ವೈಫ್, ಮಗ & ಲೈಫ್..ನೋವ ನುಂಗಿ ಕುಣಿದ ನಟ ವಿಜಯ್

ಭೀಮನ ಶಕ್ತಿ ಕನಕನ ಯುಕ್ತಿ.. ಎಷ್ಟೇ ಕಷ್ಟವಾದ್ರೂ ನಿಭಾಯಿಸ್ತಾರೆ

ಚಕಮಕಿ (11)

ವೈಫ್‌ಗೆ ಡಿವೋರ್ಸ್.. ಮಗನ ಮೇಲೆ ಎಫ್‌ಐಆರ್.. ಅರೇ ದುನಿಯಾ ವಿಜಯ್ ಲೈಫ್‌ಗೆ ಯಾಕಪ್ಪಾ ಹೀಗಾಯ್ತು ಅಂತ ಅಂದುಕೊಳ್ಳುವಂತಾಗಿದೆ. ಆದ್ರೆ ವಿಷಕಂಠನ ರೀತಿ ಎಲ್ಲಾ ನೋವನ್ನ ತನ್ನಲ್ಲೇ ಹುದುಗಿಟ್ಟಿಕೊಂಡು, ಮೇಲ್ನೋಟಕ್ಕೆ ಸಿಕ್ಕಾಪಟ್ಟೆ ಸಂತೋಷವಾಗಿದ್ದಾರೆ ಸ್ಯಾಂಡಲ್‌ವುಡ್ ಭೀಮ ವಿಜಯ್ ಕುಮಾರ್. ಅಷ್ಟೇ ಅಲ್ಲ.. ಅಲಕ್ ನಿರಂಜನ್ ಅಂತ ಸ್ಟೆಪ್ ಹಾಕೋ ಮೂಲಕ ಅಚ್ಚರಿ ಕೂಡ ಮೂಡಿಸಿದ್ದಾರೆ.

ಯೆಸ್.. ಇದು ನಟ ದುನಿಯಾ ವಿಜಯ್ ನಿರ್ದೇಶನದ ಮತ್ತೊಂದು ಸಿನಿಮಾ ಸಿಟಿಲೈಟ್ಸ್ ಚಿತ್ರದ ಹೊಚ್ಚ ಹೊಸ ಸಾಂಗ್ ಅಲಕ್ ನಿರಂಜನ್. ಕೇಳೋಕೆ ಸಖತ್ ಸೈಕ್ ಆಗಿರೋ ಈ  ಎನರ್ಜಿಟಿಕ್ ಗೀತೆಗೆ ಆಧ್ಯಾತ್ಮ, ಜಾನಪದ ಹಾಗೂ ಆಧುನಿಕ ಱಪ್ ಸ್ಟೈಲ್‌ ಮಿಕ್ಸ್ ಆಗಿ ರೂಪುಗೊಂಡಿದೆ. ವಿನಯ್ ರಾಜ್‌‌ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರ ಬ್ಯಾಕ್ ಟು ಬ್ಯಾಕ್ ಸಾಂಗ್ಸ್‌ನಿಂದ ಸಖತ್ ಸೌಂಡ್ ಮಾಡ್ತಿದೆ.

ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿರೋ ಈ ಅಲಕ್ ನಿರಂಜನ್ ಹಾಡಿನಲ್ಲಿ ಮಳವಳ್ಳಿ ಎಂ. ಮಹದೇವಸ್ವಾಮಿ, ವೀರ ,ವಿಜಯಕುಮಾರ್ ಅವರ ಧ್ವನಿಯೊಂದಿಗೆ ಪಾಷಾ ಭಾಯ್ ಅವರ ಱಪ್ ಹಾಗೂ ಕೀರ್ತನ್ ಹೊಳ್ಳ ಅವರ ಶಾಸ್ತ್ರೀಯ ಗಾಯನವನ್ನ ಬಳಸಿಕೊಳ್ಳಲಾಗಿದೆ. ಸಾಂಪ್ರದಾಯಿಕ ಜಾನಪದ ಗೀತೆಯಿಂದ ಸಾಹಿತ್ಯವನ್ನು ಅಳವಡಿಸಿಕೊಳ್ಳಲಾಗಿದ್ದು, ಱಪ್ ಭಾಗದ ಸಾಹಿತ್ಯವನ್ನ ಪಾಷಾ ಭಾಯ್ ಬರೆದಿರೋದು ವಿಶೇಷ.

