ ಜೈ ವೇದ ಘೋಷ ಜೋರಾಳಿ ಮೊಳಗುತ್ತಿದೆ. ಇಷ್ಟಕ್ಕೂ ಈ ಸಿನಿಮಾದಲ್ಲಿ ಅಂಥದ್ದೇನಿದೆ..? ಇದ್ರ ಹಿಂದಿನ ಮಾಸ್ಟರ್ಮೈಂಡ್ ಯಾರು..? ಡೈರೆಕ್ಟರ್ ಆದಿತ್ಯ ಧಾರ್ ಹಿನ್ನೆಲೆ ಏನು..? ಕ್ರಿಕೆಟ್ ಕನಸು ಕಂಡು ಇಂದು ದೇಶವೇ ಕೊಂಡಾಡುವಂತಹ ಸಿನಿಮಾ ಮಾಡಿದ್ದು ಹೇಗೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
ಥಿಯೇಟರ್ಗಳಲ್ಲಿ ‘ಭಾರತ್ ಮಾತಾ ಕೀ ಜೈ’ ವೇದ ಘೋಷ
Jr NTR, ಅಲ್ಲು ಅರ್ಜುನ್, ದೇವರಕೊಂಡ ಮೆಚ್ಚಿದ ರಿವೆಂಜ್
ಧುರಂಧರ್ ದಿ ರಿವೆಂಜ್.. ಯುಗಾದಿ ಹಬ್ಬದ ವಿಶೇಷ ವಿಶ್ವದಾದ್ಯಂತ ಬಿಗ್ ಸ್ಕ್ರೀನ್ಗೆ ಎಂಟ್ರಿ ಕೊಟ್ಟ ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ. ರಿಲೀಸ್ ಬಳಿಕ ಅದ್ರ ನಿರೀಕ್ಷೆ ಹುಸಿಯಾಗಲಿಲ್ಲ. ಧುರಂಧರ್ಗಿಂತ ಅದ್ರ ಸೀಕ್ವೆಲ್ ಸಖತ್ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿದೆ. ನೋಡುಗರ ಎದೆ ಝಲ್ ಎನ್ನುವಂತಹ ಟ್ವಿಸ್ಟ್ ಅಂಡ್ ಟರ್ನ್ಸ್ ಮೂಲಕ ಮಸ್ತ್ ಮನರಂಜನೆ ನೀಡ್ತಿದೆ. ಜೊತೆಗೆ ದೇಶಪ್ರೇಮದ ಕಿಚ್ಚನ್ನು ದುಪ್ಪಟ್ಟಾಗಿಸಿದೆ.
ಇದು ಪಾಕಿಸ್ತಾನದ ಮೇಲೆ ಭಾರತದ ಸ್ಪೈ ಮಾಸ್ಟರ್ ಅಜಿತ್ ದೋವಲ್ ನಡೆಸೋ ಬಿಗ್ಗೆಸ್ಟ್ ಆಪರೇಷನ್ ಕುರಿತ ಸಿನಿಮಾ. ನೈಜ ಘಟನೆಗಳನ್ನ ಆಧರಿಸಿದ ಸಿನಿಮಾ ಆಗಿರೋದ್ರಿಂದ ಸಹಜವಾಗಿಯೇ ನೋಡುಗರಿಗೆ ಸಖತ್ ಕಿಕ್ ಕೊಡ್ತಿದೆ. ನಮ್ಮ ಒಬ್ಬೇ ಒಬ್ಬ ಸ್ಪೈ ಏಜೆಂಟ್, ಇಂಡಿಯಾ ಮೇಲೆ ಆದಂತಹ ದಾಳಿಗಳಿಗೆ ಕಾರಣೀಭೂತರಾದ ಎಲ್ಲರ ಪಾಲಿಗೆ ಯಮನಾಗುವ ಕಥೆ ಇದು. ಅಲ್ಲೇ ಅವರಲ್ಲೇ ಒಬ್ಬ ಆಗಿದ್ದುಕೊಂಡು, ದಾವೂದ್ ಇಬ್ರಾಹಿಂ, ಐಎಸ್ಐ ಮೇಜರ್, ಪೊಲಿಟಿಕಲ್ ಲೀಡರ್ಸ್, ಸ್ಪೆಷಲ್ ಟಾಸ್ಕ್ ಫೋರ್ಸ್, ಬಲೂಚಿಗಳಿಗೆ ಮಣ್ಣು ಮುಕ್ಕಿಸೋ ಕಾರ್ಯ ಮಾಡ್ತಾನೆ ನಾಯಕನಟ.
