ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್.
ಚಿಂತಾಮಣಿಯಲ್ಲಿ ನಡೆದ ಅಖಂಡ-2 ಇವೆಂಟ್ ಹತ್ತು, ಹಲವು ವಿಶೇಷಗಳಿಂದ ಆಂಧ್ರ-ಕರ್ನಾಟಕದಲ್ಲಿ ಸಂಚಲನ ಮೂಡಿಸುವಂತಾಗಿದೆ. ಬಾಲಯ್ಯ-ಜೋಗಯ್ಯ ಬ್ರದರ್ಸ್ ಡೈಲಾಗ್ ತಾಂಡವಕ್ಕೆ ಎಲ್ರೂ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಲೆಜೆಂಡ್ ಸೂಪರ್ ಸ್ಟಾರ್ ಮಕ್ಕಳ ಸಮಾಗಮಕ್ಕೆ ಸಾಕ್ಷಿಯಾದ ಜನಸಾಗರ ಸೇರಿದಂತೆ ಅಖಂಡ ಇವೆಂಟ್ ಹೇಗಾಯ್ತು ಹೇಳ್ತೀವಿ ಈ ಸ್ರೋರಿ ನೋಡಿ.
ಟಾಲಿವುಡ್ ಮ್ಯಾನ್ ಆಫ್ ಮಾಸ್ ಬಾಲಯ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಖಂಡ ಸಿನಿಮಾದ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಚಿತ್ರದ ಪವರ್ಫುಲ್ ಟ್ರೈಲರ್ ರಿಲೀಸ್ ಆಗಿದೆ. ಬಾಲಯ್ಯ ಸರ್ಜಿಕಲ್ ಸ್ಟ್ರೈಕ್ಗೆ ಅವರ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್ 5ಕ್ಕೆ ಅಖಂಡ ತಾಂಡವಂ ಸಿನಿಮಾ ತೆರೆಗಪ್ಪಳಿಸಲಿದೆ. ಹೀಗಾಗಿ ಬಾಲಯ್ಯ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದು, ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಅಖಂಡದಲ್ಲಿ ಬಾಲಯ್ಯ-ಜೋಗಯ್ಯ ಡೈಲಾಗ್ ತಾಂಡವಂ
ಆಂಧ್ರ-ಕರ್ನಾಟಕ ಲೆಜೆಂಡ್ ಬ್ರದರ್ಸ್ಗೆ ಎಲ್ರೂ ಬೋಲ್ಡ್
ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆದಿದ್ದು ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹಾಜರಾಗಿ ಬಾಲಯ್ಯಗೆ ಸಾಥ್ ಕೊಟ್ಟಿದ್ದಾರೆ. ಬಾಲಕೃಷ್ಣ ವೇದಿಕೆಗೆ ಬರುತ್ತಿದ್ದಂತೆ ಶಿಳ್ಳೆ, ಕರತಾಡನ, ಚೀರಾಟ ಕಿವಿಗಡುಚಿಕ್ಕಿದವು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಬಾಲಕೃಷ್ಣ ಅವರ ಪರವಾಗಿ ಜಯಘೋಷಗಳನ್ನು ಮೊಳಗಿಸಿದರು. ಟ್ರೈಲರ್ ರಿಲೀಸ್ ಗೆ ಮಳೆ ಅಡ್ಡಿಯಾಗಿದ್ದು, ಭಾರೀ ಮಳೆಯ ನಡುವೆಯೂ ಚೇರ್ ಗಳನ್ನು ತಲೆಯ ಮೇಲೆ ಇಟ್ಟುಕೊಂಡು ಮಳೆಯಲ್ಲೇ ಅಭಿಮಾನಿಗಳು ಬಾಲಯ್ಯ ಹಾಗು ಶಿವಣ್ಣ ದರ್ಶನ ಪಡೆದರು.
ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ, ಕನ್ನಡದಲ್ಲಿ ಎನರ್ಜಿ ಅಂದ್ರೆ ಶಿವಣ್ಣ, ತೆಲುಗಿನಲ್ಲಿ ಬಾಲಯ್ಯ ಎನ್ನುವಂತೆ ಇರುತ್ತದೆ. ಇವತ್ತು ಅವ್ರು ಬಂದಿರೋದು ಎನರ್ಜಿ ತಂದಿದೆ, ಬಾಲಯ್ಯ ನಾನು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಬೇಕು ಎನ್ನುವ ಆಸೆಯನ್ನು ಶಿವಣ್ಣ ಹೇಳಿದ್ದಾರೆ. ಇದೆ ವೇಳೆ ಜೋಗಯ್ಯ ಚಿತ್ರದ ಪವರ್ ಫುಲ್ ಡೈಲಾಗ್ ಹೊಡೆದ ಶಿವಣ್ಣ, ಓಂ ಚಿತ್ರದ ಮೆಹಬೂಬ ಸಾಂಗ್ ಹಾಡಿದ್ರು ಹಾಗೆ ಪುನೀತ್ ರಾಜಕುಮಾರ್ ಅವರ ಬೋಂಬೆ ಹೇಳುತೈತೆ ಹಾಡು ಹಾಡಿ ಪುನೀತ ಅಭಿಮಾನಿಗಳನ್ನ ಖುಷಿ ಪಡಿಸಿದ್ರು. ಇಷ್ಟೇ ಅಲ್ಲಾ ಶಿವಣ್ಣ ಡೈಲಾಗ್ ಗೆ ಬಾಲಯ್ಯ ಕೂಡ ಸಾಥ್ ನೀಡಿದ್ದು ತಮ್ಮ ಫ್ಯಾನ್ಸ್ ಗಾಗಿ ನಾನ್ ಸ್ಟಾಪ್ ಡೈಲಾಗ್ ಹೊಡೆದ್ರು .
ಒಟ್ಟಿಗೆ ಸಿನಿಮಾ ಮಾಡೋ ಸುಳಿವು ಕೊಟ್ರು ಡಾ. ಶಿವಣ್ಣ..!!
ಅಖಂಡ ಟ್ರೈಲರ್ನಲ್ಲಿ ಬಾಲಯ್ಯ ಅಬ್ಬರ, ಆರ್ಭಟ ಜೋರು
4 ವರ್ಷಗಳ ಹಿಂದೆ ಬಂದಿದ್ದ ಬ್ಲಾಕ್ಬಸ್ಟರ್ ‘ಅಖಂಡ’ ಚಿತ್ರದ ಸೀಕ್ವೆಲ್ ಇದಾಗಿದ್ದು ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ. ‘ಕಷ್ಟಬಂದ್ರೆ ದೇವರು ಬರ್ತಾನೆ ಅಂತ ನಂಬಿರೋ ಜನಕ್ಕೆ ಕಷ್ಟ ಬಂದ್ರೂ ದೇವರು ಬರಲ್ಲ ಅಂತ ನಂಬಿಸ್ಬೇಕು’ ಎನ್ನುವ ಡೈಲಾಗ್ ಹಿನ್ನೆಲೆಯಲ್ಲಿ ಟ್ರೈಲರ್ ಶುರುವಾಗುತ್ತದೆ. ಅಲ್ಲಿಂದ ಮುಂದೆ 2 ನಿಮಿಷ 30 ಸೆಕೆಂಡ್ ಅಖಂಡ ಬಾಲಯ್ಯ ವಿಶ್ವರೂಪ ದರ್ಶನ ಮಾಡಿಸಲಾಗಿದೆ.
ಚಿತ್ರದಲ್ಲಿ ತಮಿಳು ನಟ ಆದಿ ಪಿನಿಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಅಖಂಡ ಹಾಗೂ ಮುರಳಿಕೃಷ್ಣ ಆಗಿ ಬಾಲಯ್ಯ ದರ್ಬಾರ್ ಜೋರಾಗಿದೆ. ‘ಭಜರಂಗಿ ಭಾಯಿಜಾನ್’ ಚಿತ್ರದಲ್ಲಿ ನಟಿಸಿದ್ದ ಹರ್ಷಾಲಿ ಮಲ್ಹೋತ್ರಾ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಅಖಂಡ- 2 ಸಿನಿಮಾ 2D ಮಾತ್ರವಲ್ಲದೇ 3Dಯಲ್ಲಿ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದ್ದು ಕನ್ನಡ ವರ್ಷನ್ ಟ್ರೈಲರ್ ಕೂಡ ಬಂದಿದೆ. ಒಟ್ನಲ್ಲಿ ಅಖಂಡ 2 ಟ್ರೈಲರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.. ಇದೇ ಡಿಸೆಂಬರ್ 5ಕ್ಕೆ ಪಂಚ ಭಾಷೆಯಲ್ಲಿ ಅಖಂಡ-2 ಸಿನಿಮಾ ರಿಲೀಸ್ ಆಗುತ್ತಿದೆ. ಇದು ಬಾಲಯ್ಯ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಬಾಲಯ್ಯ ಅವರ ಮಾಸ್ ಅವತಾರವನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರರಾಗಿದ್ದಾರೆ.





