ಹಂಗೇ ಆಗಬೇಕು.. ಲಕ್ನೋ ಸೋಲಬೇಕು : ರಾಹುಲ್ ಫ್ಯಾನ್ಸ್ ಖುಷ್ ಹುವಾ..!

Film (60)

ಕೆಎಲ್ ರಾಹುಲ್ ಮೇಲಿನ ಪ್ರೀತಿ, ರಿಷಬ್ ಪಂತ್ ವಿರುದ್ಧ ದ್ವೇಷವಾಗಿ ಬದಲಾಯ್ತಾ..? ಅದಕ್ಕೆ ಕಾರಣವಾಗಿದ್ದು ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧದ ಆಕ್ರೋಶವಾ..? ಅನುಮಾನವೇ ಇಲ್ಲ, ಹೌದು ಎಂದೇ ಉತ್ತರ ಕೊಡಬೇಕು.
ಐಪಿಎಲ್‌ನಲ್ಲಿ ರೋಚಕ ಪಂದ್ಯಗಳಿಗೆ ಬರವಿಲ್ಲ. ಸೋಮವಾರ ಆಗಿದ್ದೂ ಅದೇ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ, 209 ರನ್ನುಗಳ ದೊಡ್ಡ ಸ್ಕೋರ್ ಟಾರ್ಗೆಟ್ ಕೊಟ್ಟೂ ಕೂಡಾ ಸೋತು ಹೋಗಿದೆ. ಇದಾದ ನಂತರ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ತಿರೋದು ಕೆಎಲ್ ರಾಹುಲ್‌ಗೆ ಅವಮಾನ ಮಾಡಿದ್ದಕ್ಕೆ ಇಂತಹ ಶಿಕ್ಷೆ ಅನುಭವಿಸಲೇಬೇಕು ಅಂತಾ.
ಏಕೆಂದರೆ ಇದೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೊದಲ ಎರಡು ಆವೃತ್ತಿಗಳಲ್ಲಿ ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿದ್ದರು. ಎರಡೂ ಆವೃತ್ತಿಗಳಲ್ಲಿ ಟಾಪ್ 3 ಸ್ಥಾನ ಗಳಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 37 ಪಂದ್ಯಗಳಲ್ಲಿ ಲೀಡ್ ಮಾಡಿದ್ದವರು ಕೆಎಲ್ ರಾಹುಲ್. ನಂತರದ ಸೀಸನ್ನಿನಲ್ಲಿ ಲಕ್ನೋ ತಂಡ, 7ನೇ ಸ್ಥಾನಕ್ಕೆ ಕುಸಿದಿತ್ತು. ಸನ್ ರೈಸರ್ಸ್ ತಂಡದ ಪ್ರಮುಖ ಪಂದ್ಯದಲ್ಲಿ ಸೋತಿದ್ದಕ್ಕೆ ಕೆಎಲ್ ರಾಹುಲ್ ಅವರನ್ನ, ಫೀಲ್ಡಿನಲ್ಲೇ ಅವಮಾನ ಮಾಡಿದ್ದರು ಸಂಜೀವ್ ಗೋಯೆಂಕಾ. ಕೆಎಲ್ ರಾಹುಲ್ ಅವರಂತಹ ಆಟಗಾರನಿಗೆ ಆದ ಈ ಅವಮಾನದಿಂದಾಗಿ ಕೆಎಲ್ ರಾಹುಲ್, ಲಕ್ನೋ ತಂಡವನ್ನೇ ಕೈಬಿಟ್ಟಿದ್ದರು. ಕೆಎಲ್ ರಾಹುಲ್ ಅವರಷ್ಟೇ ಅಲ್ಲ, 6 ಪಂದ್ಯಗಳಲ್ಲಿ ರಾಹುಲ್ ಬದಲು, ತಂಡದ ನಾಯಕತ್ವ ವಹಿಸಿದ್ದ ಕೃನಾಲ್ ಪಾಂಡ್ಯ ಕೂಡಾ ಲಕ್ನೋ ತಂಡದಲ್ಲಿ ಉಳಿದುಕೊಳ್ಳಲಿಲ್ಲ. ಅವರೀಗ ಆರ್‌ಸಿಬಿಯ ಮೊದಲ ಮ್ಯಾಚಿನಲ್ಲಿ ಮ್ಯಾಚ್ ವಿನ್ನರ್ ಆಗಿದ್ದಾರೆ.
ಇದಾದ ಮೇಲೆ ಲಕ್ನೋ ತಂಡ ರಿಷಬ್ ಪಂತ್ ಕ್ಯಾಪ್ಟನ್ ಆಗಿ, 3ನೇ ಸೀಸನ್ನಿನ ಮೊದಲ ಮ್ಯಾಚಿನಲ್ಲಿ ಸೋತಿದ್ದಾರೆ. 23 ಕೋಟಿ ಕೊಟ್ಟು ಖರೀದಿಸಿದ್ದ ರಿಷಬ್ ಪಂತ್, ಡೆಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 6 ಬಾಲ್ ಎದುರಿಸಿ ಸೊನ್ನೆ ಸುತ್ತಿದ್ದಷ್ಟೇ ಅಲ್ಲ, ನಿರ್ಣಾಯಕ ಹಂತದಲ್ಲಿ ಅಶುತೋಷ್ ಶರ್ಮಾ ಅವರನ್ನು ಸ್ಟಂಪ್ ಮಾಡುವ ಚಾನ್ಸ್ ಮಿಸ್ ಮಾಡಿದ ರಿಷಬ್ ಪಂತ್, ಲಕ್ನೋ ಮಾಲೀಕ ಸಂಜೀವ್ ಗೊಯೆಂಕಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತೀರಾ ಕೆಎಲ್ ರಾಹುಲ್ ಅವರನ್ನು ಅವಮಾನ ಮಾಡುವಷ್ಟಲ್ಲದಿದ್ದರೂ, ರಿಷಬ್ ಪಂತ್ ಜೊತೆ ಕೂಡಾ ಬಿಸಿ ಬಿಸಿ ಚರ್ಚೆ ಆಗಿದ್ಯಂತೆ.