113 ವರ್ಷಗಳ ಭಾರತೀಯ ಚಿತ್ರರಂಗದ ‘ಮಾಸ್ಟರ್ಕ್ಲಾಸ್’..!
ದೇಶಪ್ರೇಮದ ಕಿಚ್ಚು.. ಭಾರತದ ಬಿಗ್ಗೆಸ್ಟ್ ಸ್ಪೈ ಎಂಟರ್ಟೈನರ್
ರಣ್ವೀರ್ ಸಿಂಗ್ ಲೀಡ್ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಆರ್ ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್.. ಹೀಗೆ ದೊಡ್ಡ ತಾರಾಗಣವಿದೆ. ಅಂದಹಾಗೆ ಧುರಂಧರ್ ದಿ ರಿವೆಂಜ್ ಮೂವಿ 113 ವರ್ಷಗಳ ಇತಿಹಾಸವಿರೋ ನಮ್ಮ ಭಾರತೀಯ ಚಿತ್ರರಂಗದ ಎವರ್ಗ್ರೀನ್ ಮಾಸ್ಟರ್ಪೀಸ್ ಹಾಗೂ ಮಾಸ್ಟರ್ಕ್ಲಾಸ್ ಮೂವಿ ಅಂದ್ರೆ ತಪ್ಪಾಗಲ್ಲ. ಚಿತ್ರಮಂದಿರಗಳಲ್ಲಿ ಭಾರತ್ ಮಾತಾ ಕೀ ಜೈ ಅನ್ನೋ ವೇದಘೋಷ ಮೊಳಗುವಂತೆ ಮಾಡಿದೆ ಧುರಂಧರ್ ಸೀಕ್ವೆಲ್.
ರಿಲೀಸ್ಗೂ ಮೊದಲೇ ಸ್ಪೆಷಲ್ ಪ್ರೀಮಿಯರ್ ಮೂಲಕ ಧುರಂಧರ್-2ನ ಕಣ್ತುಂಬಿಕೊಂಡಂತಹ ಜೂನಿಯರ್ ಎನ್ಟಿಆರ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಪ್ರೀತಿ ಝಿಂಟಾ, ಕಾರ್ತಿಕ್ ಆರ್ಯನ್, ರಾಮ್ ಗೋಪಾಲ್ ವರ್ಮಾ, ಅನನ್ಯಾ ಪಾಂಡೆ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಸ್.. ಸೋಶಿಯಲ್ ಮೀಡಿಯಾ ಮೂಲಕ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ರಣ್ವೀರ್ ಸಿಂಗ್ ಹಾಗೂ ಇಡೀ ತಂಡವನ್ನ ಇನ್ನಿಲ್ಲದೆ ಕೊಂಡಾಡಿದ್ದಾರೆ.
ಯಾರು ಈ ಡೈರೆಕ್ಟರ್ ಆದಿತ್ಯ ಧಾರ್..? ಹಿನ್ನೆಲೆ ಗೊತ್ತಾ..?
