ದಿಲ್ಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ರಾಶಿ-ರಾಶಿ ಹಣ ಪತ್ತೆ

Film (30)

ದೇಶದ ನ್ಯಾಯಾಂಗ ವ್ಯವಸ್ಥೆ ಅಂದ್ರೆ ಇಡೀ ದೇಶ ಹೆಮ್ಮೆ ಪಡುತ್ತದೆ. ಆದರೆ ಇದೇ ನ್ಯಾಯಾಂಗದ ಬಗ್ಗೆ ಅನುಮಾನ ಹುಟ್ಟುಹಾಕುವ ರೀತಿ ಸ್ಪೋಟಕ ವಿಚಾರ ಒಂದು ಬೆಳಕಿಗೆ ಬಂದಿದೆ. ದಿಲ್ಲಿ ಹೈಕೋರ್ಟ್‌ಜಡ್ಜ್ ಯಶವಂತ್ ವರ್ಮ ಅವರ ಮನೆಯಲ್ಲಿ ಮಾರ್ಚ್‌14ನೇ ತಾರೀಕು ಬೆಂಕಿ ಅವಘಡ ಉಂಟಾಗಿತ್ತು.

ಬೆಂಕಿಯನ್ನು ಕಂಟ್ರೋಲ್  ಮಾಡೋಕೆ ರಕ್ಷಣಾ ಪಡೆಗಳು ಅಲ್ಲಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ.ಈ ವೇಳೆ ಜಡ್ಜ್ ಮನೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ರಾಶಿ ರಾಶಿ  ಕ್ಯಾಶ್ ಪತ್ತೆಯಾಗಿದೆ. ಈ ಹಣ ₹15 ಕೋಟಿ ನಗದು ಹಣ ಪತ್ತೆಯಾಗಿರುವ ವಿವರ ತಿಳಿದು ಬಂದಿದೆ. ಎಷ್ಟು ಕೆಲಸ ಮಾಡಿ ಸಂಪಾದಿಸಿರಬಹುದು ಅಂತ ಇಡೀ ದೇಶ ಮೂಖ ವಿಸ್ಮಿತವಾಗಿ  ನೋಡ್ತಾ ಇದೆ.ಈ ಜಡ್ಜ್ ಕ್ಯಾಶ್ ಖಜಾನೆಯನ್ನ, ಆದರೆ ಈ ಹಣ ನೋಡಿ ಅಗ್ನಿಶಾಮಕ ಸಿಬ್ಬಂದಿ ಮಾತ್ರ ಗಾಬರಿಯಾಗಿದೆ . ಏನನ್ನು ಕಾಪಾಡೋದು ಕ್ಯಾಶ್ ಕಾಪಾಡೋದ ಅಥವಾ ಮನೆಯನ್ನು ಕಾಪಾಡೋದ ಎಂದು ಅಗ್ನಿಶಾಮಕ ಸಿಬ್ಬಂದಿ.

ನ್ಯಾಯ ನೀಡೋ ಜಡ್ಜ್ ಮನೆಯಲ್ಲಿ ₹15 ಕೋಟಿ ನಗದು ಹಣ ಪತ್ತೆ. ಸೀಮಿತ ಸಂಬಳ ತಗೊಳೋ ಜಡ್ಜ್ ಮನೆಯಲ್ಲಿ ಈ ಪರಿ ಕ್ಯಾಶ್ ಖಜಾನೆ. ಕ್ಯಾಶ್ ವ್ಯವಹಾರನೇ ನಡೆದಿರೋ ಕಾಲದಲ್ಲಿ ಇಷ್ಟೊಂದು ಕ್ಯಾಶ್, 50 ಸಾವಿರನಾ ಅಥವಾ ಒಂದು ಲಕ್ಷ ಇದೆಯಾ ಕ್ಯಾಶ್ ಏನೋ ಒಂದು ಜಸ್ಟಿಫಿಕೇಶನ್ ಕೊಟಬಹುದು ಆದರೆ , ಈ ಪರಿ ಲೆಕ್ಕವಿಲ್ಲದಷ್ಟು ಕ್ಯಾಶ್ .ಎಲ್ಲಿಂದ ಬಂತು ಯಾಕೆ ಬಂತು ಅನ್ನೋದು ದೇಶದ್ಯಾಂತ ಇಂಟನ್ರ್ಯಾಷನಲ್ ಲೆವೆಲ್ನಲ್ಲಿ ಈಗ ಸುದ್ದಿಆಗ್ತಾ ಇದೆ.

