ಬಿಗ್ಬಾಸ್ನಲ್ಲಿ ಇತ್ತೀಚೆಗೆ, ಸ್ಪರ್ಧಿ ರಕ್ಷಿತಾ ಮನೆಯಲ್ಲಿರುವ ಇತರೆ ಪ್ರಮುಖ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ಟಾರ್ಗೆಟ್ ಆಗಿರುವುದು ಎಲ್ಲರ ಗಮನ ಸೆಳೆದಿದೆ. ರಕ್ಷಿತಾ ಒಂದು ವಾರ ತಡವಾಗಿ ಮನೆಗೆ ಪ್ರವೇಶಿಸಿದರೂ, ಅವರು ಟಾಸ್ಕ್ಗಳಲ್ಲಿ ತೋರಿಸುತ್ತಿರುವ ಸಾಮರ್ಥ್ಯ ಮತ್ತು ಸ್ಪಷ್ಟವಾದ ವ್ಯಕ್ತಿತ್ವವು ಇತರ ಸ್ಪರ್ಧಿಗಳಿಗೆ ಕಣ್ಣುಕುಕ್ಕುವಂತಾಗಿದೆ.
ಆರಂಭದಲ್ಲಿ ಅಶ್ವಿನಿ ಮತ್ತು ಜಾಹ್ನವಿ ರಕ್ಷಿತಾರನ್ನು ಟಫ್ ಕಾಂಪಿಟೇಟರ್ ಎಂದು ಹೇಳಿದ್ದರು. ಆದರೆ ಈಗ, ಅದೇ ರಕ್ಷಿತಾ ಅವರಿಬ್ಬರ ಪ್ರಾಥಮಿಕ ಟಾರ್ಗೆಟ್ ಆಗಿದ್ದಾಳೆ. ಮನೆಯಲ್ಲಿ ಇತರೆ ಸ್ಪರ್ಧಿಗಳು ಮಲಗಿದ ನಂತರ, ರಕ್ಷಿತಾ ಬಾತ್ರೂಮ್ಗೆ ಹೋಗಿ ಕ್ಯಾಮೆರಾ ನೋಡಿಕೊಂಡು ಏನೋ ಮಾತನಾಡಿಕೊಳ್ಳುವುದು ಅಶ್ವಿನಿ ಮತ್ತು ಜಾಹ್ನವಿ ಗಮನಿಸಿ, ಇದೇ ವಿಚಾರವನ್ನು ಅವರು ಮನೆಯ ಉಳಿದ ಸದಸ್ಯರ ಮುಂದೆ ದೆವ್ವದ ಕಥೆ ಹೇಳಿದ್ದಾರೆ.
ರಕ್ಷಿತಾ ರಾ ರಾ ಎಂಬ ಹಾಡಿಗೆ ಗೆಜ್ಜೆ ಕಟ್ಟಿ ನೃತ್ಯ ಮಾಡಿದ್ದಾಳೆ ಎಂಬ ಸುಳ್ಳು ವದಂತಿಯನ್ನು ಅಶ್ವಿನಿ ಮತ್ತು ಜಾಹ್ನವಿ ಹಬ್ಬಿಸಿದರು. ಇನ್ನೂ ಆಶ್ಚರ್ಯದ ವಿಷಯವೆಂದರೆ, ತಾವೇ ಗೆಜ್ಜೆಯ ಶಬ್ಬದ ಮಾಡಿ, ಆ ಸದ್ದಿನ ಅನುಮಾನವನ್ನು ರಕ್ಷಿತಾ ಮೇಲೆ ಹೊರಿಸಲು ಯತ್ನಿಸಿದ್ದರು.
ಮಿಡ್-ವೀಕ್ ಎಲಿಮಿನೇಷನ್ ಸಮಯದಲ್ಲಿ, ಈ ವಿಷಯ ಇನ್ನಷ್ಟು ತೀವ್ರವಾಯಿತು. ರಕ್ಷಿತಾ ಮತ್ತು ಜಾಹ್ನವಿ ಪರಸ್ಪರರನ್ನು ಎಲಿಮಿನೇಷನ್ಗೆ ನಾಮಿನೇಟ್ ಮಾಡಿಕೊಂಡರು. ಈ ನಾಮಿನೇಷನ್ ಪ್ರಕ್ರಿಯೆಯ ನಂತರ ನಡೆದ ಚರ್ಚೆಯೇ ಇಂದಿನ ದೊಡ್ಡ ವಾಗ್ವಾದಕ್ಕೆ ಕಾರಣವಾಯಿತು. ಜಾಹ್ನವಿ ರಕ್ಷಿತಾರನ್ನು ‘ದೊಡ್ಡ ನಾಗವಲ್ಲಿ’ ಎಂದು ಕರೆದು, ಗೆಜ್ಜೆ ಶಬ್ದದ ಆರೋಪವನ್ನು ಮಾಡಿದಳು.
ಇದಕ್ಕೆ ಪ್ರತಿಕ್ರಿಯೆಯಾಗಿ ಅಶ್ವಿನಿ ಗೌಡ ಸಿಡಿದೆದ್ದರು. ನಿನ್ನ ನಾಟಕ ಎಲ್ಲ ಬಾತ್ರೂಮ್ನಲ್ಲಿ ಇಟ್ಕೋ, ಈಡಿಯೆಟ್! ಎಂದು ಅವರು ರಕ್ಷಿತಾಗೆ ಗದರಿಸಿದರು. ಇದರ ಜೊತೆಗೆ, ರಕ್ಷಿತಾರ ಸೂಟ್ಕೇಸ್ ಅನ್ನು ಎಳೆದು ತೋರಿಸಿ, ಇದನ್ನು ನೋಡಿದ್ರೇನೆ ನೀನು ಎಲ್ಲಿಂದ ಬಂದವಳೆಂದು ತಿಳಿಯುತ್ತೆ ಎಂದು ಹೀಯಾಳಿಸಿದರು.





