ಹರಿಯಾಣದ ದೊಡ್ಡ ಎಂಬ ಹಳ್ಳಿಯಲ್ಲಿ ಜೂನ್ 18, 2025 ರಂದು ಮಗನ್ ಅಲಿಯಾಸ್ ಅಜಯ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗನ್ ತನ್ನ ಸಾವಿಗೆ ಪತ್ನಿ ದಿವ್ಯಾ ಮತ್ತು ಆಕೆಯ ಪ್ರೇಮಿ ದೀಪಕ್ ಕಾರಣ ಎಂದು ಆರೋಪಿಸಿದ್ದಾನೆ. ಈ ಘಟನೆಯಿಂದ ಆಘಾತಗೊಂಡ ಪುರುಷ ನೆಟ್ಟಿಗರು #JusticeForMen ಹ್ಯಾಶ್ಟ್ಯಾಗ್ ಬಳಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಮಗನ್ ತನ್ನ ಆತ್ಮಹತ್ಯೆಗೆ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದು, ತನ್ನ ಪತ್ನಿ ದಿವ್ಯಾ ಮತ್ತು ಆಕೆಯ ಪ್ರೇಮಿ ದೀಪಕ್ನಿಂದ ತಾನು ಎದುರಿಸಿದ ಕಿರುಕುಳವನ್ನು ಎಳೆ ಎಳೆಯಾಗಿ ವಿವರಿಸಿದ್ದಾನೆ. ದೀಪಕ್ ಸಂಭಾಜಿ ನಗರದ ನಿವಾಸಿಯಾಗಿದ್ದು, ಪೊಲೀಸ್ ಸೇವೆಯಲ್ಲಿದ್ದಾನೆ. ದಿವ್ಯಾ ದೀಪಕ್ಗೆ ಉದ್ಯೋಗದಲ್ಲಿ ಬಡ್ತಿಗಾಗಿ ಲಂಚಕ್ಕೆ ಹಣ ಬೇಡಿಕೆ ಇಟ್ಟಿದ್ದಳು ಎಂದು ಮಗನ್ ಆರೋಪಿಸಿದ್ದಾನೆ. ಇದಕ್ಕಾಗಿ ತನ್ನ ತಂದೆಯನ್ನು ಕೊಲೆ ಮಾಡುವಂತೆ ಮತ್ತು ಪೂರ್ವಜರ ಜಮೀನನ್ನು ಮಾರಾಟ ಮಾಡಿ ಹಣ ಕೊಡುವಂತೆ ಒತ್ತಡ ಹೇರಿದ್ದರು ಎಂದು ಹೇಳಿದ್ದಾನೆ.
Rohtak, Another husband ends life due to wife’s adultery and mental harassment. wife used to send obscene videos made with her boyfriend to the husband.
*As per feminists we should not talk about these 3-4 (per day) cases. pic.twitter.com/xQ86Jf1xmX
— Moksh Of Men (@mishrag47) June 23, 2025
ಮಗನ್ ಪ್ರಕಾರ, ದೀಪಕ್ನ ಬಡ್ತಿಗಾಗಿ ಈಗಾಗಲೇ 3.5 ಲಕ್ಷ ರೂಪಾಯಿ ನೀಡಿದ್ದಾನೆ. ಆದರೆ, ಮತ್ತೆ 1.5 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿತ್ತು. ದಿವ್ಯಾ ತನ್ನನ್ನು ಮದುವೆಯಾಗುವ ಮುನ್ನ ಈಗಾಗಲೇ ವಿವಾಹಿತಳಾಗಿದ್ದಳು ಎಂಬ ಸತ್ಯವನ್ನು ಮರೆಮಾಚಿದ್ದಳು. ಈ ವಿಷಯವನ್ನು ಇತ್ಯರ್ಥಗೊಳಿಸಲು ಮಗನ್ ಹಣವನ್ನು ಖರ್ಚು ಮಾಡಿದ್ದಾನೆ. ಈ ಎಲ್ಲ ಕಿರುಕುಳ ಮತ್ತು ಭಾವನಾತ್ಮಕ ಒತ್ತಡದಿಂದ ಕುಸಿದು, ಆತ್ಮಹತ್ಯೆಗೆ ಶರಣಾದದ್ದಾಗಿ ವಿಡಿಯೋದಲ್ಲಿ ತಿಳಿಸಿದ್ದಾನೆ.
ಬಹು ಅಕ್ಷರಪುರ ಪೊಲೀಸ್ ಠಾಣೆಯ ಎಎಸ್ಐ ಸಂಜಯ್ ಪ್ರಕಾರ, ಮಗನ್ನ ವಿಡಿಯೋ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ. ದಿವ್ಯಾ ಮತ್ತು ದೀಪಕ್ ನಡುವಿನ ಹಣಕಾಸಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ದಿವ್ಯಾಳ ಪೋಷಕರ ಮನೆಗೆ ಭೇಟಿ ನೀಡಿದಾಗ, ಆಕೆ ತಮ್ಮೊಂದಿಗೆ ಸಂಪರ್ಕದಲ್ಲಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ದಿವ್ಯಾ ಮುಂಬೈನಲ್ಲಿದ್ದಾಳೆ ಎಂದು ಮಗನ್ ಉಲ್ಲೇಖಿಸಿದ್ದಾನೆ. ಈ ಸಂಬಂಧ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರಿಗೆ ರವಾನಿಸಲಾಗಿದೆ.
ಈ ಘಟನೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ #JusticeForMen ಕ್ಯಾಂಪೇನ್ ಜೋರಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ನ ಆತ್ಮಹತ್ಯೆ ಪ್ರಕರಣದಿಂದ ಪುರುಷರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಚರ್ಚೆ ಆರಂಭವಾಗಿತ್ತು. ಮಗನ್ನ ಸಾವಿನಿಂದ ಈ ಚರ್ಚೆಗೆ ಮತ್ತಷ್ಟು ಒತ್ತು ಸಿಗುವ ಸಾಧ್ಯತೆಯಿದೆ. ಮಗನ್ನ ಕುಟುಂಬಸ್ಥರು ದಿವ್ಯಾ ಮತ್ತು ದೀಪಕ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.