ಈ ವಿಚಾರ ಪಾರ್ಲಿಮೆಂಟ್ನಲ್ಲೂ ಪ್ರತಿಧ್ವನಿಸಿದೆ ರಾಜ್ಯ ಸಭಾ ಚೇರ್ಮನ್ ಜಗದೀಪ್ ಧನಕರ್ ಆಘಾತ ವ್ಯಕ್ತಪಡಿಸಿದ್ದಾರೆ. ಇಂತ ಗಂಭೀರ ಘಟನೆ ನಡೆದರು ಕೊಡ ಅದು ಬೇಗನೇ ಬೆಳಕಿಗೆ ಬರದೆ ಇರುವುದು ಕಳವಳಕಾರಿ . ಈ ವಿಚಾರ ಕುರಿತು ವಿಸ್ತೃತ ಚರ್ಚೆ ನಡೆಸುಕ್ಕೆ ಸಮಯ ನಿಗದಿ ಪಡಿಸುತ್ತೀವಿ ಅಂತ ಹೇಳಿದ್ದಾರೆ. ವಿಪಕ್ಷ ಕಾಂಗ್ರೆಸ್ ಕೂಡ ತನಿಕೆಗೆ ಆಗ್ರಹಿಸಿದೆ.

ಈ ಅಗ್ನಿ ಅವಗಡ ನಡೆದ ವೇಳೆಯಲ್ಲಿ ಜಡ್ಜ್ ಯಶವಂತ್ ವರ್ಮ ಮನೆಯಲ್ಲಿ ಕುಟುಂಬಸ್ಥರು ಪೋಲಿಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಕೊಟ್ಟಿದ್ರು.  ಈ ಹೊತ್ತಲ್ಲಿ ವಿಚಾರ ಬೆಳಕಿಗೆ ಬಂದಿದೆ.

ಇದರ ಬೆನ್ನಲ್ಲೇ ಪೊಲೀಸರು ಈ  ಮಾಹಿತಿಯನ್ನು  ಕೇಂದ್ರ  ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ. ಗೃಹ ಸಚಿವಾಲಯ ಸಿಜೆಐಗೆ ವರದಿಯನ್ನು ಸಬ್ಮಿಟ್ ಮಾಡಿದೆ. ನಂತರ ಸುಪ್ರೀಂ ಕೋರ್ಟ್‌ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನ ನೇತೃತ್ವದ ಕೊಲಿಜಿಯಂ ಸಮಿತಿ ಯಶವಂತ್ ವರ್ಮರನ್ನ ಅಲಹಾಬಾದ್ ಹೈ ಕೋರ್ಟ್‌ಗೆ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಿಡಿಯೋ ಲಗತ್ತಿಸಲಾಗಿದ್ದು, ಸುಟ್ಟಿರುವ ರಾಶಿರಾಶಿ ಹಣದ ದೃಶ್ಯಗಳಿವೆ.

ನ್ಯಾಯಾಂಗ ವರ್ಮಾ ಅವರ ಮನೆಗೆ ಬೆಂಕಿ ಬಿದ್ದಾಗ ತೆಗೆದ ಛಾಯಾಚಿತ್ರ, ವಿಡಿಯೋ ಕೂಡ ಇದ್ದು, ಅಗ್ನಿಶಾಮಕ ದಳದವರು ಸುಟ್ಟ ನೋಟುಗಳನ್ನು ಪರಿಶೀಲಿಸುತ್ತಿರುವುದು ಕಾಣಬಹುದಾಗಿದೆ.ಈ ನಡುವೆ, ಈ ಹಣ ತಮ್ಮದಲ್ಲ ಎಂದು ನ್ಯಾಯಾಂಗ ವರ್ಮಾ ಸ್ಪಷ್ಟನೆ ನೀಡಿದ್ದಾರೆ.

ದೆಹಲಿ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ನ್ಯಾಯಾಂಗ ಯಶವಂತ್ ವರ್ಮಾ ಅವರ ಮನೆ ಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ ಎಂಬ ಆರೋಪದ ತನಿಖೆ ನಡೆಸಲು ಭಾರತದ ಮುಖ್ಯನ್ಯಾಯಾಧೀಶರು ಸದಸ್ಯ ಆಂತರಿಕ ತನಿಖಾ ಸಮಿತಿ ರಚಿಸಿದ್ದಾರೆ.

ಇದಲ್ಲದೆ ಆರೋಪಿ ನ್ಯಾಯಾಧೀಶ ನ್ಯಾಯಾಂಗ ವರ್ಮಾ ಅವರಿಗೆ ಯಾವುದೇ ಕರ್ತವ್ಯ ವಹಿಸಬಾರದು ಎಂದು ಸಿಜೆಐ ಸೂಚಿಸಿದ್ದಾರೆ. ಪಂಜಾಬ್ ಹೈಕೋರ್ಟ್‌ಜೆಶೀಲ್‌ನಾಗು, ಹಿಮಾಚಲ ಪ್ರದೇಶ ಮುಖ್ಯ ನ್ಯಾಯಾಂಗ ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ ನ್ಯಾಯಾಂಗ ಅನು ಶಿವರಾಮನ್ ಸಮಿತಿಯಲ್ಲಿದ್ದಾರೆ.

Exit mobile version