ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೂನಿಯನ್ ಬಜೆಟ್ 2026-27 ಮಂಡಿಸುವ ಮೂಲಕ ಭಾರತದ ಇತಿಹಾಸದಲ್ಲಿ ಸತತ 9ನೇ ಬಾರಿಗೆ ಬಜೆಟ್ ಪ್ರಸ್ತುತಪಡಿಸಿದ ದಾಖಲೆ ನಿರ್ಮಿಸಿದ್ದಾರೆ. ಫೆಬ್ರವರಿ 1, 2026ರ ಭಾನುವಾರದಂದು (ಭಾರತದಲ್ಲಿ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆ) ಸಂಸತ್ತಿನಲ್ಲಿ ನಡೆದ ಈ ಐತಿಹಾಸಿಕ ಘಟನೆಯಲ್ಲಿ ಅವರು ಕಾಂಚೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದರು. ಈ ಸೀರೆಯು ತಮಿಳುನಾಡಿನ ಶತಮಾನಗಳ ಹಳೆಯ ಕೈಮಗ್ಗ ನೇಕಾರಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ.
ಬಜೆಟ್ ಮಂಡನೆಯ ಮುಖ್ಯ ಅಂಶಗಳು :
ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಭಾರತದ ಆರ್ಥಿಕತೆಯ ಬಲವನ್ನು ಒತ್ತಿ ಹೇಳಿದರು. ಜಾಗತಿಕ ಅಸ್ಥಿರತೆ ನಡುವೆಯೂ ಭಾರತದ ಆರ್ಥಿಕತೆ ಸುಭದ್ರವಾಗಿ, ಶಿಸ್ತುಬದ್ಧವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಮುಖ್ಯ ಪಾಯಿಂಟ್ಗಳು:
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾರತದ ಆರ್ಥಿಕತೆಯ ಬಲವನ್ನು ಈ ರೀತಿ ಒತ್ತಿ ಹೇಳಿದರು:
- ಭಾರತದ ಆರ್ಥಿಕತೆ ಸುಭದ್ರವಾಗಿದೆ ಮತ್ತು ಶಿಸ್ತುಬದ್ಧವಾಗಿದೆ.
- ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕತೆ ಸುಭದ್ರವಾಗಿ ಮುನ್ನಡೆಯುತ್ತಿದೆ.
- ಸರ್ಕಾರವು ಸಾಕಷ್ಟು ಆರ್ಥಿಕ ಸುಧಾರಣೆಗಳನ್ನು ಮಾಡಿದೆ; ಆತ್ಮನಿರ್ಭರತೆಯ ಆಧಾರದ ಮೇಲೆ ಸುಧಾರಣೆಗಳು.
- ಆಮದಿನ ಮೇಲೆ ದೇಶದ ಆರ್ಥಿಕತೆ ಅವಲಂಬಿತವಾಗಿಲ್ಲ.
- ದೇಶದ ಜಿಡಿಪಿ ಬೆಳವಣಿಗೆಯು ವಿಶ್ವದಲ್ಲೇ ಅತಿ ಹೆಚ್ಚು (ಸುಮಾರು 7% ಮಟ್ಟದಲ್ಲಿ).
- ಹೊಸ ತಂತ್ರಜ್ಞಾನಗಳು (ವಿಶೇಷವಾಗಿ ಎಐ) ಆಡಳಿತ ಸುಧಾರಣೆಗೆ ಸಹಾಯ ಮಾಡಿವೆ.
- ವಿಕಸಿತ ಭಾರತ ಆಶಯದ ಅಡಿಯಲ್ಲಿ ಆರ್ಥಿಕಾಭಿವೃದ್ಧಿ.
- ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಮುನ್ನುಗ್ಗುತ್ತಿದೆ.
- ರೈತರು, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಲಾಭ ತಲುಪುತ್ತಿದೆ.
- ಇದು ಕರ್ತವ್ಯ ಭವನದಲ್ಲಿ ಸಿದ್ಧವಾದ ಮೊದಲ ಬಜೆಟ್.
- ಮೂರು ಪ್ರಮುಖ ಕರ್ತವ್ಯಗಳು:
- ದೇಶದ ಆರ್ಥಿಕ ಅಭಿವೃದ್ಧಿ (ಮೊದಲ ಕರ್ತವ್ಯ).
