• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಕ್ರಿಕೆಟ್‌ಗಾಗಿ ಪಿಜ್ಜಾ, ಮಟನ್ ತ್ಯಾಗ: ವೈಭವ್ ಸೂರ್ಯವಂಶಿ

admin by admin
April 21, 2025 - 7:07 pm
in ಕ್ರೀಡೆ
0 0
0
123 (86)

ಕೇವಲ 14 ವರ್ಷಕ್ಕೆ ಐಪಿಎಲ್ ಟೂರ್ನಿಯಲ್ಲಿ ಡೆಬ್ಯೂ ಮಾಡಿ ಕ್ರಿಕೆಟ್ ಜಗತ್ತಿನ ಸೆನ್ಸೇಷನ್ ಆಗಿರುವ ವೈಭವ್ ಸೂರ್ಯವಂಶಿ, ಒಂದೇ ಇನ್ನಿಂಗ್ಸ್‌ನಲ್ಲಿ ಸೂಪರ್‌ಸ್ಟಾರ್ ಸ್ಥಾನಕ್ಕೇರಿದ್ದಾನೆ. ಆದರೆ ಈ ಖ್ಯಾತಿಯ ಹಿಂದೆ ಕಠಿಣ ಶ್ರಮ, ತಂದೆಯ ತ್ಯಾಗ ಮತ್ತು ವೈಭವ್‌ನ ಅಸಾಧಾರಣ ಸಮರ್ಪಣೆಯ ಕತೆಯಿದೆ.

ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ನ ರೈಸಿಂಗ್ ಸ್ಟಾರ್. ಕೇವಲ 14 ವರ್ಷದಲ್ಲಿ ಐಪಿಎಲ್‌ನಲ್ಲಿ ಡೆಬ್ಯೂ ಮಾಡಿ ಇತಿಹಾಸ ಸೃಷ್ಟಿಸಿದ ಈ ಬಾಲಕ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋತರೂ ತನ್ನ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದ. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ, ಸ್ಟಾರ್ ಬೌಲರ್‌ಗಳನ್ನು ಧೀರವಾಗಿ ಎದುರಿಸಿದ ವೈಭವ್‌ನ ಆಕ್ರಮಣಕಾರಿ ಆಟ, ಅನುಭವಿ ಆಟಗಾರನ ನೆನಪಿಸಿತು. ಈತನ ಆಟ, “ವಯಸ್ಸು ಕೇವಲ ಸಂಖ್ಯೆ” ಎಂಬುದನ್ನು ಸಾರಿ ಹೇಳಿತು.

RelatedPosts

ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹಾಡಿ ಹೊಗಳಿದ ಪಾಕ್‌ ಕ್ರಿಕೆಟಿಗ

ಏಷ್ಯಾಕಪ್ 2025: ಭಾರತ ವಿರುದ್ಧ ಹೀನಾಯ ಸೋಲು, ಪಾಕ್ ಕ್ರಿಕೆಟ್ ಮಂಡಳಿ ನಿರ್ದೇಶಕರಿಗೆ ಗೇಟ್‌ಪಾಸ್

ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧ 23 ವಿಕೆಟ್ ಸಾಧನೆಗೆ ಒಲಿದು ಐಸಿಸಿ ಪ್ರಶಸ್ತಿ

ADVERTISEMENT
ADVERTISEMENT

123 (85)

ಗೂಗಲ್ ಸಿಇಒ ಸುಂದರ್ ಪಿಚೈಯಿಂದ ಹಿಡಿದು ಹಳ್ಳಿಯ ಕ್ರಿಕೆಟ್ ಅಭಿಮಾನಿಗಳವರೆಗೆ ವೈಭವ್‌ನ ಹೆಸರು ಎಲ್ಲೆಡೆ ಕೇಳಿಬರುತ್ತಿದೆ. ಕ್ರಿಕೆಟ್ ದಿಗ್ಗಜರು ಈತನ ಆಟಕ್ಕೆ ಫಿದಾ ಆಗಿದ್ದಾರೆ. ಆದರೆ ಈ ಯಶಸ್ಸು ಸುಲಭವಾಗಿ ಬಂದಿಲ್ಲ. ಇದರ ಹಿಂದೆ ವೈಭವ್‌ನ ಶ್ರಮ, ತಂದೆಯ ತ್ಯಾಗ ಮತ್ತು ಕುಟುಂಬದ ಬೆಂಬಲವಿದೆ.

