Ahmedabad Plane Crash: ಕ್ಷಣಾರ್ಧದಲ್ಲಿ ಕನಸುಗಳನ್ನು ಕೊಂದ ದುಃಖದ ಪಯಣ!

Web 2025 06 13t185907.756

ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಲಂಡನ್‌ಗೆ ಹೊರಟಿದ್ದ ಹಲವಾರು ಜನರ ಜೀವನವು ಒಂದು ದುರಂತ ವಿಮಾನ ಪತನದಲ್ಲಿ ಕೊನೆಗೊಂಡಿದೆ.  ಆ ವಿಮಾನದಲ್ಲಿದ್ದ ಕೆಲವು ವ್ಯಕ್ತಿಗಳ ಜೀವನ ಕಥೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ತಮ್ಮದೇ ಆದ ಕನಸುಗಳನ್ನು, ಆಕಾಂಕ್ಷೆಗಳನ್ನು ಹೊಂದಿದ್ದರು. ಆದರೆ, ಒಂದು ಅನಿರೀಕ್ಷಿತ ದುರಂತವು ಎಲ್ಲವನ್ನೂ ಕಸಿದುಕೊಂಡಿತು.

ಖುಷ್ ಬೂ ರಾಜಪುರೋಹಿತ್:
ರಾಜಪುರೋಹಿತ್ ಜೊತೆ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಖುಷ್ ಬೂ.ರಾಜಪುರೋಹಿತ್, ತನ್ನ ಪತ್ನಿಯನ್ನು ಊರಲ್ಲಿಯೇ ಬಿಟ್ಟು ಲಂಡನ್‌‌‌‌ಗೆ ಹೋಗಿದ್ದರು. ಆದರೆ,ಖುಷ್ ಬೂಗೆ ಪಾಸ್ಪೋರ್ಟ್, ವೀಸಾ ಸಿಗುವುದು ತಡವಾದ ಕಾರಣ, ರಾಜಪುರೋಹಿತ್ ಮೊದಲು ಲಂಡನ್‌ಗೆ ತೆರಳಿದ್ದರು.ಕೊನೆಗೂ ಪಾಸ್ಪೋರ್ಟ್, ವೀಸಾ ಸಿಕ್ಕ ಎರಡೇ ದಿನಕ್ಕೆ ಲಂಡನ್‌‌‌‌ಗೆ ಹೊರಟಿದ್ದರು ಖುಷ್ ಬೂ. ತಂದೆಯ ಜೊತೆ ಏರ್ಪೋರ್ಟ್ ನಲ್ಲಿ ಸೆಲ್ಫಿ ತೆಗೆದುಕೊಂಡು ಹೊರಟ ಖುಷ್ ಬೂ, ವಾಪಸ್ ಬಂದಿದ್ದು ಬೂದಿಯಾಗಿ.

ADVERTISEMENT
ADVERTISEMENT

ಜಾಮೀ ರೇ ಮೀಕ್ ಮತ್ತು ಫಿಯಾಂಗಲ್ ಗ್ರೀನ್ಲಾ ಮೀಕ್:
ಇಂಗ್ಲೆಂಡ್‌ನಿಂದ ಭಾರತಕ್ಕೆ ಎನ್‌ಜಿಒ ಸಲುವಾಗಿ ಬಂದಿದ್ದ ಜಾಮೀ ರೇ ಮೀಕ್ ಮತ್ತು ಫಿಯಾಂಗಲ್ ಗ್ರೀನ್ಲಾ ಮೀಕ್, ವಾಪಸ್ ತಮ್ಮ ದೇಶಕ್ಕೆ ಹಿಂದಿರುಗುವಾಗ “ಗುಡ್ ಬೈ ಇಂಡಿಯಾ” ಎಂದು ಸೆಲ್ಫಿ ವಿಡಿಯೋ ಮಾಡಿ ಹೊರಟವರು, ಜಗತ್ತಿಗೇ ಗುಡ್ ಬೈ ಹೇಳಿಬಿಟ್ಟರು.

ನಗಂಥೋಯಿ ಶರ್ಮಾ:
ಮಣಿಪುರದ 22 ವರ್ಷದ ಯುವತಿ ನಗಂಥೋಯಿ ಶರ್ಮಾ, 2023ರಲ್ಲಿ ಏರ್ ಹೋಸ್ಟೆಸ್ ಆಗುವ ಕನಸನ್ನು ಈಡೇರಿಸಿಕೊಂಡಿದ್ದಳು. ತನ್ನ ಯೌವನದ ಉತ್ಸಾಹದೊಂದಿಗೆ ವೃತ್ತಿಯಲ್ಲಿ ಮಿಂಚುತ್ತಿದ್ದ ಆಕೆ, ಈ ದುರಂತದಲ್ಲಿ ತನ್ನ ಜೀವನವನ್ನು ಕಳೆದುಕೊಂಡಳು.

