ಮದುವೆಯಾದ ಕೇವಲ 36 ದಿನಗಳಲ್ಲಿ ಪತ್ನಿಯೇ ತನ್ನ ಪತಿಯನ್ನು ವಿಷ ಬೆರೆಸಿ ಕೊಂದ ಆಘಾತಕಾರಿ ಘಟನೆ ಛತ್ತೀಸ್ಗಢದ ಬಿಷ್ಣುಪುರ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಸುನೀತಾ ಎಂಬ ಮಹಿಳೆ, ಆಕೆಯ ಪತಿ ಬುಧನಾಥ್ ಸಿಂಗ್ನನ್ನು ಕೊಂದಿದ್ದಾಳೆ. ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದೇನೆ ಎಂದು ಆರೋಪಿಸಿ, ಸುನೀತಾ ಈ ಕೃತ್ಯವನ್ನು ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆಯೇ ಆರೋಪಿಯನ್ನು ಬಂಧಿಸಲಾಗಿದ್ದು, ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ.
ಮೇ 11, 2025 ರಂದು, ಸುನೀತಾಳನ್ನು ಜಾರ್ಖಂಡ್ನ ಗರ್ವಾ ಜಿಲ್ಲೆಯ ಬಹೋಕುಂದರ್ ಗ್ರಾಮದ ಬುಧನಾಥ್ ಸಿಂಗ್ಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ, ಮದುವೆಯ ಮರುದಿನವೇ ಸುನೀತಾ ತನ್ನ ಪತಿಯನ್ನು ಇಷ್ಟಪಡುವುದಿಲ್ಲ ಎಂದು ಹೇಳಿ, ತಂದೆಯ ಮನೆಗೆ ಹಿಂತಿರುಗಿದ್ದಳು. ಈ ಘಟನೆಯಿಂದ ಎರಡೂ ಕುಟುಂಬಗಳು ಆಘಾತಕ್ಕೊಳಗಾದವು. ಪಂಚಾಯಿತಿಯಲ್ಲಿ ಹಿರಿಯರು ಸುನೀತಾಳನ್ನು ಮನವೊಲಿಸಿ, ಮತ್ತೆ ಗಂಡನ ಮನೆಗೆ ಕಳುಹಿಸಿದರು. ಆದರೆ, ಸುನೀತಾಳ ಮನಸ್ಸಿನಲ್ಲಿ ಕೊಲೆಯ ಸಂಚು ರೂಪಿಸಿದಳು.
ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲದ ಕಾರಣ ಸುನೀತಾ, ಬುಧನಾಥ್ನನ್ನು ಕೊಲ್ಲಲು ನಿರ್ಧರಿಸಿದಳು. ಶನಿವಾರ, ತರಕಾರಿಗಳಿಗೆ ರಾಸಾಯನಿಕ ಸಿಂಪಡಣೆಯ ನೆಪದಲ್ಲಿ, ಆಕೆ ತನ್ನ ಪತಿಯೊಂದಿಗೆ ಮಾರುಕಟ್ಟೆಗೆ ತೆರಳಿ ಕೀಟನಾಶಕ ಖರೀದಿಸಿದಳು. ಭಾನುವಾರ ರಾತ್ರಿ, ಆಕೆ ತನ್ನ ಗಂಡನ ಊಟದಲ್ಲಿ ಕೀಟನಾಶಕವನ್ನು ಬೆರೆಸಿದಳು. ಮರುದಿನ ಬೆಳಿಗ್ಗೆ, ಬುಧನಾಥ್ ಎಚ್ಚರಗೊಳ್ಳದಿರುವುದನ್ನು ಗಮನಿಸಿದ ಅವನ ತಾಯಿ, ಅವನು ಸಾವನ್ನಪ್ಪಿರುವುದಾಗಿ ತಿಳಿದಿದೆ.
ತಾಯಿಯ ದೂರಿನಿಂದ ಬಯಲಾಯಿತು ರಹಸ್ಯ
ಬುಧನಾಥ್ನ ತಾಯಿ, ತಮ್ಮ ಮಗನ ಸಾವಿಗೆ ಸುನೀತಾಳೇ ಕಾರಣ ಎಂದು ಆರೋಪಿಸಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ಊಟದಲ್ಲಿ ವಿಷ ಬೆರೆಸಲಾಗಿದೆ ಎಂದು ಶಂಕಿಸಿದ ಕುಟುಂಬ ಸದಸ್ಯರು, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ಸುನೀತಾಳನ್ನು ವಶಕ್ಕೆ ಪಡೆದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯು ಸಾವಿನ ನಿಖರ ಕಾರಣ ದೃಢಪಡಿಸಲಿದೆ.
ಪೊಲೀಸರು ಸುನೀತಾಳನ್ನು ವಿಚಾರಣೆಗೊಳಪಡಿಸಿದ್ದಾರೆ. ಆಕೆಯ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ತನಿಖೆಯು ಆಕೆಯ ಒಳಸಂಚನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸಾಗಿದೆ. ಸುನೀತಾಳು ನ್ಯಾಯಾಂಗ ಬಂಧನದಲ್ಲಿದ್ದಾಳೆ.