ವೈದ್ಯರ ನಿರ್ಲಕ್ಷ್ಯ ಆರೋಪ: ಮತ್ತೋರ್ವ ಬಾಣಂತಿ ಬಲಿ

Untitled design 2025 04 20t115410.283

ಬೆಂಗಳೂರು: ನಗರದ ಪ್ರಸಿದ್ಧ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ. 25 ವರ್ಷದ ಸ್ವಾತಿ ಎಂಬ ಯುವತಿಯು ಹೆರಿಗೆಗಾಗಿ ದಾಖಲಾಗಿದ್ದ ಆಸ್ಪತ್ರೆಯಲ್ಲಿ, ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಹೆರಿಗೆಗಾಗಿ ದಾಖಲಾಗಿದ್ದ ಯುವತಿ

ಕಳೆದ ಸೋಮವಾರ, 25 ವರ್ಷದ ಸ್ವಾತಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಣಿ ವಿಲಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮೊದಲು ನಾರ್ಮಲ್ ಡೆಲಿವರಿ ಆಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಬಳಿಕ  ಸಿಜೇರಿಯನ್ ಆಪರೇಶನ್ ಮಾಡಬೇಕೆಂದು ತಿಳಿಸಿದರು. ಕುಟುಂಬದವರು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ ಬಳಿಕ, ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ADVERTISEMENT
ADVERTISEMENT
ಸ್ವಾತಿ ಕುಟುಂಬಸ್ಥರ ಆರೋಪ

ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ನಿರ್ಲಕ್ಷ್ಯವಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕುಟುಂಬಸ್ಥರ ಹೇಳಿಕೆಯಂತೆ, ಸಿಜೇರಿಯನ್ ವೇಳೆ ವೈದ್ಯರು ದೊಡ್ಡ ಕರುಳಿಗೆ ಹಾನಿ ಮಾಡಿದ್ದಾರೆ. ಇದರ ಪರಿಣಾಮವಾಗಿ, ಸ್ವಾತಿಗೆ ತೀವ್ರ ನೋವು ಮತ್ತು ಆರೋಗ್ಯ ಸಮಸ್ಯೆ ಎದುರಾಗಿದೆ. ಆದರೆ, ವೈದ್ಯರು ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.

ಸಿಜೇರಿಯನ್ ಬಳಿಕ ಸ್ವಾತಿ ನಿತ್ಯ ನೋವಿನಲ್ಲಿ ನರಳುತ್ತಿದ್ದರೂ, ವೈದ್ಯರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. 6 ದಿನಗಳ ಕಾಲ ಕುಟುಂಬಸ್ಥರು ಅನೇಕ ಬಾರಿ ವೈದ್ಯರಿಗೆ ಹೇಳಿದರೂ ಅದನ್ನು ಗಮನಿಸದೆ “ಇದು ಸಾಮಾನ್ಯ” ಎಂಬುದಾಗಿ ಹೇಳಿ ವಿಳಂಬ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಕೊನೆಗೂ, ಶುಕ್ರವಾರ ಸ್ವಾತಿ ನಿಧನರಾದರು ಎಂದು ವೈದ್ಯರು ಕುಟುಂಬದವರಿಗೆ ತಿಳಿಸಿದರು.

ಸ್ವಾತಿಯ ಸಾವನ್ನಪ್ಪಿದ ಸುದ್ದಿ ಕೇಳಿದ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಘಾತಕ್ಕೊಳಗಾಗಿ, ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. “ಸುರಕ್ಷಿತ ಮಾತೃತ್ವ ಶ್ವಾಸನೆ” ಎಂಬ ಘೋಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ, ಇಂತಹ ದುರ್ಘಟನೆ ಸಂಭವಿಸಿರುವುದು ದೊಡ್ಡ ಪ್ರಶ್ನೆ ಎಬ್ಬಿಸಿದೆ.

ಈ ಪ್ರಕರಣ ಸಂಬಂಧ ಕುಟುಂಬಸ್ಥರು ಆರೋಗ್ಯ ಇಲಾಖೆ ಮತ್ತು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದುಡಿಯುವ ನಿರ್ಲಕ್ಷ್ಯಕ್ಕೆ ಕಾರಣವಾಗಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮತ್ತು ಇಂತಹ ಘಟನೆಗಳು ಪುನರಾವೃತವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬದು ಅವರ ಒತ್ತಾಯವಾಗಿದೆ.

 

Exit mobile version