ಆತ ಮಾಗಡಿ ಶಾಸಕ ಬಾಲಕೃಷ್ಣ ಆಪ್ತವಲಯದಲ್ಲಿ ಗುರ್ತಿಸಿಕೊಂಡಿದವನು. ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ, ನಿನ್ನೆರಾತ್ರಿ ಸ್ನೇಹಿತರು ಕರದ್ರೂ ಅಂತಾ ಗನ್ ಮ್ಯಾನ್ ಜೊತೆಗೆ ಸೇರಿ ಪಾರ್ಟಿ ಮಾಡ್ಬೇಕು ಅಂತಾ ಕುದೂರು ಬಿಟ್ಟು ಸೋಲದೇವನಹಳ್ಳಿಗೆ ಬಂದಿದ್ದ. ಇನ್ನೇನು ಪಾರ್ಟಿ ಮುಗಿತು ಮನೆಗೆ ಹೋಗೊಣ ಅನ್ನುವಷ್ಟರಲ್ಲಿ ಆತ ಹೆಣವಾಗಿ ಹೋಗಿದ್ದಾನೆ.
ಹೆಸರುಘಟ್ಟದ ಜಿಜಾಡಿಯ ಬಿಜಿಎಸ್ ಲೇಔಟ್ನಲ್ಲಿ ಹತ್ಯೆ.ನೂರು ಮೀಟರ್ ಓಡಿಬಂದ್ರು ಉಳಿಯಲಿಲ್ಲ ಪ್ರಾಣ.ಆಟೋದಲ್ಲಿ ಕೊನೆಯುಸಿರು..!
ನಿನ್ನೆ ರಾತ್ರಿ ಸುರಿದ ಜೋರು ಮಳೆಗೆ ಕೊಚ್ಚಿಹೋಗಿ ಉಳಿದಿರುವ ರಕ್ತದ ಕಲೆಗಳು, ಸುತ್ತಲೂ ಇರುವ ಅಡಿಕೆ ಮರಗಳು ,ಅಲ್ಲೊಂದು,ಇಲೊಂದು ಇರುವ ಮನೆಗಳು, ನಿನ್ನೆ ರಾತ್ರಿ ಇದೆ ನಿರ್ಮಾಣ ಹಂತದ ಬಡಾವಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊನೆಯ ಕ್ಷಣಕ್ಕೆ ಸಾಕ್ಷಿಯಾಗಿವೆ.
ಈ ಲೋಕನಾಥ್ ಸಿಂಗ್ ಈತನ ವಯಸ್ಸು ಜಸ್ಟ್ ಮೂವತ್ತಮೂರು, ಮಾಗಡಿ ಶಾಸಕನ ಆಪ್ತವಲಯದಲ್ಲಿ ಗುರುತಿಸಿಕೊಂಡಿದು. ಅಷ್ಠೆಲ್ಲದೇ ರಿಯಲ್ ಎಸ್ಟೇಟ್ ಉದ್ಯಮಿ ಕೂಡಾ ಆಗಿದ್ದ. ನಿನ್ನೆ ಸಂಜೆ ತನ್ನ ಫಾರ್ಚೂನಾರ್ ಕಾರಿನಲ್ಲಿ ಗನ್ ಮ್ಯಾನ್ ಹಾಗೂ ಸ್ನೇಹಿತರ ಜೊತೆ ಹೆಸರುಘಟ್ಟ ಸಮೀಪದ. ಬಿಜಾಡಿಯ ಬಿಜಿಎಸ್ ಲೇಔಟ್ಗೆ ಬಂದಿದ್ದಾನೆ. ಬಂದವರೆ ಎಣ್ಣೆ ಪಾರ್ಟಿ ಶುರುಮಾಡಿದ್ದಾರೆ.ಕಿಕ್ ಏರುತ್ತಿದ್ದ ಹಾಗೇ ಸಣ್ಣದಾಗಿ ಕಿರಿಕ್ ಶುರುವಾಗಿದೆ ನೋಡ ನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ರಕ್ತ ಸುರಿಯುತ್ತಿದ್ದರು ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಅಡಿಕೆ ತೋಟ ಇರುವ ಮನೆಯ ಕಡೆ ಓಡಿ ಬಂದಿದ್ದಾನೆ.ಆದರೂ ಬಿಡದೆ ಹಿಂಬಾಲಿಸಿಕೊಂಡು ಬಂದು ಹಲ್ಲೆ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಆಟೋ ಒಳಗಡೆ ಕುತ್ಕೊಂಡಿದ್ದಾನೆ.. ಆದ್ರೂ ಹಂತಕರು ಬಿಡದೆ ಲೋಕನಾಥ್ ಮೇಲೆ ಮಚ್ಚು ಬೀಸಿದ್ದಾರೆ , ಅಡಿಕೆ ತೋಟದಲ್ಲಿದ್ದವರು ಬರೋವಷ್ಟ್ರಲ್ಲಿಯೇ ಮೃತಪಟ್ಟಿದ್ದಾನೆ.
ಅಲ್ಲೇ ಇದ್ದ ಸ್ಥಳೀಯರು ತಕ್ಷಣ 112 ಗೆ ಕರೆ ಮಾಡಿದ್ದಾರೆ. ಪೋಲಿಸರು ಸ್ಥಳಕ್ಕೆ ಬರುವಷ್ಟರಲ್ಲಿ ಹಂತಕರು ಎಸ್ಕೇಪ್ ಆಗಿದ್ದಾರೆ. ಇನ್ನೂ ಜೊತೆಯಲ್ಲಿದ್ದ ಗನ್ ಮ್ಯಾನ್ ಕೂಡ ನಾಪತ್ತೆಯಾಗಿದ್ದು ಹಲವು ಅನುಮಾನಗಳು ಮೂಡುತ್ತಿವೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು ,ಸದ್ಯ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.