ಬೆಂಗಳೂರಿನಲ್ಲಿ 5 ನಿಮಿಷಕ್ಕೆ ಒಮ್ಮೆ ಧೀಡಿರ್ ವಾತಾವರಣ ಚೇಂಜ್ ಅಗ್ತಿದೆ. ಧೀಡಿರ್ ಅಂತ ಬಿಸಿಲು ಬೀಳುತ್ತೆ. ಧೀಡಿರ್ ಅಂತ ಮಳೆ ಬರುತ್ತೆ, ಧೀಡಿರ್ ಅಂತ ಮರ ಬೀಳುತ್ತೆ. ಸದ್ಯ ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಹಾಗಾದ್ರೆ ರಾಜ್ಯದಲ್ಲಿ ಇನ್ನೆಷ್ಟು ದಿನ ಮಳೆಯಾಗಲಿದೆ.
ಇನ್ನು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆಯಾಗುವ ಮುನ್ಸೂಚನೆ ಇದೆ. ಬೇಸಿಗೆ ಧಗೆಯಿಂದ ಹೈರಾಣಾಗಿದ್ದ ಬೆಂಗಳೂರಿನಲ್ಲಿ ನಿನ್ನೆ ಮಳೆಯ ಸಿಂಚನವಾಗಿದ್ದು ಹಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಸದ್ಯ ಬೆಂಗಳೂರು ಫುಲ್ ಕೂಲ್ ಆಗಿದ್ದು, ಉಷ್ಣಣಂಶ 2 ರಿಂದ 3 ಡಿಗ್ರಿ ಕಡಿಮೆಯಾಗಿದೆ. ಅದೇ ರೀತಿಯಾಗಿ ಇನ್ನು ಮುಂದೆ ಕೂಡ ಬೆಂಗಳೂರಿಗೆ ಸೇರಿದಂತೆ ರಾಜ್ಯದ ವಿವಿಧಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ನಗರದಲ್ಲಿನ ದಿಢೀರ್ ಮಳೆಗೆ ಚಂಡಮಾರುತ ಕಾರಣವಾಗಿದ್ದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಕಂಡು ಬಂದಿದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಇಂದಿನಿಂದ ಏ.8ರವರೆಗೆ ಪೂರ್ವ ಮುಂಗಾರು ಮಳೆಯಾಗಲಿದ್ದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ಸದ್ಯ ಬೆಂಗಳೂರು ವಾತಾವರಣ ನಿಮಿಷಕ್ಕೊಮ್ಮೆ ಬದಲಾವಣೆ ಆಗ್ತಾ ಇದೆ. ಬೆಂಗಳೂರಿಗರೇ ಹುಷಾರಾಗಿರಿ.ಯಾಕಂದ್ರೆ ಬೆಂಗಳೂರಿನಲ್ಲಿ ಮಳೆ ಬಿದ್ರೆ ಮರ ಬೀಳೋದು ಗ್ಯಾರಂಟಿ. ಹಾಗಾಗಿ ಹೆಚ್ಚಾಗಿ ಯಾವ ಮರದ ಕೆಳಗಡೆ ನಿಲ್ಲೋಕೆ ಹೋಗಬೇಡಿ.