 ಧೀರ್ ಭಕ್ಷಿ ಮತ್ತು ಹೀರ್ ಭಕ್ಷಿ:

ಇವರಿಬ್ಬರೂ ಅವಳಿ ಜವಳಿ ಸಹೋದರಿಯರಾದ ಧೀರ್ ಭಕ್ಷಿ ಮತ್ತು ಹೀರ್ ಭಕ್ಷಿ, ತಮ್ಮ ಅಜ್ಜಿಯ ಹುಟ್ಟುಹಬ್ಬವನ್ನು ಭಾರತದಲ್ಲೇ ಸೆಲಬ್ರೇಟ್ ಮಾಡ್ಬೇಕು ಅಂತಾ ಹಠ ಮಾಡಿ ಬಂದಿದ್ದರು.ಅಜ್ಜಿಯ ಹುಟ್ಟುಹಬ್ಬದ ಸಂಭ್ರಮ ಮುಗಿಸಿಕೊಂಡ, ವಾಪಸ್, ಇಂಗ್ಲೆಂಡಿಗೆ ಹೊರಟಿದ್ದರು. ಅಜ್ಜಿಯ ಹುಟ್ಟುಹಬ್ಬಕ್ಕೆಂದು ಬಂದು ಸರ್ ಪ್ರೈಸ್ ಕೊಟ್ಟಿದ್ದರು. ವಿಮಾನ ಅವರಿಗೆ ಸರ್ಪ್ರೈಸ್ ಕೊಟ್ಟಿತು.

ರಂಜಿತಾ ನಾಯರ್:
ಕೇರಳದ 40 ವರ್ಷದ ಸ್ಟಾಫ್ ನರ್ಸ್ ರಂಜಿತಾ ನಾಯರ್, ಲಂಡನ್‌ನಲ್ಲಿ ಕೆಲಸ ಮಾಡುವ ಕನಸಿತ್ತು. 9 ವರ್ಷ ಕೆಲಸ ಮಾಡಿದ್ದ ರಂಜಿತಾ ನಾಯರ್, ಆ ಕನಸನ್ನೂ ಈಡೇರಿಸಿಕೊಂಡಿದ್ದರು.ಇತ್ತೀಚೆಗೆ ಸ್ವಂತ ಮನೆ ಕಟ್ಟಿಸಿದ್ದ ಆಕೆ, ಕೇರಳದಲ್ಲಿ ಸರ್ಕಾರಿ ಉದ್ಯೋಗದ ಆಫರ್ ಪಡೆದಿದ್ದಳು.ಆಫರ್ ಲೆಟರ್ ತೆಗೆದುಕೊಂಡಿದ್ದ ರಂಜಿತಾ, ಲಂಡನ್‌‌‌ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಬರುವುದಕ್ಕೆಂದು ಲಂಡನ್‌‌‌ಗೆ ಹೊರಟಿದ್ದ ಆಕೆ, ಈ ದುರಂತದಲ್ಲಿ ಕೊನೆಗೊಂಡಳು.

ನೀರಜ್ ಲ್ಯಾವಿನಾ ಮತ್ತು ಅಪರ್ಣಾ ಲ್ಯಾವಿನಾ:

ಗುಜರಾತ್‌ನ ವಡೋದರಾದ ನೀರಜ್ ಲ್ಯಾವಿನಾ, ತನ್ನ ಪತ್ನಿ ಅಪರ್ಣಾಳನ್ನು ಲಂಡನ್‌ಗೆ ಕರೆದೊಯ್ಯುವ ಕನಸಿನೊಂದಿಗೆ 10 ದಿನಗಳ ಪ್ರವಾಸಕ್ಕೆ ಹೊರಟಿದ್ದ. ಆದರೆ, ಈ ಪಯಣವು ಅವರಿಬ್ಬರ ಜೀವನವನ್ನು ಕಸಿದುಕೊಂಡಿತು.

ಅರ್ಜುನ್ ಭಾಯ್:

ಮಧ್ಯಪ್ರದೇಶದ ಅರ್ಜುನ್ ಭಾಯ್, ಒಂದು ವಾರದ ಹಿಂದೆ ಲಂಡನ್‌ನಲ್ಲಿ ಮೃತಪಟ್ಟ ಪತ್ನಿಯ ಚಿತಾಭಸ್ಮವನ್ನು ಪುಲು ನದಿಯಲ್ಲಿ ವಿಸರ್ಜನೆ ಮಾಡಲು ಬಂದಿದ್ದರು. ಇವರಿಗೆ 8 ವರ್ಷದ ಮಗ ಮತ್ತು 4 ವರ್ಷದ ಮಗಳಿದ್ದಾಳೆ, ಈ ದುರಂತದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡರು, ತಮ್ಮ ಮಕ್ಕಳನ್ನು ಅನಾಥರನ್ನಾಗಿ ಬಿಟ್ಟರು.

