ಸ್ಯಾಂಡಲ್ವುಡ್ನ ಟ್ರೆಂಡ್ ಸೆಟ್ಟರ್ ಉಪೇಂದ್ರ ತನಯ ಆಯುಷ್ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ಗೆ ಹಂಡ್ರೆಡ್ ಡೇಸ್ ಮೂವಿ ನೀಡಿದ್ದ ಡೈರೆಕ್ಟರ್ ಒಬ್ರು ಆಯುಷ್ ಉಪೇಂದ್ರನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಇಷ್ಟಕ್ಕೂ ಡೈರೆಕ್ಟರ್ ಯಾರು..? ಯಾವಾಗಿಂದ ಶೂಟಿಂಗ್ ಅನ್ನೋದ್ರ ಎಕ್ಸ್ಕ್ಲೂಸಿವ್ ಡಿಟೇಲ್ಸ್ ನಿಮ್ಮ ಮುಂದೆ.
- ಯಶ್ ಡೈರೆಕ್ಟರ್ ಗರಡಿಯಿಂದ s/o ಉಪ್ಪಿ ಗ್ರ್ಯಾಂಡ್ ಲಾಂಚ್
- ರಾಯರ ಬೃಂದಾವನದ ಬಳಿ ಆಯುಷ್ ಚಿತ್ರದ ಸ್ಕ್ರಿಪ್ಟ್ ಪೂಜೆ
ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ಡೈರೆಕ್ಟರ್ಗಳಲ್ಲಿ ಉಪೇಂದ್ರ ಕೂಡ ಒಬ್ಬರು. ಇವರ ಬರವಣಿಗೆ, ನಿರ್ದೇಶನ, ನಟನೆ ಎಲ್ಲವೂ ಅದ್ಭುತ. ಅದನ್ನ ಒಪ್ಪಿಕೊಂಡು, ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಸಾಕಷ್ಟು ಮಂದಿ ಹೇಳಿ ಆಗಿದೆ. ಇನ್ನು ಉಪ್ಪಿ ಮನದನ್ನೆ ಪ್ರಿಯಾಂಕಾ ಕೂಡ ಹೆಚ್2ಓ ಸಿನಿಮಾದಲ್ಲಿ ಹೂವೇ ಹೂವೇ ಅಂತ ಹಾಡಿ, ಕುಣಿದಿದ್ರು. 50 ಸಿನಿಮಾ ಕಂಪ್ಲೀಟ್ ಮಾಡಿ, ಕನ್ನಡ ಚಿತ್ರಪ್ರೇಮಿಗಳ ಹೃದಯ ಕದ್ದಿದ್ದಾರೆ ಪ್ರಿಯಾಂಕಾ ಉಪೇಂದ್ರ.
ಉಪ್ಪಿಗೆ ಮನೆಯಲ್ಲೇ ಕಾಂಪಿಟೇಟರ್ ಹುಟ್ಟಿಕೊಂಡಂತಿದೆ. ಕಾರಣ ಉಪ್ಪಿ ಸಿನಿಮಾಗಳ ಸಂಖ್ಯೆಗಿಂತ ಪ್ರಿಯಾಂಕಾ ಚಿತ್ರಗಳ ಸಂಖ್ಯೆ ನಾಗಾಲೋಟ ಮುಂದುವರೆಸಿದೆ. ಇದೊಂಥರಾ ಹೆಲ್ದಿ ಕಾಂಪಿಟೇಷನ್ನಿಂದ ಖುಷಿ ಕೊಡುತ್ತೆ. ಆದ್ರೀಗ ಕನ್ನಡ ಚಿತ್ರರಂಗಕ್ಕೆ ಈ ಕುಟುಂಬದ ಕುಡಿ ಎಂಟ್ರಿ ಕೊಡ್ತಿದೆ. ಹೌದು.. ಜೂನಿಯರ್ ಉಪೇಂದ್ರ ಆಯುಷ್ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಅದಕ್ಕೆ ತೆರೆಮರೆಯಲ್ಲಿ ಸಕಲ ತಯಾರಿ ನಡೆದಿದೆ.
