• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಬ್ಯಾಂಕ್ ಕೆಲಸ ಇದ್ಯಾ? ಜ.25ಕ್ಕೂ ಮುನ್ನ ಮುಗಿಸಿಕೊಳ್ಳಿ.!: 3 ದಿನ ಬ್ಯಾಂಕ್‌ಗಳಿಗೆ ರಜೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 5, 2026 - 12:15 pm
in ವಾಣಿಜ್ಯ
0 0
0
Untitled design 2026 01 05T120832.756

ಬ್ಯಾಂಕ್ ಗ್ರಾಹಕರಿಗೆ ಅತಿ ಮಹತ್ವದ ಮಾಹಿತಿ. ಜನವರಿ ತಿಂಗಳ ಅಂತ್ಯದಲ್ಲಿ ದೇಶಾದ್ಯಂತ ಬ್ಯಾಂಕ್ ಸೇವೆಗಳಿಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ. ಜನವರಿ 25, 26 ಮತ್ತು 27 ರಂದು ಸತತ ಮೂರು ದಿನಗಳ ಕಾಲ ಬಹುತೇಕ ಎಲ್ಲಾ ಬ್ಯಾಂಕುಗಳು ಮುಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆ, ಹಣಕಾಸು ವ್ಯವಹಾರ, ಚೆಕ್ ಕ್ಲಿಯರೆನ್ಸ್, ನಗದು ಠೇವಣಿ ಅಥವಾ ವಿತ್‌ಡ್ರಾ ಸೇರಿದಂತೆ ಬ್ಯಾಂಕ್ ಸಂಬಂಧಿತ ಅಗತ್ಯ ಕೆಲಸಗಳನ್ನು ಗ್ರಾಹಕರು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಸತತ 3 ದಿನ ಬ್ಯಾಂಕ್ ರಜೆ ಯಾಕೆ?

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ದೇಶವ್ಯಾಪಿ ಬ್ಯಾಂಕ್ ನೌಕರರ ಸಂಘಟನೆಗಳು ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಸಿದ್ಧತೆ ನಡೆಸಿವೆ. ಈ ಮುಷ್ಕರದ ಪರಿಣಾಮವಾಗಿ, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

RelatedPosts

ಯುಗಾದಿ, ಈದ್ ಹಬ್ಬದ ಸಂಭ್ರಮ: ಷೇರು ಮಾರುಕಟ್ಟೆಗೆ ರಜೆ ಇದೆಯಾ ? ಇಲ್ಲಿದೆ ಫುಲ್ ಡಿಟೇಲ್ಸ್

ಯುಗಾದಿಗೆ ಟ್ರಿಪ್ ಪ್ಲಾನ್ ಮಾಡಿದ್ರಾ? ಹಾಗಾದ್ರೆ ಇಂಧನ ದರ ತಿಳಿದುಕೊಂಡು ಗಾಡಿಗೆ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಿ!

ಬಂಗಾರ ಖರೀದಿಗೆ ಸೂಕ್ತ ಸಮಯವೇ? ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ

ದೇಶದ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟು? ಪೂರ್ಣ ಲಿಸ್ಟ್ ಇಲ್ಲಿದೆ

ADVERTISEMENT
ADVERTISEMENT

ಜನವರಿ 25 – ಭಾನುವಾರ (ಸಾಮಾನ್ಯ ರಜೆ)

ಜನವರಿ 26 – ಗಣರಾಜ್ಯೋತ್ಸವ (ರಾಷ್ಟ್ರೀಯ ರಜೆ)

ಇದರಿಂದಾಗಿ, 25ರಿಂದ 27ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ.

UFBUಯ ಬೇಡಿಕೆ ಏನು?

ಬ್ಯಾಂಕ್‌ಗಳಲ್ಲಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮಾತ್ರ ರಜಾದಿನಗಳಾಗಿವೆ. ಉಳಿದ ಶನಿವಾರಗಳು ಕೆಲಸದ ದಿನಗಳಾಗಿವೆ. ಇದಕ್ಕೆ ವಿರೋಧವಾಗಿ, ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸಿ, ವಾರದಲ್ಲಿ ಕೇವಲ ಐದು ದಿನಗಳ ಕೆಲಸದ ವ್ಯವಸ್ಥೆ (5-Day Work Week) ಜಾರಿಗೆ ತರಬೇಕೆಂದು UFBU ಒತ್ತಾಯಿಸುತ್ತಿದೆ.

