• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಜೈಲುಗಳಲ್ಲಿರುವ ಕೈದಿಗಳ ದುಡಿಮೆಗೆ ‘ಆರ್ಥಿಕ ಬರ’: ಸರ್ಕಾರದಿಂದ ದಿನಗೂಲಿ ಹಣಕ್ಕೆ ತಡೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 8, 2025 - 9:02 am
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು
0 0
0
Untitled design 2025 10 08t084806.150

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಸೆರೆಯಲ್ಲಿರುವ ಕೈದಿಗಳು ದೇಶದಲ್ಲೇ ಅತಿ ಹೆಚ್ಚು ದಿನಗೂಲಿ ಪಡೆಯುವ ಅವಕಾಶ ಹೊಂದಿದ್ದಾರೆ. ದಿನಕ್ಕೆ 615 ರೂಪಾಯಿಗಳಂತೆ ಮಾಸಿಕ 18 ಸಾವಿರ ರೂಪಾಯಿಗಳವರೆಗೆ ದುಡಿಯುವ ಸಾಧ್ಯತೆಯಿದ್ದರೂ, ಕಳೆದ ಎರಡು ವರ್ಷಗಳಿಂದ ಸರ್ಕಾರ ಈ ಹಣವನ್ನು ಬಿಡುಗಡೆ ಮಾಡದೇ ತಡೆಹಿಡಿದಿದೆ.

ಇದರಿಂದಾಗಿ ಕೈದಿಗಳಿಗೆ ಆರ್ಥಿಕ ಬರ ಎದುರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಹಣಕಾಸು ಸಮಸ್ಯೆಗಳು ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಮೂಲಗಳ ಪ್ರಕಾರ, ಎರಡು ವರ್ಷಗಳಲ್ಲಿ ಸುಮಾರು 33 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕಿದ್ದು, ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

RelatedPosts

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಉದ್ಯಮಿ ಮಗ ನಿಗೂಢವಾಗಿ ನಾಪತ್ತೆ: ಡ್ರೋನ್ ಮೂಲಕ ಶೋಧ ಕಾರ್ಯ

ಸಚಿವರಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿ; ಬಸವಂತಪ್ಪಗೆ ಅದ್ಧೂರಿ ಸ್ವಾಗತ

ಅಂಬ್ಲಿಗೋಳ ಜಲಾಶಯ ಭರ್ತಿ; ಬಾಗಿನ ಅರ್ಪಿಸಿದ ಬಿ.ವೈ. ರಾಘವೇಂದ್ರ, ವಿಜಯೇಂದ್ರ

ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾ*ವು: ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ

ADVERTISEMENT
ADVERTISEMENT

ಕೈದಿಗಳು ವಿವಿಧ ಅಪರಾಧಗಳಾದ ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಮತ್ತು ವಂಚನೆಗಳಲ್ಲಿ ಶಿಕ್ಷೆಗೊಳಗಾಗಿದ್ದರೂ, ಜೈಲಿನಲ್ಲಿ ಶ್ರಮದಾನ ಮಾಡುವ ಮೂಲಕ ದುಡಿಮೆ ಮಾಡುವ ಅವಕಾಶವಿದೆ. ಈ ಶ್ರಮದಾನವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ತರಬೇತಿ, ಅರೆ ಕುಶಲ, ಕುಶಲ ಮತ್ತು ಹೆಚ್ಚಿನ ಕುಶಲ. ರಾಜ್ಯದ ಜೈಲುಗಳಲ್ಲಿ 1288 ಕೈದಿಗಳು ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಇದರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರವೂ ಸೇರಿದೆ. ಈ ಕೈದಿಗಳು ಅಡುಗೆ, ಸ್ವಚ್ಛತೆ, ಕಾವಲು, ಕೈಗಾರಿಕೆ, ಕೃಷಿ ಮತ್ತು ಇತರ ಕೆಲಸಗಳಲ್ಲಿ ತೊಡಗಿದ್ದಾರೆ.

