ಹೆಂಡತಿ ಹುಟ್ಟುಹಬ್ಬಕ್ಕೆ ಸರ್ ಪ್ರೈಸ್ ಗಿಫ್ಟ್ ಕೊಡೋಕೆ ಬಂದಿದ್ದ ಗಂಡನನ್ನ ತುಂಡು ತುಂಡು ಮಾಡಿ ಕೊಲೆ ಮಾಡಿದ್ದಾಳಂತೆ ಹೆಂಡತಿ. ಬ್ರಿಟನ್ನ ಲಂಡನ್ನಲ್ಲಿದ್ದ ಗಂಡ, ಹೆಂಡತಿಗೆ ಶಾಕ್ ಕೊಡೋಣ ಅಂತಾ, ಹೆಂಡತಿಗೆ ತಿಳಿಸದೇ ಮನೆಗೆ ಬಂದನಂತೆ. ಹಾಗೆ ಸರ್ ಪ್ರೈಸ್ ಕೊಡೋಕೆ ಬಂದವನಿಗೆ ಹೆಂಡತಿ ಮೊದಲು ತನ್ನ ಬಾಯ್ ಫ್ರೆಂಡ್ ಜೊತೆ ಇದ್ದುಕೊಂಡು ಸರ್ ಪ್ರೈಸ್ ಕೊಟ್ಟಿದ್ದಾಳೆ. ಆ ಸರ್ ಪ್ರೈಸ್ ನೋಡಿ ಶಾಕ್ನಲ್ಲಿದ್ದವನನ್ನ ಹೆಂಡತಿ, ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದು, ಪೀಸ್ ಪೀಸ್ ಮಾಡಿದ್ದಾಳೆ. ಇದು ನಡೆದಿರೋದು ಉತ್ತರ ಪ್ರದೇಶದ ಮೀರತ್ನಲ್ಲಿ.
ಮುಸ್ಕಾನ್ಗೆ ಪ್ರಿಯಕರ ಹೇಳಿದ್ದ ಆತ್ಮದ ಕಥೆ..! ಆತ್ಮದ ಕಥೆ ನಂಬಿ ಗಂಡನನ್ನೇ ಕೊಂದಳು..!
ಮರ್ಚೆಂಟ್ ನೇವಿ ಆಫೀಸರ್ ಸೌರಭ್ ರಜಪೂತ್ ಕೊಲೆಯಾದ ಗಂಡ. ಅವನನ್ನು ಕೊಂದು, ತುಂಡು ತುಂಡು ಮಾಡಿ ಕತ್ತರಿಸಿದ್ದ ಹೆಂಡತಿಯ ಹೆಸರು ಮುಸ್ಕಾನ್ ರಸ್ತೋಗಿ. ಅವಳ ಜೊತೆ ಅವಳ ಪ್ರಿಯಕರ ಸಾಹಿಲ್ ಶುಕ್ಲಾನನ್ನೂ ಈಗ ಅರೆಸ್ಟ್ ಮಾಡಿದ್ಧಾರೆ ಪೊಲೀಸ್. ವಿಚಿತ್ರ ಏನಂದ್ರೆ, ನಿನ್ನ ಗಂಡನನ್ನ ಕೊಲ್ಲು ಅಂತಾ ಮುಸ್ಕಾನ್ಗೆ ಗ್ರೀನ್ ಸಿಗ್ನಲ್ ಕೊಟ್ಟವಳು, ಅವಳ ಪ್ರಿಯಕರ ಸಾಹಿಲ್ನ ತಾಯಿಯಂತೆ. ಅವೆಳೆಲ್ಲಿದ್ದಾಳೆ ಅಂತಾ ಹುಡುಕಿದ್ರೆ, ಆಕೆ ಸತ್ತು ಸ್ವರ್ಗ ಸೇರಿ ಯಾವುದೋ ಕಾಲವಾಗಿದೆ. ಸ್ವರ್ಗದಲ್ಲಿದ್ದ ತಾಯಿಯೇ ನನಗೆ, ನಿನ್ನ ಗಂಡನನ್ನ ಕೊಲ್ಲು ಅಂಥಾ ಹೇಳಿದ್ಲು ಅಂತಾ ಮುಸ್ಕಾನ್ ಪೊಲೀಸರ ಎದುರು ಬಾಯ್ಬಿಟ್ಟಿದ್ದಾಳೆ.
