ಡಿ ಕಂಪನಿ.. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘಗಳ ಪಾಲಿಗೆ ಹೆಡ್ ಆಫೀಸ್. ಅದೇ ಅಫಿಶಿಯಲಿ ಡಿಬಾಸ್ ಅಪ್ಡೇಟ್ ಕೊಡೋ ಫ್ಯಾನ್ಸ್ ಪೇಜ್. ಆದ್ರೀಗ ಅದನ್ನು ಡಿ ಕಂಪನಿ ಅಲ್ಲ, ಡುಬಾಕ್ ಕಂಪನಿ ಅಂದಿದ್ದಾರೆ ಪ್ರಥಮ್. ಅಷ್ಟೇ ಅಲ್ಲ, ಎಸ್ಪಿ ಕಚೇರಿಗೆ ತೆರಳಿ ದಚ್ಚು ಫ್ಯಾನ್ಸ್ ಮೇಲೆ ದೂರು ದಾಖಲಿಸಿ, ಕಾನೂನು ಹೋರಾಟಕ್ಕೆ ಸಜ್ಜಾಗ್ತಿದ್ದಾರೆ.
- D ಕಂಪನಿ ಡುಬಾಕ್ ಕಂಪನಿ.. D ಫ್ಯಾನ್ಸ್ಗೆ ಪ್ರಥಮ್ ಪಾಠ..!
- ಚಿಪ್ಸು ಪಪ್ಸು ಅಂದೋರಿಗೆ ಪಬ್ಲಿಕ್ನಲ್ಲೇ ಪ್ರಥಮ್ ಫುಲ್ ಕ್ಲಾಸ್
- SP ಕಚೇರಿಗೆ ದೂರು.. ಬಂದ್ ಆಗುತ್ವಾ ಫ್ಯಾನ್ಸ್ ಪೇಜ್ಗಳು?
- ಪ್ರಥಮ್ಗೆ ರಮ್ಯಾ, ಜಗದೀಶ್ ಬಲ.. ಚಿತ್ರರಂಗ ಕೂಡ ಸಾಥ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳು ಜೈಲುವಾಸ ಅನುಭವಿಸಿ, ಸದ್ಯ ಬೇಲ್ ಮೇಲೆ ಆರು ತಿಂಗಳಿಂದ ಆರಾಮಾಗಿರೋ ನಟ ದರ್ಶನ್ಗೆ ಮತ್ತೆ ತಲೆನೋವು ಶುರುವಾಗ್ತಿದೆ. ಈ ಬಾರಿ ಟೆನ್ಷನ್ ಕೊಡೋಕೆ ಸಜ್ಜಾಗಿರೋದು ಬೇರಾರೂ ಅಲ್ಲ ಅವ್ರ ಡೈಹಾರ್ಡ್ ಫ್ಯಾನ್ಸ್ ಅಂತ ಹೇಳಿಕೊಳ್ತಿರೋ ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಗಳು. ಯೆಸ್.. ಸುಪ್ರೀಂ ಕೋರ್ಟ್ನಲ್ಲಿ ದಚ್ಚು ಬೇಲ್ ಕ್ಯಾನ್ಸಲ್ ಆದ್ರೆ ಅದಕ್ಕೆ ಅಭಿಮಾನಿ ಸಂಘಗಳು ಹಾಗೂ ಕೆಲ ಪುಂಡ ಅಭಿಮಾನಿಗಳು ನೇರ ಹೊಣೆಯಾಗಬೇಕಾಗುತ್ತೆ.
