ಉ.ಪ್ರಧೇಶ, ಅಕ್ಟೋಬರ್ 02: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಪ್ರತಿಪಾದಕರಲ್ಲೊಬ್ಬರಾಗಿದ್ದ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ್ ಛನ್ನುಲಾಲ್ ಮಿಶ್ರಾ ಇಂದು (ಗುರುವಾರ) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ತಮ್ಮ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದರು.
ಅವರ ಪುತ್ರಿ ನಮ್ರತಾ ಮಿಶ್ರಾ ಹೇಳಿಕೆ ಪ್ರಕಾರ, ಪಂಡಿತ್ ಮಿಶ್ರಾ ಅವರು ಗುರುವಾರ ಬೆಳಿಗ್ಗೆ 4 ಗಂಟೆಗೆ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು, ಹೃದಯ ಸಂಬಂಧಿ ತೊಂದರೆ, ಹಿಮೋಗ್ಲೋಬಿನ್ ಕೊರತೆ ಮತ್ತು ಹಾಸಿಗೆ ಹುಣ್ಣುಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗಾಗಿ ಬಳಲುತ್ತಿದ್ದರು. ಇತ್ತೀಚೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಸರ್ ಸುಂದರ್ಲಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
सुप्रसिद्ध शास्त्रीय गायक पंडित छन्नूलाल मिश्र जी के निधन से अत्यंत दुख हुआ है। वे जीवनपर्यंत भारतीय कला और संस्कृति की समृद्धि के लिए समर्पित रहे। उन्होंने शास्त्रीय संगीत को जन-जन तक पहुंचाने के साथ ही भारतीय परंपरा को विश्व पटल पर प्रतिष्ठित करने में भी अपना अमूल्य योगदान… pic.twitter.com/tw8jb5iXu7
— Narendra Modi (@narendramodi) October 2, 2025
ದುರಾದೃಷ್ಟವಶಾತ್ ಇಂದು ಸಾವನ್ನಪ್ಪಿದ್ದಾರೆ. ಪಂಡಿತ್ ಮಿಶ್ರಾ ಅವರ ಪಾರ್ಥಿವ ಶರೀರವನ್ನು ಮಿರ್ಜಾಪುರದಿಂದ ವಾರಣಾಸಿಗೆ ಕೊಂಡೊಯ್ಯಲಾಗಿದೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಮಣಿಕರ್ಣಿಕಾ ಘಾಟ್ನಲ್ಲಿ ಸಂಪೂರ್ಣ ರಾಜಕೀಯ ಗೌರವಗಳೊಂದಿಗೆ ನಡೆಯಲಿದೆ.
ಪಂಡಿತ್ ಛನ್ನುಲಾಲ್ ಮಿಶ್ರಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬನಾರಸ್ ಘರಾನಾ ಸಂಪ್ರದಾಯದ ಪ್ರಮುಖ ಪಾಲಕರಾಗಿ ಪರಿಗಣಿಸಲ್ಪಡುತ್ತಿದ್ದರು. ಖಯಾಲ್, ಠುಮ್ರಿ ಮತ್ತು ಭಜನೆ ಗಳ ಭಾವಪೂರ್ಣ ನಿರೂಪಣೆಗಳಿಗೆ ಹೆಸರುವಾಸಿಯಾಗಿದ್ದ ಅವರ ಕಲಾತ್ಮಕತೆ, ಪೀಳಿಗೆಯಿಂದ ಪೀಳಿಗೆಗೆ ಭಾರತೀಯ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಮುಂದುವರಿಸಿತು. ಅವರ “ರಾಗ ವಿರಾಟ್” ಮತ್ತು “ತುಮ್ರಿ ಮೆಹ್ಫಿಲ್” ನಂತಹ ಆಲ್ಬಮ್ಗಳು ಶಾಸ್ತ್ರೀಯ ಸಂಗೀತ ಪ್ರೇಮಿಗಳಲ್ಲಿ ಇಂದಿಗೂ ಅಚ್ಚುಮೆಚ್ಚಿನವಾಗಿವೆ.
ಸಂಗೀತ ಕ್ಷೇತ್ರದಲ್ಲಿನ ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ, ಭಾರತ ಸರಕಾರ ಅವರಿಗೆ 2010 ರಲ್ಲಿ ಪದ್ಮಭೂಷಣ ಮತ್ತು 2020 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳಿಂದ ಸನ್ಮಾನಿಸಿದೆ. 2000 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತ್ತು.
ಈ ಸಂದಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ, 2014 ರಲ್ಲಿ ವಾರಣಾಸಿ ಸ್ಥಾನದಿಂದ ತಮ್ಮ ಪ್ರಸ್ತಾವಕರಾಗಿದ್ದ ಪಂಡಿತ್ ಮಿಶ್ರಾ ಅವರ ಪ್ರೀತಿ ಮತ್ತು ಆಶೀರ್ವಾದಗಳನ್ನು ಪಡೆದಿರುವುದು ತಮ್ಮ ಅದೃಷ್ಟ ಎಂದು ಪ್ರಧಾನಿ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.





