ಇಂದೋರ್ನ ಗೌರಿ ನಗರದಲ್ಲಿ ವ್ಯಕ್ತಿಯೊಬ್ಬ ತಮ್ಮ ಹೆಲ್ಮೆಟ್ಗೆ CCTV ಕ್ಯಾಮೆರಾ ಅಳವಡಿಸಿಕೊಂಡು ಓಡಾಡುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಆಸ್ತಿ ವಿವಾದದಿಂದ ಉಂಟಾದ ಬೆದರಿಕೆಗಳಿಂದ ತಮ್ಮನ್ನು ಮತ್ತು ಕುಟುಂಬವನ್ನು ರಕ್ಷಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಈ ವ್ಯಕ್ತಿ ತಿಳಿಸಿದ್ದಾರೆ. ಈ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿವಾದದ ಹಿನ್ನೆಲೆ
ಗೌರಿ ನಗರದ ಈ ವ್ಯಕ್ತಿ, ಆಸ್ತಿ ವಿವಾದದಿಂದಾಗಿ ನೆರೆಹೊರೆಯವರಿಂದ ಕಿರುಕುಳ ಮತ್ತು ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಕುಟುಂಬದ ಮೇಲೆ ಪದೇ ಪದೇ ದೈಹಿಕ ಹಲ್ಲೆಗಳು ನಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿವಾದಕ್ಕೆ ಕಾರಣ ಆಸ್ತಿಯನ್ನು ಕಬಳಿಸಲು ಕೆಲವರು ಯತ್ನಿಸುತ್ತಿರುವುದು ಎಂದು ಆತ ದೂರಿದ್ದಾರೆ. “ನಮ್ಮ ಮನೆಯನ್ನು ಒತ್ತುವರಿ ಮಾಡಲು ಅವರು ಬಯಸುತ್ತಾರೆ. ಆದರೆ ನಾವು ಧೈರ್ಯದಿಂದ ಎದುರಿಸುತ್ತಿದ್ದೇವೆ,” ಎಂದು ಈ ವ್ಯಕ್ತಿ ಕ್ಯಾಮೆರಾದಲ್ಲಿ ಹೇಳಿದ್ದಾರೆ.
ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ, ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಈ ವ್ಯಕ್ತಿ ನಿರಾಸೆಗೊಂಡಿದ್ದಾರೆ. “ಪೊಲೀಸರು ಸಹಾಯ ಮಾಡುವ ಬದಲು, ನಮ್ಮನ್ನು ಬೆದರಿಸುತ್ತಾರೆ ಮತ್ತು ಕೆಲವೊಮ್ಮೆ ಹಲ್ಲೆ ಕೂಡ ಮಾಡಿದ್ದಾರೆ,” ಎಂದು ಆತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ, ತಮ್ಮ ಸುರಕ್ಷತೆಗಾಗಿ ಎಲ್ಲವನ್ನೂ ದಾಖಲಿಸುವ ಉದ್ದೇಶದಿಂದ ಹೆಲ್ಮೆಟ್ಗೆ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ.
पहली नज़र में ये तस्वीर हंसा सकती है, फिर सुनिये इंदौर में ये शख्स दरअसल व्यवस्था से मजबूर होकर हेलमेट में सीसीटीवी लगाकर घूमते हैं pic.twitter.com/OfNJMCiwfv
— Anurag Dwary (@Anurag_Dwary) July 13, 2025
ಕ್ಯಾಮೆರಾ ಧರಿಸುವ ಐಡಿಯಾ
ಈ ವ್ಯಕ್ತಿ ತಮ್ಮ ಕಪ್ಪು ಹೆಲ್ಮೆಟ್ಗೆ ಸಣ್ಣ CCTV ಕ್ಯಾಮೆರಾವನ್ನು ಜೋಡಿಸಿದ್ದಾರೆ. ಇದನ್ನು ತಮ್ಮ “ಗುರಾಣಿ” ಎಂದು ಕರೆದಿರುವ ಆತ, “ನಾನು ಎಲ್ಲೆಡೆ ಓಡಾಡುವಾಗ ಎಲ್ಲವನ್ನೂ ರೆಕಾರ್ಡ್ ಮಾಡುತ್ತೇನೆ. ಒಂದು ವೇಳೆ ನನಗೆ ಅಥವಾ ನನ್ನ ಕುಟುಂಬಕ್ಕೆ ಏನಾದರೂ ಆಗಿದ್ದೇ ಆದರೆ, ಈ ವಿಡಿಯೋ ಸಾಕ್ಷಿಯಾಗಿ ಉಳಿಯುತ್ತದೆ,” ಎಂದು ಹೇಳಿದ್ದಾರೆ. ಈ ಕ್ಯಾಮೆರಾ ಧರಿಸಿ ತಮ್ಮ ನೆರೆಹೊರೆಯಲ್ಲಿ ಓಡಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ವಿಚಿತ್ರ ಕ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಈ ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಆಸ್ತಿ ವಿವಾದವನ್ನು ಬಗೆಹರಿಸಲು ಸರಕಾರ ಮತ್ತು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. “ಇಂತಹ ಸಂದರ್ಭದಲ್ಲಿ ಜನರು ಸ್ವಯಂ ರಕ್ಷಣೆಗೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದು ದುಃಖಕರ,” ಎಂದು ಒಬ್ಬರು ಟೀಕಿಸಿದ್ದಾರೆ.