ಅಭಿಮಾನಿ ಸಂಘಗಳು ಆರೋಗ್ಯಕರ ಬೆಳವಣಿಗೆಗೆ ಇರಬೇಕೇ ಹೊರತು ಸಿಕ್ಕ ಸಿಕ್ಕವರನ್ನೆಲ್ಲಾ ಟ್ರೋಲ್ ಮಾಡೋಕೆ, ಪೋಸ್ಟ್ಗಳಿಗೆ ಕೆಟ್ಟ ಪದಗಳಿಂದ ಕಮೆಂಟ್ಗಳು ಹಾಕೋಕೆ ಅಲ್ಲ. ಅಥ್ವಾ ರೌಡಿಗಳೊಂದಿಗೆ ಸೇರಿ ಜೀವ ಬೆದರಿಕೆ ಹಾಕೋಕೆ ಅಲ್ಲ. ಹೌದು.. ಇತ್ತೀಚೆಗೆ ಬಿಗ್ಬಾಸ್ ವಿನ್ನರ್ ಕಮ್ ನಟ, ನಿರ್ದೇಶಕ ಪ್ರಥಮ್ಗೆ ದರ್ಶನ್ ಅಭಿಮಾನಿ ರಕ್ಷಕ್ ಬುಲೆಟ್ ಸುಮಾರು 20 ಮಂದಿ ರೌಡಿಗಳೊಂದಿಗೆ ದೊಡ್ಡಬಳ್ಳಾಪುರದ ಬಳಿ ಡ್ಯಾಗರ್ನಿಂದ ಬೆದರಿಸಿದ್ದರಂತೆ. ಈ ಬಗ್ಗೆ ಸ್ವತಃ ಪ್ರಥಮ್ ಲಾಯರ್ ಜಗದೀಶ್ ಬಳಿ ದೂರವಾಣಿ ಮೂಲಕ ಹೇಳಿಕೊಂಡಿದ್ರು.
ಜುಲೈ 22ನೇ ತಾರೀಖು ಆಗಿರೋ ಪ್ರಕರಣಕ್ಕೆ ಇಲ್ಲಿಯವರೆಗೂ ಯಾಕೆ ದೂರು ದಾಖಲಿಸಿಲ್ಲ. ನೀವು ಸಭ್ಯರಲ್ಲವೇ..? ರೌಡಿಗಳ ಜೊತೆ ಚಿಪ್ಸು ಪಪ್ಸು ತಿಂದು, ಕೊನೆಗೆ ಜಗಳ ಮಾಡಿಕೊಂಡು ಬಂದ್ರೆ ದರ್ಶನ್ ಅಭಿಮಾನಿ ಸಂಘಗಳು ಏನು ಮಾಡೋಕೆ ಸಾಧ್ಯ..? ಇಷ್ಟಕ್ಕೂ ಅವರು ದರ್ಶನ್ ಅಭಿಮಾನಿಗಳು ಅನ್ನೋದಕ್ಕೆ ಪ್ರೂಫ್ ಏನಿದೆ..? ನಮ್ಮ ಬಳಿ ಫ್ಯಾನ್ಸ್ ಪೇಜ್ಗಳ ಲಿಸ್ಟ್ ಇದೆ. ಅವಱರೂ ಪದಾಧಿಕಾರಿಗಳಲ್ಲ. ಪ್ರಥಮ್ ಮೇಲಿನ ಹಲ್ಲೆ ಪ್ರಕರಣದ ಸತ್ಯಾಂಶ ಈಗ ಹೊರಬಂದಿದೆ ಅಂತೆಲ್ಲಾ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನ ಹಾಕ್ತಿದ್ದಾರೆ.
ಅಂದಹಾಗೆ ದರ್ಶನ್ ಲೇಟೆಸ್ಟ್ ಅಪ್ಡೇಟ್ ಕೊಡೋ ಅಂತಹ ಡಿ ಕಂಪನಿ ಅನ್ನೋ ದರ್ಶನ್ ಅಭಿಮಾನಿ ಸಂಘಗಳ ಹೆಡ್ ಆಫೀಸ್ ಆಗಿರೋ ಪೇಜ್ನಿಂದ ಇಂಥದ್ದೊಂದು ಪೋಸ್ಟ್ ವೈರಲ್ ಆಗ್ತಿದೆ. ಅದನ್ನ ಉಳಿದ ಡಿಬಾಸ್ ಫ್ಯಾನ್ಸ್ ಹಾಗೂ ಸಂಘಗಳು ಕೂಡ ಶೇರ್ ಮಾಡ್ತಾ, ಪ್ರಥಮ್ನ ಕಾಲೆಳೆಯುವ ಕಾರ್ಯ ಮಾಡಿದ್ದಾರೆ. ಇದಕ್ಕೆ ಪ್ರಥಮ್ ಭರ್ಜರಿ ಕೌಂಟರ್ ನೀಡಿದ್ದು, ವಿಡಿಯೋ ಮೂಲಕ ಸಾರ್ವಜನಿಕವಾಗಿ ಡಿ ಕಂಪನಿಯನ್ನ ಡುಬಾಕ್ ಹಾಗೂ ದಗಲ್ಬಾಜಿ ಕಂಪನಿ ಅಂತೆಲ್ಲಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಯೆಸ್.. NIA, ಇಂಟರ್ಪೋಲ್ ಮಾಡುವ ಕೆಲಸಗಳನ್ನೆಲ್ಲಾ ಇವ್ರೇ ಮಾಡ್ತಿದ್ದಾರೆ ದಡ್ಡ ಮುಂಡೇವು ಅಂತ ಹೇಳ್ತಾ, ಪೆಹಲ್ಗಾಮ್ ಅಟ್ಯಾಕ್ ಕೇಸ್ ಕೂಡ ಇವರಿಗೇ ಕೊಡಿ ಬೇಗ ಇತ್ಯರ್ಥ ಮಾಡ್ತಾರೆ ಅಂತ ಕೌಂಟರ್ ನೀಡಿದ್ದಾರೆ ಪ್ರಥಮ್. ಅಷ್ಟೇ ಅಲ್ಲ, ಚಿಪ್ಸು ಪಪ್ಸು ಕಥೆ ಎಸ್ಪಿ ಆಫೀಸ್ನಲ್ಲಿ ಗೊತ್ತಾಗುತ್ತೆ. ದೇವರ ಹೆಸರಲ್ಲಿ ಊಟಕ್ಕೆ ಕರೆಸಿ, ದೇವರ ಬಳಿ ಕಳಿಸೋ ಪ್ಲ್ಯಾನ್ ಮಾಡಿದ್ರು. ಅದಿಕ್ಕೆ ಹೇಳೋದು ಶಿಕ್ಷಣ, ಎಜುಕೇಷನ್ ಮುಖ್ಯ ಅಂತೆಲ್ಲಾ ಲೆಫ್ಟು ರೈಟು ಕ್ಲಾಸ್ ತೆಗೆದುಕೊಂಡು, ಮಾನ ಮೂರು ಕಾಸಿಗೆ ಹರಾಜಾಕಿದ್ದಾರೆ.
ಸದ್ಯ ನಟ ಪ್ರಥಮ್ಗೆ ಸ್ಯಾಂಡಲ್ವುಡ್ ಕ್ವೀನ್ ಸಾಥ್ ನೀಡಿದ್ದು, ಈಗಾಗ್ಲೇ ರಮ್ಯಾ ಕೂಡ ಕಮಿಷನರ್ಗೆ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ್ದಾರೆ. ಲಾಯರ್ ಜಗದೀಶ್ ಸಹ ಪ್ರಥಮ್ ನೆರವಿಗೆ ನಿಂತಿದ್ದಾರೆ. ಭಯಮುಕ್ತ ಚಿತ್ರರಂಗಕ್ಕಾಗಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸ್ತಿರೋ ಪ್ರಥಮ್ಗೆ ಅವರೇ ಹೇಳಿದಂತೆ ಚಿತ್ರರಂಗದಿಂದ ಒಬ್ಬೊಬ್ಬರೇ ಬಾಯಿ ತೆಗೆದು ಪ್ರತಿಕ್ರಿಯಿಸುತ್ತಿದ್ದಾರೆ.
ನಟ ಆದಿನಗಳು ಚೇತನ್ ಹಾಗೂ ವಿನಯ್ ರಾಜ್ಕುಮಾರ್ ಕೂಡ ರಮ್ಯಾ ಪರ ನಿಂತಿದ್ದು, ದರ್ಶನ್ ಪುಂಡ ಅಭಿಮಾನಿಗಳ ವಿರುದ್ಧದ ಸಮರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು ಪ್ರಥಮ್ ಎಸ್ಪಿ ಕಚೇರಿಗೆ ತೆರಳಿ ಕಂಪ್ಲೆಂಟ್ ನೀಡಲಿದ್ದು, ಅದಾದ ಬಳಿಕ ರಕ್ಷಕ್ ಬುಲೆಟ್ ಸೇರಿದಂತೆ ದೊಡ್ಡಬಳ್ಳಾಪುರದ ಬಳಿ ಅಟ್ಯಾಕ್ ಮಾಡಿದ್ದ ರೌಡಿ ಗ್ಯಾಂಗ್, ಸದ್ಯ ಡಿ ಕಂಪನಿ ಪೇಜ್ನಿಂದ ಮಾಡ್ತಿರೋ ದಬ್ಬಾಳಿಕೆ ವಿಷಯಗಳ ಕುರಿತು ಸಹ ವಿಚಾರಣೆ ನಡೆಯಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
