ಭೂಮ್.. ವರ್ಲ್ಡ್ವೈಡ್ ಧೂಳೆಬ್ಬಿಸ್ತಿದೆ ಧುರಂಧರ್-2. ಯೆಸ್.. ಯುಗಾದಿ ಹಬ್ಬಕ್ಕೆ ಡಬಲ್ ಧಮಾಕ ತಂದುಕೊಟ್ಟಿದ್ದಾರೆ ರಣ್ವೀರ್ ಸಿಂಗ್. ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಬರೋಬ್ಬರಿ 52 ಕೋಟಿ ದಾಖಲೆ ಮೊತ್ತ ಗಳಿಸಿರೋ ಧುರಂಧರ್ ದಿ ರಿವೆಂಜ್, ದಂಗಲ್ ದಾಖಲೆಯನ್ನ ಧೂಳಿಪಟ ಮಾಡೋ ರೇಂಜ್ಗಿದೆ. ಇಷ್ಟಕ್ಕೂ ಕಥೆ ಏನು..? ಪರ್ಫಾಮೆನ್ಸ್ ಹೇಗಿದೆ..? ಸಿನಿಮಾದ ಹೈಲೈಟ್ಸ್ ಏನು ಅನ್ನೋದ್ರ ಕಂಪ್ಲೀಟ್ ರಿವ್ಯೂ ರಿಪೋರ್ಟ್ ಇಲ್ಲಿದೆ.
- ದಂಗಲ್ ರೆಕಾರ್ಡ್ ಧೂಳಿಪಟ ಮಾಡುತ್ತೆ ‘ಧುರಂಧರ್-2’
- ಪೇಯ್ಡ್ ಪ್ರೀಮಿಯರ್ನಿಂದ ದಾಖಲೆ 52 ಕೋಟಿ ಕಲೆಕ್ಷನ್
- 3 ಗಂಟೆ 55 ನಿಮಿಷದ ಚಿತ್ರ.. ಅಲ್ಲಾಡದೆ ನೋಡ್ತಾರೆ ಪ್ರೇಕ್ಷಕರು
- ಯುಗಾದಿಗೆ ಡಬಲ್ ಧಮಾಕ.. ವರ್ಲ್ಡ್ವೈಡ್ ರಣ್ವೀರ್ ರಾಕ್ಸ್
ದಿ ವೆಯ್ಟ್ ಈಸ್ ಓವರ್.. ಇಷ್ಟು ದಿನ ಧುರಂಧರ್ ಸೀಕ್ವೆಲ್ ಯಾವಾಗ ಬರುತ್ತೆ ಅಂತ ಬಕಪಕ್ಷಿಗಳಂತೆ ಕಾಯ್ತಿದ್ದ ಚಿತ್ರಪ್ರೇಮಿಗಳಿಗೆ ಇದೀಗ ಮಸ್ತ್ ಮನರಂಜನೆ ಕೊಡ್ತಿದೆ ಧುರಂಧರ್-2. ಸದ್ಯ ವಿಶ್ವ ಸಿನಿದುನಿಯಾದಲ್ಲಿ ಈ ಭಾರತೀಯ ಚಿತ್ರದ್ದೇ ಸೌಂಡು, ಬ್ಯಾಂಡು. ಯಾಕಂದ್ರೆ ಧುರಂಧರ್ ಚಿತ್ರದಿಂದ ಈಗಾಗ್ಲೇ ಅದು ಬ್ರ್ಯಾಂಡ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಕೋಟಿ ರೂಪಾಯಿಗಳ ಮಳೆ ಸುರಿಸಿದ್ದ ಧುರಂಧರ್, ಇದೀಗ ಸೀಕ್ವೆಲ್ನಿಂದ ಮತ್ತೊಮ್ಮೆ ಸುನಾಮಿ, ಸುಂಟರಗಾಳಿ ತಂದಿದೆ.
ಯೆಸ್.. ಧುರಂಧರ್ ದಿ ರಿವೆಂಜ್ ಸಿನಿಮಾ ಕೇವಲ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ 52 ಕೋಟಿ ದಾಖಲೆ ಮೊತ್ತದ ಹಣ ಗಳಿಸಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಒಂದು ಸಿನಿಮಾ ರಿಲೀಸ್ಗೂ ಮೊದಲೇ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರೋದು. 3 ಗಂಟೆ 55 ನಿಮಿಷಗಳಷ್ಟು ರನ್ ಟೈಂ ಇರೋ ಬಹುದೊಡ್ಡ ಸಿನಿಮಾ ಆದ್ರೂ ಸಹ, ಜನ ಮಾತ್ರ ಸೀಟ್ ಎಡ್ಜ್ನಲ್ಲಿ ಕೂತು ಅಲ್ಲಾಡದೆ ಸಿನಿಮಾನ ಕಣ್ತುಂಬಿಕೊಳ್ತಿರೋದು ಅಚ್ಚರಿ.