ಈ ಬೇಡಿಕೆಗೆ ಬೆಂಬಲವಾಗಿ, UFBU ಅಡಿಯಲ್ಲಿ ಇರುವ ಒಟ್ಟು ಒಂಬತ್ತು ಪ್ರಮುಖ ಬ್ಯಾಂಕ್ ಯೂನಿಯನ್ಸ್ ಒಂದಾಗಿ ಮುಷ್ಕರಕ್ಕೆ ಕರೆ ನೀಡಿವೆ. ಇದರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಜೊತೆಗೆ ಕೆಲವು ಖಾಸಗಿ ಬ್ಯಾಂಕ್ ನೌಕರರು ಸಹ ಭಾಗಿಯಾಗಿದ್ದಾರೆ.

ಹಿಂದಿನ ಒಪ್ಪಂದದ ಹಿನ್ನೆಲೆ

ಮಾರ್ಚ್ 2024ರಲ್ಲಿ, ಭಾರತೀಯ ಬ್ಯಾಂಕುಗಳ ಸಂಘ (IBA) ಮತ್ತು UFBU ನಡುವೆ ಮಹತ್ವದ ಒಪ್ಪಂದವೊಂದು ನಡೆದಿತ್ತು. ಆ ಒಪ್ಪಂದದ ಪ್ರಕಾರ, ತಿಂಗಳ ಉಳಿದ ಎರಡು ಶನಿವಾರಗಳನ್ನು ಸಹ ರಜಾದಿನಗಳಾಗಿ ಘೋಷಿಸುವುದಕ್ಕೆ ಸಮ್ಮತಿ ವ್ಯಕ್ತವಾಗಿತ್ತು. ಇದರೊಂದಿಗೆ, ಬ್ಯಾಂಕ್ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕಿತ್ತು.

ಈ ಒಪ್ಪಂದದ ಭಾಗವಾಗಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿಯಾಗಿ ಕೆಲಸ ಮಾಡಲು ಬ್ಯಾಂಕ್ ನೌಕರರು ಸಹ ಒಪ್ಪಿಕೊಂಡಿದ್ದರು. ಆರಂಭದಲ್ಲಿ ಇದಕ್ಕೆ RBI ಸಹ ಸಮ್ಮತಿ ಸೂಚಿಸಿತ್ತು ಎಂದು ತಿಳಿದುಬಂದಿತ್ತು.

ಆದರೆ, ನಂತರ ಕೆಲವು ಆಡಳಿತಾತ್ಮಕ ಹಾಗೂ ನೀತಿ ಸಂಬಂಧಿತ ಕಾರಣಗಳಿಂದ ಈ ನಿರ್ಧಾರವನ್ನು ಜಾರಿಗೆ ತರಲಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಬ್ಯಾಂಕ್ ನೌಕರರು ಹಲವು ಬಾರಿ ಪ್ರತಿಭಟನೆ ಹಾಗೂ ಮುಷ್ಕರ ನಡೆಸಿದ್ದಾರೆ.

ಗ್ರಾಹಕರಿಗೆ ಏನು ಪರಿಣಾಮ?

ಮುಷ್ಕರ ಜಾರಿಯಾದರೆ,

  • ಚೆಕ್ ಕ್ಲಿಯರೆನ್ಸ್ ವಿಳಂಬ

  • ಶಾಖಾ ಬ್ಯಾಂಕ್ ಸೇವೆ ಸ್ಥಗಿತ

  • ಲೋನ್ ಪ್ರಕ್ರಿಯೆ, KYC ಅಪ್ಡೇಟ್ ವಿಳಂಬ

ಹಾಗೂ ಇತರೆ ನಗದು ಸಂಬಂಧಿತ ವ್ಯವಹಾರಗಳಿಗೆ ತೊಂದರೆ ಉಂಟಾಗಬಹುದು. ಆದರೆ UPI, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ATM ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಗ್ರಾಹಕರಿಗೆ ಸಲಹೆ

