ಚಹಲ್-ಧನುಶ್ರೀ ಡಿವೋರ್ಸ್ ಕೇಸ್ : ಕೂಲಿಂಗ್ ಆಫ್ ಪೀರಿಯಡ್ ಕ್ಯಾನ್ಸಲ್ ಮಾಡಿದ ಬಾಂಬೆ ಹೈಕೋರ್ಟ್

11 (19)

ಕ್ರಿಕೆಟ್ ಆಟಗಾರ ಯಜುವೇಂದ್ರ ಚಹಲ್ ಮತ್ತು ಧನುಶ್ರೀ ಮದುವೆ ಮುರಿದು ಬಿದ್ದಿರೋದು ಗೊತ್ತಿರೋ ವಿಚಾರ. ಇಬ್ಬರೂ ಈಗ ಡಿವೋರ್ಸ್‌ಗೆ ಅರ್ಜಿ ಹಾಕಿದ್ಧಾರೆ. ಆದರೆ ಈ ಪ್ರಕರಣದಲ್ಲಿ ಕುಟುಂಬ ನ್ಯಾಯಾಲಯ ಸೂಚಿಸಿದ್ದ ಕೂಲಿಂಗ್ ಆಫ್ ಪೀರಿಯಡ್ ಕ್ಯಾನ್ಸಲ್ ಮಾಡಿರೋ ಬಾಂಬೆ ಹೈಕೋರ್ಟ್, ಗುರುವಾರವೇ ಡಿವೋರ್ಸ್ ಕೇಸ್ ಇತ್ಯರ್ಥ ಮಾಡಿ ಅಂತಾ ಫ್ಯಾಮಿಲಿ ಕೋರ್ಟಿಗೆ ಆದೇಶ ಕೊಟ್ಟಿದೆ.

ADVERTISEMENT
ADVERTISEMENT
ಏನಿದು ಕೂಲಿಂಗ್ ಆಫ್ ಪೀರಿಯಡ್..?

ಡಿವೋರ್ಸ್‌ ಆಗುವುದಕ್ಕೆ ಗಂಡ ಹೆಂಡತಿ ಪರಸ್ಪರ ಒಪ್ಪಿಗೆ ಮೇಲೆ ಅರ್ಜಿ ಸಲ್ಲಿಸಿದಾಗ ಸಾಮಾನ್ಯವಾಗಿ ಕೋರ್ಟುಗಳು ಕೌನ್ಸೆಲಿಂಗ್ ಸಲಹೆ ನೀಡುತ್ತವೆ. ಗಂಡ ಹೆಂಡತಿ ಮದುವೆಯಾಗಿ ಒಂದು ವರ್ಷಕ್ಕೂ ಮೊದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೆ, ಆಗ ಕಡ್ಢಾಯವಾಗಿ ಕೂಲಿಂಗ್ ಆಫ್ ಪೀರಿಯಡ್ ಅಂದರೆ ಕೌನ್ಸೆಲಿಂಗ್ ಪ್ರಕ್ರಿಯೆ ಎದುರಿಸಬೇಕು. ಒಂದು ವರ್ಷದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಪರಸ್ಪರ ಒಪ್ಪಿಗೆ ಇದ್ದರೆ ಡಿವೋರ್ಸ್ ಸರಳವಾಗಿ ಆಗುತ್ತದೆ. ಪ್ರತ್ಯೇಕ ಪ್ರಕರಣಗಳ ಮೇಲೆ ಕೂಲಿಂಗ್ ಆಫ್ ಪೀರಿಯಡ್ ಕೊಡಬೇಕಾ ಬೇಡವಾ ಎಂದು ಕೋರ್ಟ್ ನಿರ್ಧಾರ ಮಾಡುತ್ತದೆ.

