ಸಂಖ್ಯಾಶಾಸ್ತ್ರವು ವ್ಯಕ್ತಿಯ ಜೀವನದ ಏರಿಳಿತಗಳನ್ನು ತಿಳಿದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಹುಟ್ಟಿದ ದಿನಾಂಕದ ಆಧಾರದ ಮೇಲೆ ಇಂದು ನಿಮ್ಮ ವೃತ್ತಿ, ವ್ಯವಹಾರ, ಕೌಟುಂಬಿಕ ಜೀವನ ಮತ್ತು ಆರ್ಥಿಕ ಸ್ಥಿತಿಗತಿ ಹೇಗಿರಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಜನ್ಮಸಂಖ್ಯೆ 1,10,19,28
ಇಂದು ಅಸಾಧ್ಯವೆಂದು ಭಾವಿಸಿದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ನಿಮ್ಮನ್ನು ಅಪಹಾಸ್ಯ ಮಾಡಿದವರೇ ನಿಮ್ಮ ಸಾಧನೆ ನೋಡಿ ಬೆರಗಾಗಲಿದ್ದಾರೆ. ತಂದೆ-ತಾಯಿಯ ಪ್ರವಾಸಕ್ಕಾಗಿ ಹಣ ವಿನಿಯೋಗಿಸುವುದರಿಂದ ಮಾನಸಿಕ ತೃಪ್ತಿ ಸಿಗಲಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವವರಿಗೆ ಇಂದು ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಉತ್ತಮ.
ಜನ್ಮಸಂಖ್ಯೆ 2, 11, 20, 29
ಇಂದು ಸ್ವಲ್ಪ ಮಟ್ಟಿಗೆ ಏಕಾಂಗಿತನ ಅನುಭವಿಸಬಹುದು. ನಿಗದಿಪಡಿಸಿದ ಭೇಟಿಗಳು ಕೊನೆ ಕ್ಷಣದಲ್ಲಿ ರದ್ದಾಗುವ ಸಾಧ್ಯತೆ ಇದೆ. ಆದರೂ, ಹೊಸ ವ್ಯವಹಾರಕ್ಕೆ ಬಂಡವಾಳ ಹೂಡಲು ಪ್ರಯತ್ನಿಸುತ್ತಿರುವವರಿಗೆ ಪ್ರಭಾವಿ ವ್ಯಕ್ತಿಗಳ ನೆರವು ಸಿಗಲಿದೆ. ಆತಂಕ ಪಡದೆ ತಾಳ್ಮೆಯಿಂದ ಇರುವುದು ಇಂದಿನ ಅಗತ್ಯ.
ಜನ್ಮಸಂಖ್ಯೆ 3,12,21,30
ಕೊಟ್ಟ ಭರವಸೆ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಆರ್ಥಿಕ ಅಸ್ಥಿರತೆಯ ಭಾವ ನಿಮ್ಮನ್ನು ಕಾಡಬಹುದು. ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ವಾಹನಗಳ ಆಧುನೀಕರಣ ಅಥವಾ ಮನೆ ರಿಪೇರಿ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಕ್ಷೇಮ. ಮಾರುಕಟ್ಟೆಯ ಟ್ರೆಂಡ್ ಅರಿತು ಮುನ್ನಡೆಯಿರಿ.
ಜನ್ಮಸಂಖ್ಯೆ 4,13, 22, 31
ದೊಡ್ಡ ಯೋಜನೆಗಳಿಗೆ ಕೈ ಹಾಕುವ ಮುನ್ನ ಲಾಭದ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿರಲಿ. ಸರ್ಕಾರಿ ನೀತಿಗಳ ಬದಲಾವಣೆಯಿಂದ ನಿರೀಕ್ಷಿತ ಲಾಭದಲ್ಲಿ ಏರುಪೇರಾಗಬಹುದು. ಹಣ್ಣು-ತರಕಾರಿ ಬೆಳೆಗಾರರಿಗೆ ಲಾಭದಾಯಕ ದಿನ. ಚಿತ್ರಮಂದಿರ ಮಾಲೀಕರು ಹೊಸ ಬದಲಾವಣೆಗೆ ಕುಟುಂಬದ ಬೆಂಬಲ ಪಡೆಯಲಿದ್ದಾರೆ.
ಜನ್ಮಸಂಖ್ಯೆ 5,14 ,23
ಇತರರ ಮಾತುಗಳಿಂದ ಮಾನಸಿಕವಾಗಿ ನೋವು ಅನುಭವಿಸಬಹುದು. ವೃತ್ತಿ ಜೀವನದಲ್ಲಿ ಉತ್ಸಾಹ ಕಡಿಮೆ ಇರಲಿದೆ. ಹಳೆಯ ಸಹೋದ್ಯೋಗಿಗಳು ನೀಡುವ ಹೊಸ ಉದ್ಯೋಗದ ಆಫರ್ಗಳನ್ನು ಗಂಭೀರವಾಗಿ ಪರಿಗಣಿಸಿ. ಸಂಗಾತಿಯ ಉದ್ಯೋಗದ ವಿಚಾರದಲ್ಲಿ ಸ್ವಲ್ಪ ಅನಿಶ್ಚಿತತೆ ಕಂಡುಬಂದರೂ ಶೀಘ್ರವೇ ಪರಿಹಾರ ಸಿಗಲಿದೆ.
ಜನ್ಮಸಂಖ್ಯೆ 6, 15, 24
ವ್ಯಾಪಾರ ವಿಸ್ತರಣೆಗೆ ಇಂದು ಉತ್ತಮ ದಿನ. ಸಾವಯವ ಉತ್ಪನ್ನಗಳ ವ್ಯವಹಾರದಲ್ಲಿರುವವರು ಹೊಸ ಹೂಡಿಕೆಗೆ ಮುಂದಾಗಬಹುದು. ದೂರದ ಪ್ರಯಾಣದಿಂದ ಅನುಕೂಲವಾಗಲಿದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳಬೇಡಿ. ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಿರಲಿದೆ.
ಜನ್ಮಸಂಖ್ಯೆ 7, 16,25
ಬಾಕಿ ಉಳಿದಿದ್ದ ಸರ್ಕಾರಿ ಕೆಲಸಗಳು ಪವಾಡದಂತೆ ಪೂರ್ಣಗೊಳ್ಳಲಿವೆ. ಸ್ನೇಹಿತರ ಸಲಹೆಗಳು ವರದಾನವಾಗಲಿವೆ. ಹಣಕಾಸಿನ ಮುಗ್ಗಟ್ಟು ಎದುರಾದಾಗ ಸಂಗಾತಿಯ ಸಹಾಯ ಸಿಗಲಿದೆ. ಬಾಕಿ ಉಳಿದಿರುವ ಹಣ ವಸೂಲಿಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ವ್ಯವಹಾರಗಳು ಲಾಭದತ್ತ ಮುನ್ನಡೆಯಲಿವೆ.
ಜನ್ಮಸಂಖ್ಯೆ 8, 17, 26
ಕೆಲಸದಲ್ಲಿ ಅವಸರ ಮಾಡಬೇಡಿ. ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ. ಕೌಟುಂಬಿಕವಾಗಿ ಒಡಹುಟ್ಟಿದವರ ಜೊತೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ. ಮಾಧ್ಯಮದವರಿಗೆ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು. ಯಾರನ್ನೂ ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಹಿರಿಯರ ಸಲಹೆ ಪಡೆದು ಹೊಸ





