• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

2050ರ ಭಾರತ: ಜಾಗತಿಕ ಮಹಾಶಕ್ತಿ ಅಥವಾ ಅರಾಜಕತೆಯ ಬೀಡು..?

ಭಾರತದ ಇಂದಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯದ ವಿಶ್ಲೇಷಣೆ ಮಾಡುವ ಪ್ರಯತ್ನ..

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
August 4, 2025 - 5:39 pm
in Flash News, ದೇಶ, ವಿಶೇಷ
0 0
0
India 2050

ಭವಿಷ್ಯದ 2 ದ್ವಂದ್ವಗಳ ನಡುವೆ ಭಾರತ!

“ವಿಕಸಿತ ಭಾರತ 2047” ಎಂಬ ಪ್ರಧಾನಿ ಮೋದಿಯ ಹೊಸ ದೃಷ್ಟಿಕೋನವು ಭಾರತ ಮಹಾಶಕ್ತಿ ಆಗಬೇಕೆಂಬ ಆಕಾಂಕ್ಷೆಗಳನ್ನ ಪ್ರತಿಬಿಂಬಿಸುತ್ತಿದೆ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ ಡಿಎಗೆ ಗಮನಾರ್ಹವಾಗಿ ಕಡಿಮೆಯಾದ ಬಹುಮತ, ಕೃಷಿ ವಲಯದ ಸಂಕಟ ಮತ್ತು ನಿರುದ್ಯೋಗ ಸಮಸ್ಯೆಗಳು ಭವಿಷ್ಯದ ಈ ಧನಾತ್ಮಕ ದೃಷ್ಟಿಕೋನಕ್ಕೆ ಸವಾಲು ಹಾಕುತ್ತಿವೆ. 2050ರ ಭಾರತದ ಭವಿಷ್ಯವು ಇಂದಿನ ಗಟ್ಟಿ ನಿರ್ಧಾರಗಳ ಮೇಲೆ ನಿಂತಿದೆ. ಇಂದಿನ ನಿರ್ಧಾರಗಳೇ ಭವಿಷ್ಯದ ಭಾರತಕ್ಕೆ ಜಾಗತಿಕ ನಾಯಕತ್ವ ಕೊಡಬಹುದು ಅಥವಾ ಆಂತರಿಕ ಅಸ್ಥಿರತೆ ಸೃಷ್ಟಿ ಮಾಡಬಹುದು.

RelatedPosts

ವ್ಯಾಲೆಂಟೈನ್ಸ್ ಡೇ ದಿನದಂದೇ ಘೋರ ದುರಂತ: ಕಾರಿನೊಳಗೆ ಪ್ರೇಮಿಗಳ ಶವ ಪತ್ತೆ!

ಬಿಹಾರದಲ್ಲಿ ಆಘಾತಕಾರಿ ಘಟನೆ: ಲೇಡಿ ಡ್ಯಾನ್ಸರ್ ಬಾಯಿಗೆ ಬಲವಂತವಾಗಿ ನಾಣ್ಯ ತುರುಕಿದ ಕಿಡಿಗೇಡಿಗಳು

ಫೆ. 22ಕ್ಕೆ ಹಂಪಿಯಲ್ಲಿ ‘ಜೈ ಹನುಮಾನ್’ ಮುಹೂರ್ತ

ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ನಾಲ್ವರಿಗೆ ಗಂಭೀರ ಗಾಯ

ADVERTISEMENT
ADVERTISEMENT

ಪಾಸಿಟಿವ್ ಅಂಶಗಳೇನು? ಭಾರತ ಮಹಾಶಕ್ತಿ ಆಗುವ ಅವಕಾಶಗಳೇನಿವೆ?

ಆರ್ಥಿಕತೆ ಹೈ ಜಂಪ್: 2023-24ರಲ್ಲಿ 8.2% GDP ಬೆಳವಣಿಗೆಯನ್ನು ದಾಖಲಿಸಿದ ಭಾರತ, PwC ಮತ್ತು EY ಅಂದಾಜಿನಂತೆ 2050ರ ಹೊತ್ತಿಗೆ $30 ಟ್ರಿಲಿಯನ್ GDP ತಲುಪಬಹುದು. ಪ್ರತಿ 18 ತಿಂಗಳಿಗೊಮ್ಮೆ $1 ಟ್ರಿಲಿಯನ್ ಸೇರಿಕೊಳ್ಳುವ ಸಾಧ್ಯತೆ ಇದೆ.

