ಶ್ರೀ ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ, ಹೇಮಂತ ಋತುವಿನ ಪೌಷ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಾದ ಇಂದು ಬುಧವಾರ. ಬುಧವಾರದ ಈ ದಿನ ನಿಮ್ಮ ಬದುಕಿನಲ್ಲಿ ಯಾವ ಬದಲಾವಣೆಗಳನ್ನು ತರಲಿದೆ ? ಯಾರಿಗೆ ಆಸ್ತಿ ಲಾಭವಾಗಲಿದೆ ಮತ್ತು ಯಾರು ಜಾಗರೂಕರಾಗಿರಬೇಕು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನ ಪಂಚಾಂಗ
ತಿಥಿ: ಶುಕ್ಲ ಚತುರ್ಥೀ, ನಕ್ಷತ್ರ: ಶ್ರವಣಾ, ಶುಭ ಕಾಲ: ಸೂರ್ಯೋದಯ, ಬೆಳಿಗ್ಗೆ 06:46, ಸೂರ್ಯಾಸ್ತ ಸಂಜೆ 06:01, ರಾಹು ಕಾಲ 12:24 ರಿಂದ 01:28 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08:11 ರಿಂದ 09:35 ರವರೆಗೆ.
ಮೇಷ ರಾಶಿ: ಆಸ್ತಿಗೆ ಸಂಬಂಧಿಸಿದ ನಿಮ್ಮ ದೀರ್ಘಕಾಲದ ಕನಸು ಇಂದು ನನಸಾಗುವ ಸೂಚನೆ ಇದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಶುಭ ವಾರ್ತೆ ಸಿಗಲಿದೆ. ಅನಾರೋಗ್ಯದ ನಡುವೆಯೂ ಕೆಲಸದಲ್ಲಿ ಉತ್ಸಾಹ ತೋರುವಿರಿ. ಶತ್ರುಗಳ ಮುಖಾಮುಖಿಯಾಗುವ ಸಂದರ್ಭವಿರುವುದರಿಂದ ಮಾತಿನಲ್ಲಿ ಎಚ್ಚರವಿರಲಿ.
ವೃಷಭ ರಾಶಿ: ಕೃಷಿಕರು ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಲಾಭ ಪಡೆಯುವರು. ವಿದೇಶಿ ವ್ಯವಹಾರಗಳಲ್ಲಿ ಪಾಲುದಾರಿಕೆ ಒದಗಿ ಬರಲಿದೆ. ಆದರೆ, ಆಸ್ತಿ ಹಂಚಿಕೆ ವಿಚಾರದಲ್ಲಿ ಕುಟುಂಬದಲ್ಲಿ ಗೊಂದಲ ಉಂಟಾಗಬಹುದು. ಇಂದು ಯಾವುದೇ ವಸ್ತುವನ್ನು ಇತರರಿಗೆ ಉಡುಗೊರೆಯಾಗಿ ನೀಡಬೇಡಿ.
ಮಿಥುನ ರಾಶಿ: ಮನೆಯ ಕೆಲಸಗಳಲ್ಲಿ ಮಕ್ಕಳಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆಕಸ್ಮಿಕ ಧನಸಹಾಯ ಸಿಗುವ ಯೋಗವಿದ್ದರೂ, ಸಾರ್ವಜನಿಕವಾಗಿ ಅವಮಾನವಾಗುವ ಸಾಧ್ಯತೆ ಇದೆ, ಎಚ್ಚರವಿರಲಿ. ದಾಂಪತ್ಯದಲ್ಲಿ ಜವಾಬ್ದಾರಿಗಳು ಹೆಚ್ಚಲಿವೆ.
ಕರ್ಕಾಟಕ ರಾಶಿ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚಲಿದೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸದ್ಯಕ್ಕೆ ಸಿಗುವ ಅವಕಾಶವನ್ನು ಬಳಸಿಕೊಳ್ಳಲು ಸಲಹೆ ನೀಡಲಾಗಿದೆ. ಕುಟುಂಬದವರ ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಬಿಡುವುದು ಒಳಿತು.
ಸಿಂಹ ರಾಶಿ: ಸರ್ಕಾರಿ ಉದ್ಯೋಗದಲ್ಲಿ ಅನಿರೀಕ್ಷಿತ ತಿರುವುಗಳು ಕಾಣಿಸಲಿವೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭವಾಗಲಿದೆ. ಅವಿವಾಹಿತರಿಗೆ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಗಳು ಶುರುವಾಗಲಿವೆ. ದುರಭ್ಯಾಸಗಳಿಂದ ದೂರವಿರಿ.
