ಕಿಂಗ್ ನಾಗಾರ್ಜುನ್ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಶುಭಕಾರ್ಯಗಳು ನಡೆಯುತ್ತಿವೆ. ಟ್ರ್ಯಾಕ್ ತಪ್ಪಿದ್ದ ಮಕ್ಕಳು ಕೊನೆಗೂ ರೈಟ್ ಟ್ರ್ಯಾಕ್ಗೆ ಮರಳಿದ್ದಾರೆ. ಹೈದ್ರಾಬಾದ್ನಲ್ಲಿ ನಡೆದ ಅಖಿಲ್ ಅಕ್ಕಿನೇನಿ ರಾಯಲ್ ರಿಸೆಪ್ಷನ್ಗೆ ನಮ್ಮ ಬಾದ್ಷಾ ಸುದೀಪ್ ಹಾಗೂ ರಾಕಿಭಾಯ್ ಯಶ್ ಕೂಡ ಸಾಕ್ಷಿಯಾಗಿದ್ದಾರೆ. ಅದ್ರ ಎಕ್ಸ್ಕ್ಲೂಸಿವ್ ಝಲಕ್ ಇಲ್ಲಿದೆ. ಒಮ್ಮೆ ಕಣ್ತುಂಬಿಕೊಳ್ಳಿ.
- ಅಖಿಲ್ ರಾಯಲ್ ರಿಸೆಪ್ಷನ್ನಲ್ಲಿ ಬಾದ್ಷಾ, ರಾಕಿ ರಾಕ್ಸ್
- ಸ್ಟೈಲಿಶ್ ಲುಕ್ನಲ್ಲಿ ಯಶ್.. ಪತ್ನಿ ಸಮೇತ ಸುದೀಪ್ ಪ್ರತ್ಯಕ್ಷ
- ಕಿಂಗ್ ನಾಗ್ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಶುಭಕಾರ್ಯ
- ಕೈ ಕೊಟ್ಟ ಶ್ರಿಯಾ ಭೂಪಾಲ್.. ಕೈ ಹಿಡಿದ ಝೈನಬ್ ರಾವಡ್ಜೀ
ಯೆಸ್.. ಇದು ಟಾಲಿವುಡ್ನ ಪ್ರತಿಷ್ಠಿತ ಅಕ್ಕಿನೇನಿ ನಾಗೇಶ್ವರ್ರಾವ್ ಮೊಮ್ಮಗ ಅಖಿಲ್ ಅಕ್ಕಿನೇನಿ ರಾಯಲ್ ರಿಸೆಪ್ಷನ್ನ ಝಲಕ್. ಕಿಂಗ್ ನಾಗಾರ್ಜುನ್ ಹಾಗೂ ಅಮಲಾ ಜೋಡಿಯ ಪುತ್ರ ಅಖಿಲ್ ಅಕ್ಕಿನೇನಿ ಇತ್ತೀಚೆಗೆ ಮುಂಬೈ ಮೂಲದ ಆರ್ಟಿಸ್ಟ್ ಝೈನಬ್ ಜೊತೆ ಸಪ್ತಪದಿ ತುಳಿದಿದ್ದರು. ಜೂನ್ 6ರಂದು ನಾಗಾರ್ಜುನ್ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಝೈನಬ್ ಕೈ ಹಿಡಿದಿದ್ರು ಅಖಿಲ್.
ಬರೀ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಿದ್ದ ಈ ಅಖಿಲ್- ಝೈನಬ್ ಕಲ್ಯಾಣ, ಇದೀಗ ರಾಯಲ್ ರಿಸೆಪ್ಷನ್ ಮೂಲಕ ಸಖತ್ ಸದ್ದು ಮಾಡಿದೆ. ಹೌದು.. ಹೈದ್ರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆ ಏರ್ಪಡಿಸಿದ್ದ ನಾಗಾರ್ಜುನ್, ಮಗ ಅಖಿಲ್ ಹಾಗೂ ನೂತನ ಸೊಸೆ ಝೈನಬ್ ರಿಸೆಪ್ಷನ್ಗೆ ಇಡೀ ಸೌತ್ ಇಂಡಸ್ಟ್ರಿಗೆ ಆಹ್ವಾನ ನೀಡಿದ್ದರು. ಅದ್ರಂತೆ ನಮ್ಮ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಸ್ ಕೂಡ ಅದ್ರಲ್ಲಿ ಭಾಗಿಯಾಗಿರೋದು ಇಂಟರೆಸ್ಟಿಂಗ್.
ರಾಕಿಭಾಯ್ ಯಶ್ ಸ್ಟೈಲಿಶ್ ಲುಕ್ನಲ್ಲಿ ಹೋಗಿ ನೂತನ ದಂಪತಿಗೆ ಶುಭಕೋರಿದ್ದಾರೆ. ರಾವಣನ ಪಾತ್ರಕ್ಕಾಗಿ ಗೆಟಪ್ ಬದಲಿಸಿರೋ ಯಶ್, ಅದ್ರ ಲುಕ್ ರಿವೀಲ್ ಆಗಬಾರದು ಅಂತ, ತಲೆಗೆ ಸ್ಟೈಲ್ ಆಗಿ ರುಮಾಲು ಸುತ್ತಿಕೊಂಡು ಅಖಿಲ್ ರಿಸೆಪ್ಷನ್ನಲ್ಲಿ ಮಿಂಚು ಹರಿಸಿದ್ದಾರೆ. ಇನ್ನು ಬಾದ್ಷಾ ಕಿಚ್ಚ ಸುದೀಪ್ ಕೂಡ ಪತ್ನಿ ಪ್ರಿಯಾ ಸಮೇತ ಅಖಿಲ್- ಝೈನಬ್ ಆರತಕ್ಷತೆಗೆ ಸಾಕ್ಷಿ ಆಗಿದ್ದಾರೆ.