ಅಂದಹಾಗೆ ಇಲ್ಲಿಯತನಕ ವರ್ಲ್ಡ್ ಬಾಕ್ಸ್ ಆಫೀಸ್ನಲ್ಲಿ ಅತಿಹೆಚ್ಚು ಗಳಿಸಿದ ಇಂಡಿಯನ್ ಸಿನಿಮಾ ಅಂದ್ರೆ ಆಮೀರ್ ಖಾನ್ ನಟನೆಯ ದಂಗಲ್ ಅಂತಾರೆ. ಹೌದು.. 2024 ಕೋಟಿ ಬ್ಯುಸಿನೆಸ್ ಮಾಡೋ ಮೂಲಕ ದಂಗಲ್ ಇಂಡಿಯಾದ ನಂಬರ್ 1 ಸಿನಿಮಾ ಅನಿಸಿಕೊಂಡಿದೆ. ಸಾವಿರಕ್ಕೂ ಅಧಿಕ ಕೋಟಿ ಗಳಿಸಿದ್ದ ಧುರಂಧರ್ ಸಿನಿಮಾ, ಇದೀಗ ಸೀಕ್ವೆಲ್ನಲ್ಲಿರೋ ಗತ್ತು, ಗಮ್ಮತ್ತಿಗೆ ಇದೀಗ ಎರಡು ಸಾವಿರ ಕೋಟಿ ರೂಪಾಯಿಗಳ ಗಡಿಯನ್ನ ಬಹುಬೇಗ ತಲುಪಲಿದೆ ಎನ್ನಲಾಗ್ತಿದೆ. ಹಾಗೆ ಆದಲ್ಲಿ ದಂಗಲ್ ದಾಖಲೆಯನ್ನ ಧೂಳಿಪಟ ಮಾಡಿ, ಧುರಂಧರ್ ದಿ ರಿವೆಂಜ್ ಅಗ್ರಸ್ಥಾನಕ್ಕೇರಲಿದೆ.
- ಬೀಸ್ಟ್ ಮೋಡ್ನಲ್ಲಿ ಕರ್ನಾಟಕದ ಅಳಿಮಯ್ಯ ರಣ್ವೀರ್..!
- ಕಿಂಗ್ ಆಫ್ ಲೈರಿ.. ಕರಾಚಿ ಬಾದ್ಷಾ ನಮ್ಮ ಸ್ಪೈ ಏಜೆಂಟ್
ಪಂಜಾಬ್ ರೆಜಿಮೆಂಟ್ನಲ್ಲಿ ಟ್ರೈನ್ ಆದಂತಹ ಅಪ್ಪಟ ದೇಶಪ್ರೇಮಿ ಹಾಗೂ ಆರ್ಮಿ ಆಫೀಸರ್ ಕುಟುಂಬದ ಕುಡಿ ಜಸ್ಕಿರತ್ ಸಿಂಗ್ ರಂಗಿ, ಅಜಿದ್ ದೋವಲ್ರಿಂದ ಆಪರೇಷನ್ ಮೇಲೆ ಸ್ಪೈ ಏಜೆಂಟ್ ಆಗಿ ಶತ್ರುದೇಶ ಪಾಕಿಸ್ತಾನ ಸೇರ್ತಾರೆ. ಅಲ್ಲಿ ತಮ್ಮ ಮೂಲ ಹೆಸರನ್ನ ಮರೆತು, ಹಮ್ಜಾ ಆಲಿ ಮಝಾರಿಯಾಗಿ ಬಲೂಚಿ ಗ್ಯಾಂಗ್ಸ್ಟರ್ ಜೊತೆ ಸೇರಿಕೊಂಡು ಅಲ್ಲಿನ ಗ್ಯಾಂಗ್ಸ್ಟರ್ ರಹಮಾನ್ ಡಕಾಯಿತ್ನ ಮುಗಿಸಿದ್ರು ನಾಯಕನಟ ರಣ್ವೀರ್ ಸಿಂಗ್. ಅದು ಮೊದಲ ಭಾಗ. ಆದ್ರೆ ಇಲ್ಲಿ ಎರಡನೇ ಭಾಗ ಜಿದ್ದಾ ಜಿದ್ದಿನ ರಣ ರೋಚಕ ಕಥೆ ಹೊಂದಿದೆ.