ಕನ್ಯಾ ರಾಶಿ: ದಾಂಪತ್ಯದಲ್ಲಿ ಸೌಹಾರ್ದಯುತ ವಾತಾವರಣ ಇರಲಿದೆ. ಅಜ್ಞಾತ ಭಯ ಕಾಡಬಹುದು, ಆದರೆ ಧೈರ್ಯದಿಂದ ಕೆಲಸ ಮುಂದುವರಿಸಿ. ಮಕ್ಕಳ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಒಂಟಿಯಾಗಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.
ತುಲಾ ರಾಶಿ: ಸಾಲದ ಸುಳಿಯಿಂದ ಬಿಡುಗಡೆ ಪಡೆಯುವ ಹಾದಿ ಸುಲಭವಾಗಲಿದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ನೂತನ ವಾಹನ ಖರೀದಿ ಯೋಗವಿದೆ. ಮಕ್ಕಳ ಚಟುವಟಿಕೆಗಳ ಮೇಲೆ ಒಂದು ಕಣ್ಣಿರಲಿ.
ವೃಶ್ಚಿಕ ರಾಶಿ: ನಿಮ್ಮ ದಕ್ಷ ಕೆಲಸಕ್ಕೆ ಸಮಾಜದಲ್ಲಿ ಮನ್ನಣೆ ಸಿಗಲಿದೆ. ಕಳೆದುಹೋದ ವಸ್ತುಗಳು ಅನಿರೀಕ್ಷಿತವಾಗಿ ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಒತ್ತಡವಿದ್ದರೂ ಕೆಲಸವನ್ನು ಯಶಸ್ವಿಯಾಗಿ ಪೂರೈಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಶ್ರಮ ಅಗತ್ಯ.
ಧನು ರಾಶಿ: ಆಸ್ತಿ ವಿಚಾರದಲ್ಲಿ ಕುಟುಂಬದ ಹಿರಿಯರ ಸಲಹೆ ಪಡೆಯುವುದು ಉತ್ತಮ. ಸಕಾರಾತ್ಮಕ ಚಿಂತನೆಗಳಿಂದ ದಾರಿ ಸುಗಮವಾಗಲಿದೆ. ಹಳೆಯ ಸಂಪರ್ಕಗಳಿಂದ ವ್ಯಾಪಾರದಲ್ಲಿ ಲಾಭವಾಗಲಿದೆ. ದಾಂಪತ್ಯದಲ್ಲಿ ಪರಸ್ಪರ ಬೆಂಬಲ ಕಡಿಮೆಯಾಗದಂತೆ ನೋಡಿಕೊಳ್ಳಿ.
ಮಕರ ರಾಶಿ: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ; ಸರಿಯಾದ ಸಮಯಕ್ಕೆ ಹಣ ಸಿಗದೆ ಸಣ್ಣ ಪ್ರಮಾಣದ ಸಾಲ ಮಾಡಬೇಕಾದೀತು. ಕೃಷಿಯಲ್ಲಿ ಹೊಸ ಪ್ರಯೋಗಗಳು ಯಶಸ್ವಿಯಾಗಲಿವೆ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ.
ಕುಂಭ ರಾಶಿ: ಶಿಕ್ಷಣದಲ್ಲಿ ಏಕಾಗ್ರತೆ ಹೆಚ್ಚಲಿದೆ. ಇಂದು ಇತರರಿಗೆ ಧನಸಹಾಯ ಮಾಡುವ ಅವಕಾಶ ಸಿಗಲಿದೆ. ನಿಮ್ಮ ಭಾವನೆಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇರುವುದರಿಂದ ಮಾನಸಿಕವಾಗಿ ದೃಢವಾಗಿರಿ. ಆಸ್ತಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ.
ಮೀನ ರಾಶಿ: ವ್ಯಾಪಾರದಲ್ಲಿ ಮಾತಿನ ಜಾಣ್ಮೆಯಿಂದ ಲಾಭ ಪಡೆಯುವಿರಿ. ಭೂಮಿ ಖರೀದಿಗೆ ಇದು ಸೂಕ್ತ ಸಮಯ. ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಲು ಯೋಗ ಮತ್ತು ಧ್ಯಾನದ ಮೊರೆ ಹೋಗಿ. ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯುವುದು ಅವಶ್ಯಕ.