ಬ್ಯಾಂಕ್ ಗ್ರಾಹಕರು ಜನವರಿ 25ಕ್ಕೂ ಮೊದಲು ಅಗತ್ಯ ಹಣಕಾಸು ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಒಳಿತು. ವಿಶೇಷವಾಗಿ ವ್ಯಾಪಾರಿಗಳು, ಪಿಂಚಣಿದಾರರು ಮತ್ತು ದೊಡ್ಡ ಮೊತ್ತದ ವಹಿವಾಟು ಹೊಂದಿರುವವರು ಮುಂಚಿತ ಎಚ್ಚರಿಕೆ ವಹಿಸುವುದು ಅನಿವಾರ್ಯ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 04T070243.618

ಈ ರಾಶಿಯವರಿಗೆ ಕೋಪವೇ ಸಮಸ್ಯೆಗೆ ಕಾರಣ..ಯುಗಾದಿ ದಿನ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

by ಶಾಲಿನಿ ಕೆ. ಡಿ
March 19, 2026 - 6:45 am
0

Untitled design 2026 03 18T233633.639

ಮೆಟ್ಟಿಲು ಹತ್ತುವಾಗ ಉಸಿರು ಗಟ್ಟಿದಂತೆ ಆಗುತ್ತಿದೆಯೇ ? ಇದು ಹೃದಯದ ಸಮಸ್ಯೆಯ ಎಚ್ಚರಿಕೆ ಇರಬಹುದು

by ಯಶಸ್ವಿನಿ ಎಂ
March 18, 2026 - 11:40 pm
0

Untitled design 2026 03 18T232556.488

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ: 20ಕ್ಕೂ ಹೆಚ್ಚು ವಿಮಾನಗಳು ಬೇರೆಡೆಗೆ ಡೈವರ್ಟ್

by ಯಶಸ್ವಿನಿ ಎಂ
March 18, 2026 - 11:26 pm
0

Untitled design 2026 03 18T230820.973

ಯುಗಾದಿ 2026: ಹೊಸ ವರ್ಷದ ಪೂಜೆಗೆ ಇಲ್ಲಿದೆ ಶುಭ ಮುಹೂರ್ತ ಮತ್ತು ಸರಳ ಪೂಜಾ ವಿಧಿ ವಿಧಾನ

by ಯಶಸ್ವಿನಿ ಎಂ
March 18, 2026 - 11:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 18T174342.687
    ಯುಗಾದಿ, ಈದ್ ಹಬ್ಬದ ಸಂಭ್ರಮ: ಷೇರು ಮಾರುಕಟ್ಟೆಗೆ ರಜೆ ಇದೆಯಾ ? ಇಲ್ಲಿದೆ ಫುಲ್ ಡಿಟೇಲ್ಸ್
    March 18, 2026 | 0
  • Untitled design 2026 03 18T102130.697
    ಯುಗಾದಿಗೆ ಟ್ರಿಪ್ ಪ್ಲಾನ್ ಮಾಡಿದ್ರಾ? ಹಾಗಾದ್ರೆ ಇಂಧನ ದರ ತಿಳಿದುಕೊಂಡು ಗಾಡಿಗೆ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಿ!
    March 18, 2026 | 0
  • Untitled design 2026 03 18T095619.678
    ಬಂಗಾರ ಖರೀದಿಗೆ ಸೂಕ್ತ ಸಮಯವೇ? ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ
    March 18, 2026 | 0
  • Untitled design 2026 03 17T101903.444
    ದೇಶದ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟು? ಪೂರ್ಣ ಲಿಸ್ಟ್ ಇಲ್ಲಿದೆ
    March 17, 2026 | 0
  • Untitled design 2026 03 17T100759.544
    ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್..ಇಂದು ಚಿನ್ನ-ಬೆಳ್ಳಿ ದರ ಇಳಿಕೆ
    March 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version