ನಿನ್ನೆಯಷ್ಟೇ ನಡೆದ ಆಯುಷ್ ಉಪೇಂದ್ರ ಬರ್ತ್ ಡೇ ವಿಶೇಷ, ಮಂತ್ರಾಲಯದ ರಾಯರ ಬೃಂದಾವನದ ಬಳಿ ಆಯುಷ್ ಚೊಚ್ಚಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿದೆ. ಮಗನಿಗಾಗಿ ಸ್ವತಃ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಮಗಳ ಸಮೇತ ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾಗೆ ಶುಭವಾಗಲಿ ಅಂತ ರಾಯರ ಆಶೀರ್ವಾದ ಪಡೆದು ಬಂದಿದ್ದಾರೆ.
ವಿಶೇಷ ಅಂದ್ರೆ ಉಪೇಂದ್ರ ಕುಟುಂಬಕ್ಕೆ ಹಿರಿಯನಟಿ ಡಾ. ತಾರಾನುರಾಧ ಕುಟುಂಬ ಕೂಡ ಸಾಥ್ ನೀಡಿದೆ. ಹೌದು.. ಬಹಳ ವರ್ಷಗಳ ನಂಟಿರೋ ತಾರಾ ಹಾಗೂ ಸ್ಟಾರ್ ಸಿನಿಮಾಟೋಗ್ರಾಫರ್ ವೇಣುಗೋಪಾಲ್ ಕುಟುಂಬ ಕೂಡ ಉಪ್ಪಿ ಫ್ಯಾಮಿಲಿ ಜೊತೆ ಮಂತ್ರಾಲಯಕ್ಕೆ ತೆರಳಿತ್ತು. ಉಪ್ಪಿ ಅವ್ರ ರೀಸೆಂಟ್ ಮೂವಿ ಯುಐ ಸಿನಿಮಾಟೋಗ್ರಾಫರ್ ಇದೇ ವೇಣು ಗೋಪಾಲ್. ಅಲ್ಲದೆ, ಆಯುಷ್ ಚೊಚ್ಚಲ ಚಿತ್ರಕ್ಕೂ ವೇಣು ಅವರೇ ಕ್ಯಾಮೆರಾ ಹಿಡಿಯಲಿದ್ದಾರೆ. ಅದಕ್ಕೂ ಮಿಗಿಲಾಗಿ ಡೈರೆಕ್ಟರ್ನ ಸೂಚಿಸಿರೋದು ಕೂಡ ವೇಣು ಅವರೇ ಎನ್ನಲಾಗ್ತಿದೆ.
ಯಶ್ ಜೊತೆ 2010ರಲ್ಲಿ ಮೊದಲಾಸಲ ಅನ್ನೋ ಬ್ಯೂಟಿಫುಲ್ ರೊಮ್ಯಾಂಟಿಕ್ ಲವ್ ಸ್ಟೋರಿಗೆ ಆ್ಯಕ್ಷನ್ ಕಟ್ ಹೇಳಿದ್ದ ಮೈಸೂರಿನ ಪುರುಷೋತ್ತಮ್, ಆಯುಷ್ನ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ. ಹೌದು.. ರಾಕಿಂಗ್ ಸ್ಟಾರ್ಗೆ ಹಂಡ್ರೆಡ್ ಡೇಸ್ ಫಿಲ್ಮ್ ಕೊಟ್ಟಿದ್ದ ನಿರ್ದೇಶಕರಿಂದ ಆಯುಷ್ ಲಾಂಚ್ ಆಗ್ತಿದ್ದಾರೆ. ಅಂದಹಾಗೆ ಆಯುಷ್ ಉಪೇಂದ್ರ ಮೊದಲ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಪ್ಯೂರ್ ಲವ್ ಸ್ಟೋರಿ ಆಗಿರಲಿದೆ. ಈ ವಾರದಲ್ಲೇ ಫೋಟೋಶೂಟ್ಗೆ ಪ್ಲ್ಯಾನ್ ಮಾಡಿದ್ದು, ಫೋಟೋಶೂಟ್ ಬಳಿಕ ಫಸ್ಟ್ ಲುಕ್ ಸಮೇತ ಆಯುಷ್ನ ಮೀಡಿಯಾ ಕ್ಯಾಮೆರಾ ಮುಂದೆ ನಿಲ್ಲಿಸೋ ಯೋಜನೆಯಲ್ಲಿದ್ದಾರೆ ಉಪೇಂದ್ರ ದಂಪತಿ.
