ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯನ್ನು ಗುಂಪೊಂದು ಮಸೀದಿಯೊಂದರ ಬಳಿ ಕಟ್ಟಿಹಾಕಿ, ದೊಣ್ಣೆ ಮತ್ತು ಪೈಪ್ಗಳಿಂದ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ವಾರ ನಡೆದ ಈ ಘಟನೆಯ ವೀಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಂತ್ರಸ್ತೆ ಶಬೀನಾ ಬಾನು ಅವರು ಏಪ್ರಿಲ್ 7 ರಂದು ದಾವಣಗೆರೆಯ ತಮ್ಮ ಮನೆಯಲ್ಲಿದ್ದಾಗ, ಆಕೆಯ ಸಂಬಂಧಿ ನಸ್ರೀನ್ ಮತ್ತು ಆಕೆಯ ಪತಿ ಫಯಾಜ್ ಭೇಟಿಯಾಗಿದ್ದರು. ನಂತರ ಮೂವರು ಬುಕ್ಕಾಂಬುದಿಯ ಬೆಟ್ಟಕ್ಕೆ ಸಣ್ಣ ವಿಹಾರಕ್ಕೆ ತೆರಳಿದ್ದರು ಎಂದು ವರದಿಯಾಗಿದೆ. ಸಂಜೆಯ ವೇಳೆಗೆ ನಸ್ರೀನ್ ಮತ್ತು ಫಯಾಜ್ ಮತ್ತೆ ಶಬೀನಾ ಅವರ ಮನೆಗೆ ಬಂದಿದ್ದರು.
“Is @INCKarnataka @siddaramaiah Running Karnataka or Kabul? Lawless Mob Assaults Woman Over Domestic Dispute”
A shocking and deeply disturbing incident from Davanagere, Karnataka, has once again exposed the fragile state of law and order under leadership of @siddaramaiah… pic.twitter.com/NaJxqTAFcG
— Karnataka Portfolio (@karnatakaportf) April 15, 2025
ಶಬೀನಾ ಅವರ ಪತಿ ಜಮೀಲ್ ಅಹ್ಮದ್ ಮನೆಗೆ ಬಂದಾಗ, ತನ್ನ ಹೆಂಡತಿಯ ಸಂಬಂಧಿಕರನ್ನು ಮನೆಯಲ್ಲಿ ಕಂಡು ಕೋಪಗೊಂಡಿದ್ದಾರೆ. ತಕ್ಷಣವೇ ಅವರು ಬೆಂಗಳೂರಿನ ತಾವರೆಕೆರೆಯ ಜಾಮಾ ಮಸೀದಿಗೆ ತೆರಳಿ, ತಮ್ಮ ಪತ್ನಿ ಶಬೀನಾ ಮತ್ತು ಆಕೆಯ ಇಬ್ಬರು ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದಾರೆ. ಜಮೀಲ್ ಅಹ್ಮದ್ ತನ್ನ ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
Every Sharia zone is an Islamic state and Baba’s holy book has zero power.
👇 Bengaluru pic.twitter.com/nuVufSVlJD
— भारत पुनरुत्थान – श्रीराम श्रीकृष्ण #शिवशक्ती (@punarutthana) April 15, 2025
ದೂರಿನ ಹಿನ್ನೆಲೆಯಲ್ಲಿ ಶಬೀನಾ ಅವರನ್ನು ಮಸೀದಿಯ ಬಳಿ ಕರೆಸಿ, ಕಟ್ಟಿಹಾಕಿ, ದೊಣ್ಣೆ ಮತ್ತು ಪೈಪ್ಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ನಿಯಾಜ್ (32), ಮೊಹಮ್ಮದ್ ಗೌಸ್ಪೀರ್ (45), ಚಾಂದ್ ಬಾಷಾ (35), ದಸ್ತಗೀರ್ (24), ರಸೂಲ್ ಟಿ.ಆರ್ (42) ಮತ್ತು ಇನಾಯತ್ ಉಲ್ಲಾ (51) ಎಂದು ಗುರುತಿಸಲಾಗಿದೆ. ವೀಡಿಯೊ ವೈರಲ್ ಆದ ನಂತರ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಾಲಿಬಾನ್ ಶೈಲಿಯ ಈ ಶಿಕ್ಷೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.