ಕೆನಡಾ, ಸೆಪ್ಟೆಂಬರ್ 29: ಕೆನಡಾ ಸರ್ಕಾರವು ಭಾರತದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಬಿಷ್ಣೋಯ್, ಗ್ಯಾಂಗ್ ಭಯೋತ್ಪಾದನೆ, ಹಿಂಸೆ ಮತ್ತು ಬೆದರಿಕೆಗಳ ಮೂಲಕ ಸಾರ್ವಜನಿಕ ಭದ್ರತೆಗೆ ಹಾನಿಮಾಡಿದೆ ಎಂದು ಪರಿಗಣಿಸಿದ ಕೆನಡಾ ಸರ್ಕಾರ, ಅದನ್ನು ಅಧಿಕೃತವಾಗಿ ‘ಟೆರರಿಸ್ಟ್ ಅರ್ಗನೈಸೇಷನ್’ ಎಂದು ಪಟ್ಟಿ ಮಾಡಿದೆ.
ಕಾನೂನು ಕ್ರಮದ ಹೊಸ ಹಂತ
ಕೆನಡಾದ ಸಾರ್ವಜನಿಕ ಸುರಕ್ಷತಾ ಮತ್ತು ಜನರಲ್ ಆಪರೇಟಿಂಗ್ ಸರ್ವಿಸಸ್ ಆನಂದಸಂಗರಿ, “ಬಿಷ್ಣೋಯ್ ಗ್ಯಾಂಗ್ ಕೆಲವು ಸಮುದಾಯಗಳನ್ನು ಭಯೋತ್ಪಾದನೆ, ಹಿಂಸೆ ಮತ್ತು ಬೆದರಿಕೆಗೆ ಗುರಿಯಾಗಿಸುತ್ತಿದೆ. ಈ ಕ್ರಿಮಿನಲ್ ಭಯೋತ್ಪಾದಕರ ಗುಂಪನ್ನು ಪಟ್ಟಿ ಮಾಡುವುದರಿಂದ ಅಪರಾಧವನ್ನು ತಡೆಗಟ್ಟಲು ನಮಗೆ ಇನ್ನಷ್ಟು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಈ ನಿರ್ಣಯದ ನಂತರ, ಕೆನಡಾದ ಕಾನೂನಿನಡಿ under the Criminal Code, ಗ್ಯಾಂಗ್ಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಬಂದಿದೆ. ಇದಲ್ಲದೆ, ಯಾವುದೇ ಕೆನಡಾದ ನಾಗರಿಕನು ಗ್ಯಾಂಗ್ಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದರೆ ಅದು ಗಂಭೀರ ಶಿಕ್ಷೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್, ಕೊಲೆ, ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ ಮತ್ತು ಸುಲಿಗೆ ಸೇರಿದಂತೆ ಹಲವಾರು ಗಂಭೀರ ಅಪರಾಧಗಳಿನ್ನ ಸಂಬಂಧಿಸಿದೆ ಎಂದು ಕೆನಡಾ ಅಧಿಕಾರಿಗಳು ದಾಖಲಿಸಿದ್ದಾರೆ. ಕಳೆದ ವರ್ಷ, ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಭಾರತವು ಕೆನಡಿಯನ್ನರನ್ನು ಗುರಿಯಾಗಿಸಿಕೊಂಡು, ವಿಶೇಷವಾಗಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿ, ಹತ್ಯೆಗಳು ಮತ್ತು ಸುಲಿಗೆಗಳನ್ನು ನಡೆಸಲು ಬಿಷ್ಣೋಯ್ ಗ್ಯಾಂಗ್ಗಳನ್ನು ಬಳಸುತ್ತಿದೆ ಎಂದು ಆರೋಪಿಸಿತ್ತು. ಆದರೆ, ಭಾರತವು ಈ ಹೇಳಿಕೆಯನ್ನು ತಿರಸ್ಕರಿಸಿದೆ ಮತ್ತು ಒಟ್ಟಾವಾ ಸಹಯೋಗದೊಂದಿಗೆ ಗ್ಯಾಂಗ್ ಅನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.
ಈ ನಿರ್ಣಯವು ಕೆನಡಾದ ಎನ್ಡಿಪಿ ಪಕ್ಷದ ನಾಯಕರು ಗ್ಯಾಂಗ್ನ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದರು. ಕೆನಡಾ ಸರ್ಕಾರವು ಈ ಕ್ರಮವು ಅಪರಾಧವನ್ನು ತಡೆಯುವುದಲ್ಲದೆ, ಭಾರತೀಯ ವಲಸಿಗರ ಸಹಿತ ಎಲ್ಲಾ ನಾಗರಿಕರಿಗೆ ಭದ್ರತೆ ನೀಒಡಿದೆ. ಕೆನಡಾದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮನೆ ಮತ್ತು ಸಮುದಾಯದಲ್ಲಿ ಸುರಕ್ಷಿತವಾಗಿರಲು ಹಕ್ಕಿದೆ ಮತ್ತು ಸರ್ಕಾರವಾಗಿ ಅವರನ್ನು ರಕ್ಷಿಸುವುದು ನಮ್ಮ ಮೂಲಭೂತ ಜವಾಬ್ದಾರಿಯಾಗಿದೆ ಎಂದು ಸರ್ಕಾರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.