ಇಲ್ಲಿ ಯಜುವೇಂದ್ರ ಚಹಲ್, ಧನುಶ್ರೀ ಪ್ರಕರಣದಲ್ಲಿ ಮದುವೆ ಆಗಿರೋದು 2020ರ ಡಿಸೆಂಬರ್‌‌ನಲ್ಲಿ. 4 ವರ್ಷಕ್ಕೂ ಹೆಚ್ಚು ಜೊತೆಯಾಗಿ ಬದುಕಿದ್ದಾರೆ. ಈಗ ಇಬ್ಬರ ನಡುವೆ ಏನೋ ಸಮಸ್ಯೆ ಬಂದಿದೆ. ಡಿವೋರ್ಸಿಗೆ ಅರ್ಜಿ ಹಾಕಿದ್ಧಾರೆ. ಫ್ಯಾಮಿಲಿ ಕೋರ್ಟ್, ಚಹಲ್-ಧನುಶ್ರೀ ಡಿವೋರ್ಸ್ ಅರ್ಜಿಗೆ ಕೂಲ್ ಆಫ್ ಪೀರಿಯಡ್ ಕೊಟ್ಟಿತ್ತು. ಇದರಿಂದಾಗಿ ಯಜುವೇಂದ್ರ ಚಹಲ್ ಐಪಿಎಲ್ ಆಡುವುದಕ್ಕೂ ಕಷ್ಟವಾಗಿತ್ತು. ಈಗ ಬಾಂಬೆ ಹೈಕೋರ್ಟ್, ಡಿವೋರ್ಸ್ ಅರ್ಜಿಯನ್ನು ಗುರುವಾರವೇ ಇತ್ಯರ್ಥ ಮಾಡಿ ಎಂದು ಸೂಚನೆ ಕೊಟ್ಟಿದೆ.

ಏನಿದು ಡಿವೋರ್ಸ್ ಪ್ರಕರಣ..?

ಏನಿದು ಚಹಲ್ ಡಿವೋರ್ಸ್ ಕೇಸ್ ಅಂತಾ ನೋಡಿದ್ರೆ, ಇಬ್ಬರೂ ಮದುವೆಯಾಗಿದ್ದು, 2020ರ ಡಿಸೆಂಬರ್‌ ತಿಂಗಳಲ್ಲಿ. ಇಬ್ಬರೂ ಕೂಡಾ 2025ರ ಫೆಬ್ರವರಿ 5ರಂದು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. 2025ರ ಫೆಬ್ರವರಿ 20ರಂದು ಫ್ಯಾಮಿಲಿ ಕೋರ್ಟ್ ವಿಚಾರಣೆ ಮಾಡಿದೆ.

ಹಿಂದೂ ವಿವಾಹ ಕಾಯ್ದೆ 13B ಪ್ರಕಾರ, ಗಂಡ ಹೆಂಡತಿ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್‌ ಅರ್ಜಿ ಹಾಕಿದ್ಧಾರೆ. ಆದರೆ ತಕ್ಷಣ ಡಿವೋರ್ಸ್ ನೀಡಲು ಒಪ್ಪದ ಫ್ಯಾಮಿಲಿ ಕೋರ್ಟ್ , 6 ತಿಂಗಳು ಕೂಲಿಂಗ್ ಆಫ್ ಪೀರಿಯಡ್ ಸಲಹೆ ನೀಡಿದೆ.
ಯಜುವೇಂದ್ರ ಚಹಲ್ ಮತ್ತು ಧನುಶ್ರೀ ವರ್ಮಾ ಇಬ್ಬರೂ ಸೆಲಬ್ರಿಟಿಗಳು. ಚಹಲ್, ಕ್ರಿಕೆಟರ್. ಧನುಶ್ರೀ ಡ್ಯಾನ್ಸರ್. ಆದರೆ ಈಗ ಕೋರ್ಟ್ ನೀಡಿದ್ದ ಕೂಲಿಂಗ್ ಆಫ್ ಪೀರಿಯಡ್ ಆದೇಶ ಒಪ್ಪಿಕೊಂಡರೆ, ಚಹಲ್ ನಿರಾತಂಕವಾಗಿ ಐಪಿಎಲ್ ಆಡುವುದಕ್ಕೆ ಸಾಧ್ಯ ಇರಲಿಲ್ಲ. ಈ ಸೀಸನ್ನಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡ್ತಿರೋ ಚಹಲ್‌, ಐಪಿಎಲ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರೋ ಆಟಗಾರ.