398430

ವಿಶ್ವ ಕ್ರಿಕೆಟ್‌ನಲ್ಲಿ ಯಶಸ್ಸಿಗಾಗಿ ಹಲವು ಆಟಗಾರರು ತಮ್ಮ ನೆಚ್ಚಿನ ಆಹಾರವನ್ನು ತ್ಯಜಿಸಿದ್ದಾರೆ. ಆದರೆ 14 ವರ್ಷದ ಬಾಲಕನಿಗೆ ತನ್ನ ಇಷ್ಟದ ಆಹಾರವನ್ನು ಬಿಡುವುದು ಸುಲಭವೇ? ವೈಭವ್‌ಗೆ ಪಿಜ್ಜಾ ಮತ್ತು ಮಟನ್ ಎಂದರೆ ಪ್ರಾಣ. ಆದರೆ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸುವ ಕನಸಿನ ಮುಂದೆ ಈತ ಜಂಕ್ ಫುಡ್ ಮತ್ತು ನಾನ್-ವೆಜ್ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿದ. ಫಿಟ್‌ನೆಸ್‌ಗೆ ಗಮನ ಕೊಟ್ಟ ವೈಭವ್, ಐಪಿಎಲ್‌ಗಾಗಿ ತೀವ್ರ ಕಸರತ್ತು ನಡೆಸಿದ. ರಾಜಸ್ಥಾನ್ ರಾಯಲ್ಸ್‌ನ ನೆಟ್ ಸೆಷನ್‌ಗಳಲ್ಲಿ ಜೋಫ್ರಾ ಆರ್ಚರ್‌ನಂತಹ ಸ್ಟಾರ್ ಬೌಲರ್‌ಗಳ ದಾಳಿಯನ್ನು ಚಿಂದಿ ಉಡಾಯಿಸಿ ಎಲ್ಲರ ಗಮನ ಸೆಳೆದ.

Vaibhav suryavanshi asia cup afp

ವೈಭವ್‌ನ ಸ್ಫೋಟಕ ಬ್ಯಾಟಿಂಗ್‌ಗೆ ರಾಜಸ್ಥಾನ್ ರಾಯಲ್ಸ್‌ನ ಹೆಡ್ ಕೋಚ್ ರಾಹುಲ್ ದ್ರಾವಿಡ್‌ರ ಮಾರ್ಗದರ್ಶನ ಮುಖ್ಯ ಕಾರಣ. ಹರಾಜಿನಲ್ಲಿ ವೈಭವ್‌ನನ್ನು ಖರೀದಿಸಿದ ಬಳಿಕ ದ್ರಾವಿಡ್ ಈತನ ಮೇಲೆ ವಿಶೇಷ ಗಮನ ಹರಿಸಿದರು. ನೆಟ್ ಸೆಷನ್‌ಗಳಲ್ಲಿ 4 ಓವರ್‌ಗಳಲ್ಲಿ 40 ಅಥವಾ 60 ರನ್‌ಗಳಂತಹ ಗುರಿಗಳನ್ನು ನೀಡಿ, ಆ ಗುರಿಗಳನ್ನು ಸಾಧಿಸುವಂತೆ ತರಬೇತಿ ನೀಡಿದರು. ಡೆಬ್ಯೂ ಪಂದ್ಯದಲ್ಲಿ ವೈಭವ್‌ನ ಆಕ್ರಮಣಕಾರಿ ಆಟಕ್ಕೆ ಈ ತರಬೇತಿಯೇ ದಾರಿದೀಪವಾಯಿತು.

India u19 squad 1575259982

ವೈಭವ್‌ಗೆ ತಂದೆ ಸಂಜೀವ್ ಸೂರ್ಯವಂಶಿಯೇ ಮೊದಲ ಗುರು. ಮಗನ ಕ್ರಿಕೆಟ್ ಉತ್ಸಾಹವನ್ನು ಗುರುತಿಸಿದ ಸಂಜೀವ್, ವೈಭವ್ ಕೇವಲ 5 ವರ್ಷದವನಿದ್ದಾಗ ಮನೆಯ ಬಳಿ ನೆಟ್ಸ್ ತಯಾರಿಸಿ ಅಭ್ಯಾಸಕ್ಕೆ ಸಹಕರಿಸಿದರು. ಕೃಷಿಕರಾದ ಸಂಜೀವ್, ಮಗನ ಕನಸಿಗಾಗಿ ತಮ್ಮ ಕೃಷಿ ಭೂಮಿಯನ್ನೇ ಮಾರಾಟ ಮಾಡಿದರು. 9ನೇ ವಯಸ್ಸಿನಲ್ಲಿ ವೈಭವ್‌ನನ್ನು ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಬಿಹಾರದ ಮಾಜಿ ಕ್ರಿಕೆಟಿಗ ಮನೀಷ್ ಓಜಾ ಬಳಿ ಕೋಚಿಂಗ್ ಪಡೆದ ವೈಭವ್, ತಂದೆಯ ತ್ಯಾಗಕ್ಕೆ ತಕ್ಕಂತೆ ಪ್ರತಿ ಅವಕಾಶದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ.

