ಖ್ಯಾತ ಸಂಗೀತ ಸಂಯೋಜಕ, ಆಸ್ಕರ್ ವಿಜೇತ ಎ ಆರ್ ರೆಹಮಾನ್ಗೆ ಕೋರ್ಟ್ ಛೀಮಾರಿ ಹಾಕಿದೆ. ಅಷ್ಟೇ ಅಲ್ಲ, ಟ್ಯೂನ್ ಕದ್ದ ಆರೋಪದಡಿ 2 ಕೋಟಿ ರೂಪಾಯಿ ದಂಡ ಕೂಡ ವಿಧಿಸಿದೆ. ಇದ್ರಿಂದ ವಿಶ್ವ ಸಿನಿದುನಿಯಾದಲ್ಲಿ ಸಂಗೀತ ಮಾಂತ್ರಿಕನಿಗೆ ತಲೆ ತಗ್ಗಿಸುವಂತಾಗಿದೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
ಭಾರತೀಯ ಚಿತ್ರರಂಗಕ್ಕೆ ಎ ಆರ್ ರೆಹಮಾನ್ ಅವರ ಕೊಡುಗೆ ಅಪಾರವಾದದ್ದು. ಅದರಲ್ಲೂ ತಮಿಳು, ತೆಲುಗು ಚಿತ್ರರಂಗದಿಂದ ಬಾಲಿವುಡ್ವರೆಗೆ ಅವರು ಬಹುದೊಡ್ಡ ಛಾಪನ್ನು ಒತ್ತಿದ್ದಾರೆ. ದಶಕಗಳಿಂದ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಮಾಂತ್ರಿಕನಿಗೆ ಆಸ್ಕರ್ ಪ್ರಶಸ್ತಿ ಕೂಡ ಒಲಿದಿರೋದು ಗೊತ್ತೇಯಿದೆ.
ನಮ್ಮ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸೇರಿದಂತೆ ಅದೆಷ್ಟೋ ಮಂದಿ ಸಂಗೀತ ಸಂಯೋಜಕರಿಗೆ ಎ ಆರ್ ರೆಹಮಾನ್ ರೋಲ್ ಮಾಡೆಲ್. ಇಂತಹ ಲೆಜೆಂಡ್ ಈಗ ಕೋರ್ಟ್ನಲ್ಲಿ ಕೈ ಕಟ್ಟಿ ನಿಲ್ಲುವಂತಾಗಿದೆ. ಟ್ಯೂನ್ ನಕಲು ಮಾಡಿದ ಆರೋಪದಡಿ ತಲೆ ತಗ್ಗಿಸುವಂತಾಗಿದೆ. ಅದಕ್ಕಾಗಿ ಕೋರ್ಟ್ನಲ್ಲಿ 2 ಕೋಟಿ ರೂಪಾಯಿ ದಂಡ ಕೂಡ ಕಟ್ಟುವಂತಹ ಸಂದರ್ಭ ಎದುರಾಗಿದೆ. ಇದು ನಿಜಕ್ಕೂ ರೆಹಮಾನ್ ಕರಿಯರ್ಗೆ ಕಪ್ಪು ಚುಕ್ಕೆ ತಂದಿದೆ.
ಹೌದು.. ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್-2 ಸಿನಿಮಾಗೆ ಸಂಗೀತ ಸಂಯೋಜಿಸಿದ್ದ ಎ ಆರ್ ರೆಹಮಾನ್ ಮೇಲೆ ಶಾಸ್ತ್ರೀತ ಗಾಯಕ ಹಾಗೂ ಪದ್ಮಶ್ರೀ ಪುರಸ್ಕೃತ ಫೈಯಾಜ್ ವಾಸಿಫುದ್ದೀನ್ ದಾಗರ್ ದೂರು ದಾಖಲಿಸಿದ್ದರು. 2023ರಲ್ಲಿ ವೀರ ರಾಜ ವೀರ ಹಾಡನ್ನ ಶಿವಸ್ತುತಿಯಿಂದ ನಕಲು ಮಾಡಲಾಗಿದೆ ಅಂತ ಆರೋಪಿಸಿದ್ದರು. ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪ ಮೇಲೆ ಡೆಲ್ಲಿ ಹೈಕೋರ್ಟ್ ನಲ್ಲಿ ಸಂಗೀತ ಸಂಯೋಜಕ ರೆಹಮಾನ್ ಹಾಗೂ ನಿರ್ಮಾಣ ಸಂಸ್ಥೆ ಮದ್ರಾಸ್ ಟಾಕೀಸ್ ಮೇಲೆ ಮೊಕದ್ದಮೆ ಹೂಡಿದ್ದರು.
ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ, ಹಾಡನ್ನು ಶಿವಸ್ತುತಿಯಿಂದ ನಕಲು ಮಾಡಿರೋದು ಸಾಬೀತಾಗಿದ್ದು, ಎರಡು ಕೋಟಿ ರೂಪಾಯಿ ದಂಡ ವಿಧಿಸಿದೆ. ಇದು ನಿಜಕ್ಕೂ ರೆಹಮಾನ್ ಹಾಗೂ ಅವ್ರ ಫಾಲೋವರ್ಸ್ಗೆ ದೊಡ್ಡ ಆಘಾತ ತಂದಿದೆ.
ಮಣಿರತ್ನಂ ಹಾಗೂ ರೆಹಮಾನ್ರದ್ದು ಒಂದು ದೊಡ್ಡ ಲೆಗಸಿ ಇದೆ. ಆದ್ರೀಗ ಅಷ್ಟು ದಶಕಗಳ ಜರ್ನಿಯಲ್ಲಿ ಈ ರೀತಿ ಮುಖಭಂಗ ಆಗಿರೋದು ಇದೇ ಮೊದಲು. ಇದಾದ ಬಳಿಕ ರೆಹಮಾನ್ ಸಾರ್ವಜನಿಕ ವೇದಿಕೆಗಳಲ್ಲಿ ಯಾವ ರೀತಿ ವರ್ತಿಸ್ತಾರೆ ಅಥ್ವಾ ತಮ್ಮ ಫಾಲೋವರ್ಸ್ನ ಹೇಗೆ ಫೇಸ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್