ಸಿಮೆಂಟ್ ಡ್ರಮ್ಮಿನಲ್ಲಿತ್ತು ತುಂಡಾದ ಹೆಣ..!
ಮಾರ್ಚ್ 4ನೇ ತಾರೀಕು, ಮರ್ಚೆಂಟ್ ನೇವಿ ಆಫೀಸರ್ ಸೌರಭ್ ರಜಪೂತ್ ಮಿಸ್ಸಿಂಗ್ ಕಂಪ್ಲೇಂಟ್ ರಿಜಿಸ್ಟರ್ ಆಗಿತ್ತು. ಹುಡುಕಾಟ ನಡೆಸಿದ್ದ ಪೊಲಿಸರಿಗೆ ಸಿಮೆಂಟ್ ತುಂಬಿದ್ದ ಡ್ರಮ್ಮಿನಲ್ಲಿ ಬರುತ್ತಿದ್ದ ವಾಸನೆ ಹೊಡೆಯುತ್ತಿತ್ತು. ಏನು ಅಂತಾ ಡ್ರಂ ತೆಗೆದು ನೋಡಿದವರಿಗೆ ಸಿಕ್ಕಿದ್ದು ಸೌರಭ್ ರಜಪೂತನ ತುಂಡು ತುಂಡಾದ ಹೆಣ.
ಗಂಡನನ್ನೇ ಕೊಂದವಳದ್ದು ಲವ್ ಮ್ಯಾರೇಜ್..!
ಇದಕ್ಕಿಂತ ವಿಚಿತ್ರ ಅಂದ್ರೆ, ಸೌರಭ್ ರಜಪೂತ್, ಮುಸ್ಕಾನ್ಳನ್ನ ಲವ್ ಮಾಡಿ ಮದುವೆ ಆಗಿದ್ನಂತೆ. ಇವರಿಬ್ಬರ ಮದುವೆಗೆ ಸೌರಭ್ ಮನೆಯವರು ಆಪೋಸ್ ಮಾಡಿದ್ರಂತೆ. ಇವರಿಬ್ಬರ ಲವ್ ಲೈಫಿಗೆ ಒಂದು ಮಗುವೂ ಇದೆ. ಆ ಮಗುವಿಗೀಗ 6 ವರ್ಷ.
ಗಂಡ ವ್ಯಾಪಾರಿ ಹಡಗಿನಲ್ಲಿ ಕೆಲಸ ಮಾಡುತ್ತಾ ಸಮುದ್ರದ ಅಲೆಗಳ ನಡುವೆ ತೇಲುತ್ತಿದ್ದರೆ, ಇಲ್ಲಿ ಮುಸ್ಕಾನ್ ಇನ್ನೊಬ್ಬ ಪ್ರಿಯತಮನನ್ನು ಹುಡುಕಿಕೊಂಡಿದ್ದಳು. ಗಂಡನನ್ನು ಮರೆತೇಬಿಟ್ಟಿದ್ದ ಮುಸ್ಕಾನ್, ಅವಳ ಹುಟ್ಟುಹಬ್ಬದಂದೇ ಗಂಡ ಸೌರಭ್ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸಮುದ್ರದಲ್ಲಿರ್ತಾನೆ ಬಿಡು ಎಂದು ಲವ್ವರ್ ಜೊತೆ ಮಜಾ ಮಾಡ್ತಿದ್ದ ಮಸ್ಕಾನ್, ಸರ್ ಪ್ರೈಸ್ ಕೊಡೋಕೆ ಬಂದಿದ್ದ ಗಂಡನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರ ಸಾಹಿಲ್ ಜೊತೆ ಗಂಡನನ್ನು ತುಂಡು ತುಂಡು ಮಾಡಿದ ಮಸ್ಕಾನ್, ಸಿಮೆಂಟ್ ಡ್ರಮ್ಮಿಗೆ ಗಂಡನ ದೇಹದ ತುಂಡುಗಳನ್ನ ತುಂಬಿ, ಸಿಮೆಂಟ್ ಮುಚ್ಚಿ.. ಲವ್ವರ್ ಜೊತೆ ಜಾಲಿ ಟ್ರಿಪ್ ಮಾಡಿದ್ದಾಳೆ.