ಯಶಸ್ಸಿನ ದಾರಿಯಲ್ಲಿ ವೈಭವ್‌ಗೆ ವಯಸ್ಸಿನ ಕುರಿತಾದ ಆರೋಪಗಳೂ ಎದುರಾದವು. ಆದರೆ, ಬಿಸಿಸಿಐ ನಿಯಮದಂತೆ ಬೋನ್ ಟೆಸ್ಟ್‌ಗೆ ಒಳಗಾಗಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಿದ. ಈ ಘಟನೆ ವೈಭವ್‌ನ ಧೈರ್ಯ ಮತ್ತು ಪಾರದರ್ಶಕತೆಯನ್ನು ತೋರಿಸಿತು.

Vaibhav suryavanshi 262518867 1x1 4

ಚಿಕ್ಕ ವಯಸ್ಸಿನಲ್ಲೇ ಯಶಸ್ಸಿನ ಮೆಟ್ಟಿಲೇರುತ್ತಿರುವ ವೈಭವ್‌ಗೆ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಆದರೆ ಯಶಸ್ಸಿನ ಅಮಲು ತಲೆಗೇರದೆ, ಸರಿಯಾದ ದಾರಿಯಲ್ಲಿ ಮುನ್ನಡೆಯಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ವೈಭವ್ ಸೂರ್ಯವಂಶಿಯ ಕತೆ, ಕನಸುಗಳಿಗಾಗಿ ತ್ಯಾಗ ಮಾಡುವ, ಶ್ರಮಿಸುವ ಮತ್ತು ಗುರಿ ಸಾಧಿಸುವ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ.

     

    ShareSendShareTweetShare
    admin

    admin

    Please login to join discussion

    ತಾಜಾ ಸುದ್ದಿ

    114 (12)

    ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

    by ಶಾಲಿನಿ ಕೆ. ಡಿ
    September 17, 2025 - 7:45 pm
    0

    114 (11)

    ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್: ಅ*ತ್ಯಾಚಾರ ಆರೋಪ ಪ್ರಕರಣ ರದ್ದು

    by ಶಾಲಿನಿ ಕೆ. ಡಿ
    September 17, 2025 - 7:36 pm
    0

    114 (10)

    ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ

    by ಶಾಲಿನಿ ಕೆ. ಡಿ
    September 17, 2025 - 7:14 pm
    0

    114 (9)

    ಮಹಾರಾಷ್ಟ್ರದಲ್ಲಿ ಇಬ್ಬರು ಮಹಿಳಾ ನಕ್ಸಲರು ಎನ್‌ಕೌಂಟರ್‌ಗೆ ಬಲಿ

    by ಶಾಲಿನಿ ಕೆ. ಡಿ
    September 17, 2025 - 7:01 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • 114 (12)
      ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌
      September 17, 2025 | 0
    • Untitled design 2025 09 17t154745.430
      ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹಾಡಿ ಹೊಗಳಿದ ಪಾಕ್‌ ಕ್ರಿಕೆಟಿಗ
      September 17, 2025 | 0
    • Web (53)
      ಏಷ್ಯಾಕಪ್ 2025: ಭಾರತ ವಿರುದ್ಧ ಹೀನಾಯ ಸೋಲು, ಪಾಕ್ ಕ್ರಿಕೆಟ್ ಮಂಡಳಿ ನಿರ್ದೇಶಕರಿಗೆ ಗೇಟ್‌ಪಾಸ್
      September 15, 2025 | 0
    • Web (46)
      ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧ 23 ವಿಕೆಟ್ ಸಾಧನೆಗೆ ಒಲಿದು ಐಸಿಸಿ ಪ್ರಶಸ್ತಿ
      September 15, 2025 | 0
    • Web (41)
      IND vs PAK: ಯಾಕೆ ಕೈಕುಲುಕಲಿಲ್ಲ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ಸೂರ್ಯಕುಮಾ‌ರ್
      September 15, 2025 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
    • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version