ಕ್ರಿಕೆಟರ್ ಆಗಿ ಇಂಡಿಯಾ ಪರ ಆಡುವ ಕನಸು ಕಂಡಿದ್ದವ್ರು
ಧುರಂಧರ್ ಸಿನಿಮಾಗಳ ಹಿಂದಿನ ಒನ್ ಅಂಡ್ ಓನ್ಲಿ ಮಾಸ್ಟರ್ಮೈಂಡ್ ಆದಿತ್ಯ ಧಾರ್. 43 ವರ್ಷದ ಆದಿತ್ಯ ಧಾರ್, ಕಾಶ್ಮೀರಿ ಪಂಡಿತ್ ಕುಟುಂಬದಲ್ಲಿ ನ್ಯೂ ಡೆಲ್ಲಿಯಲ್ಲಿ ಜನಿಸಿದವರು. ಅವರ ತಾಯಿ ಸುನಿತಾ ಧಾರ್ ಡೆಲ್ಲಿ ಯೂನಿವರ್ಸಿಟಿಯ ಡೀನ್ ಆಗಿದ್ರು. ಮ್ಯೂಸಿಕ್ ಥಿಯೇಟರ್ನಲ್ಲೇ ಎರಡ ದಶಕ ಕಳೆದ ಆದಿತ್ಯ ಧಾರ್, ತಮ್ಮ ಅಣ್ಣ ಲೋಕೇಶ್ ಧಾರ್ ಅವ್ರ UTV ಮೋಷನ್ ಪಿಕ್ಚರ್ಸ್ನಲ್ಲಿ ಕೂಡ ಕೆಲಸ ಮಾಡ್ತಾರೆ. ಪ್ರತಿಷ್ಟಿತ ಫಾಕ್ಸ್ ಸ್ಟಾರ್ ಸ್ಟುಡಿಯೋನಲ್ಲೂ ಕೆಲಸ ಮಾಡುವ ಆದಿತ್ಯ, ನಂತ್ರ ಸಹೋದರನ ಜೊತಗೂಡಿ B62 ಸ್ಟುಡಿಯೋಸ್ ಆರಂಭಿಸ್ತಾರೆ.
ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಚಿತ್ರ ಸಾಹಿತಿ.. ಹೀಗೆ ಚಿತ್ರರಂಗದ ವಿವಿಧ ಭಾಗಗಳಲ್ಲಿ ತೊಡಗಿಸಿಕೊಂಡಂತಹ ಆದಿತ್ಯ ಧಾರ್, 2019ರ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಮೂವಿಯಿಂದ ಸ್ವತಂತ್ರ ನಿರ್ದೇಶಕರಾಗ್ತಾರೆ. ಚೊಚ್ಚಲ ಚಿತ್ರದಲ್ಲೇ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡು, ಚಿತ್ರರಂಗದ ಜೊತೆಗೆ ದೇಶದ ಗಮನ ಸೆಳೆಯುತ್ತಾರೆ.
2021ರಲ್ಲಿ ನಟಿ ಗೌತಮ್ರನ್ನ ಮದುವೆ ಆಗುವ ಮೂಲಕ ಸೆಲೆಬ್ರಿಟಿ ಆಗಿಬಿಡ್ತಾರೆ ಆದಿತ್ಯ ಧಾರ್. ಅಂದಹಾಗೆ ಆದಿತ್ಯ ಕೆಲಸ ಮಾಡುವ ಸಿನಿಮಾಗಳಲ್ಲಿ ಯಾಮಿ ಗೌತಮ್ ಪಾತ್ರ ಇದ್ದೇ ಇರುತ್ತೆ. ಸದ್ಯ ಧುರಂಧರ್-2ನಲ್ಲಿ ಕೂಡ ಯಾಮಿ ಸಣ್ಣದೊಂದು ಪಾತ್ರದಲ್ಲಿ ಮಿಂಚಿದ್ದಾರೆ.
