ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ ಮತ್ತಷ್ಟು ಪವರ್ ಫುಲ್ ಆಗಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಅನ್ನೋದು ಪಕ್ಕಾ ಆಗಿದೆ. ಇದರಿಂದ ರಾಜ್ಯ ಬಿಜೆಪಿಗೆ ಬಿ.ವೈ. ವಿಜಯೇಂದ್ರ ಅವರೇ ಬಾಸ್ ಅನ್ನೋದು ಸಾಬೀತಾಗಿದೆ.
ಯತ್ನಾಳ್ ಉಚ್ಛಾಟನೆ.. ಇನ್ಮುಂದೆ ರೆಬಲ್ಸ್ ಗಪ್ ಚುಪ್.!
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಯಿಂದಾಗಿ ಇನ್ಮುಂದೆ ರೆಬಲ್ಸ್ ಗಪ್ ಚುಪ್ ಆಗೋದು ಕನ್ಫರ್ಮ್. ಇದೇ ಕ್ಷಣಕ್ಕಾಗಿ ಬಿ.ವೈ. ವಿಜಯೇಂದ್ರ ಅಂಡ್ ಟೀಂ ಕಾಯ್ತಾ ಇತ್ತು. ಯಾಕಂದ್ರೆ, ಇನ್ಮುಂದೆ ವಿಜಯೇಂದ್ರ ವಿರುದ್ಧ ಯಾರಾದ್ರೂ ಮಾತಾಡಿದ್ರೆ ಹುಷಾರ್ ಎಂಬ ಎಚ್ಚರಿಕೆ ಸಿಕ್ಕಿದೆ. ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಸ್ಟ್ರಾಂಗ್ ಆಗೋಕೆ ಇದು ಅನುಕೂಲ ಆಗಲಿದೆ ಅನ್ನೋದು ವಿಜಯೇಂದ್ರ ಬೆಂಬಲಿಗರ ಮಾತು.
ಇದರ ಜೊತೆ ಬಿಜೆಪಿಯಲ್ಲಿ ಇದ್ದ ಗೊಂದಲಗಳಿಗೆ ಇನ್ಮುಂದೆ ಫುಲ್ ಸ್ಟಾಪ್ ಬೀಳಲಿದೆ. ರಾಜ್ಯ ಬಿಜೆಪಿಗೆ ಯಾರು ಲೀಡರ್.? ಬಿಜೆಪಿ ರಾಜ್ಯಾಧ್ಯಕ್ಷ ಚೇಂಜ್ ಆಗ್ತಾರಾ? ಅನ್ನೋ ಪ್ರಶ್ನೆಗಳಿಗೆ ಬಿಜೆಪಿ ಹೈಕಮಾಂಡ್ ಉತ್ತರ ಕೊಟ್ಟಿದೆ. ಬಿ.ವೈ. ವಿಜಯೇಂದ್ರ ವಿರುದ್ಧ ಯಾರು ಮಾತಾಡಂಗಿಲ್ಲ.. ವಿಜಯೇಂದ್ರ ವಿರುದ್ಧ ಯಾರೂ ಇನ್ಮುಂದೆ ಕೆಮ್ಮಂಗಿಲ್ಲ..! ಅಂತ ಬಿಜೆಪಿ ಸೂಚನೆ ಕೊಟ್ಟಿದ್ದು, ರಾಜ್ಯ ಬಿಜೆಪಿಗೆ ವಿಜಯೇಂದ್ರ ಅವರೇ ಬಾಸ್.. ಪ್ರಶ್ನಾತೀತ ನಾಯಕ ಅಂತ ಹೇಳಿದೆ.