- ಜನರ ನಿರೀಕ್ಷೆಗಳಿಗೆ ಸ್ಪಂದಿಸುವುದು (ಎರಡನೇ ಕರ್ತವ್ಯ).
- ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲ ಜಾತಿ, ಧರ್ಮ, ಸಮುದಾಯಗಳ ಶ್ರೇಯೋಭಿವೃದ್ಧಿ ಮತ್ತು ಭಾಗೀದಾರಿಕೆ (ಮೂರನೇ ಕರ್ತವ್ಯ).
- ಎಐ ತಂತ್ರಜ್ಞಾನದ ಮೂಲಕ ಆಡಳಿತ ಸುಧಾರಣೆ.
- ಉದ್ಯೋಗ ಸೃಷ್ಟಿ ಮತ್ತು ಉದ್ಯಮಗಳ ಅಭಿವೃದ್ಧಿಗೆ ಆದ್ಯತೆ.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗ.
- ಆರ್ಥಿಕ ಅಭಿವೃದ್ಧಿಗೆ 6 ಪ್ರಮುಖ ಪ್ರದೇಶಗಳಲ್ಲಿ ಸುಧಾರಣೆ ಅಗತ್ಯ: ಉತ್ಪಾದನಾ ವಲಯ, ಕೈಗಾರಿಕಾ ವಲಯ, ಎಂಎಸ್ಎಂಇ, ಮೂಲಸೌಕರ್ಯ ಅಭಿವೃದ್ಧಿ, ರಕ್ಷಣೆ ಮತ್ತು ನಗರ ಕೇಂದ್ರೀಕೃತ ಆರ್ಥಿಕಾಭಿವೃದ್ಧಿ.
- ಬಯೋ ಫಾರ್ಮಾ ಶಕ್ತಿ, ಉದ್ಯಮದ ಅಭಿವೃದ್ಧಿ.
ಪ್ರಮುಖ ಘೋಷಣೆಗಳು ಮತ್ತು ಕ್ರಮಗಳು :
ಬಜೆಟ್ ಆರ್ಥಿಕ ಬೆಳವಣಿಗೆಗಾಗಿ ಆರು ಪ್ರದೇಶಗಳಲ್ಲಿ ಹಸ್ತಕ್ಷೇಪ ಮಾಡುವುದಾಗಿ ಘೋಷಿಸಲಾಗಿದೆ:
- 7 ವ್ಯೂಹಾತ್ಮಕ ವಲಯಗಳಲ್ಲಿ ಉತ್ಪಾದನಾ ಸ್ಕೇಲ್ ಅಪ್.
- ಪರಂಪರಾಗತ ಕೈಗಾರಿಕಾ ವಲಯಗಳ ಪುನರುಜ್ಜೀವನ.
- ಚಾಂಪಿಯನ್ MSMEಗಳ ಸೃಷ್ಟಿ.
- ಮೂಲಸೌಕರ್ಯಕ್ಕೆ ತಳ್ಳುವಿಕೆ.
- ದೀರ್ಘಕಾಲೀನ ಭದ್ರತೆ ಮತ್ತು ಸ್ಥಿರತೆ.
- ನಗರ ಆರ್ಥಿಕ ಪ್ರದೇಶಗಳ ಅಭಿವೃದ್ಧಿ.
ಪ್ರಮುಖ ಘೋಷಣೆಗಳು:
- ಬಯೋಫಾರ್ಮಾ ಶಕ್ತಿ ಯೋಜನೆಗೆ ಮುಂದಿನ 5 ವರ್ಷಗಳಲ್ಲಿ ₹10,000 ಕೋಟಿ ಹೂಡಿಕೆ. ಭಾರತವನ್ನು ಜಾಗತಿಕ ಬಯೋಫಾರ್ಮಾ ಹಬ್ ಆಗಿ ಮಾಡುವುದು.
- 3 ಹೊಸ ಫಾರ್ಮಸ್ಯುಟಿಕಲ್ ಸಂಸ್ಥೆಗಳು, ಕ್ಲಿನಿಕಲ್ ಟ್ರಯಲ್ ಸೆಂಟರ್ಗಳು.
- ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 . ಸೆಮಿಕಂಡಕ್ಟರ್ ಸರಬರಾಜು ಸರಪಳಿ ಬಲಪಡಿಸುವುದು.