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿಯೂ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ತೀರಾ ಇತ್ತೀಚಿನವರೆಗೂ ನಂ.1 ಸ್ಥಾನದಲ್ಲಿದ್ದ ಬೌಲರ್. ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರೋ ಚಹಲ್‌ಗೆ, ಈ ಐಪಿಎಲ್ ದೊಡ್ಡ ಚಾಲೆಂಜ್. ತಾನು ಈಗಲೂ ಮ್ಯಾಚ್ ವಿನ್ನರ್ ಅನ್ನೋದನ್ನ ಸಾಬೀತು ಮಾಡಬೇಕು. ನ್ಯಾಷನಲ್ ಟೀಂನಲ್ಲಿ ಮತ್ತೆ ಸ್ಥಾನ ಪಡೆಯಬೇಕು ಅನ್ನೋ ಹಠದಲ್ಲಿದ್ದಾರೆ.

ಆದರೆ ಕೋರ್ಟ್ ಆದೇಶ ಒಪ್ಪಿದರೆ ಅದು ಸಾಧ್ಯ ಇಲ್ಲ. ಕೋರ್ಟ್ ಕರೆದಾಗಲೆಲ್ಲ ಸಂಧಾನಕ್ಕೆ ಬರಬೇಕು. ಇದಕ್ಕಾಗಿಯೇ ಚಹಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಈಗ ಗುರುವಾರವೇ ಅರ್ಜಿ ಇತ್ಯರ್ಥಕ್ಕೆ, ಫ್ಯಾಮಿಲಿ ಕೋರ್ಟಿಗೆ ಸೂಚನೆ ಕೊಟ್ಟಿದೆ.

ಚಹಲ್ ವಾದ ಏನಿತ್ತು..?

ನಾವಿಬ್ಬರೂ ಮದುವೆಯಾಗಿದ್ದರೂ, 2022ರಿಂದ ಬೇರೆ ಬೇರೆ ವಾಸ ಮಾಡುತ್ತಿದ್ದೇವೆ. ವಿಚ್ಛೇದನಕ್ಕೆ ಪರಸ್ಪರ ಒಪ್ಪಿದ್ದೇವೆ. ಪರಿಹಾರವಾಗಿ ಒಂದೇ ಬಾರಿ 4 ಕೋಟಿ, 75 ಲಕ್ಷ ನೀಡಲು ಒಪ್ಪಿದ್ದೇನೆ. ಈಗಾಗಲೇ 2 ಕೋಟಿ, 37 ಲಕ್ಷ ಪರಿಹಾರವನ್ನೂ ಕೊಟ್ಟಿದ್ದೇನೆ. ಹೀಗಾಗಿ ಫ್ಯಾಮಿಲಿ ಕೋರ್ಟ್ ನಮ್ಮ ಅರ್ಜಿಯನ್ನು ಬೇಗ ಇತ್ಯರ್ಥ ಮಾಡಬೇಕು.

ಇದನ್ನು ಅನುಮೋದಿಸಿರುವ ಬಾಂಬೆ ಹೈಕೋರ್ಟ್, ಫ್ಯಾಮಿಲಿ ಕೋರ್ಟ್ ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಆದೇಶ ನೀಡಿದೆ. ಚಹಲ್ ಡಿವೋರ್ಸ್ ಅರ್ಜಿಯನ್ನು ಮಾರ್ಚ್ 20ರ ಒಳಗೆ ಇತ್ಯರ್ಥ ಪಡಿಸಬೇಕು ಎಂದು ಆದೇಶ ನೀಡಿದೆ. ಚಹಲ್-ಧನುಶ್ರೀ ಡಿವೋರ್ಸ್ ಆಗುವುದು ಈಗ ಬಹುತೇಕ ಖಚಿತವಾದಂತಾಗಿದೆ. ಅಧಿಕೃತ ಮುದ್ರೆ ಬೀಳುವುದಷ್ಟೇ ಬಾಕಿ ಇದೆ.

Exit mobile version