- ಮಗನ ಭವಿಷ್ಯಕ್ಕಾಗಿ ಸದಾಶಿವನಗರಕ್ಕೆ ಉಪೇಂದ್ರ ಶಿಫ್ಟ್..!
- ಹೋಮ್ ಬ್ಯಾನರ್ನಿಂದ ಅಲ್ಲ.. ಎಲ್ಲರಂತಲ್ಲ ಆಯುಷ್
ಹೌದು.. ಆಯುಷ್ ಉಪೇಂದ್ರಗಿಂತ ಡಿಫರೆಂಟ್. ಅದನ್ನ ಅವ್ರ ಮಾತುಗಳಿಂದ ನಾವು ಅಳೆಯಬಹುದು. ಎಲ್ಲರೂ ನಮ್ಮ ತಂದೆ, ತಾತ, ಚಿಕ್ಕಪ್ಪ, ದೊಡ್ಡಪ್ಪ ಹಾಗೆ ಹೀಗೆ ಅಂತ ಬೇರೆ ಅವರ ಬ್ಯಾಗ್ರೌಂಡ್ ಹೇಳಿಕೊಂಡು ಬಂದ್ರೆ, ಈತ ಸ್ವಯಂ ಪ್ರತಿಭೆಯಿಂದ ಬರೋ ಕನಸು ಕಂಡಿದ್ರು. ಅದನ್ನ ಯುಐ ಸಿನಿಮಾದ ಟೀಸರ್ ಲಾಂಚ್ ವೇಳೆ ಮನದಟ್ಟು ಕೂಡ ಮಾಡಿದ್ರು. ಅದ್ರಂತೆ ಈಗ ಉಪ್ಪಿಯ ಹೋಮ್ ಬ್ಯಾನರ್ನಲ್ಲಿ ಲಾಂಚ್ ಆಗ್ತಿಲ್ಲ. ಮೈಸೂರು ಮೂಲದ ನಿರ್ಮಾಪಕರು ಆಯುಷ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ವಿಶೇಷ ಅಂದ್ರೆ ಉಪೇಂದ್ರ ಅವರು ಕತ್ರಿಗುಪ್ಪೆಯಿಂದ ಸದಾಶಿವನಗರಕ್ಕೆ ಮನೆ ಶಿಫ್ಟ್ ಮಾಡಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಮಗನ ಭವಿಷ್ಯ. ಹೌದು.. ಆ್ಯಕ್ಟಿಂಗ್ ಕೋರ್ಸ್ ಜೊತೆ ಸಿನಿಮಾರಂಗದ ಬೇರೆ ಬೇರೆ ಡಿಪಾರ್ಟ್ಮೆಂಟ್ಗಳಲ್ಲಿ ಈ ಹಿಂದೆಯಿಂದಲೇ ತಂದೆ-ತಾಯಿ ಜೊತೆ ಕೆಲಸ ಮಾಡ್ತಿದ್ದ ಆಯುಷ್, ಇದೀಗ ಪಕ್ಕಾ ರೆಡಿಯಾಗಿಯೇ ಬಣ್ಣ ಹಚ್ಚೋಕೆ ಜೈ ಅಂತಿದ್ದಾರೆ. ವೆಲ್ಕಮ್ ಟು ಸ್ಯಾಂಡಲ್ವುಡ್ ಡಿಯರ್ ಆಯುಷ್.