ಕುಶಲ ಪ್ರವರ್ಗದ ನಾಲ್ವರು ಕೈದಿಗಳಿಗೆ ದಿನಕ್ಕೆ 615 ರೂಪಾಯಿಗಳು ಸಿಗುತ್ತವೆ. ಇದರಿಂದ ಮಾಸಿಕ ಸರಾಸರಿ 18,450 ರೂಪಾಯಿಗಳವರೆಗೆ ಸಂಪಾದಿಸಬಹುದು. ಆದರೆ ಸರ್ಕಾರಿ ರಜಾ ದಿನಗಳು ಮತ್ತು ವೈಯಕ್ತಿಕ ರಜೆಗಳನ್ನು ಹೊರತುಪಡಿಸಿ ಲೆಕ್ಕ ಹಾಕಲಾಗುತ್ತದೆ. ಅಲ್ಲದೆ, ನಿಗದಿತ ಸಮಯಕ್ಕಿಂತ ಕಡಿಮೆ ಕೆಲಸ ಮಾಡಿದರೆ ಅದರಂತೆ ಕೂಲಿ ಕಡಿತಗೊಳ್ಳುತ್ತದೆ. ಅಡುಗೆ ವಿಭಾಗದ ಕೈದಿಗಳಿಗೆ ವಿಶೇಷ ಅವಕಾಶವಿದ್ದು, ವರ್ಷದ 365 ದಿನಗಳೂ ಕೆಲಸ ಮಾಡುವ ಸಾಧ್ಯತೆಯಿದೆ. ರಜಾ ದಿನಗಳಲ್ಲಿ ಹೆಚ್ಚುವರಿ ಕೆಲಸಕ್ಕೆ ಪ್ರತ್ಯೇಕ ಕೂಲಿ ಸಿಗುತ್ತದೆ.

ಕೈದಿಗಳ ದಿನಗೂಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಜನಧನ್ ಯೋಜನೆಯಡಿ ಖಾತೆಗಳನ್ನು ತೆರೆಯಲಾಗಿದ್ದು, ವಾರಕ್ಕೊಮ್ಮೆ ಲೆಕ್ಕಾಚಾರ ಮಾಡಿ ಹಣ ಹಾಕಲಾಗುತ್ತದೆ. ಈ ಹಣವನ್ನು ಕುಟುಂಬಕ್ಕೆ ಕಳುಹಿಸಬಹುದು ಅಥವಾ ಬಿಡುಗಡೆಯ ಸಮಯದಲ್ಲಿ ಪಡೆಯಬಹುದು. ಐದು ವರ್ಷಗಳ ಹಿಂದೆ ಕನಿಷ್ಠ 175 ರಿಂದ 250 ರೂಪಾಯಿಗಳ ದಿನಗೂಲಿ ಇತ್ತು. ಆದರೆ 2022ರಲ್ಲಿ ಕಾರ್ಮಿಕ ಕಾಯ್ದೆಯಡಿ ಕೈದಿಗಳನ್ನು ಸೇರಿಸಿ ದಿನಗೂಲಿ ಮೂರು ಪಟ್ಟು ಹೆಚ್ಚಿಸಲಾಯಿತು. ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕಾದರೂ, ಇದುವರೆಗೆ ಮಾಡಿಲ್ಲ.

ಕೈದಿಗಳ ವಿವರ: ಅಡುಗೆಯಲ್ಲಿ 399, ಸ್ವಚ್ಛತೆಯಲ್ಲಿ 421, ಕಾವಲುಗಾರರಾಗಿ 140, ಕೈಗಾರಿಕೆಯಲ್ಲಿ 176, ಕೃಷಿಯಲ್ಲಿ 125 ಮತ್ತು ಇತರೆಯಲ್ಲಿ 27 ಕೈದಿಗಳು ಇದ್ದಾರೆ. ಇದರಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹ ಸೇರಿದ್ದಾರೆ. ಅವರು ಗ್ರಂಥಾಲಯ ಸಹಾಯಕರಾಗಿ ತರಬೇತಿ ಪ್ರವರ್ಗದಲ್ಲಿ ದುಡಿಯುತ್ತಿದ್ದಾರೆ. ನ್ಯಾಯಾಲಯ ಹಾಜರಾತಿ ಮತ್ತು ರಜಾ ದಿನಗಳನ್ನು ಹೊರತುಪಡಿಸಿ ಅವರಿಗೂ ಕೂಲಿ ಸಿಗುತ್ತದೆ.