- ರೇರ್ ಅರ್ಥ್ ಕಾರಿಡಾರ್ಗಳ ಸ್ಥಾಪನೆ (ತಮಿಳುನಾಡು, ಕೇರಳ, ಒಡಿಶಾ, ಆಂಧ್ರಪ್ರದೇಶ).
- 3 ಕೆಮಿಕಲ್ ಪಾರ್ಕ್ಗಳ ನಿರ್ಮಾಣ.
- ಎಂಎಸ್ಎಂಇ ಅಭಿವೃದ್ಧಿಗೆ ₹10,000 ಕೋಟಿ ನಿಧಿ, ಮೈಕ್ರೋ ಎಂಟರ್ಪ್ರೈಸಸ್ಗೆ ಹಣಕಾಸು ನೆರವು.
- ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ಗಳು, ಕೌಶಲ್ಯಾಭಿವೃದ್ಧಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಉನ್ನತೀಕರಣ.
- 200 ಲೆಗಸಿ ಕೈಗಾರಿಕಾ ಕ್ಲಸ್ಟರ್ಗಳ ಪುನರುಜ್ಜೀವನ.
- ಆತ್ಮನಿರ್ಭರ ಭಾರತಕ್ಕಾಗಿ ₹2,000 ಕೋಟಿ ಅನುದಾನ.
- ರಾಷ್ಟ್ರೀಯ ವಾಟರ್ ವೇಸ್, ಕೋಸ್ಟಲ್ ಕಾರ್ಗೊ ಪ್ರಮೋಷನ್ ಸ್ಕೀಮ್.
- ಎಐ ತಂತ್ರಜ್ಞಾನದ ಮೂಲಕ ಆಡಳಿತ ಸುಧಾರಣೆ, ಉದ್ಯೋಗ ಸೃಷ್ಟಿ ಆದ್ಯತೆ.
- ಪ್ರವಾಸೋದ್ಯಮ ಅಭಿವೃದ್ಧಿಗೆ ಸೀ ಪ್ಲೇನ್ಗಳ ಅಭಿವೃದ್ಧಿ.
- ಕಾರ್ಬನ್ ಸಂಗ್ರಹ ತಾಂತ್ರಿಕತೆ ಅಭಿವೃದ್ಧಿಗೆ ಕ್ರಮ.
- ಇಂಧನ, ಸ್ಟೀಲ್, ರಾಸಾಯನಿಕ ಉದ್ಯಮಗಳ ಅಭಿವೃದ್ಧಿಗೆ ಒತ್ತು.
- ದೇಶದ ದೇಗುಲ ನಗರಗಳ ಅಭಿವೃದ್ಧಿಗೆ ಕ್ರಮ.
- ದೇಶದ 10 ಬಂದರುಗಳನ್ನು ಸಂಪರ್ಕಿಸುವ ಯೋಜನೆ.
- ಹೈಸ್ಪೀಡ್ ರೈಲು ಕಾರಿಡಾರ್ಗಳ ಸ್ಥಾಪನೆಗೆ ಕ್ರಮ.
- ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದ್ರಾಬಾದ್ ರೈಲು ಕಾರಿಡಾರ್.
- ಭಾರತದ ಬ್ಯಾಂಕಿಂಗ್ ವಲಯ ಭಾರೀ ಲಾಭದಲ್ಲಿದೆ.
- ದೇಶದ ಶೇ. 98ರಷ್ಟು ಗ್ರಾಮಗಳಿಗೆ ಬ್ಯಾಂಕಿಂಗ್ ವಲಯ ತಲುಪಿದೆ.
- ವಿಕಸಿತ ಭಾರತದ ಬ್ಯಾಂಕಿಂಗ್ ಗಾಗಿ ಉನ್ನತಮಟ್ಟದ ಸಮಿತಿ ರಚನೆ.
- ಭಾರತದ ಮುಂದಿನ ಹಂತದ ಅಭಿವೃದ್ಧಿಗಾಗಿ ಯೋಜನೆ.
- ಗ್ರಾಮೀಣ ವಿದ್ಯುದೀಕರಣ ನಿಗಮ ಸ್ಥಾಪನೆ.
- ವಿದೇಶಿ ಹೂಡಿಕೆ ನಿರ್ವಹಣೆಗೆ ಹೊಸ ಘಟಕ.
- ಕಾರ್ಪೊರೇಟ್ ಬಾಂಡ್, ಮುನ್ಸಿಪಲ್ ಬಾಂಡ್ ನಿರ್ವಹಣೆಗೆ ಕ್ರಮ.
- ಅಮೃತ್ ಯೋಜನೆಯಡಿ ಬಾಂಡ್ ನಿರ್ವಹಣೆ.
- ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ಗೆ ಸರ್ಕಾರದ ಆದ್ಯತೆ.
- ವಿದೇಶಗಳಿಂದ ಭಾರತದ ಕಾರ್ಪೊರೇಟ್ ಸಂಸ್ಥೆಗಳಿಗೆ ಹೂಡಿಕೆ ಮಾರ್ಗ ಸರಳೀಕರಣ. ಸದ್ಯ ಇರುವ ಶೇ. 10 ಹೂಡಿಕೆ ಮಿತಿ ಶೇ. 20ಕ್ಕೆ ಏರಿಕೆ.
- ಕೃಷಿಕ, ಮಹಿಳೆ, ವಿಕಲಾಂಗರ ಶ್ರೇಯೋಭಿವೃದ್ಧಿಗೆ ಎಐ ಬಳಕೆ.
- 25 ಕೋಟಿ ಜನರನ್ನು ಸರ್ಕಾರ ಬಡತನದಿಂದ ಹೊರಗೆ ತಂದಿದೆ.ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿತ್ತು.
- ಸೇವಾ ವಲಯವು ಯುವ ಜನಾಂಗಕ್ಕೆ ಉದ್ಯೋಗಾವಕಾಶ ಒದಗಿಸಿದೆ. ಯುವ ಜನರ ಶಿಕ್ಷಣ, ಉದ್ಯೋಗ, ಉದ್ಯಮಕ್ಕೆ ನೆರವು.ಸೇವಾ ವಲಯದಲ್ಲಿ ಭಾರತ ವಿಶ್ವ ನಾಯಕ ಆಗಲಿದೆ. ಯುವ ಜನತೆಗೆ ಹೊಸ ತಂತ್ರಜ್ಞಾನ ಅಳವಡಿಕೆ, ಕಲಿಕೆಗೆ ಆದ್ಯತೆ.
- ಆರೋಗ್ಯ ವಲಯದಲ್ಲಿ ಹೊಸ ಕಲಿಕೆಗೆ ಆದ್ಯತೆ . ಹೊಸ ಸಂಸ್ಥೆಗಳ ನಿರ್ಮಾಣ ಹಲವು ರೀತಿಯ ಆರೋಗ್ಯ ಸೇವೆ ನೀಡಬಲ್ಲ ಬಹುಕೌಶಲ್ಯಗಳ ಕಲಿಕೆಗೆ ಆದ್ಯತೆ.
- ಮೆಡಿಕಲ್ ಟೂರಿಸಂ ಅಭಿವೃದ್ಧಿಗೆ ಆದ್ಯತೆ. ಇದಕ್ಕಾಗಿ 5 ಹಬ್ಗಳ ಸ್ಥಾಪನೆ ಆಯುಷ್ ಕೇಂದ್ರಗಳನ್ನೂ ಒಳಗೊಂಡ ಮೆಡಿಕಲ್ ಟೂರಿಸಂ ಹಬ್ ಸ್ಥಾಪನೆ. ಈ ಮೂಲಕ ಆರೋಗ್ಯ ವಲಯದಲ್ಲಿ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿ.
- ಯೋಗಕ್ಕೆ ಜಾಗತಿಕ ಮನ್ನಣೆ ಇದೆ: ಆಯುರ್ವೇದಕ್ಕೂ ಜಾಗತಿಕ ಮನ್ನಣೆ ಸಿಕ್ಕಿದೆ. ಆಯುರ್ವೇದ ಉತ್ಪನ್ನಗಳ ತಯಾರಿಕೆ, ಉತ್ಪಾದನೆ ವೇಗಗೊಳಿಸಲು ಕ್ರಮ, ಆಯುಷ್ ಫಾರ್ಮಸಿಗಳ ಸ್ಥಾಪನೆಗೆ ಸರ್ಕಾರದ ಕ್ರಮ.
- ಜಾಮ್ನಗರದಲ್ಲಿ ಆರೋಗ್ಯ ಹಬ್ ನಿರ್ಮಾಣ.
- ಪಶುಸಂಗೋಪನಾ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಕ್ರಮ. ಪಶುಸಂಗೋಪನಾ ಆಸ್ಪತ್ರೆ, ಲ್ಯಾಬ್ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವ.
- ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳ ನಿರ್ಮಾಣಕ್ಕೆ ಆದ್ಯತೆ.
- ಭಾರತೀಯ ಡಿಸೈನ್ ಉದ್ಯಮದ ಶ್ರೇಯೋಭಿವೃದ್ಧಿಗೂ ಕ್ರಮ.ಇದಕ್ಕಾಗಿ ರಾಷ್ಟ್ರೀಯ ಇನ್ ಸ್ಟಿಟ್ಯೂಟ್ ನಿರ್ಮಾಣಕ್ಕೆ ಯೋಜನೆ.
- 5 ಯೂನಿವರ್ಸಿಟಿ ಟೌನ್ ಶಿಪ್ ನಿರ್ಮಾಣಕ್ಕೆ ಆದ್ಯತೆ. ಸಂಶೋಧನಾ ಕಾಲೇಜು, ಸಂಸ್ಥೆಗಳ ನಿರ್ಮಾಣ.
- ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಯೋಜನೆ.
- ಆಸ್ಟ್ರೋ ಫಿಸಿಕ್ಸ್, ಬಾಹ್ಯಾಕಾಶ ವಿಜ್ಞಾನ ಕಲಿಕೆಗೆ ಹೊಸ ಯೋಜನೆ.
- ಪ್ರವಾಸೋದ್ಯಮ ರಂಗದಲ್ಲಿ ಉದ್ಯೋಗಾವಕಾಶ ವೃದ್ಧಿಗೆ ಕ್ರಮ.
- ಆತಿಥ್ಯ ವಲಯದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪನೆ.
- ಆಯುರ್ವೇದ ಔಷಧಗಳ ರಫ್ತು ಹೆಚ್ಚಳಕ್ಕೆ ವಿಶೇಷ ಕ್ರಮ.
- ವಿಶ್ವ ಮಟ್ಟದ ಟ್ರಕ್ಕಿಂಗ್ ,ಹೈಕಿಂಗ್ ಅನುಭವ ದೊರೆಯುವಂತಾಗಲು ಯೋಜನೆ.
- ಉತ್ತರಾಖಂಡ, ಜಮ್ಮು ಕಾಶ್ಮೀರದಲ್ಲಿ ಟ್ರಕ್ಕಿಂಗ್ ಯೋಜನೆ.
- ಆಂಧ್ರದ ಅರಕು ವ್ಯಾಲಿಯಲ್ಲೂ ಟ್ರಕ್ಕಿಂಗ್ ಯೋಜನೆ.
- ಕರ್ನಾಟಕ ಸೇರಿದಂತೆ ಕರಾವಳಿ ಆಮೆ ಸಂತಾನೋತ್ಪತ್ತಿ ಉಳಿಕೆಗೆ ಯೋಜನೆ.
- 10 ಸಾವಿರ ಗೈಡ್ ಗಳಿಗೆ ಸೂಕ್ತ ಪ್ರವಾಸೋದ್ಯಮ ತರಬೇತಿ. ಪಾರಂಪರಿಕ ಪ್ರವಾಸೋದ್ಯಮ ರಂಗದ ಅಭಿವೃದ್ಧಿ.
- ಖೇಲೋ ಇಂಡಿಯಾ ಮಿಷನ್ ಆರಂಭಕ್ಕೆ ನಿರ್ಧಾರ. ಯೋಜನೆ ಅಡಿ ಟ್ರೈನಿಂಗ್ ಕೇಂದ್ರಗಳ ನಿರ್ಮಾಣ.
- ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಶಯದಡಿ ರೈತರ ಆದಾಯ ಹೆಚ್ಚಳಕ್ಕೆ ಕ್ರಮ.
- ದಿವ್ಯಾಂಗ ಜನರಿಗೆ ವಿಶೇಷ ತರಬೇತಿ ಯೋಜನೆ.
- ಈಶಾನ್ಯ ರಾಜ್ಯಗಳ ಅಭಿವೃದ್ದಿ & ಉದ್ಯೋಗಾವಕಾಶ ಹೆಚ್ಚಳ
- ಕೃಷಿ ಉತ್ಪನ್ನಗಳ ಉನ್ನತೀಕರಣಕ್ಕೆ ಯೋಜನೆ.