ಪಾಕಿಗಳ ಪಾಲಿಗೆ ನಾಯಕನಟ ಜಸ್ಟ್ ಹಮ್ಜಾ. ಆದ್ರೆ ಇಂಡಿಯನ್ ಸ್ಪೈ ಮಾಸ್ಟರ್ ಅಜಿತ್ ದೋವಲ್ ಆಪರೇಷನ್ಗೆ ಹೀರೋನೇ ಈ ಜಸ್ಕಿರತ್ ಸಿಂಗ್. ಅವರಲ್ಲೇ ಇದ್ದುಕೊಂಡು, ಚಕ್ರವ್ಯೂಹ ಭೇದಿಸಿಕೊಂಡು ಒಳಗೋಗಿ ಒಬ್ಬೊಬ್ಬರನ್ನೇ ಹೊಡೆದುರುಳಿಸುತ್ತಾ ಹೊರಗೆ ಬರೋ ಡೆಡ್ಲಿ & ಡೇರಿಂಗ್ ಕಥೆ ನೋಡುಗರ ಎದೆಬಡಿತ ಜೋರಾಗಿಸುತ್ತೆ. ಯಾಕಂದ್ರೆ ರಣ್ವೀರ್ ಸಿಂಗ್ ಕಿಂಗ್ ಆಫ್ ಲೈರಿಯಾಗಿ, ಕರಾಚಿಯ ಬಾದ್ಷಾ ಆಗಿ ರಕ್ತದೋಕುಳಿ ಹರಿಸುತ್ತಾರೆ. ಆ ಬೀಸ್ಟ್ ಮೋಡ್ನಲ್ಲಿ ರಣ್ವೀರ್ನ ನೋಡೋಕೆ ಎರಡು ಕಣ್ಣು ಸಾಲಲ್ಲ.
- ವ್ಯವಸ್ಥೆಯಿಂದಾದ ಅನ್ಯಾಯ.. ರಿವೆಂಜ್ಗಾಗಿ 12 ಮಂದಿ ಬಲಿ
- ಮರಣದಂಡನೆಗೆ ಗುರಿಯಾದ ಕೈದಿ.. ಪಾಪಿ ಪಾಕಿಗಳಿಗೆ ಯಮ
ಪಂಜಾಬ್ನಲ್ಲಿ ಆರ್ಮಿ ಆಫೀಸರ್ ಕುಟುಂಬ ಹಾಗೂ ಅಲ್ಲಿನ ರಾಜಕಾರಣಿ ನಡುವೆ ಜಮೀನು ವಿವಾದ ಶುರುವಾಗುತ್ತೆ. ಆಗ ಜಸ್ಕಿರತ್ ಸಿಂಗ್ ತಂದೆಯನ್ನ ಆ ರಾಜಕಾರಣಿ ಬಲವಂತವಾಗಿ ನೇಣು ಹಾಕಿ ಸಾಯಿಸ್ತಾನೆ. ಅಲ್ಲದೆ ಜಸ್ಕಿರತ್ ಅಕ್ಕಂದಿರ ಮೇಲೆ ಗ್ಯಾಂಗ್ ರೇಪ್ ಮಾಡಿಸಿ, ಒಬ್ಬಳ ಹತ್ಯೆಗೈಯುತ್ತಾರೆ. ಅದ್ರ ರಿವೆಂಜ್ ತೀರಿಸಿಕೊಳ್ಳೋಕೆ 12 ಮಂದಿಯ ಬಲಿ ಪಡೆಯುವ ಜಸ್ಕಿರತ್ಗೆ ಮರಣದಂಡನೆ ವಿಧಿಸುತ್ತೆ ಕೋರ್ಟ್. ಆಗ ಆತನಿಗೆ ಮರುಜನ್ಮ ನೀಡುವ ಮೂಲಕ, ಅದೇ ಜಸ್ಕಿರತ್ನ ಆಪರೇಷನ್ ಧುರಂಧರ್ಗೆ ಬಳಸಿಕೊಳ್ಳುತ್ತಾರೆ ಅಜಿತ್ ದೋವಲ್.
ತನಗೆ ತನ್ನ ಕುಟುಂಬಕ್ಕೆ ಅನ್ಯಾಯ ಮಾಡಿದಂತಹ ವ್ಯವಸ್ಥೆ, ದೇಶದ ವಿರುದ್ಧ ತಿರುಗಿ ಬೀಳುವ ಅದೇ ವ್ಯಕ್ತಿ, ಪಾಪಿ ಪಾಕಿಗಳಿಗೆ ಯಮನಾಗಿ ಕಾಡ್ತಾರೆ. ಸ್ಪೆಷಲ್ ಟಾಸ್ಕ್ ಫೋರ್ಸ್ ಆಫೀಸರ್ ಸಂಜಯ್ ದತ್ಗೂ ಗುನ್ನಾ ಇಡ್ತಾರೆ. ಐಎಸ್ಐ ಮೇಜರ್ ಅರ್ಜುನ್ ರಾಂಪಾಲ್ ಜೊತೆ ಕೊನೆಯ ಕ್ಷಣದ ವರೆಗೂ ಹೋರಾಡ್ತಾರೆ. ಬೆಳೆಯಲ್ಲಿ ಕಳೆ ಕಿತ್ತಂತೆ ಒಬ್ಬೊಬ್ಬರನ್ನೇ ಅಂತ್ಯ ಮಾಡ್ತಾ ಬರ್ತಾರೆ ನಮ್ಮ ಸ್ಪೈ ಏಜೆಂಟ್.
