ಯಾದಗಿರಿ: ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ

ಶಿವಪ್ಪ

ಯಾದಗಿರಿ: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು.. ಎನ್ನುವ ಗಾದಿ ಮಾತಿನಂತೆ..ಅವರಿಬ್ಬರೂ ಅಣ್ಣ ತಮ್ಮಂದಿರು ಚಿಕ್ಕವರಾಗಿದ್ದಾಗ ಪರಸ್ಪರ ಒಬ್ಬರಿಗೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಆದರೆ, ಬೆಳೆದು ದೊಡ್ಡವರಾದ ಮೇಲೆ ಅಣ್ಣ ತಮ್ಮಂದಿರಲ್ಲಿ ಆಸ್ತಿ ವಿಚಾರವಾಗಿ ಕಲಹ ಶುರುವಾಗಿ ತಮ್ಮ ( ಸಹೋದರ) ಅಣ್ಣನಿಂದಲೇ ಆಸ್ತಿಗಾಗಿ ಹತ್ಯೆಯಾಗಿದ್ದಾನೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರ ಗ್ರಾಮದಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆಯಾಗಿದೆ. ಇದೆ ಜೂನ್‌ 17 ರಂದು ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರು ಗ್ರಾಮದಲ್ಲಿ ಕೊಲೆ ಮಾಡಲಾಗಿದೆ. ಹುಣಸಗಿ ತಾಲೂಕಿನ ಬೊಮ್ಮನಗುಡ್ಡ ತಾಂಡಾದ ಚಂದಪ್ಪ‌ ಹಾಗೂ ಶಿವಪ್ಪ ಎಂಬ ಅಣ್ತಮ್ಮಂದಿರ ನಡುವೆ ಆಸ್ತಿ ಕಲಹವಿತ್ತು. ಕೇವಲ ಮೂರು ಎಕರೆ ಜಮೀನಿನಲ್ಲಿನ ಜಂಟಿ ಆಸ್ತಿ ಬೇರ್ಪಡಿಸುವ ಸಲುವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ವು.

ADVERTISEMENT
ADVERTISEMENT

ಇದೇ ವಿಚಾರಕ್ಕಾಗಿ ಪದೇ ಪದೇ ಗಲಾಟೆ ಮಾಡ್ತಿರುವ ಅಣ್ಣನ ಕಿರಿಕಿರಿ ತಾಳಲಾರದೇ ತಮ್ಮ ಶಿವಪ್ಪ ಗ್ರಾಮಾಭಿವೃದ್ಧಿ ಕಚೇರಿಗೆ ಬಂದು ಮಾಹಿತಿ ಕಲೆ ಹಾಕ್ತಿದ್ದ. ಇದೇ ವೇಳೆ ಅಣ್ಣ ಚಂದಪ್ಪ ಕೂಡಾ ಅಲ್ಲಿಗೆ ಬಂದಿದ್ದ. ಕಚೇರಿಯಲ್ಲಿ ಆಸ್ತಿ ಜಂಟಿ ಬೇರ್ಪಡಿಸುವ ಬಗ್ಗೆ ಮಾಹಿತಿ ಪಡೆದುಕೊಂಡು ತಮ್ಮ ಶಿವಪ್ಪ ಟೀ ಅಂಗಡಿಗೆ ಬಂದಿದ್ದ. ಎದುರಿಗಿನ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿರುವಾಗಲೇ ಇಬ್ಬರ ನಡುವೆ ವಾಗ್ವಾದ ‌ನಡೆದಿತ್ತು. ಇದರಿಂದ ಕೋಪಗೊಂಡ ಅಣ್ಣ ಚಂದಪ್ಪ ತಮ್ಮನ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ತಮ್ಮ ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ನಾನೇ ಹಿರಿಯಣ್ಣ ನನ್ನ ಮಾತೇ ನಡೆಯಬೇಕೆಂಬ ಪ್ರತಿಷ್ಠೆಯಿಂದಲೇ ತಮ್ಮನನ್ನ ಕೊಲೆಗೈದಿದ್ದಾನೆ. ಕಳೆದ ಒಂದು ತಿಂಗಳಿನಿಂದ ಆಸ್ತಿ ಜಂಟಿಯನ್ನ ಬೇರ್ಪಡಿಸಲು ಓಡಾಡುತ್ತಿದ್ರು. ಇದಕ್ಕಾಗಿಯೇ ಮೂವರು ಅಣ್ತಮ್ಮಂದಿರು ಐವತ್ತು ಸಾವಿರ ಹಣ ಕೂಡಿಸಿದ್ರಂತೆ. ಅದರಲ್ಲಿ 11 ಸಾವಿರ ಖರ್ಚು ಆಗಿದ್ವಂತೆ. ಅಣ್ಣ ಚಂದಪ್ಪನಿಗೆ ಇದೆ ಜೂನ್ 17 ರಂದು ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಾ ಶಿವಪ್ಪ ಹಣ ಖರ್ಚಾಗಿದ್ದ ಬಗ್ಗೆ ಅಣ್ಣನಿಗೆ ಶಿವಪ್ಪ ಹೇಳಿದ್ದನು. 11 ಸಾವಿರ ಹೆಂಗೆ ಖರ್ಚು ಮಾಡಿದ್ದೀಯಾ ಅಂತ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ.

ನಮ್ಮ ಚಿಕ್ಕಪ್ಪ ನಮಗೆ ತಂದೆ ತರಹ ಇದ್ರು, ನಮ್ಮ ತಂದೆ ನಮ್ಮ ಚಿಕ್ಕಪ್ಪ ಅವರನ್ನು ಕೊಲೆ ಮಾಡಿದ್ದಾರೆ. ಜಮೀನು ಹೆಸರು ಬೇರ್ಪಡಿಸುವ ವಿಚಾರವಾಗಿ ಕೊಲೆ ಮಾಡಿದ್ದಾನೆ. ನಮ್ಮ ಅಪ್ಪ ಸರಿಯಿಲ್ಲ. ತಂದೆಯನ್ನು ಗಲ್ಲಿಗೇರಿಸಬೇಕೆಂದು ಆರೋಪಿ ಮಕ್ಕಳು ಆಗ್ರಹಿಸಿದ್ದಾರೆ.

ಈಗ ಆರೋಪಿ ಚಂದಪ್ಪನನ್ನು ಕೊಡೇಕಲ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವಿವಾದಿತ ಜಮೀನು ಜಾಗದಲ್ಲಿಯೇ ಶಿವಪ್ಪನ ಮೃತ ದೇಹ ಅಗ್ನಿಸ್ಪರ್ಶ ಮಾಡಲಾಯಿತು. ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆರೋಪಿ ಮಕ್ಕಳು ಒತ್ತಾಯಿಸಿದ್ದಾರೆ.

Exit mobile version