ಕಾಶ್ಮೀರಿ ಪಂಡಿತರ ಕುಡಿ.. ಡೆಲ್ಲಿ ಯೂನಿವರ್ಸಿಟಿ ಡೀನ್ ಮಗ
ಯಾಮಿ ಗೌತಮ್ ಪತಿ.. ಉರಿಗೆ ಫಸ್ಟ್ ನ್ಯಾಷನಲ್ ಅವಾರ್ಡ್
ಅಂದಹಾಗೆ ಆದಿತ್ಯ ಧಾರ್ ಚಿತ್ರರಂಗಕ್ಕೆ ಕಾಲಿಡೋಕೆ ಮುನ್ನ ಒಳ್ಳೆಯ ಕ್ರಿಕೆಟರ್ ಆಗುವ ಕಸಸು ಕಂಡಿದ್ದರು. ದೇಶಕ್ಕಾಗಿ ಇಂಡಿಯನ್ ಟೀಂನಲ್ಲಿ ಆಡುವ ಬಹುದೊಡ್ಡ ಆಶಯ ಹೊಂದಿದ್ದರು. ಆದ್ರೆ ಆತ ಕ್ರಿಕೆಟ್ನಲ್ಲಿ ಹಂತ ಹಂತವಾಗಿ ಬೆಳೆಯೋದು ಅಷ್ಟು ಸುಲಭವಾಗಿರಲಿಲ್ಲ. ಸೆಲೆಕ್ಷನ್ ಕಮಿಟಿಗಳಲ್ಲಿನ ರಾಜಕೀಯಕ್ಕೆ ಬಲಿಯಾದ ಆದಿತ್ಯ ಧಾರ್, ನಂತ್ರ ಮುಂಬೈ ಬಂದು ಸಿನಿಮಾರಂಗದತ್ತ ವಾಲುತ್ತಾರೆ. ಸದ್ಯ ಕ್ರಿಕೆಟ್ನಿಂದ ಎಷ್ಟು ಮಂದಿಯಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಅಂದುಕೊಂಡಿದ್ರೋ, ಅದಕ್ಕಿಂತ ಜಾಸ್ತಿ ಜನರಿಂದ ಜೈಕಾರ ಹಾಕಿಸಿಕೊಳ್ತಿದ್ದಾರೆ ಆದಿತ್ಯ ಧಾರ್.
ಸದ್ಯ ಭಾರತೀಯ ಚಿತ್ರರಂಗದ ಮೋಸ್ಟ್ ಸೆನ್ಸೇಷನಲ್ ಡೈರೆಕ್ಟರ್ಸ್ ಅಂದ್ರೆ ರಾಜಮೌಳಿ, ಸಂದೀಪ್ ರೆಡ್ಡಿ ವಂಗಾ, ರಾಜ್ ಕುಮಾರ್ ಹಿರಾನಿ, ಪ್ರಶಾಂತ್ ನೀಲ್, ಅಟ್ಲೀ, ಲೋಕೇಶ್ ಕನಕರಾಜ್ ಹೆಸರುಗಳನ್ನ ಹೇಳಲಾಗ್ತಿದೆ. ಅವರುಗಳ ಸಾಲಿಗೆ ಸದ್ಯ ಆದಿತ್ಯ ಧಾರ್ ಕೂಡ ಸೇರಿಕೊಂಡಿದ್ದಾರೆ. ಧುರಂಧರ್ ಜಸ್ಟ್ ಎರಡೇ ಎರಡು ಭಾಗಗಳು ಹೊರಬಂದಿವೆ. ಈ ಫ್ರಾಂಚೈಸ್ ಸಿನಿಮಾಗಳು ಮತ್ತಷ್ಟು ಮಗದಷ್ಟು ಹೊರಬರಲಿದ್ದು, ಇಂಡಿಯಾದ ಟಾಪ್ ಡೈರೆಕ್ಟರ್ ಆಗಿ ರಾರಾಜಿಸಲಿದ್ದಾರೆ ಆದಿತ್ಯ ಧಾರ್.