- ತೆಂಗು, ಬಾದಾಮಿ ಬೆಳೆಗಳಿಗೆ ಯೋಜನೆಯಡಿ ನೆರವು..ತೆಂಗು ಬೆಳೆ ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ.
- ಭಾರತೀಯ ಗೋಡಂಬಿ & ಕೋಕೋ ಬೆಳೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕ್ರಮ.
- ಶ್ರೀಗಂಧದ ಬೆಳೆಯನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯುವಂತೆ ಕ್ರಮ.
- ಒಣ ಹಣ್ಣುಗಳ ಬೆಳೆಗೆ ಉತ್ತಮ ಬೆಲೆ ಒದಗಿಸಲು ಕ್ರಮ.
- ಭಾರತ ವಿಸ್ತಾರ ಎಐ ಟೂಲ್ ಮೂಲಕ ಕೃಷಿಗೆ ನೆರವು.
- ಗ್ರಾಮೀಣ ಮಹಿಳೆಯರ ಆದಾಯ ವೃದ್ಧಿಗೆ ಲಖ್ಪತಿ ದೀದಿ ಯೋಜನೆ.
- ದಿವ್ಯಾಂಗ್ ಜನ್ ಕೌಶಲ ಯೋಜನೆ ಮೂಲಕ ವಿಕಲಾಂಗರಿಗೆ ನೆರವು.
- ದಿವ್ಯಾಂಗರಿಗೆ ಗೌರವಯುತ ಬದುಕು ಸಿಗುವಂತಾಗಲು ಯೋಜನೆ.
- ಕೃತಕ ಅಂಗಾಂಗ ತಯಾರಿಕಾ ವಲಯಕ್ಕೆ ಹೆಚ್ಚಿನ ನೆರವು.
- ದಿವ್ಯಾಂಗರು & ಹಿರಿಯ ನಾಗರಿಕರಿಗೆ ಕೃತಕ ಅಂಗಾಂಗ ಸಿಗುವಂತಾಗಲು ಯೋಜನೆ.
- ನಿಮ್ಹಾನ್ಸ್ 2 ಯೋಜನೆಗೆ ಚಾಲನೆ, ರಾಂಚಿಯಲ್ಲಿ ಸ್ಥಾಪನೆ.
- ಬಡ ಜನರ ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡಲು ಸೂಕ್ತ ಕ್ರಮ.
- ಈಶಾನ್ಯ ರಾಜ್ಯಗಳಿಗೆ ಪೂರ್ವೋದಯ ಯೋಜನೆ. ಇದಕ್ಕಾಗಿ ಕೈಗಾರಿಕಾ ವಲಯಗಳ ನಿರ್ಮಾಣಕ್ಕೆ ಕ್ರಮ.
- ಈಶಾನ್ಯ ರಾಜ್ಯಗಳಿಗೆ 4 ಸಾವಿರ ಇ ಬಸ್ ಗಳನ್ನು ನೀಡಲು ಕ್ರಮ.
- ಬೌದ್ಧ ಧರ್ಮದ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಯೋಜನೆ.
- 16ನೇ ಹಣಕಾಸು ಆಯೋಗದ ವರದಿಯನ್ವಯ ಯೋಜನೆ ಜಾರಿ. ಆಯೋಗದ ಎಲ್ಲಾ ವರದಿಗಳನ್ನು ಸರ್ಕಾರ ಒಪ್ಪಿದೆ.
- 1.4 ಲಕ್ಷ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಮೀಸಲಿಡಲು ಕ್ರಮ.
- ಗ್ರಾಮೀಣ, ನಗರ & ಪಟ್ಟಣಗಳಿಗೆ ಹಣ ನೀಡಿಕೆ.
- ಕೇಂದ್ರ ಸರ್ಕಾರವು ಸಾಲದ ಮೇಲಿನ ಬಡ್ಡಿ ವೆಚ್ಚ ಕಡಿಮೆ ಮಾಡ್ತಿದೆ. ಇದಕ್ಕಾಗಿ ಸರ್ಕಾರ ಆರ್ಥಿಕ ಶಿಸ್ತು ಸಾಧಿಸಿದೆ.
- ದೇಶದ ಆರ್ಥಿಕ ಕೊರತೆಯನ್ನು ಕಡಿಮೆ ಮಾಡಲು ಸರ್ವ ಕ್ರಮ. ಕೊರತೆ ಬಜೆಟ್ನ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಕ್ರಮ.
