ರಾಜ್ ಬಿ ಶೆಟ್ಟಿ.. ಕನ್ನಡ ಚಿತ್ರರಂಗ ಕಂಡ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇವರ ನಟನೆಗೆ ಪರಭಾಷಿಗರು ಕೂಡ ಫಿದಾ ಆಗಿದ್ದಾರೆ. ಮಮ್ಮುಟ್ಟಿ ಟರ್ಬೋ ಬಳಿಕ ಟಾಲಿವುಡ್ನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆ ನಟಿಸೋ ಅವಕಾಶ ಬಂದಿತ್ತು. ಆದ್ರೆ ಅದನ್ನ ರಿಜೆಕ್ಟ್ ಮಾಡಿದ್ದಾರೆ ಟೋಬಿ ಸ್ಟಾರ್. ಅರೇ ಯಾಕೆ ಅಂತೀರಾ..? ಈ ಸ್ಟೋರಿ ನೋಡಿ.
- ರಾಮ್ ಚರಣ್ ‘ಪೆದ್ದಿ’ ರಿಜೆಕ್ಟ್ ಮಾಡಿದ್ಯಾಕೆ ರಾಜ್ ಶೆಟ್ಟಿ ?
- ಮಮ್ಮುಟ್ಟಿ ಟರ್ಬೋ ಬಳಿಕ ಟೋಬಿ ಸ್ಟಾರ್ಗೆ ಡಿಮ್ಯಾಂಡ್ !
- 100 ದಿನಗಳ ಕಾಲ್ ಶೀಟ್ ಕೇಳಿದ್ದ ಡೈರೆಕ್ಟರ್ ಬುಚ್ಚಿಬಾಬು
- ಶೆಟ್ರು ಕೇಳಿದಷ್ಟು ಕೋಟಿ ಸಂಭಾವನೆಗೆ ಸಿದ್ದವಿದ್ದ ಟೀಂ ಪೆದ್ದಿ
ತ್ರಿಬಲ್ ಆರ್ ಸಿನಿಮಾದ ಬಳಿಕ ರಾಮ್ಚರಣ್ ತೇಜಾ ಗ್ಲೋಬಲ್ ಸ್ಟಾರ್ ಪಟ್ಟ ಪಡೆದರು. ಸದ್ಯ ಪೆದ್ದಿ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿರೋ ಚಿರು ತನಯ, ಸಿಂಗಲ್ ಟೀಸರ್ನಿಂದಲೇ ಧೂಳೆಬ್ಬಿಸಿದ್ದಾರೆ. ಯೆಸ್.. ಮೂಗಿಗೆ ಒಂದು ದೊಡ್ಡ ಮೂಗುನತ್ತು ಧರಿಸಿ, ಗಡ್ಡ ಬಿಟ್ಕೊಂಡು, ಪೆದ್ದನಂತೆ ಕ್ರಿಕೆಟ್ ಬ್ಯಾಟ್ ಹಿಡಿದು ಅಂಗಳಕ್ಕೆ ಇಳಿಯೋ ಪವರ್ಫುಲ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಉಪ್ಪೆನ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಬುಚ್ಚಿಬಾಬು ನಿರ್ದೇಶನದ ಪೆದ್ದಿ ಸಿನಿಮಾ, ಹತ್ತು ಹಲವು ಕಾರಣಗಳಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗ್ಲೇ ಸಿನಿಮಾದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡ ಬಣ್ಣ ಹಚ್ಚಿದ್ದು, ಮತ್ತೊಬ್ಬ ಕನ್ನಡದ ಸ್ಟಾರ್ ಈ ಸಿನಿಮಾದಲ್ಲಿ ನಟಿಸೋಕೆ ಒಲ್ಲೆ ಅಂತ ಆಫರ್ನ ರಿಜೆಕ್ಟ್ ಮಾಡಿದ್ದಾರೆ.
ಯೆಸ್.. ಚರಣ್ ಪೆದ್ದಿ ಚಿತ್ರದಲ್ಲಿ ನಟಿಸೋ ಆಫರ್ ರಿಜೆಕ್ಟ್ ಮಾಡಿದ್ದು ಬೇರಾರೂ ಅಲ್ಲ, ನಮ್ಮ ಕನ್ನಡದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ. ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಜೊತೆ ಟರ್ಬೋ ಚಿತ್ರದಲ್ಲಿ ಖಖಡ್ ಖಳನಾಯಕನಾಗಿ ನಟಿಸಿದ್ದ ರಾಜ್, ಅದಾದ ಬಳಿಕ ಪರಭಾಷಿಗರ ಕಣ್ಣು ಕುಕ್ಕುವಂತೆ ಮಾಡಿದ್ರು. ಹಾಗಾಗಿಯೇ ಪೆದ್ದಿ ಚಿತ್ರಕ್ಕಾಗಿ ಡೈರೆಕ್ಟರ್ ಬುಚ್ಚಿಬಾಬು ಬಿಗ್ ಆಫರ್ ನೀಡಿದ್ರು. ಸುಮಾರು 100 ದಿನಗಳ ಕಾಲ ಕಾಲ್ಶೀಟ್ ಕೇಳಿದ್ದ ಡೈರೆಕ್ಟರ್, ರಾಜ್ ಬಿ ಶೆಟ್ಟಿ ಕೇಳಿದಷ್ಟು ರೆಮ್ಯುನರೇಷನ್ ಕೂಡ ಕೊಡೋಕೆ ರೆಡಿ ಇದ್ದರು.