ಇನ್ನು ಆಟಗಾರನಾಗಿ ವಿಫಲನಾಗಿರುವ ರಿಷಬ್ ಪಂತ್, ನಿರ್ಣಾಯಕ ಹಂತದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಸ್ಪಿನ್ನರ್ ಪ್ರಿನ್ಸ್ ಯಾದವ್ ಅವರಿಗೆ ಸ್ಪಿನ್ ಬೌಲಿಂಗ್ ಕೊಟ್ಟರು. 2 ಓವರಿಗೆ 22 ರನ್ ಬೇಕಿದ್ದಾಗ ಅಶುತೋಷ್ ಶರ್ಮಾ, 16 ರನ್ ಹೊಡೆದುಬಿಟ್ಟರು. ಕೊನೆಯ ಓವರಿನಲ್ಲಿ ಜಸ್ಟ್ 6 ರನ್ ಗಳಿಸಬೇಕಾಗಿತ್ತು. ಇದೆಲ್ಲವನ್ನೂ ಗೊಯೆಂಕಾ, ಪಂತ್ ಜೊತೆ ಮಾತನಾಡಿದ್ರು ಎನ್ನಲಾಗ್ತಿದೆ.
ಈಗ ನಮ್ಮ ಕನ್ನಡಿಗ ರಾಹುಲ್ ಅವರಿಗೆ ಅವಮಾನ ಮಾಡಿದ್ದಕ್ಕೆ ತಕ್ಕ ಶಿಕ್ಷೆಯಾಯ್ತು ಎಂದು ಕನ್ನಡಿಗರು ಖುಷಿ ಪಡ್ತಿದ್ದಾರೆ. ಇನ್ನು ಕೆಎಲ್ ರಾಹುಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರ್ಣಾಯಕ ಗೆಲುವಿಗೆ ಕಾರಣಕರ್ತರಾಗಿದ್ದರು. ಹೀಗಾಗಿ ರಾಹುಲ್ ಅವರ ಅಭಿಮಾನಿಗಳ ಬಳಗವೂ ದೊಡ್ಡದಾಗಿದೆ. ಟೀಂ ಇಂಡಿಯಾ ಮ್ಯಾಚ್ ವಿನ್ನರ್ ಒಬ್ಬರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ಎಲ್ಲ ಕಡೆ ಅಭಿಮಾನಿಗಳು ಖುಷಿ ಪಡ್ತಿದ್ದಾರೆ.
ವಿಚಿತ್ರ ಅಂದ್ರೆ, ಕೆಎಲ್ ರಾಹುಲ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಾಗ, ಆಡುವ 11ರಲ್ಲಿ ಸ್ಥಾನ ಕಳೆದುಕೊಂಡಿದ್ದವರು ಇದೇ ರಿಷಬ್ ಪಂತ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಪಂದ್ಯವನ್ನಾಡಲಿಲಲ್ಲ. ಭಾರತ ತಂಡದ ಸಕ್ಸಸ್ ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮೇಲೆ ವಿಶ್ವಾಸ ಇಟ್ಟಿದ್ದರಷ್ಟೇ ಅಲ್ಲ, ಆ ವಿಶ್ವಾಸವನ್ನು ರಾಹುಲ್ ಕೂಡಾ ಬಳಸಿಕೊಂಡರು.
ಇನ್ನು ರಿಷಬ್ ಪಂತ್ ತೊರೆದ ಡೆಲ್ಲಿ ತಂಡಕ್ಕೆ ಕೆಎಲ್ ರಾಹುಲ್ ಸೇರಿಕೊಂಡಿದ್ದಾರೆ. ಕ್ಯಾಪ್ಟನ್ಸಿ ಬೇಡ, ಆಟಗಾರನಾಗಿರುತ್ತೇನೆ ಎಂದಿದ್ದ ರಾಹುಲ್, ಮೊದಲ ಪಂದ್ಯದಲ್ಲಿ ಲಕ್ನೋ ವಿರುದ್ಧ ಆಡಿರಲಿಲ್ಲ. ಮೊದಲ ಮಗುವಿಗೆ ತಂದೆಯಾದ ಖುಷಿಯಲ್ಲಿ ಪಂದ್ಯದಿಂದ ಹೊರಗುಳಿದಿದ್ದರು. ಒಂದು ಲೆಕ್ಕಕ್ಕೆ ಸೇಡಿನ ಪಂದ್ಯ ಎಂದೇ ಕರೆಯಲ್ಪಡುತ್ತಿದ್ದ ಪಂದ್ಯದಲ್ಲಿ ಅಶುತೋಷ್ ರಾಣಾ ರಣರೋಚಕ ಬ್ಯಾಟಿಂಗಿನಿಂದಾಗಿ ಡೆಲ್ಲಿ ಪಂದ್ಯವನ್ನು ಗೆದ್ದಿದೆ.

ADVERTISEMENT
ADVERTISEMENT
Exit mobile version