ವಿಜಯ್ ರೂಪಾನಿ:
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ತಮ್ಮ ಪತ್ನಿಯನ್ನು ಕರೆತರುವ ಸಲುವಾಗಿ ಲಂಡನ್‌ಗೆ ಹೊರಟಿದ್ದರು. 1206 ಎಂಬ ಸಂಖ್ಯೆಯನ್ನು ತಮ್ಮ ಅದೃಷ್ಟದ ಸಂಖ್ಯೆಯೆಂದು ನಂಬುತ್ತಿದ್ದವರು.ಅವರ ಕಾರು, ಫೋನ್ ನಂಬರ್ ಕೂಡಾ ಅದೇ ಅದೃಷ್ಟ ಸಂಖ್ಯೆಯಲ್ಲಿರಬೇಕು ಎಂದು ಹಠ ಹಿಡಿಯುತ್ತಿದ್ದವರು. ವಿಚಿತ್ರ ಅಂದ್ರೆ ವಿಜಯ್ ರೂಪಾನಿ ಸಾವು ಕೂಡಾ ಅದೇ 12-06ರಂದೇ ಈ ದುರ್ಘಟನೆಯಲ್ಲಿ ಕೊನೆಗೊಂಡರು.

ಕ್ಲೈವ್ ಕುಂದರ್:

ಮಂಗಳೂರಿನ ಕೋ-ಪೈಲಟ್ ಕ್ಲೈವ್ ಕುಂದರ್, 1200 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದರು. ಈ ವಿಮಾನವನ್ನು ಮೊದಲ ಬಾರಿಗೆ ಹಾರಿಸಿದ್ದ ಅವರು, ಈ ದುರಂತದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡರು.

ಸುಮಿತ್ ಸಬರ್ವಾಲ್:

ವಿಮಾನದ ಕ್ಯಾಪ್ಟನ್ ಸುಮಿತ್ ಸಬರ್ವಾಲ್, 8200 ಗಂಟೆಗಳ ವಿಮಾನ ಹಾರಾಟದ ಅನುಭವ ಇದ್ದವರು. ಇವರ ತಂದೆ ಮುಂಬೈನಲ್ಲಿದ್ದಾರೆ. ಪ್ರೊಫೆಷನಲ್ ಎಂದು ಗುರುತಿಸಿಕೊಂಡಿದ್ದ ಸುಮಿತ್ ಸಬರ್ವಾಲ್ ಅವರಿಗೆ ನೀವು ಫ್ಲೈಟ್ ಬಿಟ್ಟು ಹೋಗುವುದೇ ಇಲ್ಲವಾ ಎಂದು ತಮಾಷೆ ಮಾಡ್ತಿದ್ದರಂತೆ. ಆದರೆ, ಈಗ ಸುಮಿತ್ ಸಬರ್ವಾಲ್, ವಿಮಾನದೊಂದಿಗೇ ಸಮಾಧಿಯಾಗಿದ್ದಾರೆ.

ಲಾಮುನ್ಥೆಮ್ ಸಿಂಗ್ಸೋಮ್:
ಮಣಿಪುರದ ಫುಟ್‌ಬಾಲ್ ಪ್ರೇಮಿ ಲಾಮುನ್ಥೆಮ್ ಸಿಂಗ್ಸೋಮ್, ಮ್ಯಾಂಚೆಸ್ಟರ್ ಕ್ಲಬ್ ಅಭಿಮಾನಿಯೂ ಆಗಿದ್ದ ಈಕೆಗೆ ತಾಯಿಯ ಜೊತೆಯಲ್ಲಿ ಬದುಕುತ್ತಿದ್ದರು. ತಾಯಿಗೊಂದು ಪುಟ್ಟ ಮನೆ ಕಟ್ಟಿಸಿಕೊಡುವ ಕನಸು ಕಂಡಿದ್ದಳು. ಮಣಿಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಈಕೆ ಸಾವನ್ನು ಗೆದ್ದಿದ್ದವಳು. ವಿಮಾನ ದುರಂತದಲ್ಲಿ ಅದೃಷ್ಟವಿರಲಿಲ್ಲ.

ಈ ದುರಂತವು ಕೇವಲ ಸಂಖ್ಯೆಯಲ್ಲ, ಪ್ರತಿಯೊಬ್ಬ ವ್ಯಕ್ತಿಯ ಜೀವನ ಕಥೆಯಾಗಿದೆ. ಕನಸುಗಳನ್ನು ಈಡೇರಿಸಿಕೊಳ್ಳಲು ಹೊರಟಿದ್ದ ಈ ಜನರ ಸ್ಮರಣೆಯು ನಮ್ಮೊಂದಿಗೆ ಉಳಿಯುತ್ತದೆ. ಈ ಘಟನೆಯು ಜೀವನದ ಅನಿಶ್ಚಿತತೆಯನ್ನು ನೆನಪಿಸುತ್ತದೆ ಮತ್ತು ಪ್ರೀತಿಯಿಂದ, ಒಗ್ಗಟ್ಟಿನಿಂದ ಬದುಕುವ ಮಹತ್ವವನ್ನು ತಿಳಿಸುತ್ತದೆ.

Exit mobile version