ಮಾಸ್ಟರ್‌ ಮೈಂಡ್‌ ಉಗ್ರ ರಾಣಾ ಭಾರತಕ್ಕೆ: ಫಸ್ಟ್ ಫೋಟೋ ಔಟ್

Untitled design 2025 04 10t222840.730

ನವದೆಹಲಿ: 2008ರ 26/11ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ಹುಸೇನ್ ರಾಣಾ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದಾನೆ. ರಾಣಾನನ್ನು ಭದ್ರತೆಯ ನಡುವೆ ಭಾರತಕ್ಕೆ ಕರೆತರಲಾಗಿದ್ದು, ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌ ಆಗಿದೆ. ಫೋಟೋದಲ್ಲಿ ರಾಣಾ ಕೈದಿಯ ಸಮವಸ್ತ್ರದಲ್ಲಿ ಕಾಣಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ರಾಣಾ ವಿರುದ್ಧ ಭಾರತದಲ್ಲಿ ಭಾರೀ ಆರೋಪಗಳಿವೆ. 26/11 ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾ ನಡೆಸಿದ ಆಪರೇಶನ್‌ಗೆ ತಹವ್ಯೂರ್ ರಾಣಾ ಸಹಾಯ ಮಾಡಿದ್ದಾನೆ ಎಂಬ ಆರೋಪವಿದೆ. ಈ ದಾಳಿಯಲ್ಲಿ 166 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ನೂರಾರು ಜನ ಗಾಯಗೊಂಡರು. ಮುಂಬೈನ ತಾಜ್ ಹೋಟೆಲ್, ಲಿಯೋಪಾಲ್ಡ್ ಕಫೆ, ನಾರಿಮನ್ ಹೌಸ್, ಛತ್ರಪತಿ ಶಿವಾಜಿ ಟೆರ್ಮಿನಸ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಉಗ್ರರು ಗುರಿಯಾಗಿಸಿದ್ದರು.

ತಹವ್ಯೂರ್ ರಾಣಾ ಮೂಲತಃ ಪಾಕಿಸ್ತಾನ ಮೂಲದವನಾಗಿದ್ದು, ನಂತರ ಕೆನಡಾ ಮತ್ತು ಅಮೆರಿಕದ ಪೌರತ್ವ ಪಡೆದಿದ್ದನು. ಅಮೆರಿಕಾದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಣಾ, ದಾವೂದ ಜಿಲಾನಿ ಅಥವಾ ಡೇವಿಡ್ ಕೊಲ್ಮನ್ ಹೆಡ್ಲಿ ಎಂಬ ಭಯೋತ್ಪಾದಕನ ಜೊತೆ ಸ್ನೇಹ ಹೊಂದಿದ್ದನು. ಹೆಡ್ಲಿ 26/11 ದಾಳಿಗೆ ಮುನ್ನ ಮುಂಬೈಗೆ ಹಲವು ಬಾರಿ ಬಂದು ಸ್ಥಳೀಯ ಸಮೀಕ್ಷೆ ನಡೆಸಿದ್ದ. ಆ ಸಂದರ್ಭದಲ್ಲಿ ಹೆಡ್ಲಿಗೆ ನೆರವಾದವನು ರಾಣಾ ಎಂಬ ಆರೋಪ ಇದೆ.

ಅಮೆರಿಕಾದ ನ್ಯಾಯಾಲಯ ರಾಣಾವನ್ನು ಚಿಕಾಗೋನಲ್ಲಿ ನಡೆದ ಮತ್ತೊಂದು ಭಯೋತ್ಪಾದಕ ಪ್ರಕರಣದಲ್ಲಿ ಇತನ ಪಾತ್ರ ದೃಢಪಡಿಸಿ ಜೈಲು ಶಿಕ್ಷೆ ವಿಧಿಸಿತ್ತು. ಆದರೆ 26/11 ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಲವಾರು ವರ್ಷಗಳಿಂದ ರಾಣಾವನ್ನು ಹಸ್ತಾಂತರಿಸಬೇಕೆಂದು ಮನವಿ ಮಾಡುತ್ತಿತ್ತು. ಕೊನೆಗೂ ಅಮೆರಿಕ ಸರ್ಕಾರ ನಿರ್ಧಾರ ಕೈಗೊಂಡು ರಾಣಾವನ್ನು ಭಾರತಕ್ಕೆ ಹಸ್ತಾಂತರಿಸಿದೆ.

ಭಾರತಕ್ಕೆ ಬಂದ ತಕ್ಷಣ, ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕೃತವಾಗಿ ರಾಣಾವನ್ನು ಬಂಧಿಸಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 120B (ಷಡ್ಯಂತ್ರ), 121 (ಭಾರತ ಸರ್ಕಾರ ವಿರುದ್ಧ ಯುದ್ಧ), 121A, 302 (ಹತ್ಯೆ), 468 (ಛದ್ಮ ದಾಖಲಾತಿ ತಯಾರಿ), 471 (ಕಡತದ ದುರುಪಯೋಗ) ಜೊತೆಗೆ ಉಗ್ರ ಚಟುವಟಿಕೆ ತಡೆ ಕಾಯ್ದೆ (UAPA)ನ ಸೆಕ್ಷನ್‌ಗಳು 16, 18 ಮತ್ತು 20 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. NIA ಈಗ ರಾಣಾದ ವಿಚಾರಣೆಗೆ ಸಜ್ಜಾಗಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version