ತಾಂತ್ರಿಕ ವಿಜಯ: UPI ಡಿಜಿಟಲ್ ಪಾವತಿ ವ್ಯವಸ್ಥೆ ಜಾಗತಿಕ ಮಾದರಿಯಾಗಿದೆ. 2030ರ ಕಾರ್ಬನ್ ತಟಸ್ಥ ಗುರಿ, ಹಸಿರು ಹೈಡ್ರೋಜನ್ ಯೋಜನೆಗಳು ಮತ್ತು 1 ಕೋಟಿ ಸೌರ ಛಾವಣಿಗಳ ಯೋಜನೆ (ಪ್ರಧಾನಿ ಸೂರ್ಯೋದಯ ಯೋಜನೆ) ಪರಿಸರ ನಾಯಕತ್ವಕ್ಕೆ ಅಡಿಗಲ್ಲು.

ಜನಸಂಖ್ಯಾ ಲಾಭ: 2050ರಲ್ಲಿ ಸರಾಸರಿ ವಯಸ್ಸು 38 ಆಗಿರುವ 1.65 ಶತಕೋಟಿ ಜನಸಂಖ್ಯೆ, ಅಮೆರಿಕ ಮತ್ತು ಚೀನಾ ಕಾರ್ಯಶೀಲ ಜನಸಂಖ್ಯೆಯನ್ನು ಒಟ್ಟಿಗೆ ಮೀರಿಸಬಹುದು.

ಭಾರತಕ್ಕೆ ಇರುವ ರಾಜಕೀಯ ಸವಾಲುಗಳೇನು?

ಕೇಂದ್ರೀಕೃತ ಅಧಿಕಾರ: 2024ರ ಚುನಾವಣೆಗಳಲ್ಲಿ NDA ಒಕ್ಕೂಟ 293 ಸೀಟುಗಳನ್ನು ಗೆದ್ದರೂ, BJP ಸ್ವತಂತ್ರ ಬಹುಮತ (240) ಕಳೆದುಕೊಂಡಿದೆ. ಇದು ಸಮಷ್ಟಿ ರಾಜಕಾರಣಕ್ಕೆ ಒತ್ತಡ ತಂದಿದೆ.

ಪ್ರಾದೇಶಿಕ ಅಸಮತೋಲನ: ಬಿಹಾರ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಬಡತನ ದರ 30% ಮೀರಿದೆ. ತಮಿಳುನಾಡು ಮತ್ತು ಗುಜರಾತ್ ನಡುವಿನ ಆರ್ಥಿಕ ವ್ಯತ್ಯಾಸ 5:1 ರಷ್ಟಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಒತ್ತಡಕ್ಕೆ ಕಾರಣ ಆಗುತ್ತದೆ.

ಧಾರ್ಮಿಕ ಧ್ರುವೀಕರಣ: ಸಿಎಎ, ಎನ್ ಆರ್ ಸಿ ಹೋರಾಟಗಳು, ಹಿಜಾಬ್ ನಿಷೇಧದಂಥ ನಿರ್ಧಾರಗಳು ಸಮಾಜದಲ್ಲಿ ವಿಭಜನೆ ಉಂಟು ಮಾಡಿವೆ.

ಆರ್ಥಿಕ-ಸಾಮಾಜಿಕ ಕುಸಿತದ ಭೀತಿ!

ಉದ್ಯೋಗ ಬಿಕ್ಕಟ್ಟು: 2024ರಲ್ಲಿ ಉನ್ನತ ಶಿಕ್ಷಿತ ಯುವಕರಲ್ಲಿ ನಿರುದ್ಯೋಗ 65.7 % ತಲುಪಿದೆ. ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕೆಲಸ ಮಾಡುವ ಶೇಕಡಾವಾರು ಪ್ರಮಾಣ 18.6% ಮಾತ್ರ (ILO) .

ಆರ್ಥಿಕ ಅಸಮಾನತೆ: ಶೇ.1 ಶ್ರೀಮಂತರು ರಾಷ್ಟ್ರದ ಸಂಪತ್ತಿನ 40% ಹಿಡಿದಿಟ್ಟಿದ್ದಾರೆ. ಮುಖೇಶ್ ಅಂಬಾನಿ ಮಗನ ಮದುವೆಗೆ ಖರ್ಚು ಮಾಡಿದ $150 ಮಿಲಿಯನ್ ಹಣವು ಈ ಅಂತರವನ್ನು ಎತ್ತಿ ತೋರಿಸುತ್ತದೆ.

ಉತ್ಪಾದನಾ ದೌರ್ಬಲ್ಯತೆ: GDPಯಲ್ಲಿ ಉತ್ಪಾದನೆಯ ಪಾಲು 17.7 % ರಿಂದ 13% ಕ್ಕೆ ಕುಸಿದಿದೆ. “ಮೇಕ್ ಇನ್ ಇಂಡಿಯಾ” ಯೋಜನೆ ಫೋನ್ ತಯಾರಿಕೆಯಲ್ಲಿ ಯಶಸ್ವಿಯಾಗಿದ್ದರೂ, ಒಟ್ಟಾರೆ ವಲಯವು ಹಿಂದುಳಿದಿದೆ.

