ಇತ್ತೀಚೆಗೆ ಡಿಬಾಸ್ ದರ್ಶನ್ಗಾಗಿ ವಾಮನ ಸ್ಪೆಷಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ಧನ್ವೀರ್ ಹಅಗೂ ಚಿಕ್ಕಣ್ಣ ಜೊತೆ ದಾಸ ದರ್ಶನ್ ಬಂದು ಸಿನಿಮಾ ಕೂಡ ನೋಡ್ಕೊಂಡ್ ಹೋಗಿದ್ದಾರೆ. ಆದ್ರೆ ಅದ್ರ ಹಿಂದೆ ಏನೆಲ್ಲಾ ನಡೆದಿದೆ..? ಅದಾದ ಬಳಿಕ ದಚ್ಚುಗೆ ಆಗ್ತಿರೋ ಕಾನೂನು ತೊಡಕು ಎಂಥದ್ದು ಅನ್ನೋದ್ರ ಕಂಡಿಷನ್ಸ್ ಖಬರ್ ನಿಮಗಾಗಿ ಕಾಯ್ತಿದೆ..
ಯೆಸ್.. ಸ್ಯಾಂಡಲ್ವುಡ್ ಶೋಕ್ದಾರ್ ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾ ನಿನ್ನೆಯಷ್ಟೇ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಿದೆ. ಅದಕ್ಕೂ ಮುನ್ನ ಸ್ಪೆಷಲ್ ಶೋನಲ್ಲಿ ಚಿತ್ರ ವೀಕ್ಷಿಸಿದ ಡಿಬಾಸ್ ದರ್ಶನ್, ಚಿತ್ರಕ್ಕೆ ಫಸ್ಟ್ ರಿವ್ಯೂ ನೀಡಿದ್ರು. ಧನ್ವೀರ್ ನಟನೆ, ಡೈರೆಕ್ಟರ್, ಚಿತ್ರದ ಕಥೆ, ಸ್ಟಂಟ್ಸ್, ಲವ್ ಸೀನ್ಸ್ನ ಕೊಂಡಾಡಿದ್ರು. ಆದ್ರೆ ದರ್ಶನ್ಗೆ ವಾಮನ ಪ್ರದರ್ಶನಕ್ಕಾಗಿ ನಡೆದ ತಯಾರಿ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ.
ಹೇಳಿ ಕೇಳಿ ದರ್ಶನ್ ಈಗಾಗ್ಲೇ ಕೊಲೆ ಕೇಸ್ವೊಂದರ ಪ್ರಧಾನ ಆರೋಪಿ. ಬೇಲ್ ಮೇಲೆ ಹೊರಗೆ ಬಂದಿದ್ದು, ಒಂದಷ್ಟು ಕಂಡಿಷನ್ಸ್ ಮೇಲೆ ಜೀವನ ನಡೆಸ್ತಿದ್ದಾರೆ. ಹೀಗಿರುವಾಗ ಅವರು ಅಂದುಕೊಂಡಿದ್ದೆಲ್ಲಾ ಮಾಡೋಕೆ ಕಾನೂನು, ಖಾಕಿ ಪಡೆ ಒಪ್ಪಲ್ಲ. ಹೌದು.. ವಾಮನ ಸಿನಿಮಾ ನೋಡೋಕೆ ಜಿಟಿ ಮಾಲ್ಗೆ ಬರೋಕೆ ಮುನ್ನ ಪೊಲೀಸ್ ಅನುಮತಿ ಪಡೆಯಬೇಕಿತ್ತು. ಕಾನೂನಿನಾತ್ಮಕವಾಗಿ ಪರ್ಮಿಷನ್ ಪಡೆದೇ ಮೊನ್ನೆ ರಾತ್ರಿ ವಾಮನ ವೀಕ್ಷಿಸಿದ್ರು ದಾಸ ದರ್ಶನ್.
ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಜಿಟಿ ಮಾಲ್ಗೆ ಸಿನಿಮಾ ನೋಡೋಕೆ ಬಂದ ದರ್ಶನ್ಗೇನೋ ಟಿಕೆಟ್ ಫ್ರೀನೇ ಇತ್ತು. ಆದ್ರೆ ಆ ಸಿನಿಮಾ ನೋಡೋಕೆ ಚಾಲೆಂಜಿಂಗ್ ಸ್ಟಾರ್ ಬರೋಬ್ಬರಿ 3 ಲಕ್ಷ ನೀಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ ಸೆಕ್ಯೂರಿಟಿ ಪರ್ಪಸ್. ದರ್ಶನ್ ಬರೋದು ತಿಳಿದು, ಅಭಿಮಾನಿಗಳು ಜಮಾವಣೆ ಆಗ್ತಾರೆ ಅನ್ನೋ ನಿಟ್ಟಿನಲ್ಲಿ ಚಿತ್ರಮಂದಿರದ ಬಂದೋಬಸ್ತ್ಗೆ ಪೊಲೀಸರು ಸಂಬಂಧ ಪಟ್ವವರಿಂದ 3 ಲಕ್ಷ ಕಟ್ಟಿಸಿಕೊಂಡಿದ್ದಾರೆಂಬ ಸುದ್ದಿ ಹರಿದಾಡ್ತಿದೆ.