ಜಾನಪದ ಸೊಗಡಿಗೆ ಸಮಕಾಲೀನ ಱಪ್ ಎಲಿಮೆಂಟ್ಸ್ ಸೇರಿಸಿರುವುದು ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಈ ಸಿಟಿಲೈಟ್ಸ್ ಸಿನಿಮಾ ಹಳ್ಳಿಯಿಂದ ಬೆಂಗಳೂರಿಗೆ ಬರುವ ಇಬ್ಬರು ಯುವಜನರು ನಗರ ಜೀವನದಲ್ಲಿ ಎದುರಿಸುವ ಕಷ್ಟಗಳು, ಬದುಕಿನ ಹೋರಾಟ ಮತ್ತು ತಮ್ಮ ನೆಲೆ ಕಂಡುಕೊಳ್ಳುವ ಪ್ರಯತ್ನದ ಕಥೆಯನ್ನು ಹೇಳುತ್ತದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನ ದುನಿಯಾ ವಿಜಯ್ ನಿರ್ವಹಿಸಿದ್ದು, ಅವರ ಪುತ್ರಿ ಮೋನಿಷಾ ವಿಜಯ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರಕ್ಕೆ ಶಿವಸೇನಾ ಹಾಗೂ ಹರ್ಷ ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಮತ್ತು ಮಾಸ್ತಿ ಸಂಭಾಷಣೆ ಇದೆ. ದುನಿಯಾ ಟಾಕೀಸ್ ಹಾಗೂ ಯಂತ್ರೋಧಾರಕ ಬ್ಯಾನರ್ ನಡಿ ದುನಿಯಾ ವಿಜಯ್ ಹಾಗೂ ವಿಕ್ರಂ ಆರ್ಯ ನಿರ್ಮಾಣ ಮಾಡಿದ್ದಾರೆ.  ಅಂದಹಾಗೆ ಚಿತ್ರ ಇದೇ ಸೆಪ್ಟೆಂಬರ್ 18ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ಅಂದಹಾಗೆ ಸದ್ಯ ದುನಿಯಾ ವಿಜಯ್ ಅವ್ರ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ವೈಯಕ್ತಿಕ ಜೀವನದಲ್ಲಿ ಸಿಕ್ಕಾಪಟ್ಟೆ ನೊಂದು, ಬೆಂದಿದ್ದಾರೆ. ಒಂದ್ಕಡೆ ಪತ್ನಿಗೆ ಡಿವೋರ್ಸ್. ಮತ್ತೊಂದ್ಕಡೆ ಮಗ ಸಾಮ್ರಾಟ್ ಮೇಲೆ ಎಫ್‌ಐಆರ್. ಆದ್ರೂ ಕೂಡ ಮಗಳಿಗಾಗಿ, ಅವ್ರ ಭವಿಷ್ಯಕ್ಕಾಗಿ ಎಲ್ಲಾ ನೋವನ್ನ ನುಂಗಿಕೊಂಡೇ ಜೀವಿಸ್ತಿದ್ದಾರೆ. ಆ ನೋವಿಂದ ಹೊರಬರೋಕೆ ಸಣ್ಣ ಮಗು ತರಹ ಅಲಕ್ ನಿರಂಜನ್ ಸಾಂಗ್‌ಗೆ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಸ್ಯಾಂಡಲ್‌ವುಡ್ ಭೀಮ ಅನ್ನೋ ಬಿರುದಾಂಕಿತ ವಿಜಯ್, ಆ ಭೀಮನಷ್ಟೇ ಮಾನಸಿಕವಾಗಿ ಶಕ್ತಿವಂತ ಹಾಗೂ ಕನಕನಷ್ಟೇ ಯುಕ್ತಿವಂತ ಅನ್ನೋದನ್ನ ಸಾರುತ್ತಿದ್ದಾರೆ. ಕೋರ್ಟ್ ಆರ್ಡರ್‌ನ ಕೂಡ ಲೆಕ್ಕಿಸದೆ, ಮತ್ತೊಮ್ಮೆ ತಮ್ಮ ಮೊನಚಾದ ಪದಪುಂಜಗಳಿಂದ ವಿಜಯ್‌‌‌ಗೆ ಛೇಡಿಸಿ ಪೋಸ್ಟ್ ಹಾಕಿದ್ರು ಮಾಜಿ ಪತ್ನಿ ನಾಗರತ್ನ. ಅದು ಕಂಟೆಮ್ಟ್ ಆಫ್ ಕೋರ್ಟ್ ಆದ್ರೂ ಸಹ ಆಕೆಯ ಮೇಲೆ ಮತ್ತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಬಹಳ ಮೆಚ್ಯೂರ್ಡ್ ಆಗಿ ನಡೆದುಕೊಳ್ತಿದ್ದಾರೆ ವಿಜಯ್. ಇದು ಅವ್ರ ಭವಿಷ್ಯದ ಶ್ರೇಯಕ್ಕೂ ಒಳಿತಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version