ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ (Darshan) ಅವರು ಮೈಸೂರಿನ ತಮ್ಮ ನಿವಾಸ ಹಾಗೂ ಫಾರಂ ಹೌಸ್ನಲ್ಲಿ ಕುಟುಂಬಸ್ಥರೊಂದಿಗೆ ಚಾಮುಂಡೇಶ್ವರಿ ತಾಯಿಯ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದ್ದಾರೆ.
ಎರಡನೇ ಆಷಾಢ ಶುಕ್ರವಾರದ (ಜುಲೈ 4) ಸಂದರ್ಭದಲ್ಲಿ ದರ್ಶನ್ ಅವರು ತಮ್ಮ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮೀ, ಮತ್ತು ಸಹೋದರರ ಜೊತೆಗೆ ಮೈಸೂರಿನ ಸಿದ್ಧಾರ್ಥ ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಪೂಜೆಯನ್ನು ನಡೆಸಿದರು. ಇದೇ ವೇಳೆ, ಚಾಮುಂಡಿ ಬೆಟ್ಟಕ್ಕೆ ಕುಟುಂಬದವರೊಂದಿಗೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ದರ್ಶನ ಮತ್ತು ಪೂಜೆಯನ್ನು ಸಹ ನೆರವೇರಿಸಿದರು.
ದರ್ಶನ್ ಅವರು ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಹೊಂದಿದ್ದಾರೆ. ಈ ಹಿಂದೆ ಸಾಮಾನ್ಯವಾಗಿ ಸ್ನೇಹಿತರೊಂದಿಗೆ ಫಾರಂ ಹೌಸ್ನಲ್ಲಿ ಈ ಪೂಜೆಯನ್ನು ಆಚರಿಸುತ್ತಿದ್ದ ಅವರು, ಈ ಬಾರಿ ಕುಟುಂಬದವರೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಿದ್ದಾರೆ.
ಪ್ರಸ್ತುತ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ದರ್ಶನ್ ಅವರಿಗೆ, 57ನೇ ಸಿಸಿಎಚ್ ಕೋರ್ಟ್ ಇತ್ತೀಚೆಗೆ ತಮ್ಮ ಚಿತ್ರ “ಡೆವಿಲ್” ಶೂಟಿಂಗ್ಗಾಗಿ ಜೂನ್ 1ರಿಂದ 25, 2025ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿತ್ತು.