ಇಷ್ಟಕ್ಕೂ ಮೂರು ಲಕ್ಷದಷ್ಟು ದೊಡ್ಡ ಮೊತ್ತದ ಹಣ ಕಟ್ಟಿಸಿಕೊಳ್ಳಲಿಕ್ಕೆ ಪ್ರಮುಖ ಕಾರಣ ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದ ಪುಷ್ಪ-2 ಚಿತ್ರದ ಫ್ಯಾನ್ಸ್ ಶೋ. ಅದರಲ್ಲಿ ಮೃತಪಟ್ಟ ಮಹಿಳೆ, ಆಸ್ಪತ್ರೆ ಪಾಲಾದ ಆಕೆಯ ಮಗ. ಅದಕ್ಕಾಗಿ ಜೈಲಿಗೆ ಹೋಗಬೇಕಾದ ಪ್ರಮೇಯ ಎದುರಿಸಿದರು ಅಲ್ಲು ಅರ್ಜುನ್. ಕೊನೆಗೆ ಕೋಟ್ಯಂತರ ರೂಪಾಯಿ ಕುಟುಂಬಕ್ಕೆ ನೀಡಿದ್ರೂ ಸಹ, ಕಾನೂನಿನ ಬಲೆಗೆ ಸಿಲುಕಿ ಒದ್ದಾಡಿದ್ರು ಪುಷ್ಪ ಸ್ಟಾರ್. ಆ ತರಹದ ಘಟನೆ ಮರುಕಳಿಸಬಾರದು ಅನ್ನೋ ನಿಟ್ಟಿನಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದ್ದರೂ ಅಚ್ಚರಿಯಿಲ್ಲ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆಯಲಾಗಿದೆ ಎನ್ನಲಾಗಿದ್ದು, ಅಲ್ಲಿಗೆ ತೆರಳಕ್ಕೂ ಮುನ್ನ ಸ್ಟೋನಿ ಬ್ರೂಕ್ಸ್ ಪಬ್ನಲ್ಲಿ ಆರೋಪಿ ದರ್ಶನ್, ನಟ ಚಿಕ್ಕಣ್ಣನನ್ನ ಭೇಟಿ ಆಗಿದ್ರು ಎನ್ನಲಾಗಿತ್ತು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಧಾನ ಸಾಕ್ಷಿ ಚಿಕ್ಕಣ್ಣ. ನಟ ದರ್ಶನ್ ಚಿಕ್ಕಣ್ಣ ಜೊತೆ ಸಿನಿಮಾ ವೀಕ್ಷಿಸಿರೋದು ಚರ್ಚೆಗೆ ಗ್ರಾಸವಾಗಿದೆ. ಸಾಕ್ಷಿ ಜೊತೆ ಆರೋಪಿ ಇರೋದು ಎಷ್ಟರ ಮಟ್ಟಿಗೆ ಸಮಂಜಸ ಎನ್ನಲಾಗ್ತಿದೆ. ಇದು ಕಾನೂನು ಉಲ್ಲಂಘನೆ ಆಗಲಿದ್ದು, ಮತ್ತೊಮ್ಮೆ ಲಾ & ಆರ್ಡರ್ ಸಂಕಷ್ಟ ಎದುರಿಸ್ತಾರಾ ದರ್ಶನ್ ಅನ್ನೋ ಪ್ರಶ್ನೆ ಮೂಡಿದೆ.
ಇನ್ನು ದರ್ಶನ್ರನ್ನ ಈ ಸಂಕಷ್ಟದಿಂದ ಪಾರು ಮಾಡಲು ಪತ್ನಿ ವಿಜಯಲಕ್ಷ್ಮೀ ನಗರದ ಅಣ್ಣಮ್ಮ ದೇವಿಯ ಆಲಯಕ್ಕೆ ಭೇಟಿ ನೀಡಿ, ಮಡಲಕ್ಕಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಹರಕೆ ಹೊತ್ತಿದ್ದು, ಅದನ್ನ ಕೂಡ ತೀರಿಸಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್