ಆ ಆಫರ್ನ ನಯವಾಗಿಯೇ ತಿರಸ್ಕರಿಸಿರೋ ಶೆಟ್ರು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅಂತ ಕನ್ನಡದಲ್ಲೇ ಸಿನಿಮಾ ಹಸಿವಿರೋ ಕಲಾವಿದರಿಗೆ ಅವಕಾಶ ನೀಡಿ, ತಮ್ಮದೇ ಬ್ಯಾನರ್ನಡಿ ಸಿನಿಮಾಗಳನ್ನ ಮಾಡ್ತಿದ್ದಾರೆ. ಸದ್ಯ ಸು ಫ್ರಮ್ ಸೋ ಇದೇ ಜುಲೈ 25ಕ್ಕೆ ತೆರೆಗೆ ಬರ್ತಿದ್ದು, ಅದಕ್ಕೂ ಮುನ್ನ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ಪ್ರೇಕ್ಷಕರಿಂದ ಸೂಪರ್ ಶೆಟ್ರೇ ಅನಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲೂ ಸು ಫ್ರಮ್ ಸೋ ಪ್ರೀಮಿಯರ್ ಮಾಡೋಕೆ ಮುಂದಾಗಿದ್ದಾರೆ ಶೆಟ್ರು.
ಇಷ್ಟಕ್ಕೂ ಪೆದ್ದಿ ಆಫರ್ ರಿಜೆಕ್ಟ್ ಮಾಡಿದ್ಯಾಕೆ ಅಂತ ನೋಡೋದಾದ್ರೆ, ಶೆಟ್ರಿಗೆ ಬೇಕಿರೋದು ದುಡ್ಡು ಹಾಗೂ ಬಿಗ್ ಸ್ಟಾರ್ಗಳ ಕಾಂಬಿನೇಷನ್ ಅಲ್ಲ. ಅದಕ್ಕಿಂತ ಮಿಗಿಲಾಗಿ ಕಥೆ, ತೂಕವಾದ ಪಾತ್ರ. ಹಾಗಾಗಿಯೇ ಪೆದ್ದಿ ಚಿತ್ರದ ಪಾತ್ರವನ್ನು ರಿಜೆಕ್ಟ್ ಮಾಡಿದ್ರಂತೆ. ಅಂದಹಾಗೆ 2017ರ ಒಂದು ಮೊಟ್ಟೆಯ ಕಥೆ ಚಿತ್ರದಿಂದ ಗರುಡ ಗಮನ ವೃಷಭ ವಾಹನ, ಟೋಬಿ, ಸ್ವಾತಿ ಮುತ್ತಿನ ಮಳೆ ಹನಿಯೇ, ರೂಪಾಂತರ ಚಿತ್ರಗಳಿಗಾಗಿ ಅವರು ಟ್ರಾನ್ಸ್ಫಾರ್ಮ್ ಆದ ಬಗೆ ನಿಜಕ್ಕೂ ಹುಬ್ಬೇರಿಸುವಂತಿದೆ.
ಈ ಎಲ್ಲಾ ಕಾರಣಗಳಿಂದ ರಾಜ್ ಬಿ ಶೆಟ್ಟಿ ಪೆದ್ದಿ ಸಿನಿಮಾದ ಬಿಗ್ ಆಫರ್ನ ಬೇಡ ಅಂದಿದ್ದಾರೆ. ಒಬ್ಬ ಕಲಾವಿದನಲ್ಲಿ ಕಲೆಯ ಹಸಿವಿರಬೇಜಕೇ ಹೊರತು. ಅದ್ರಿಂದ ಹಣ ಮಾಡುವ ಧನದಾಸೆ ಅಲ್ಲ. ಈ ಮೂಲಕ ತಾನೊಬ್ಬ ಪ್ರಾಮಾಣಿಕ ಕಲಾವಿದ. ಹಣಕ್ಕಿಂತ ಕಲೆಯೇ ಮುಖ್ಯ ಅನ್ನೋದನ್ನ ಪ್ರೂವ್ ಮಾಡಿದ್ದಾರೆ ರಾಜ್ ಬಿ ಶೆಟ್ಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





