ಭಾರತೀಯ ಸೇನೆಯ ವೀರತೆಯನ್ನು ತೆರೆಗೆ ತರುವ ಹೊಸ ಸಿನಿಮಾ ತಯಾರಿ ಆರಂಭವಾಗಿದೆ. ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಬರಲಿರುವ ಈ ಸಿನಿಮಾ, 2025ರ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಟಾರ್ಗೆಟೆಡ್ ಮಿಲಿಟರಿ ದಾಳಿಯನ್ನು ಆಧರಿಸಿದೆ.
ಪಹಲ್ಗಾಮ್ ದಾಳಿಯಲ್ಲಿ ಉಗ್ರರು 26 ಮಂದಿ ಪ್ರವಾಸಿಗರನ್ನು ಕೊಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಮೇ 7, 2025ರಂದು ಆಪರೇಷನ್ ಸಿಂಧೂರ್ ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳ ಮೇಲೆ ಮಿಸೈಲ್ ಮತ್ತು ಏರ್ ಸ್ಟ್ರೈಕ್ಗಳನ್ನು ನಡೆಸಿತು. ಈ ಆಪರೇಷನ್ನಲ್ಲಿ ಹಲವು ಉಗ್ರ ಕ್ಯಾಂಪ್ಗಳು ಧ್ವಂಸವಾದವು ಎಂದು ವರದಿಗಳಿವೆ.
ಈ ಐತಿಹಾಸಿಕ ಘಟನೆಯನ್ನು ಆಧರಿಸಿ ಬರಲಿರುವ ಸಿನಿಮಾಕ್ಕೆಯೇ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಸಿದ್ಧಿ ಪಡೆದವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರೊಡ್ಯೂಸರ್ ಭೂಷಣ್ ಕುಮಾರ್ ಜೊತೆಗೂಡಿ ಈ ಪ್ರಾಜೆಕ್ಟ್ ಮಾಡಲಾಗುತ್ತಿದೆ. ಸಿನಿಮಾ T-Series ಮತ್ತು I Am Buddha Production ಅಡಿಯಲ್ಲಿ ತಯಾರಾಗಲಿದೆ.
ವಿವೇಕ್ ಅಗ್ನಿಹೋತ್ರಿ ಈಗಾಗಲೇ ಆಪರೇಷನ್ನಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಸೈನ್ಯಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಚಿತ್ರಕಥೆ ರಚನೆಯ ಕೆಲಸ ನಡೆಯುತ್ತಿದ್ದು, ನಟರು ಮತ್ತು ಇತರ ವಿವರಗಳು ಶೀಘ್ರದಲ್ಲೇ ಅಂತಿಮಗೊಳ್ಳಲಿವೆ. “ಇದು ಕೇವಲ ಸಿನಿಮಾ ಅಲ್ಲ, ಭಾರತದ ಅನ್ಸಂಗ್ ವಾರಿಯರ್ಸ್ಗೆ ಸಲ್ಲಿಸುವ ಗೌರವ” ಎಂದು ವಿವೇಕ್ ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ತಮ್ಮನ್ನು ರಾಷ್ಟ್ರೀಯವಾದಿ ನಿರ್ದೇಶಕ ಎಂದು ಕರೆದುಕೊಳ್ಳುತ್ತಾರೆ. ಅವರ ಹಿಂದಿನ ಸಿನಿಮಾಗಳು ಯಶಸ್ವಿಯಾಗಿದ್ದರೂ ವಿವಾದಗಳಿಗೂ ಗುರಿಯಾಗಿದ್ದವು. ಈ ಹೊಸ ಪ್ರಾಜೆಕ್ಟ್ ಭಾರತೀಯ ಸೇನೆಯ ಶೂರತೆಯನ್ನು ತೋರಿಸುವ ದೊಡ್ಡ ಪ್ಯಾಟ್ರಿಯಾಟಿಕ್ ಫಿಲ್ಮ್ ಆಗಲಿದೆ ಎಂಬ ನಿರೀಕ್ಷೆಯಿದೆ.