ಅಂದಹಾಗೆ ಸುದೀಪ್ ಹಾಗೂ ಅಖಿಲ್ ಒಳ್ಳೆಯ ಫ್ರೆಂಡ್ಸ್. ಪ್ರೊಫೆಷನಲ್ ಕ್ರಿಕೆಟರ್ ಆಗಬೇಕು ಅಂತಿದ್ದ ಅಖಿಲ್ ಕೊನೆಗೆ ನಟರಾದ್ರು. ಆದ್ರೆ ಸಿಸಿಎಲ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಬಾದ್ಷಾ ಕಿಚ್ಚ ಸುದೀಪ್ ಜೊತೆ ಒಳ್ಳೆಯ ಬಾಂಡಿಂಗ್ ಹೊಂದಿರೋ ಅಖಿಲ್ ಸ್ನೇಹಕ್ಕೆ ಈ ಗಳಿಗೆ ಸಾಕ್ಷಿಯಾಗಿದೆ. ಇನ್ನು ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್, ಸಲಾರ್ ಖ್ಯಾತಿಯ ಪ್ರಮೋದ್ ಮಂಜು ಸೇರಿದಂತೆ ಸಾಕಷ್ಟು ಮಂದಿ ಕನ್ನಡದ ಸ್ಟಾರ್ಸ್ ಈ ಶುಭ ಕಾರ್ಯದಲ್ಲಿ ಭಾಗಿಯಾಗಿ ಶುಭ ಕೋರಿದ್ದಾರೆ.
ತಮಿಳು ಸೂಪರ್ ಸ್ಟಾರ್ ಸೂರ್ಯ, ರಾಮ್ ಚರಣ್ ತೇಜಾ, ಪ್ರಿನ್ಸ್ ಮಹೇಶ್ ಬಾಬು ಸೇರಿದಂತೆ ಸೌತ್ ಸಿನಿದುನಿಯಾದ ಬಹುತೇಕ ಎಲ್ಲಾ ಸ್ಟಾರ್ಸ್ ಅಖಿಲ್ ದಂಪತಿಗೆ ಶುಭ ಕೋರಿದ್ದಾರೆ. ಅಂದಹಾಗೆ ಅಖಿಲ್ ಅಕ್ಕಿನೇನಿ ಬಾಲನಟನಾಗಿಯೇ ಬಣ್ಣದಲೋಕಕ್ಕೆ ಬಂದರೂ, ಸಕ್ಸಸ್ ಸಿಕ್ಕಿದ್ದು ಮಾತ್ರ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಸಿನಿಮಾದಿಂದ. ಏಜೆಂಟ್ ಚಿತ್ರ ಕೈ ಕೊಟ್ರೂ, ಲೆನಿನ್ ಆಗಿ ಕ್ರಾಂತಿಕಾರಿಯ ಲುಕ್ನಲ್ಲಿ ಮತ್ತೆ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ ಅಖಿಲ್ ಅಕ್ಕಿನೇನಿ.
ಅಂದಹಾಗೆ ಇದು ಅಖಿಲ್ ಮೊದಲ ಮದುವೆಯೇ ಆದ್ರೂ ಸಹ, ಒಂಥರಾ ಎರಡನೆಯದ್ದು. ಅದಕ್ಕೆ ಕಾರಣ ಶ್ರಿಯಾ ಭೂಪಾಲ್. ಹೌದು.. ಈ ಹಿಂದೆ 2016ರಲ್ಲೇ ಉದ್ಯಮಿ ಜಿ ವಿ ಕೃಷ್ಣಾರೆಡ್ಡಿ ಮಗಳು ಶ್ರಿಯಾ ಜೊತೆ ಎಂಗೇಜ್ ಆಗಿದ್ರು ಅಖಿಲ್. 2017ರಲ್ಲಿ ಮದ್ವೆ ಕೂಡ ನಿಶ್ಚಯವಾಗಿತ್ತು. ಕಾರಣಾಂತರಗಳಿಂದ ಅವ್ರ ಮದ್ವೆ ನಿಂತು ಹೋಗಿತ್ತು. ಆದ್ರೀಗ ಝೈನಬ್ ಜೊತೆ ಮತ್ತೆ ಗೃಹಸ್ಥಾಶ್ರಮಕ್ಕೆ ಕಾಲಿಡೋಕೆ ಮುಂದಾದ ಅಖಿಲ್, ಯಶಸ್ವಿಯಾಗಿದ್ದಾರೆ. ದೊಡ್ಡ ಮಗ ನಾಗಚೈತನ್ಯಗೆ ಎರಡನೇ ಮದ್ವೆ ಮಾಡಿದ್ದ ನಾಗಾರ್ಜುನ್, ಈಗ ಚಿಕ್ಕ ಮಗನಿಗೂ ಎರಡನೇ ಬಾರಿ ಮದ್ವೆ ಮಾಡಿಸೋದ್ರಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಶುಭ ಕಾರ್ಯಗಳಿಗೆ ಸಾಕ್ಷಿಯಾಗಿದೆ ಕಿಂಗ್ ನಾಗ್ ಮನೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್