- ಬಡೇ ಭಾಯ್ ಆಗಿ ದಾವೂದ್ ಇಬ್ರಾಹಿಂ ಗೇಮ್..!
- ಆಪರೇಷನ್ ಗ್ರೀನ್ ಲೀಫ್ ಆಗಿ ಡಿಮಾನಿಟೈಸೇಷನ್
ಒಂದ್ಕಡೆ ದಾವೂದ್ ಇಬ್ರಾಹಿಂ ಆಡುವ ಗೇಮ್. ಮತ್ತೊಂದೆಡೆ ಯುಪಿ ಎಲೆಕ್ಷನ್ಸ್ಗೆ 60 ಸಾವಿರ ಕೋಟಿ ಫೇಕ್ ಕರೆನ್ಸಿ ಇಂಡಿಯಾಗೆ ಕಳುಹಿಸಿಕೊಡುವ ಹಾಗೂ ಡ್ರಗ್ ಸಪ್ಲೈ ಮಾಡುವ ಪರಿಗೆ ಕೌಂಟರ್ ಅಟ್ಯಾಕ್ಸ್ ಇಂಪ್ರೆಸ್ಸೀವ್ ಆಗಿವೆ. ಆಪರೇಷನ್ ಗ್ರೀನ್ ಲೀಫ್ ಆಗಿ ಅದೇ ಸಮಯಕ್ಕೆ ಮೋದಿ ಡಿಮಾನಿಟೈಸೇಷನ್ ಅನೌನ್ಸ್ ಮಾಡ್ತಾರೆ. ಅದೆಲ್ಲಾ ನಮ್ಮ ಇಂಡಿಯನ್ಸ್ಗೆ ನೆಕ್ಸ್ಟ್ ಲೆವೆಲ್ ಕಿಕ್ ಕೊಡಲಿದೆ.
ಪತ್ನಿ ಹಾಗೂ ಮಗನನ್ನ ಮರೆತು ಮತ್ತೆ ಹೊಸ ಐಡೆಂಟಿಟಿಗೆ ಮರಳುವುದು ನಿಜಕ್ಕೂ ಕಷ್ಟಕರ. ಆದ್ರೂ ಸಹ ಅದನ್ನ ದೇಶಕ್ಕಾಗಿ ಮಾಡ್ತಾರೆ ಜಸ್ಕಿರತ್ ಸಿಂಗ್. ಇದು ಬರೀ ಆ್ಯಕ್ಷನ್ ಅಥ್ವಾ ರಿವೆಂಜ್ ಮೂವಿ ಮಾತ್ರವಲ್ಲ. ಲವ್, ಎಮೋಷನಲ್ ಜರ್ನಿ ಕೂಡ ಹೌದು. ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಕ್ಲೈಮ್ಯಾಕ್ಸ್ ಮಾತ್ರ ವಿಧ್ವಂಸಕವಾಗಿದೆ. ಉಗ್ರನರಸಿಂಹನಂತೆ ರೌದ್ರಾವತಾರದಲ್ಲಿ ನಮ್ಮ ಸ್ಪೈ ಏಜೆಂಟ್ ಪಾಕಿಸ್ತಾನದ ವ್ಯವಸ್ಥೆಯನ್ನ ಮಣ್ಣು ಮುಕ್ಕಿಸುತ್ತಾನೆ. ನಿಜಕ್ಕೂ ಹೇಳಬೇಕು ಅಂದ್ರೆ ಜಸ್ಕಿರತ್ ಸಿಂಗ್ ಅಂತಹ ಒಬ್ಬೇ ಒಬ್ಬ ಏಜೆಂಟ್, ನಮ್ಮ ಇಡೀ ಇಂಡಿಯನ್ ಆರ್ಮಿಗೆ ಸಮ. ಇಂತಹ ಏಜೆಂಟ್ಸ್ನ ಪಡೆದ ನಾವೇ ಧನ್ಯರು. ಭಾರತ್ ಮಾತಾ ಕಿ ಜೈ. ಇದಕ್ಕೆ ರೇಟಿಂಗ್ ಇಲ್ಲ. ಯಾಕಂದ್ರೆ ಪ್ರತಿಯೊಬ್ಬ ಭಾರತೀಯ ತಪ್ಪದೇ ನೋಡಲೇಬೇಕಾದ ಸಿನಿಮಾ ಧುರಂದರ್ ದಿ ರಿವೆಂಜ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





