ಚೆನ್ನೈ: ತಮಿಳುನಾಡಿನ ಕರೂರ್ನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ರಾಜಕೀಯ ರ್ಯಾಲಿಯಲ್ಲಿ ಜನದಟ್ಟನೆ ಹಾಗೂ ಉಸಿರಾಟದ ಸಮಸ್ಯೆಯಿಂದ 41 ಜನ ಮೃತಪಟ್ಟಿದ್ದರು.60ಕ್ಕೂ ಹೆಚ್ಚು ಹೆಚ್ಚು ಜನ ಅಸ್ವಸ್ತರಾಗಿದ್ದರು. ಈ ದುರ್ಘಟನೆ ಆದ 3 ದಿನದ ನಂತರ ಮೊದಲ ಬಾರಿಗೆ ನಟ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆ ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ಜೀವನದಲ್ಲಿ ಇಂತಹ ನೋವಿನ ಸಂಗತಿ ನೋಡಿರಲಿಲ್ಲ. ಈ ದುರಂತ ಯಾಕೆ ಸಂಭವಿಸಿತು ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ ಎಂದು ವಿಜಯ್ ವೀಡಿಯೋ ಮೂಲಕ ಹೇಳಿದ್ದಾರೆ.
ಸಿಎಂ ಸ್ಟಾಲಿನ್ಗೆ ನೇರ ಎಚ್ಚರಿಕೆ
ನನ್ನನ್ನು ಟಾರ್ಗೆಟ್ ಮಾಡಿ, ಆದರೆ ಜನರನ್ನು ಟಾರ್ಗೆಟ್ ಮಾಡಬೇಡಿ” ಎಂದು ವಿಜಯ್ ಹೇಳಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಗಾಯಗೊಂಡವರನ್ನು ಹಾಗೂ ಅವರ ಕುಟುಂಬದವರನ್ನು ಶೀಘ್ರದಲ್ಲೇ ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ಘಟನೆಯ ನಂತರ, ಸ್ಥಳೀಯ ಅಧಿಕಾರಿಗಳು ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ಘಟನೆಯ ಕಾರಣಗಳನ್ನು ವಿಚಾರಣೆ ಮಾಡುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಸಾವನ್ನಪ್ಪಿದವರ ಕುಟುಂಬಗಳಿಗೆ ನಷ್ಟಪರಿಹಾರ ನೀಡುವ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ. ವಿಜಯ್ ಅವರ ಮತ್ತು ಸ್ಟಾಲಿನ್ ಅವರ ನಡುವಿನ ಈ ರಾಜಕೀಯ ಘರ್ಷಣೆ ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಈಗ ಎಲ್ಲರೂ ಗಮನಿಸಬೇಕಿದೆ.





