ಇಂದು, ಜೂನ್ 3, 2025ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ 2025ರ ಫೈನಲ್ ಪಂದ್ಯ ನಡೆಯಲಿದೆ. 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆರ್ಸಿಬಿ ಫೈನಲ್ ತಲುಪಿರುವ ಈ ಕ್ಷಣವು ಕರ್ನಾಟಕದ ಕೋಟಿ ಕೋಟಿ ಅಭಿಮಾನಿಗಳಿಗೆ ಐತಿಹಾಸಿಕವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರ್ಸಿಬಿ ಜೆರ್ಸಿ ಧರಿಸಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಡಿ.ಕೆ ಶಿವಕುಮಾರ್ರ ಭಾವನಾತ್ಮಕ ಸಂದೇಶ
ಆರ್ಸಿಬಿ ಜೆರ್ಸಿ ಧರಿಸಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, “ಕಳೆದ 18 ವರ್ಷಗಳಿಂದ ಆರ್ಸಿಬಿ ಟ್ರೋಫಿಗಾಗಿ ಕಾಯುತ್ತಿದ್ದೇವೆ. ಈ ಬಾರಿ ಆರ್ಸಿಬಿ ಫೈನಲ್ ತಲುಪಿರುವುದು ಕರ್ನಾಟಕದ ಜನರಿಗೆ ಹೆಮ್ಮೆಯ ಕ್ಷಣ. ಆರ್ಸಿಬಿ ಹುಡುಗರೇ, ಟ್ರೋಫಿ ಗೆದ್ದು ತವರಿಗೆ ಬನ್ನಿ. ಇಡೀ ರಾಜ್ಯವು ನಿಮ್ಮ ಬೆಂಬಲಕ್ಕೆ ನಿಂತಿದೆ. ಈ ಐತಿಹಾಸಿಕ ಕ್ಷಣವನ್ನು ಸಾಧಿಸಿ ತೋರಿಸಿ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
Ee Sala Cup Namde! ♥️🏆
18 years of grit.
Every prayer, every cheer, every heartbreak – it all leads to today.
This is more than a match.
Our moment. Our Cup.
Wishing @RCBTweets the very best – Karnataka is with you!#PlayBold #ನಮ್ಮRCB #IPL2025 pic.twitter.com/cTmRhjgjts— DK Shivakumar (@DKShivakumar) June 3, 2025
ಡಿ.ಕೆ ಶಿವಕುಮಾರ್ ತಮ್ಮ ಸಂದೇಶದಲ್ಲಿ ಆರ್ಸಿಬಿಯ ಜೆರ್ಸಿಯನ್ನು ಕೇವಲ ಬಟ್ಟೆಯಲ್ಲ, ಕೋಟಿ ಕೋಟಿ ಕನಸುಗಳ ಚಿಹ್ನೆ ಎಂದು ಕರೆದಿದ್ದಾರೆ. “ಆರ್ಸಿಬಿಯ ಜೆರ್ಸಿಯ ಮೇಲೆ ಮಿಲಿಯನ್ಗಟ್ಟಲೆ ಕನಸುಗಳಿವೆ. ಕರ್ನಾಟಕದ ಜನರು, ಸರ್ಕಾರ ಮತ್ತು ನಾನು ನಿಮ್ಮೊಂದಿಗೆ ಇದ್ದೇವೆ. ಟ್ರೋಫಿಯೊಂದಿಗೆ ತವರಿಗೆ ಮರಳಿ, ಎಲ್ಲರಿಗೂ ಆಲ್ ದಿ ಬೆಸ್ಟ್” ಎಂದು ಅವರು ಶುಭ ಹಾರೈಸಿದ್ದಾರೆ.
18 ವರ್ಷಗಳ ಕಪ್ ಕೊರಗಿಗೆ ಕೊನೆ?
ಆರ್ಸಿಬಿಯ 18 ವರ್ಷಗಳ ಟ್ರೋಫಿ ಕನಸು ಈಗ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಅಹ್ಮದಾಬಾದ್ನ ನಮೋ ಅಂಗಳದಲ್ಲಿ ನಡೆಯುವ ಈ ಫೈನಲ್ ಫೈಟ್ನಲ್ಲಿ ಆರ್ಸಿಬಿ ಗೆಲುವಿನ ಇಜ್ಜೆ ಇಟ್ಟರೆ, ಅಸಂಖ್ಯ ಅಭಿಮಾನಿಗಳ ಕನಸು ಈಡೇರಲಿದೆ. ಈ ಸೀಸನ್ನ ಆರ್ಸಿಬಿಯು ಹಿಂದಿನ 18 ಸೀಸನ್ಗಳಿಗಿಂತ ಭಿನ್ನವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ತಂಡದ ಆಟಗಾರರ ಛಲ ಮತ್ತು ಸಾಮರ್ಥ್ಯವು ಈ ಬಾರಿ ಟ್ರೋಫಿ ಗೆಲುವು ಪಕ್ಕಾ ಎಂದು ಭರವಸೆ ಮೂಡಿಸಿದೆ.