ಸತ್ತಿದ್ದ ಗಂಡನನ್ನು ಬದುಕಿದ್ದಾನೆ ಎಂದು ನಂಬಿಸಿದ್ದಳು..!
ಆದರೆ ಅಲ್ಲಿ ಮುಸ್ಕಾನ್, ಗಂಡನ ಮೊಬೈಲ್ ತನ್ನ ಜೊತೆಯಲ್ಲೇ ಇಟ್ಕೊಂಡು, ಸೌರಭ್ ಕುಟುಂಬದವರಿಗೆ ಸೌರಭ್ ನಂತೆಯೇ ಮೆಸೇಜ್ ಮಾಡ್ತಾ ಇದ್ಲು. ಸೌರಭ್ ಸಾವಿನ ಬಗ್ಗೆ ಆಲೋಚನೆ ಕೂಡಾ ಮಾಡದ ಅವನ ಮನೆಯವರು, ಏನೋ.. ಹೆಂಡತಿ ಜೊತೆ ಟ್ರಿಪ್ ಮಾಡ್ತಿದ್ದಾನೆ. ಹೆಂಡತಿ ಬರ್ತ್ ಡೇಗೆ ಬಂದಿದ್ದಾನೆ ಅಂದ್ಕೊಂಡಿದ್ರು. ಆದರೆ ಮೆಸೇಜ್ ಮಾತ್ರ ಮಾಡ್ತಿದ್ದ ಸೌರಭ್, ಫೋನಿನಲ್ಲೂ ಯಾಕೆ ಮಾತನಾಡ್ತಿಲ್ಲ ಅಂತಾ ಡೌಟು ಬಿದ್ದ ಕುಟುಂಬಸ್ಥರು ಕಂಪ್ಲೇಂಟ್ ಕೊಟ್ಟಾಗ ಇಡೀ ಕೇಸು ಈಚೆ ಬಂದಿದೆ.
ಇದು 8ನೇ ಕ್ಲಾಸಿಂದ ಶುರುವಾದ ಲವ್ ಸ್ಟೋರಿ..!
ಪೊಲೀಸರ ಹೇಳಿಕೆ ಪ್ರಕಾರ ಮುಸ್ಕಾನ್ ಪ್ರಿಯಕರ ಸಾಹಿಲ್, ಮುಸ್ಕಾನ್ ಸೌಂದರ್ಯಕ್ಕೆ ಮನಸೋತಿದ್ದ.8ನೇ ಕ್ಲಾಸಿನವರೆಗೆ ಜೊತೆಯಲ್ಲೇ ಓದಿದ್ದ ಸಾಹಿಲ್ಗೆ, ಮುಸ್ಕಾನ್.. ಸೌರಭ್ ಜೊತೆ ಮದುವೆಯಾಗಿದ್ದೇ ಇಷ್ಟ ಇರಲಿಲ್ಲ. ಹೇಗಾದರೂ ಮಾಡಿ ಬುಟ್ಟಿಗೆ ಹಾಕಿಕೊಳ್ಳಬೇಕು ಅಂತಾ ಪ್ಲಾನ್ ಮಾಡಿದ್ದ. ಸಾಹಿಲ್ನ ತಾಯಿ ಹಲವು ವರ್ಷಗಳ ಹಿಂದೆಯೇ ಸತ್ತು ಹೋಗಿದ್ದರು. ಅವಳು ಈಗಲೂ ನನ್ನ ಜೊತೆ ಮಾತನಾಡ್ತಾಳೆ ಎಂದು ನಂಬಿಸಿದ್ದ. ತಲೆಯಲ್ಲಿ ಮೆದುಳೂ ಇಲ್ಲದ ಮುಸ್ಕಾನ್, ಸಾಹಿಲ್ ಮಾತನ್ನ ನಂಬಿಬಿಟ್ಟಿದ್ದಳು. ಸಾಹಿಲ್, ವ್ಯಾಪಾರಿ ಹಡಗಿನಲ್ಲಿ ಕೆಲಸ ಮಾಡ್ತಿಲ್ಲ. ಬದಲಿಗೆ ಲಂಡನ್ನಿನ ಬೇಕರಿಯೊಂದರಲ್ಲಿ ಕೆಲಸ ಮಾಡ್ತಿದ್ದಾನೆ ಅಂತಾ ಸಾಹಿಲ್ ಹೇಳಿದ್ದನ್ನ ನಂಬಿದ್ದಳು. ಅಷ್ಟೇ ಅಲ್ಲ, ಸಾಹಿಲ್ ಮಾತು ನಂಬಿ, ಗಂಡನನ್ನೇ ಕೊಲ್ಲೋದಕ್ಕೆ ರೆಡಿಯಾಗಿದ್ದಳು. ಮನೆಗೆ ಒಂದು ಚಿಕನ್ ಕತ್ತರಿಸುವ ಚಾಕು ತಂದಿಟ್ಟುಕೊಂಡು, ಡ್ರಗ್ಸ್ ತಗೊಂಡು ಕೊಂದಿದ್ದಾಳೆ. ಡ್ರಗ್ಸ್ ಅಮಲಿನಲ್ಲೇ ಗಂಡನನ್ನು ತುಂಡು ತುಂಡಾಗಿ ಕತ್ತರಿಸಿದ್ದಾಳೆ.
ಹೆತ್ತವರಿಗೇ ಬೇಡವಾಗಿದ್ದಾಳೆ ಹಂತಕಿ ಮುಸ್ಕಾನ್..!
ಸಾಹಿಲ್ ತಾಯಿ ಹೇಳ್ತಿದ್ದಾಳೆ ಎಂದು ಗಂಡನನ್ನೇ ಕೊಂದು ಪೀಸ್ ಪೀಸ್ ಮಾಡಿದ ಮುಸ್ಕಾನ್ನ ಹೆತ್ತವರೇ ಈಗ ಮುಸ್ಕಾನ್ ಈ ಜಗತ್ತಿನಲ್ಲಿ ಬದುಕುವುದಕ್ಕೆ ಅರ್ಹತೆ ಇಲ್ಲ. ಅವಳನ್ನು ನೇಣಿಗೆ ಹಾಕಿ ಎನ್ನುತ್ತಿದ್ದಾರೆ. ಕೋರ್ಟಿಗೆ ಕರೆತಂದಾಗ ಲಾಯರುಗಳ, ಅಲ್ಲಿದ್ದ ಜನರೇ ಮುಸ್ಕಾನ್ಳನ್ನು ಕೊಲ್ಲೋದಕ್ಕೆ ಪ್ರಯತ್ನಿಸಿದ್ದಾರೆ. ಗಂಡನನ್ನೇ ಕೊಂದಿದ್ದು, ಕ್ರೌರ್ಯ, ಇಡೀ ಉತ್ತರ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ವಿಚಿತ್ರ ಅಂದ್ರೆ ಈ ಕಾಲದಲ್ಲೂ ಇಂತಹ ಕಾಗಕ್ಕ ಗೂಬಕ್ಕ ಕಥೆಗಳನ್ನ ನಂಬೋ ಅಮಾಯಕಿಯರಿದ್ದಾರೆ ಎನ್ನೋದು.