ಪರಿಸರ ವಿಪತ್ತುಗಳು: ನಿಗೂಢ ಬೆದರಿಕೆ..!

ನೀರಿನ ಸಂಕಟ: ವಿಶ್ವದಲ್ಲಿ ನೀರಿನ ಕೊರತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. 2050ರ ಹೊತ್ತಿಗೆ 951 ದಶಲಕ್ಷ ನಗರ ಜನಸಂಖ್ಯೆ ಜಲ ಸಂಕಟವನ್ನು ಎದುರಿಸಬಹುದು!

ಹವಾಮಾನ ವೈಪರಿತ್ಯದ ಪರಿಣಾಮಗಳು: 2070ರ ಹೊತ್ತಿಗೆ ಹವಾಮಾನ ವೈಪರಿತ್ಯದಿಂದ ವಾರ್ಷಿಕ $30 ಬಿಲಿಯನ್ ಹಾನಿ ಆಗಬಹುದು. ಕಾರ್ಬನ್ ನಿರಪೇಕ್ಷತೆಗೆ $2.4 ಟ್ರಿಲಿಯನ್ ಹೂಡಿಕೆ ಬೇಕಾಗುತ್ತದೆ.

ಅರಣ್ಯನಾಶ: ವಿಶ್ವದಲ್ಲಿ 2ನೇ ಅತಿ ಹೆಚ್ಚು ಅರಣ್ಯ ನಾಶ ಭಾರತದಲ್ಲಿ ಆಗುತ್ತಿದೆ. 2023ರಲ್ಲಿ ಉತ್ತರಾಖಂಡ್ ಮುನ್ಸೀರಿ ಬೆಂಕಿ ಪ್ರಕರಣ ಪರಿಸರ ನಿರ್ಲಕ್ಷ್ಯವನ್ನು ಜಗಜ್ಜಾಹೀರು ಮಾಡಿದೆ.

ಜಾಗತಿಕ ಸಂಬಂಧಗಳಲ್ಲಿ ಅವಕಾಶಗಳೂ ಉಂಟು.. ಅಡೆತಡೆಗಳೂ ಇವೆ..

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವದ ಬೇಡಿಕೆ ಇಟ್ಟಿದೆ. ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದಗಳು ಮತ್ತು BRICS ಮೂಲಕ ಭಾರತ ಜಾಗತಿಕ ಪ್ರಭಾವವನ್ನು ವಿಸ್ತರಿಸುತ್ತಿದೆ.

ಭಾರತದ ಉಜ್ವಲ ಭವಿಷ್ಯಕ್ಕೆ ಈ ಬದಲಾವಣೆಗಳು ಆಗಲೇ ಬೇಕು!

ಶಿಕ್ಷಣ – ಆರೋಗ್ಯ ಹೂಡಿಕೆ: ಶಿಕ್ಷಣಕ್ಕೆ GDPಯ 6% ಮತ್ತು ಆರೋಗ್ಯಕ್ಕೆ 3% ಹೂಡಿಕೆ ಮಾಡಬೇಕು. ಒಂದು ಸಮೀಕ್ಷೆ ಪ್ರಕಾರ ಪ್ರಸ್ತುತ ಭಾರತದ 14 ರಿಂದ 18 ವರ್ಷದ 25% ವಿದ್ಯಾರ್ಥಿಗಳು ಸರಳ ಪಠ್ಯವನ್ನು ಓದಲು ಕೂಡಾ ಅಸಮರ್ಥರಾಗಿದ್ದಾರಂತೆ..!

ಮಹಿಳಾ ಸಬಲೀಕರಣ: ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು 24% ರಿಂದ 50% ಗೆ ಏರಿಸುವ ಗುರಿ ಹಾಕಿಕೊಳ್ಳಬೇಕು. ಕೇರಳ ಮಾದರಿಯಲ್ಲಿ ಮಹಿಳಾ ಸಮುದಾಯ ಸಂಘಟನೆಗಳು ಇದಕ್ಕೆ ನಿದರ್ಶನ ಆಗಬಲ್ಲವು.

ಸ್ಥಳೀಯ ಸಾಮರ್ಥ್ಯ: ತಮಿಳುನಾಡಿನ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, ಗುಜರಾತ್ ಉತ್ಪಾದನಾ ಹಬ್‌ ಗಳು ಮತ್ತು ಕೇರಳದ ಸಾಮಾಜಿಕ ಬಂಡವಾಳ ಮಾದರಿಗಳನ್ನು ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸಬೇಕು.

ಏಳುಬೀಳಿನ ಹಾದಿ.. ನಮ್ಮ ಆಯ್ಕೆ ಯಾವುದು?

