ನರಿ ಬುದ್ಧಿ ತೋರಿಸಿದ ಪಾಕ್: ವೈಷ್ಣೋದೇವಿ ದೇವಾಲಯದ ಮೇಲೆ ಡ್ರೋನ್ ದಾಳಿ

ಐಶ್ವರ್ಯ (9)
ADVERTISEMENT
ADVERTISEMENT

ಶ್ರೀನಗರ: ಪಾಕಿಸ್ತಾನವು ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಒಪ್ಪಂದವನ್ನು ಉಲ್ಲಂಘಿಸಿ, ಜಮ್ಮು ಮತ್ತು ಕಾಶ್ಮೀರದ ಪವಿತ್ರ ವೈಷ್ಣೋದೇವಿ ದೇವಾಲಯದ ಮೇಲೆ ಡ್ರೋನ್ ದಾಳಿಗೆ ಯತ್ನಿಸಿದೆ. ಶನಿವಾರ ಸಂಜೆ 8 ಗಂಟೆಯಿಂದ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ಡ್ರೋನ್ ದಾಳಿಗಳನ್ನು ಆರಂಭಿಸಿತ್ತು. ಕೇವಲ 20 ನಿಮಿಷಗಳಲ್ಲಿ 50ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿರುವುದಾಗಿ ಮಾಹಿತಿ ತಿಳಿದುಬಂದಿದೆ. ಈ ದಾಳಿಗಳಿಂದ ಶ್ರೀನಗರ, ಜಮ್ಮು, ಉಧಂಪುರ ಮತ್ತು ಪಂಜಾಬ್‌ನ ಅಮೃತಸರದ ಗಡಿಯಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ. ಮುನ್ನೆಚ್ಚರಿಕೆಯಾಗಿ, ಆಡಳಿತವು ಹಲವು ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಿದೆ.

ಕದನ ವಿರಾಮ ಒಪ್ಪಂದವನ್ನು ಕೇವಲ 4 ಗಂಟೆಗಳಲ್ಲಿ ಉಲ್ಲಂಘಿಸಿದ ಪಾಕಿಸ್ತಾನ, ಗುಜರಾತ್, ರಾಜಸ್ಥಾನ, ಜಮ್ಮು ಮತ್ತು ಶ್ರೀನಗರದಂತಹ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿತ್ತು. ಈ ದಾಳಿಗಳಲ್ಲಿ ಒಂದು ಡ್ರೋನ್ ವೈಷ್ಣೋದೇವಿ ದೇವಾಲಯದ ಕಡೆಗೆ ಸಾಗುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಅಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು.

ಪಾಕಿಸ್ತಾನಿ ಸೇನೆಯ ಈ ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಆತಂಕವನ್ನುಂಟುಮಾಡಿವೆ. ಶ್ರೀನಗರದಲ್ಲಿ 20 ನಿಮಿಷಗಳಲ್ಲಿ 50ಕ್ಕೂ ಹೆಚ್ಚು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ. ವೈಷ್ಣೋದೇವಿ ದೇವಾಲಯದ ಗೋಪುರಗಳ ಮೇಲೆ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಶಂಕರಾಚಾರ್ಯ ದೇವಾಲಯದ ಬಳಿಯೂ ದಾಳಿಯ ಯತ್ನ ನಡೆದಿದೆ. ಇದೇ ವೇಳೆ, ಪಂಜಾಬ್‌ನ ಅಮೃತಸರದ ಗಡಿಯಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ.

Exit mobile version