ದಿನಗೂಲಿ ಪ್ರವರ್ಗಗಳು: ತರಬೇತಿ – 524 ರೂಪಾಯಿ, ಅರೆ ಕುಶಲ – 548 ರೂಪಾಯಿ, ಕುಶಲ – 615 ರೂಪಾಯಿ, ಹೆಚ್ಚಿನ ಕುಶಲ – 663 ರೂಪಾಯಿ. ವೆಚ್ಚದ ವಿವರ: ತರಬೇತಿ ಪ್ರವರ್ಗದ 1194 ಕೈದಿಗಳಿಗೆ ಮಾಸಿಕ 1,87,69,680 ರೂಪಾಯಿ, ವಾರ್ಷಿಕ 22,52,36,160 ರೂಪಾಯಿ. ಅರೆ ಕುಶಲದ 90 ಕೈದಿಗಳಿಗೆ ಮಾಸಿಕ 14,79,600 ರೂಪಾಯಿ, ವಾರ್ಷಿಕ 1,77,55,200 ರೂಪಾಯಿ. ಕುಶಲದ 4 ಕೈದಿಗಳಿಗೆ ಮಾಸಿಕ 73,800 ರೂಪಾಯಿ, ವಾರ್ಷಿಕ 8,85,600 ರೂಪಾಯಿ. ಒಟ್ಟು ಮಾಸಿಕ 2,03,23,080 ರೂಪಾಯಿ, ವಾರ್ಷಿಕ 24,38,76,960 ರೂಪಾಯಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ (80)

ʼಅಮೃತವಷ್ಟೇ ಅಲ್ಲ ತಾಯಿಯ ಎದೆಹಾಲಿನ ಸೂಕ್ಷ್ಮಾಣುಗಳಲ್ಲಿ ಅಡಗಿದೆ ಮಗುವಿನ ಜೀವಿತಾವಧಿಯ ಆರೋಗ್ಯದ ಗುಟ್ಟು!ʼ

by ದಿಶಾ ಕೆ. ಎಸ್.
August 8, 2026 - 6:15 pm
0

ಕೈಗೊಳ್ಳಲಿರುವ (79)

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಉದ್ಯಮಿ ಮಗ ನಿಗೂಢವಾಗಿ ನಾಪತ್ತೆ: ಡ್ರೋನ್ ಮೂಲಕ ಶೋಧ ಕಾರ್ಯ

by ದಿಶಾ ಕೆ. ಎಸ್.
August 8, 2026 - 5:43 pm
0

ಕೈಗೊಳ್ಳಲಿರುವ (78)

ಸಚಿವರಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿ; ಬಸವಂತಪ್ಪಗೆ ಅದ್ಧೂರಿ ಸ್ವಾಗತ

by ದಿಶಾ ಕೆ. ಎಸ್.
August 8, 2026 - 5:26 pm
0

ಕೈಗೊಳ್ಳಲಿರುವ (77)

‘ಟಾಕ್ಸಿಕ್’ ಟ್ರೈಲರ್‌ ಲಾಂಚ್ ಗೆ ಕ್ಷಣಗಣನೆ: ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

by ದಿಶಾ ಕೆ. ಎಸ್.
August 8, 2026 - 4:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (43)
    ಕರಾವಳಿಯಲ್ಲಿ ಮಳೆ ಆರ್ಭಟ; ಪುತ್ತೂರು ಸೇರಿ 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
    August 7, 2026 | 0
  • Your paragraph text (42)
    ನಟ ಸೂರ್ಯ ಅಭಿನಯದ ‘ವಿಶ್ವನಾಥ್ ಅಂಡ್ ಸನ್ಸ್’ ಚಿತ್ರ ಆಗಸ್ಟ್ 14ಕ್ಕೆ ಬಿಡುಗಡೆ
    August 7, 2026 | 0
  • Your paragraph text (41)
    ಮೆಟ್ರೋ ಪ್ರಯಾಣಿಕರೇ ಗಮನಿಸಿ: ಆ. 9 ರಂದು ಪರ್ಪಲ್ ಲೈನ್‌ನ ಈ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ
    August 7, 2026 | 0
  • Your paragraph text (40)
    ದೆಹಲಿಯಲ್ಲಿ ರಣಮಳೆಗೆ ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ
    August 7, 2026 | 0
  • Your paragraph text (39)
    ಬೆಂಗಳೂರಿಗೆ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಅಗತ್ಯ: ಸಿಎಂ ಡಿ.ಕೆ ಶಿವಕುಮಾರ್
    August 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version