“ಜನಸಂಖ್ಯೆಯ ಲಾಭವನ್ನು ಜ್ಞಾನದ ಲಾಭವಾಗಿ ಪರಿವರ್ತಿಸುವುದೇ ನಮ್ಮ ಯಶಸ್ಸಿನ ರಹಸ್ಯ”

ಭಾರತದ 2050ರ ಭವಿಷ್ಯವು ಇಂದಿನ ನಿರ್ಧಾರಗಳ ಮೇಲೆ ನಿಂತಿದೆ: 

ಸುಧಾರಣೆಗಳು ಯಶಸ್ವಿಯಾದಲ್ಲಿ: ಜಾಗತಿಕ ತಯಾರಿಕಾ ಕೇಂದ್ರ, ಹಸಿರು ಶಕ್ತಿಯ ನಾಯಕ ಮತ್ತು ಡಿಜಿಟಲ್ ಅರ್ಥ ವ್ಯವಸ್ಥೆಯ ಆದ್ಯತೆ ಭಾರತವನ್ನು ಮಹಾಶಕ್ತಿಯಾಗಿ ಮಾಡಬಹುದು.

ಸುಧಾರಣೆಗಳು ವಿಫಲವಾದಲ್ಲಿ: ಉದ್ಯೋಗ ರಹಿತ ಬೆಳವಣಿಗೆ, ಪರಿಸರ ದುರ್ವ್ಯವಸ್ಥೆ ಮತ್ತು ಸಾಮಾಜಿಕ ಒಡಕುಗಳು ಅರಾಜಕತೆಗೆ ದಾರಿ ಮಾಡಿಕೊಡಬಹುದು.

ಮುಂದಿನ 20 ವರ್ಷಗಳಲ್ಲಿ ಭಾರತದ ಭವಿಷ್ಯವೇನು? ಸೂಪರ್ ಪವರ್ ಅಥವಾ ಅಂತರ್ಯುದ್ಧ?

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 14T231542.084

ವ್ಯಾಲೆಂಟೈನ್ಸ್ ಡೇ ದಿನದಂದೇ ಘೋರ ದುರಂತ: ಕಾರಿನೊಳಗೆ ಪ್ರೇಮಿಗಳ ಶವ ಪತ್ತೆ!

by ಶ್ರೀದೇವಿ ಬಿ. ವೈ
February 14, 2026 - 11:16 pm
0

BeFunky collage 2026 02 14T224701.734

ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭಯಾನಕ ವಾಯ್ಸ್ ಮೆಸೇಜ್, ಭದ್ರತೆ ಹೆಚ್ಚಳ

by ಶ್ರೀದೇವಿ ಬಿ. ವೈ
February 14, 2026 - 10:48 pm
0

BeFunky collage 2026 02 14T221332.929

ಬಿಹಾರದಲ್ಲಿ ಆಘಾತಕಾರಿ ಘಟನೆ: ಲೇಡಿ ಡ್ಯಾನ್ಸರ್ ಬಾಯಿಗೆ ಬಲವಂತವಾಗಿ ನಾಣ್ಯ ತುರುಕಿದ ಕಿಡಿಗೇಡಿಗಳು

by ಶ್ರೀದೇವಿ ಬಿ. ವೈ
February 14, 2026 - 10:15 pm
0

BeFunky collage 2026 02 14T214811.911

ಮಹಾ ಶಿವರಾತ್ರಿ ದಿನ ಸರಳವಾಗಿ ಮನೆಯಲ್ಲಿ ಶಿವನ ಪೂಜೆ ಮಾಡುವ ವಿಧಾನ

by ಶ್ರೀದೇವಿ ಬಿ. ವೈ
February 14, 2026 - 9:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 14T143023.970
    ಫೆ. 22ಕ್ಕೆ ಹಂಪಿಯಲ್ಲಿ ‘ಜೈ ಹನುಮಾನ್’ ಮುಹೂರ್ತ
    February 14, 2026 | 0
  • Untitled design 2026 02 14T135422.963
    ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ನಾಲ್ವರಿಗೆ ಗಂಭೀರ ಗಾಯ
    February 14, 2026 | 0
  • Untitled design 2026 02 14T130841.007
    ಮದುವೆಗೆ ಹೋಗಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ
    February 14, 2026 | 0
  • Untitled design 2026 02 14T130006.930
    ಹಾಡಹಗಲೇ ಮನೆಗೆ ನುಗ್ಗಿದ ಕಳ್ಳನಿಗೆ ಬಿತ್ತು ಗೂಸಾ: ಅರೆಬೆತ್ತಲೆಗೊಳಿಸಿ ಠಾಣೆಗೆ ಒಪ್ಪಿಸಿದ ಗ್ರಾಮಸ್ಥರು
    February 14, 2026 | 0
  • Untitled design 2026 02 14T123329.015
    “ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ”: ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
    February 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version